Tulasi Brigade

Tulasi Brigade Our service gives helping hands for needy Peoples

27/07/2026

ದೇಶದ ಏಳಿಗೆಗಾಗಿ ಮೋದಿ ಜಿ ಗ್ಯಾರಂಟಿ ಕೊಟ್ಟರೆ ಹೇಗಿರುತ್ತೆ ಗೊತ್ತಾ ...?
ಈ ವಿಡಿಯೋ ನೋಡಿ .

25/07/2026

ಶ್ರೇಷ್ಠ ನಾಯಕರು ಫಲಿತಾಂಶಗಳನ್ನು ಹೊಂದಿರುತ್ತಾರೆ, ನೆಪಗಳಲ್ಲ.

ನಾಯಕತ್ವ, ಹೊಣೆಗಾರಿಕೆ ಮತ್ತು ಯಶಸ್ಸಿನ ಬಗ್ಗೆ ಕಾರ್ಯಕರ್ತರಿಗೆ ಸದಾ ಅವರ ನಡೆಗಳಿಂದ ಸದಾ ಪ್ರಬಲ ಪಾಠವಾಗಿದೆ ಹಾಗೂ ಮಾದರಿಯು ಕೂಡ .

#ನಮ್ಮನಾಯಕನಮ್ಮಹೆಮ್ಮೆ Muniraju Gowda P.M.

ಹೂ ಈಸ್ ಬಿ.ಎಲ್.ಸಂತೋಷ್? ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಯ ನಾಲ್ಕನೇ ಮಹಡಿಯಿಂದ ದೆಹಲಿ ಬಿಜೆಪಿ ಕಚೇರಿಯವರೆಗಿನ ಕಥೆ..!😍✌🏼🙏🏻ಶ್ವೇತ ವರ್ಣದ ಪಂಚ...
23/07/2026

ಹೂ ಈಸ್ ಬಿ.ಎಲ್.ಸಂತೋಷ್? ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಯ ನಾಲ್ಕನೇ ಮಹಡಿಯಿಂದ ದೆಹಲಿ ಬಿಜೆಪಿ ಕಚೇರಿಯವರೆಗಿನ ಕಥೆ..!😍✌🏼🙏🏻

ಶ್ವೇತ ವರ್ಣದ ಪಂಚೆ ಮತ್ತು ಕುರ್ತಾ,ಬಿಳಿ ಕೂದಲು, ಹೆಗಲಲ್ಲಿ ಒಂದು ಜೋಳಿಗೆ, ಹಣೆಯಲ್ಲಿ ಎಂದೂ ತಪ್ಪದ ಕುಂಕುಮ, ಸೌಮ್ಯ ಸ್ವಭಾವದ ಮುಖ. ಈ ವ್ಯಕ್ತಿಯ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ರಾಜಕಾರಣದಲ್ಲೂ ಸುದ್ಧಿಯಾಗುತ್ತಿದೆ.

ಆ ವ್ಯಕ್ತಿ ಮತ್ಯಾರೂ ಅಲ್ಲ.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿ, ಪ್ರಸ್ತುತ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್.ಸಾಮಾನ್ಯ ಜನರಿಗೆ ಈ ಹೆಸರು ಗೊತ್ತಿದೆಯೋ ಇಲ್ಲವೋ,ಭಾರತೀಯ ಜನತಾ ಪಕ್ಷದ ಪ್ರತೀ ಕಾರ್ಯಕರ್ತನಿಗೂ ಇವರ ಬಗ್ಗೆ ಗೊತ್ತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಬೆಳೆದ ಬಿಎಲ್ ಸಂತೋಷ್ ವಿದ್ಯಾರ್ಥಿ ಜೀವನದಲ್ಲೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಲ್ಲಿ ಸಂಘಟನಾಕಾರರಾಗಿ ಬೆಳೆದುಕೊಂಡು ಬಂದವರು.ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವವನ್ನು ಕರಗತಮಾಡಿಸಿಕೊಂಡಿದ್ದ ಬಿ.ಎಲ್.ಸಂತೋಷ್ ಅಲ್ಲಿಂದಲೇ ತಮ್ಮ ಸಾಮಾಜಿಕ ಜೀವನದ ಪಯಣವನ್ನು ಆರಂಭಿಸಿದ್ದರು. ಮೂಲತಃ ಉಡುಪಿ ಜಿಲ್ಲೆಯವರಾದ ಇವರು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಸಂತೋಷ್ ಜೀ ಲೌಕಿಖ ಜೀವನವನ್ನು ಅರಿತವರೇ ಅಲ್ಲ.ಮದುವೆ, ಸಾಂಸಾರಿಕ ಜೀವನದಿಂದ ಬಲು ಅಂತರವನ್ನು ಕಾಯ್ದುಕೊಂಡಿದ್ದ ಇವರು ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ.

ದೇಶ,ಧರ್ಮ,ಸಮಾಜ ಎಂದು ನಿರಂತರವಾಗಿ ಸಮಾಜಕ್ಕಾಗಿ ದುಡಿಯುತ್ತಲೇ ಸಾಗುತ್ತಿದ್ದರು. ಧರ್ಮ ಸೇವೆಯಲ್ಲಿ, ದೇಶಸೇವೆಯಲ್ಲಿ ಇವರಿಗೆ ಧಣಿವು ಅನ್ನೋದು ಕಾಣಲೇ ಇಲ್ಲ.ಇಷ್ಟೇ ಅಲ್ಲ,ಬಿಎಲ್ ಸಂತೋಷ್ ಅಪ್ರತಿಮ ಮಾತುಗಾರರು.ಇವರ ಮಾತನ್ನು ಕೇಳಿದರೆ ಎಂತವರೂ ಮಂತ್ರ ಮುಗ್ಧರಾಗುವುದು ಖಚಿತ.

ಪ್ರಧಾನಿ ಮೋದಿಯವರ ಬಗ್ಗೆ ಮಾಡುತ್ತಿರುವ ಇವರ ಭಾಷಣಗಳೂ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇ ವೇಗವನ್ನು ಪಡೆದುಕೊಂಡಿದೆ. ತೂಕದ ಹಾಗೂ ಸಂದೇಶಭರಿತ ಮತ್ತು ಸಲುಭವಾಗಿ ಅರ್ಥವಾಗುವಂತಿರುತ್ತದೆ ಇವರ ಮಾತುಗಳು.ಬಿ.ಎಲ್.ಸಂತೋಷ್ ಸಂಘದ ಶಾಖೆಗೆ ತೆರಳುತ್ತಲೇ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಬಂದವರು.

ಇಂಜಿನಿಯರ್ ಅಭ್ಯಾಸವನ್ನು ಮಾಡಿದ್ದ ಇವರು ಸಾಮಾನ್ಯ ವಿದ್ಯಾರ್ಥಿ ಅಲ್ಲವೇ ಅಲ್ಲ.ಇವರು ಇಂಜಿನಿಯರಿಂಗ್ ಪದವಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿದ್ದರು.ಚಿನ್ನದ ಪದಕವನ್ನು ಪಡೆದಿದ್ದರೂ ಇವರು ಆಯ್ಕೆ ಮಾಡಿಕೊಂಡಿದ್ದು ಮಾತ್ರ ಸಮಾಜ ಸೇವೆ.ಇವರು ಇಂಜಿನಿಯರ್ ಕಲಿತ ಕಾರಣಕ್ಕೋ ಏನೋ,ಅತ್ಯದ್ಭುತ ಸಂಘಟನಾ ಶಕ್ತಿ ಹಾಗೂ ಹೊಸ ವಿಚಾರಗಳನ್ನು ಸಿದ್ಧಪಡಿಸುವ ಚಿಂತನೆ ಇವರಲ್ಲಿರುವುದು.

ನಾಲ್ಕನೇ ಮಹಡಿಯಿಂದ ದೆಹಲಿ ಬಿಜೆಪಿ ಕಚೇರಿವರೆಗೆ,
ಬಿಎಲ್ ಸಂತೋಷ್’ರವರ ಸಂಘಟನಾತ್ಮಕ ಶಕ್ತಿ ಹಾಗೂ ಅವರ ಕಾರ್ಯದಕ್ಷತೆಯನ್ನು ಗಮನಿಸಿದ್ದ ಭಾರತೀಯ ಜನತಾ ಪಕ್ಷ ಅವರನ್ನು ರಾಜಕೀಯ ಸಂಘಟನಾ ಸೇವೆಗಾಗಿ ಸಂಘದ ಬಳಿ ಕೋರಿತ್ತು.ಅಂತೆಯೇ ರಾಜಕೀಯ ಸಂಘಟನೆಗಾಗಿ ಸಂಘ ಸಂತೋಷ್ ಅವರನ್ನು ಕಳಿಸಿಕೊಟ್ಟಿತ್ತು.ನಿಷ್ಟೆ ಹಾಗೂ ಪ್ರಾಮಾಣಿಕತೆಯನ್ನು ರಾಜಕೀಯದಲ್ಲೂ ಮೆರೆದ ಇವರು ಸಂತೋಷ್ ಜೀ ಎಂದೇ ಎಲ್ಲಾ ನಾಯಕರೂ ಗೌರವಿಸಿ ಕರೆಯುತ್ತಾರೆ.

2006ರಲ್ಲಿ ಕರ್ನಾಟಕ ಭಾರತೀಯ ಜನತಾ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. ನಂತರ ತನ್ನ ಹುದ್ದೆಗೆ ತಕ್ಕಂತೆ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದ ಇವರು ಸಕ್ರಿಯವಾಗಿ ಹಾಗೂ ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಾಲ್ಕನೇ ಮಹಡಿಯೇ ಸಂತೋಷ್ ಜೀ ಅವರ ವಾಸಸ್ಥಾನ ಆಗಿತ್ತು. ತಮ್ಮ ಪಕ್ಷದ ಎಲ್ಲಾ ಚಟುವಟಿಕೆಗಳನ್ನೂ ಅಲ್ಲಿಂದಲೇ ನಡೆಸುತ್ತಿದ್ದರು. ಹೆಚ್ಚಾಗಿ ಯಾರ ಕಣ್ಣಿಗೂ ಬೀರದ ಸಂತೋಷ್ ಜೀ ತಮ್ಮ ಕೆಲಸ ಎಷ್ಟಿದೆಯೋ ಅಷ್ಟನ್ನೇ ಮಾಡುತ್ತಾ ಬರುತ್ತಿದ್ದರು.

2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಜಯವನ್ನು ದಾಖಲಿಸಿ ಅಧಿಕಾರದ ಪಾರುಪತ್ಯ ಪಡೆಯಲು ಸಂತೋಷ್ ಜೀ ಶ್ರಮವೂ ಒಂದು.ನಿರಂತರವಾಗಿ ಕಾರ್ಯಕರ್ತರನ್ನು ಸಂಘಟನಾತ್ಮಕವಾಗಿ ಬೆಳೆಸುತ್ತಿದ್ದ ಸಂತೋಷ್ ಜೀ ಸಂಘಟನಾ ಕಾರ್ಯದರ್ಶಿ ಎಂಬ ಹುದ್ದೆಯ ಘನತೆಯನ್ನು ಹೆಚ್ಚಿಸಿದ್ದರು.

ಮಾಧ್ಯಮಗಳಲ್ಲಿ ಭಾರೀ ಪ್ರಚಾರವನ್ನೂ ಸಂತೋಷ್ ಜೀ ವಿರುದ್ಧ ಮಾಡಲಾಗಿತ್ತು.ಆದರೆ ಸಂತೋಷ್ ಜೀ ಸಂಘದ ಗರಡಿಯಲ್ಲಿ ಬೆಳೆದುಕೊಂಡು ಬಂದವರು.ಈ ಬಗ್ಗೆ ಬಂದಿದ್ದ ಯಾವೊಂದೂ ಆರೋಪಗಳಿಗೂ ಅವರು ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.ಪ್ರತಿಕ್ರಿಯೆ ನೀಡಿ ಗೊಂದಲ ಸೃಷ್ಟಿ ಮಾಡುವ ಯಾವ ಉದ್ಧೇಶವೂ ಇವರಿಗಿಲ್ಲ.
ನಂತರ ಇವರ ಅಪ್ರತಿಮ ಕಾರ್ಯಚಟುವಟಿಕೆಗಳನ್ನು ಕಂಡಂತಹ ಭಾರತೀಯ ಜನತಾ ಪಕ್ಷದ ವರಿಷ್ಟರು ಕೇಂದ್ರಕ್ಕೆ ಕರೆಸಿ ರಾಷ್ಟ್ರೀಯ ಮಟ್ಟದ ಜವಬ್ಧಾರಿಯನ್ನು ನೀಡಿದ್ದರು. ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಜೀ ನೇಮಕಗೊಂಡರು. ನಂತರವೂ ಇವರ ಕೆಲಸ ಎಲೆಮರೆಯ ಕಾಯಿಯಂತೆಯೇ ನಡೆಯುತ್ತಿದೆ.

ಯಾವುದೇ ಪ್ರಚಾರದ ಗೋಜಿಗೆ ಹೋಗದ ಇವರು ತನ್ನ ಕೆಲಸವನ್ನಷ್ಟೇ ಮಾಡುತ್ತಾ ಮುಂದುವರೆದರು.ಸಂತೋಷ್ ಜೀ ಒಬ್ಬಂಟಿಯಲ್ಲ. ಅವರ ಹಿಂದೆ ಅನೇಕ ಶಾಸಕರು, ಸಂಸದರು,ವಿಧಾನ ಪರಿಷತ್ ಸದಸ್ಯರು ಸಹಿತ ಅನೇಕ ಜನಪ್ರತಿನಿಧಿಗಳು ಇದ್ದಾರೆ.ಅಂತೆಯೇ ಸಾವಿರಾರು ಮಂದಿ ಕಾರ್ಯಕರ್ತರ ದಂಡು ಸಂತೋಷ್ ಜೀ ಬಳಿ ಇದೆ. ಹೀಗಿರುವಾಗ ಅವರಿಗೆ ಎಂದೋ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸಿ ಆ ಗದ್ದುಗೆಯನ್ನು ಏರಬಹುದಿತ್ತು.ಆದರೆ ಈ ಬಗ್ಗೆ ಅವರು ಎಂದೂ ಅವಸರ ಪಟ್ಟವರಲ್ಲ.ಪಕ್ಷದ ವರಿಷ್ಟರ ಸೂಚನೆಯಂತೆಯೇ ಪಕ್ಷದ ಕೊಟ್ಟ ಜವಬ್ಧಾರಿಯನ್ನು ನಿರ್ವಹಿಸುವವರು ಸಂತೋಷ್ ಜೀ.

ಮಾಧ್ಯಮದಿಂದ ದೂರ ದೂರ
ಸಂತೋಷ್ ಜೀ ಎಂದೂ ಪ್ರಚಾರದ ಹಿಂದೆ ಬಿದ್ದವರಲ್ಲ ಎಂಬುವುದಕ್ಕೆ ಇದೊಂದೇ ನಿದರ್ಶನ ಸಾಕು.ಇವರು ಎಂದೂ ಮಾಧ್ಯಮದ ಮುಂದೆ ಕಾಣಿಸೋದೇ ಇಲ್ಲ.ಯಾವ ಸುದ್ಧಿ ವಾಹಿನಿಗಳೂ ಇವರ ಸಂದರ್ಶನವನ್ನು ಬಯಸಿದರೂ ಅವರು ಹತ್ತಿರಕ್ಕೂ ಸುಳಿಯೋದಿಲ್ಲ.ಸದಾ ತಮಗೆ ಕೊಟ್ಟ ಕೆಲಸದಲ್ಲೇ ಬ್ಯುಸಿಯಾಗಿರುವ ಸಂತೋಷ್ ಜೀ ವಿವಾದಾತ್ಮಕ ವಿಚಾರದಲ್ಲಿ ಮೂಗುತೂರಿಸುವುದೇ ಇಲ್ಲ. ಹೀಗಾಗಿಯೇ ಇವರು ರಾಜಕೀಯ ಜ್ಞಾನ ಇಲ್ಲದ ಸಾಮಾನ್ಯ ಜನರಿಗೆ ಪರಿಚಿತರಾಗಿದ್ದು ಕಡಿಮೆ.

ಮೋದಿ-ಶಾಗೆ ಹತ್ತಿರ
ಸಂತೋಷ್ ಜೀ ಮಾತು ಬಿಜೆಪಿಯ ರಾಷ್ಟ್ರೀಯ ಅಂಗಳದಲ್ಲಿ ತುಂಬಾನೇ ಪರಿಣಾಮಕಾರಿಯಾಗಿರುತ್ತೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾರಿಗೂ,ಗೃಹ ಮಂತ್ರಿ ಚಾಣಕ್ಯ ಅಮಿತ್ ಷಾರಿಗೂ ಸಂತೋಷ್ ಜೀ ಅಂದರೆ ಸಂಘಟನಾ ಶಕ್ತಿ ಎಂಬ ಸತ್ಯ ಗೊತ್ತಿದೆ.ಹೀಗಾಗಿ ಕರ್ನಾಟಕ ಮಾತ್ರವಲ್ಲದೆ ವಿವಿಧ ರಾಜ್ಯಗಳಿಗೂ ಇವರನ್ನು ಪ್ರಭಾರಿಯಾಗಿ ನೇಮಿಸುತ್ತಾರೆ.

ಲಕ್ಷದ್ವೀಪದಲ್ಲೂ ಸಂತೋಷ್ ಜೀ ತಮ್ಮ ಸಂಘಟನಾ ಕೆಲಸವನ್ನು ಮಾಡಿರುವ ಅನೇಕ ಉದಾಹರಣೆಗಳೂ ಇವೆ.
ಅದೊಂದು ದಿನ ಪ್ರಧಾನಿ ಮೋದಿಯವರ ಸಮಾವೇಶ ಬೆಂಗಳೂರಿನಲ್ಲಿ ಇತ್ತು. ಈ ಸಂದರ್ಭದಲ್ಲಿ ಮತ್ತದೇ ಶುಭ್ರ ವಸ್ತ್ರದ ಒಬ್ಬ ವ್ಯಕ್ತಿ ಟ್ರಾಫಿಕ್ ಕಂಟ್ರೋಲ್ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.ಮೋದಿಯವರು ಬಂದು ಹೋಗುವವರೆಗೂ ಈ ವ್ಯಕ್ತಿ ರಸ್ತೆ ಮಧ್ಯೆಯೇ ತನ್ನ ಕೆಲಸ ಮಾಡುತ್ತಿದ್ದರು.

ನಂತರ ಯಾರೋ ಒಬ್ಬರು ಈ ವ್ಯಕ್ತಿ ಯಾರೆಂದು ಚರ್ಚಿಸಿದಾಗ,ಅವರು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಎಂದು ಹೇಳಿದ್ದಾಗಲೇ ಹೊತ್ತಾಗಿದ್ದು.ಈ ಪುಣ್ಯಾತ್ಮ ಈ ಪರಿಯೂ ಕೆಲಸ ಮಾಡುತ್ತಾರಾ ಎಂದು.ಸಣ್ಣ ಹುದ್ದೆ ಸಿಕ್ಕರೂ ವೇದಿಕೆಯ ಮುಂಭಾಗದಲ್ಲಿ ಕುರ್ಚಿ ಸಿಗಬಹುದೇ ಎಂದು ನಿರೀಕ್ಷಿಸುವವರೇ ಹೆಚ್ಚಾಗಿರುವ ಈ ರಾಜಕೀಯದಲ್ಲಿ ಇಂತಹಾ ಓರ್ವ ವ್ಯಕ್ತಿ ಇದ್ದಾರೆಂದರೆ ನಿಜಕ್ಕೂ ಗ್ರೇಟ್ ಎನ್ನಿಸದಿರದು.

ಶಿಸ್ತಿನ ಸಿಪಾಯಿಯ ಪಕ್ಷನಿಷ್ಟೆ, ರಾಷ್ಟ್ರಭಕ್ತಿ ಹಾಗೂ ದೇಶ ಮತ್ತು ಪಕ್ಷಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡಿರುವ ಇವರ ರೀತಿನೀತಿಗಳು, ಸಂಘಟನಾತ್ಮಕ ಶಕ್ತಿಯನ್ನು ಗಮನಿಸಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದೆ.ಯಾವ ಟೀಕೆ ಟಿಪ್ಪಣಿಗಳಿಗೂ ಕಿವಿಕೊಡದೆ ತನ್ನಷ್ಟಕ್ಕೇ ತಾನು ಕೆಲಸ ನಡೆಸಿಕೊಂಡು ಹೋಗುತ್ತಿರುವುದೇ ಅವರ ಮುನ್ನಡೆಯ ಸೀಕ್ರೇಟ್.

ಹಸನ್ಮುಖಿ,ಶಾಂತ ಸ್ವಭಾವದ ವ್ಯಕ್ತಿತ್ವವುಳ್ಳ ಸಂತೋಷ್ ಜೀಯಂತಹ ವ್ಯಕ್ತಿಗಳು ರಾಜಕೀಯ ಪಡಸಾಲೆಯಲ್ಲಿ ಇರುವುದು ತುಂಬಾನೇ ಕಡಿಮೆ.ಈ ಹಿಂದೆ ನರೇಂದ್ರ ಮೋದಿಯೂ ಇದೇ ಸಂಘಟನಾ ಕಾರ್ಯದರ್ಶಿ ಹುದ್ದೆಯನ್ನು ಹೊಂದಿದ್ದು ಇಂತಹದ್ದೇ ನಿಯಮಗಳನ್ನು ಹೊಂದಿದ್ದರು. ಇದೀಗ ಸಂತೋಷ್ ಜೀಯವರೂ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ.

Iಸಂಗ್ರಹI

Muniraju Gowda P.M.


Santhosh BL

20/07/2026

"ಅಧಿಕಾರದ ಹಮ್ಮಿಲ್ಲ, ಸಾಮಾನ್ಯರ ಒಡನಾಟ ಬಿಟ್ಟಿಲ್ಲ! ಜನಸಾಮಾನ್ಯರ ಜೊತೆ ಜನಸಾಮಾನ್ಯರ ಧ್ವನಿಯಾಗಿ ಸದಾ ನಿಮ್ಮೊಂದಿಗೆ."

15/07/2026

“ನಮ್ಮ ಹೆಮ್ಮೆ, ನಮ್ಮ ಬಲ, ನಮ್ಮ ಬೆನ್ನೆಲುಬು – ನೀವು! ನಿಮ್ಮ ದಾರಿದೀಪ ನಮಗೆ ಸದಾ ಸ್ಪೂರ್ತಿ.”“ನಾಯಕನೊಬ್ಬ ಕೇವಲ ಮಾರ್ಗ ತೋರಿಸುವುದಿಲ್ಲ, ಆತ ಜನರ ನಂಬಿಕೆಯನ್ನು ಬೆಳೆಸುತ್ತಾನೆ. ನೀವೇ ನಮ್ಮ ನೈಜ ಶಕ್ತಿ.”“ಕಷ್ಟದ ಹಾದಿಯಲ್ಲಿ ಧೃತಿಗೆಡದೆ ನಮ್ಮನ್ನು ಮುನ್ನಡೆಸುತ್ತಿರುವ ನಮ್ಮ ಹೆಮ್ಮೆಯ ನಾಯಕನಿಗೆ ಜಯವಾಗಲಿ.”“ನಮ್ಮ ನಾಯಕತ್ವದ ಕಲ್ಪನೆಗೆ ನೀವು ಜೀವಂತ ಉದಾಹರಣೆ. ನೀವು ನಮ್ಮ ಶಕ್ತಿ, ನಮ್ಮ ಹೆಮ್ಮೆ.”

#ನಮ್ಮನಾಯಕನಮ್ಮಹೆಮ್ಮೆ
Muniraju Gowda P.M. Santhosh BL

14/07/2026

ರಾಷ್ಟ್ರೀಯ ಸ್ವಯಂ ಸೇವಕ ಸಂಘ.

ಎದೆಯುಬ್ಬಿಸಿ ನಡೆಯೋನು ಸ್ವಯಂ ಸೇವಕ,
ನಡೆಯಲಾರದೆ ತೆವಳುತ್ತಿದ್ದೆನು - ನಡೆಯ ಕಲಿಸಿತು ಸಂಘವು,
ನುಡಿಯಲಾರದೆ ತೊದಲುತ್ತಿದ್ದೆನು - ನುಡಿಯ ಕಲಿಸಿತು ಸಂಘವು.

ಭಾರತವನ್ನು ಮತ್ತೆ ಪರಮ ವೈಭವ ಸ್ಥಿತಿಗೆ ಕೊಂಡೊಯ್ಯುವ ಸಂಕಲ್ಪ .
Muniraju Gowda P.M.

#ನಮ್ಮನಾಯಕನಮ್ಮಹೆಮ್ಮೆ

10/07/2026

ಒಬ್ಬ ದಾರ್ಶನಿಕ ನಾಯಕನು ಕಾರ್ಯತಂತ್ರದ ಚಿಂತನೆಯನ್ನು ಅನುಷ್ಠಾನ ಪರಿಣತಿಯೊಂದಿಗೆ ಸಂಯೋಜಿಸುತ್ತಾನೆ. ವಿಮರ್ಶಕರು ನಿರ್ಣಯಿಸುವಾಗ ಮತ್ತು ಚಿಂತಕರು ಚಿಂತಿಸುವಾಗ, ಪರಿಣಾಮಕಾರಿ ನಾಯಕರು ಕ್ರಮ ಕೈಗೊಳ್ಳುತ್ತಾರೆ. ಫಲಿತಾಂಶಗಳು ಅಭಿಪ್ರಾಯಗಳಿಗಿಂತ ಜೋರಾಗಿ ಮಾತನಾಡಲಿ.
#ನಮ್ಮನಾಯಕನಮ್ಮಹೆಮ್ಮೆ Muniraju Gowda P.M.

07/07/2026

ನಮ್ಮ ನಾಯಕ ಶ್ರೀ ತುಳಸಿ ಮುನಿರಾಜು ಗೌಡ್ರು ಅವರ ಜೀವನವು ನಮ್ಮೆಲ್ಲ ಯುವಕರಿಗೆ ಸ್ಫೂರ್ತಿಯಾಗಿದೆ. ಶಾಲಾ ದಿನಗಳಿಂದಲೂ ಎನ್‌ಸಿಸಿ ಕೆಡೆಟ್ ಆಗಿದ್ದರಿಂದ, ಅವರು ನಿಜವಾದ ಅರ್ಥದಲ್ಲಿ ರಾಷ್ಟ್ರೀಯವಾದಿ ಮತ್ತು ದೇಶಭಕ್ತರಾಗಿದ್ದಾರೆ. ಅವರು ಬಾಲ್ಯದಿಂದಲೂ ಆರ್‌ಎಸ್‌ಎಸ್ ಸ್ವಯಂಸೇವಕರಾಗಿದ್ದಾರೆ ಮತ್ತು ಇಂದಿಗೂ ತಮ್ಮ ಅಚಲ ಬದ್ಧತೆಯನ್ನು ಮುಂದುವರೆಸಿದ್ದಾರೆ. ರಾಜಕೀಯ ಅಥವಾ ಗಣ್ಯ ಕುಟುಂಬದಿಂದ ಬಂದವರಲ್ಲ, ಯುವ ಮತ್ತು ಕ್ರಿಯಾಶೀಲ ರಾಜ್ಯ ನಾಯಕರಾಗಿ ಶ್ರೀ ಮುನಿರಾಜು ಗೌಡ್ರು ಅವರ ಹೊರಹೊಮ್ಮುವಿಕೆ ಹಲವು ಹಂತಗಳಲ್ಲಿ ಸ್ಪೂರ್ತಿದಾಯಕವಾಗಿದೆ.
#ನಮ್ಮನಾಯಕನಮ್ಮಹೆಮ್ಮೆ ❤️🔥💪🏻

ಕರ್ನಾಟಕ ರಾಜ್ಯದ ಸದ್ಯದ ಬಿಜೆಪಿ ಪರಿಸ್ಥಿತಿಯಲ್ಲಿ ಮುಂದಿನ  #ಸಂಘಟನೆಯ ಜವಾಬ್ದಾರಿಯನ್ನು ಇಂತಹ ಸಾಮಾನ್ಯ  #ಕಾರ್ಯಕರ್ತರ ಕೈಯಲ್ಲಿ ಕೊಟ್ಟರೆ ಪಕ್...
30/06/2026

ಕರ್ನಾಟಕ ರಾಜ್ಯದ ಸದ್ಯದ ಬಿಜೆಪಿ ಪರಿಸ್ಥಿತಿಯಲ್ಲಿ ಮುಂದಿನ #ಸಂಘಟನೆಯ ಜವಾಬ್ದಾರಿಯನ್ನು ಇಂತಹ ಸಾಮಾನ್ಯ #ಕಾರ್ಯಕರ್ತರ ಕೈಯಲ್ಲಿ ಕೊಟ್ಟರೆ ಪಕ್ಷ ಸಂಘಟನೆ ಖಂಡಿತವಾಗಿಯೂ ಉತ್ತುಂಗಕ್ಕೆ ನಿಲ್ಲುತ್ತದೆ,

ಶ್ರೀಯುತ #ತುಳಸಿ_ಮುನಿರಾಜು ಗೌಡರಿಗೆ ಯುವ ಮನಸುಗಳನ್ನು ಗೆಲ್ಲುವ ಚಾಕಚಕ್ಯತೆ ಖಂಡಿತ ಇದೆ ಸಂಘಟನೆಯ ಅನುಭವ ಅಗಾಧವಾಗಿ ಅವರಲ್ಲಿದೆ,

ಏಕೆಂದರೆ ಹಿಂದಿನ ಅವಧಿಯಲ್ಲಿ ಕರ್ನಾಟಕ ರಾಜ್ಯದ ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಚಾಮರಾಜನಗರದಿಂದ ಹಿಡಿದು ಕರ್ನಾಟಕದ ತುತ್ತ ತುದಿ ಬೀದರ್ ನ ವರೆಗೂ ತಮ್ಮ ಸಂಘಟನೆಯ ಶಕ್ತಿ ಏನು ಎಂಬುದನ್ನು ತೋರ್ಪಡಿಸಿದ್ದಾರೆ,

ಸದ್ಯಕ್ಕೆ ರಾಜ್ಯ ಬಿಜೆಪಿಗೆ ಬೇಕಾಗಿರುವುದು ಇಂತಹ ಯುವ ಮನಸುಗಳನ್ನು ಗೆಲ್ಲುವ ಯುವ ನಾಯಕರ ಅವಶ್ಯಕತೆ ರಾಜ್ಯಕ್ಕೆ ತುಂಬಾ ಅವಶ್ಯಕತೆ ಇದೆ,

ಎಲೆಮರೆಕಾಯಿಗಳಂತೆ ಇರುವ ಇಂತಹ ಎಷ್ಟೋ ಸಂಘಟನಾಕಾರರು ರಾಜ್ಯ ಬಿಜೆಪಿಯಲ್ಲಿ ತೆರೆಯ ಹಿಂದೆ ಇರುವುದು ಎಷ್ಟೋ ಕಾರ್ಯಕರ್ತರಿಗೆ ಹಿನ್ನಡೆಯಾಗಿದೆ,

ಮೊದಲು ಸಂಘಟನೆ ನಂತರ ಯೋಚನೆ ಮಾಡೋಣ ರಾಜಕಾರಣವನ್ನು ಸಂಘಟನೆ ಬಲವಾದರೆ ರಾಜಕೀಯ ಮಾಡುವುದು ಅತಿ ಸುಲಭ, ಯಾವ ಕಾರ್ಯಕರ್ತನ ಬಳಿ ಯಾವ ರೀತಿಯ ಶಕ್ತಿ ಇದೆ ಎಂಬುದನ್ನು ಅರಿಯುವುದರಲ್ಲಿ ಮುನಿರಾಜುಗೌಡರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ,

ಅವರ ಯುವ ಮೋರ್ಚ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಇವತ್ತಿನ ಬೆಂಗಳೂರು ದಕ್ಷಿಣದ ಸಂಸದರ ನಾಡಿಮಿಡಿತವನ್ನು ಅರಿತು ಇವತ್ತಿನ ಯುವ ನಾಯಕನನ್ನಾಗಿ ಪರಿವರ್ತಿಸಿದ ಕೀರ್ತಿ ಶ್ರೀಯುತ ತುಳಸಿ ಮುನಿರಾಜು ಗೌಡರಿಗೆ ಸಲ್ಲುತ್ತದೆ,
ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಪಾಂಡಿಚೆರಿಯ ತಮಗೆ ಕೊಟ್ಟ ಉಸ್ತುವಾರಿ ಕ್ಷೇತ್ರವನ್ನು ಗೆಲ್ಲಿಸಿದ ಕೀರ್ತಿ, ಹಾಗೂ ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಕೊಟ್ಟಿದ್ದ ಎರಡು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯಲ್ಲಿ ತನ್ನ ಅಭ್ಯರ್ಥಿಗಳನ್ನು ಸಂಘಟನೆ ಮೂಲಕ ಗೆಲ್ಲಿಸಿಕೊಂಡ ಬಂದ ಕೀರ್ತಿ ಮುನಿರಾಜು ಗೌಡರಿಗೆ ಸಲ್ಲುತದೆ.

ಯುವ ಮೋರ್ಚಾ ಅಧ್ಯಕ್ಷರಾಗಿದ್ದಾಗ ತುಳಸಿಮುನಿರಾಜುಗೌಡರ ಎರಡು ಹೋರಾಟಗಳನ್ನು ಹೇಳಲು ಬಯಸುತ್ತೇನೆ ಒಂದು ದೊಡ್ಡಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ, ಹಾಗೂ ಬೀದರ್ನಲ್ಲಿ ನಿರ್ಮಿಸಿದ ಹೈದರಾಬಾದ್-ಕರ್ನಾಟಕ ವಿಮೋಚನ ಶಕ್ತಿಯ ಹಿಂದಿನ ಧ್ರುವತಾರೆ ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆ,

ಹಿಡಿದ ಕೆಲಸವನ್ನು ಬಿಡದೆ ತಾರ್ಕಿಕ ಅಂತ್ಯ ಕಾಣಿಸುವ ಛಲದಂಕ ಮಲ್ಲನಂತಹ ಕಾರ್ಯಕರ್ತರಿಗೆ ಸಂಘಟನೆಯ ಜವಾಬ್ದಾರಿ ಕಟ್ಟುವುದು ಅತ್ಯಾವಶ್ಯಕ ರಾಜ್ಯ ಬಿಜೆಪಿಗೆ,

ಹಣಬಲ,ತೋಳ್ಬಲ,ಜಾತಿ ಬಲಕ್ಕಿಂತ,
ಜನ ಬಲವೇ ಮುಖ್ಯ 👆🙏
ಸಂಘಟನೆಯಿಂದ ಶಕ್ತಿ 🚩🚩🚩🙏

ಸ್ವಾರ್ಥವಿಲ್ಲದ ಬದುಕು ಸರ್ವಕಾಲಕ್ಕೂ ಶ್ರೇಷ್ಠ 🙏
Muniraju Gowda P.M.

20/01/2026

Heartiest congratulations to Shri Nitin Nabin Ji on being elected as the BJP National President.

Your dedication, organizational strength, and unwavering commitment to nationalist values inspire millions of party workers across the country.

This responsibility comes at a crucial time, and we are confident that under your dynamic leadership, the Bharatiya Janata Party will scale new heights of service, discipline, and development.

Nitin Nabin Narendra Modi Bharatiya Janata Party (BJP)

Address

Bangalore

Website

Alerts

Be the first to know and let us send you an email when Tulasi Brigade posts news and promotions. Your email address will not be used for any other purpose, and you can unsubscribe at any time.

Shortcuts

Share

Category