08/11/2021
ಅಭಿನಂದನೆಗಳು ❤💐
ತನ್ನಂತೆ ತನ್ನ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಒಂದೇ ಆಸೆಯಿಂದ ತನ್ನ ಮನೆ- ಮಠ ಮತ್ತು ಮನೆಯವರನ್ನು ಬಿಟ್ಟು ಮಂಗಳೂರು ನಗರದಲ್ಲಿ ತಲೆಯ ಮೇಲೆ ಕಿತ್ತಳೆ ಹಣ್ಣುಗಳ ಬುಟ್ಟಿಯಿಟ್ಟು ಬೀದಿಗಳನ್ನು ಸುತ್ತಿ ನಗರದ ಉರಿ ಬಿಸಿಲು, ಗಾಳಿ ಮಳೆ ಲೆಕ್ಕಿಸದೆ ಕಿತ್ತಳೆ ಹಣ್ಣುಗಳನ್ನು ಮಾರಿ ತನ್ನ ಪುಟ್ಟ ಊರು ಹರೇಕಳದಲ್ಲಿ ಶಾಲೆ ಆರಂಭಿಸಿ ದೀಪದ ಬತ್ತಿಯಂತೆ ತಾನು ಕರಗಿ ಹೋದರೂ ಬಡ ಮಕ್ಕಳ ಪಾಲಿಗೆ ಬೆಳಕಾದ ಅಕ್ಷರ ಸಂತ ಹಾಜಬ್ಬರು ಇಂದು ದೇಶದ ನಾಲ್ಕನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯ ಗೌರವ ಪಡೆದುಕೊಂಡರು.