23/07/2026
ಹೂ ಈಸ್ ಬಿ.ಎಲ್.ಸಂತೋಷ್? ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಯ ನಾಲ್ಕನೇ ಮಹಡಿಯಿಂದ ದೆಹಲಿ ಬಿಜೆಪಿ ಕಚೇರಿಯವರೆಗಿನ ಕಥೆ..!😍✌🏼🙏🏻
ಶ್ವೇತ ವರ್ಣದ ಪಂಚೆ ಮತ್ತು ಕುರ್ತಾ,ಬಿಳಿ ಕೂದಲು, ಹೆಗಲಲ್ಲಿ ಒಂದು ಜೋಳಿಗೆ, ಹಣೆಯಲ್ಲಿ ಎಂದೂ ತಪ್ಪದ ಕುಂಕುಮ, ಸೌಮ್ಯ ಸ್ವಭಾವದ ಮುಖ. ಈ ವ್ಯಕ್ತಿಯ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ರಾಜಕಾರಣದಲ್ಲೂ ಸುದ್ಧಿಯಾಗುತ್ತಿದೆ.
ಆ ವ್ಯಕ್ತಿ ಮತ್ಯಾರೂ ಅಲ್ಲ.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿ, ಪ್ರಸ್ತುತ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್.ಸಾಮಾನ್ಯ ಜನರಿಗೆ ಈ ಹೆಸರು ಗೊತ್ತಿದೆಯೋ ಇಲ್ಲವೋ,ಭಾರತೀಯ ಜನತಾ ಪಕ್ಷದ ಪ್ರತೀ ಕಾರ್ಯಕರ್ತನಿಗೂ ಇವರ ಬಗ್ಗೆ ಗೊತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಬೆಳೆದ ಬಿಎಲ್ ಸಂತೋಷ್ ವಿದ್ಯಾರ್ಥಿ ಜೀವನದಲ್ಲೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಲ್ಲಿ ಸಂಘಟನಾಕಾರರಾಗಿ ಬೆಳೆದುಕೊಂಡು ಬಂದವರು.ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವವನ್ನು ಕರಗತಮಾಡಿಸಿಕೊಂಡಿದ್ದ ಬಿ.ಎಲ್.ಸಂತೋಷ್ ಅಲ್ಲಿಂದಲೇ ತಮ್ಮ ಸಾಮಾಜಿಕ ಜೀವನದ ಪಯಣವನ್ನು ಆರಂಭಿಸಿದ್ದರು. ಮೂಲತಃ ಉಡುಪಿ ಜಿಲ್ಲೆಯವರಾದ ಇವರು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಸಂತೋಷ್ ಜೀ ಲೌಕಿಖ ಜೀವನವನ್ನು ಅರಿತವರೇ ಅಲ್ಲ.ಮದುವೆ, ಸಾಂಸಾರಿಕ ಜೀವನದಿಂದ ಬಲು ಅಂತರವನ್ನು ಕಾಯ್ದುಕೊಂಡಿದ್ದ ಇವರು ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ.
ದೇಶ,ಧರ್ಮ,ಸಮಾಜ ಎಂದು ನಿರಂತರವಾಗಿ ಸಮಾಜಕ್ಕಾಗಿ ದುಡಿಯುತ್ತಲೇ ಸಾಗುತ್ತಿದ್ದರು. ಧರ್ಮ ಸೇವೆಯಲ್ಲಿ, ದೇಶಸೇವೆಯಲ್ಲಿ ಇವರಿಗೆ ಧಣಿವು ಅನ್ನೋದು ಕಾಣಲೇ ಇಲ್ಲ.ಇಷ್ಟೇ ಅಲ್ಲ,ಬಿಎಲ್ ಸಂತೋಷ್ ಅಪ್ರತಿಮ ಮಾತುಗಾರರು.ಇವರ ಮಾತನ್ನು ಕೇಳಿದರೆ ಎಂತವರೂ ಮಂತ್ರ ಮುಗ್ಧರಾಗುವುದು ಖಚಿತ.
ಪ್ರಧಾನಿ ಮೋದಿಯವರ ಬಗ್ಗೆ ಮಾಡುತ್ತಿರುವ ಇವರ ಭಾಷಣಗಳೂ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇ ವೇಗವನ್ನು ಪಡೆದುಕೊಂಡಿದೆ. ತೂಕದ ಹಾಗೂ ಸಂದೇಶಭರಿತ ಮತ್ತು ಸಲುಭವಾಗಿ ಅರ್ಥವಾಗುವಂತಿರುತ್ತದೆ ಇವರ ಮಾತುಗಳು.ಬಿ.ಎಲ್.ಸಂತೋಷ್ ಸಂಘದ ಶಾಖೆಗೆ ತೆರಳುತ್ತಲೇ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಬಂದವರು.
ಇಂಜಿನಿಯರ್ ಅಭ್ಯಾಸವನ್ನು ಮಾಡಿದ್ದ ಇವರು ಸಾಮಾನ್ಯ ವಿದ್ಯಾರ್ಥಿ ಅಲ್ಲವೇ ಅಲ್ಲ.ಇವರು ಇಂಜಿನಿಯರಿಂಗ್ ಪದವಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿದ್ದರು.ಚಿನ್ನದ ಪದಕವನ್ನು ಪಡೆದಿದ್ದರೂ ಇವರು ಆಯ್ಕೆ ಮಾಡಿಕೊಂಡಿದ್ದು ಮಾತ್ರ ಸಮಾಜ ಸೇವೆ.ಇವರು ಇಂಜಿನಿಯರ್ ಕಲಿತ ಕಾರಣಕ್ಕೋ ಏನೋ,ಅತ್ಯದ್ಭುತ ಸಂಘಟನಾ ಶಕ್ತಿ ಹಾಗೂ ಹೊಸ ವಿಚಾರಗಳನ್ನು ಸಿದ್ಧಪಡಿಸುವ ಚಿಂತನೆ ಇವರಲ್ಲಿರುವುದು.
ನಾಲ್ಕನೇ ಮಹಡಿಯಿಂದ ದೆಹಲಿ ಬಿಜೆಪಿ ಕಚೇರಿವರೆಗೆ,
ಬಿಎಲ್ ಸಂತೋಷ್’ರವರ ಸಂಘಟನಾತ್ಮಕ ಶಕ್ತಿ ಹಾಗೂ ಅವರ ಕಾರ್ಯದಕ್ಷತೆಯನ್ನು ಗಮನಿಸಿದ್ದ ಭಾರತೀಯ ಜನತಾ ಪಕ್ಷ ಅವರನ್ನು ರಾಜಕೀಯ ಸಂಘಟನಾ ಸೇವೆಗಾಗಿ ಸಂಘದ ಬಳಿ ಕೋರಿತ್ತು.ಅಂತೆಯೇ ರಾಜಕೀಯ ಸಂಘಟನೆಗಾಗಿ ಸಂಘ ಸಂತೋಷ್ ಅವರನ್ನು ಕಳಿಸಿಕೊಟ್ಟಿತ್ತು.ನಿಷ್ಟೆ ಹಾಗೂ ಪ್ರಾಮಾಣಿಕತೆಯನ್ನು ರಾಜಕೀಯದಲ್ಲೂ ಮೆರೆದ ಇವರು ಸಂತೋಷ್ ಜೀ ಎಂದೇ ಎಲ್ಲಾ ನಾಯಕರೂ ಗೌರವಿಸಿ ಕರೆಯುತ್ತಾರೆ.
2006ರಲ್ಲಿ ಕರ್ನಾಟಕ ಭಾರತೀಯ ಜನತಾ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. ನಂತರ ತನ್ನ ಹುದ್ದೆಗೆ ತಕ್ಕಂತೆ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದ ಇವರು ಸಕ್ರಿಯವಾಗಿ ಹಾಗೂ ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಾಲ್ಕನೇ ಮಹಡಿಯೇ ಸಂತೋಷ್ ಜೀ ಅವರ ವಾಸಸ್ಥಾನ ಆಗಿತ್ತು. ತಮ್ಮ ಪಕ್ಷದ ಎಲ್ಲಾ ಚಟುವಟಿಕೆಗಳನ್ನೂ ಅಲ್ಲಿಂದಲೇ ನಡೆಸುತ್ತಿದ್ದರು. ಹೆಚ್ಚಾಗಿ ಯಾರ ಕಣ್ಣಿಗೂ ಬೀರದ ಸಂತೋಷ್ ಜೀ ತಮ್ಮ ಕೆಲಸ ಎಷ್ಟಿದೆಯೋ ಅಷ್ಟನ್ನೇ ಮಾಡುತ್ತಾ ಬರುತ್ತಿದ್ದರು.
2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಜಯವನ್ನು ದಾಖಲಿಸಿ ಅಧಿಕಾರದ ಪಾರುಪತ್ಯ ಪಡೆಯಲು ಸಂತೋಷ್ ಜೀ ಶ್ರಮವೂ ಒಂದು.ನಿರಂತರವಾಗಿ ಕಾರ್ಯಕರ್ತರನ್ನು ಸಂಘಟನಾತ್ಮಕವಾಗಿ ಬೆಳೆಸುತ್ತಿದ್ದ ಸಂತೋಷ್ ಜೀ ಸಂಘಟನಾ ಕಾರ್ಯದರ್ಶಿ ಎಂಬ ಹುದ್ದೆಯ ಘನತೆಯನ್ನು ಹೆಚ್ಚಿಸಿದ್ದರು.
ಮಾಧ್ಯಮಗಳಲ್ಲಿ ಭಾರೀ ಪ್ರಚಾರವನ್ನೂ ಸಂತೋಷ್ ಜೀ ವಿರುದ್ಧ ಮಾಡಲಾಗಿತ್ತು.ಆದರೆ ಸಂತೋಷ್ ಜೀ ಸಂಘದ ಗರಡಿಯಲ್ಲಿ ಬೆಳೆದುಕೊಂಡು ಬಂದವರು.ಈ ಬಗ್ಗೆ ಬಂದಿದ್ದ ಯಾವೊಂದೂ ಆರೋಪಗಳಿಗೂ ಅವರು ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.ಪ್ರತಿಕ್ರಿಯೆ ನೀಡಿ ಗೊಂದಲ ಸೃಷ್ಟಿ ಮಾಡುವ ಯಾವ ಉದ್ಧೇಶವೂ ಇವರಿಗಿಲ್ಲ.
ನಂತರ ಇವರ ಅಪ್ರತಿಮ ಕಾರ್ಯಚಟುವಟಿಕೆಗಳನ್ನು ಕಂಡಂತಹ ಭಾರತೀಯ ಜನತಾ ಪಕ್ಷದ ವರಿಷ್ಟರು ಕೇಂದ್ರಕ್ಕೆ ಕರೆಸಿ ರಾಷ್ಟ್ರೀಯ ಮಟ್ಟದ ಜವಬ್ಧಾರಿಯನ್ನು ನೀಡಿದ್ದರು. ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಜೀ ನೇಮಕಗೊಂಡರು. ನಂತರವೂ ಇವರ ಕೆಲಸ ಎಲೆಮರೆಯ ಕಾಯಿಯಂತೆಯೇ ನಡೆಯುತ್ತಿದೆ.
ಯಾವುದೇ ಪ್ರಚಾರದ ಗೋಜಿಗೆ ಹೋಗದ ಇವರು ತನ್ನ ಕೆಲಸವನ್ನಷ್ಟೇ ಮಾಡುತ್ತಾ ಮುಂದುವರೆದರು.ಸಂತೋಷ್ ಜೀ ಒಬ್ಬಂಟಿಯಲ್ಲ. ಅವರ ಹಿಂದೆ ಅನೇಕ ಶಾಸಕರು, ಸಂಸದರು,ವಿಧಾನ ಪರಿಷತ್ ಸದಸ್ಯರು ಸಹಿತ ಅನೇಕ ಜನಪ್ರತಿನಿಧಿಗಳು ಇದ್ದಾರೆ.ಅಂತೆಯೇ ಸಾವಿರಾರು ಮಂದಿ ಕಾರ್ಯಕರ್ತರ ದಂಡು ಸಂತೋಷ್ ಜೀ ಬಳಿ ಇದೆ. ಹೀಗಿರುವಾಗ ಅವರಿಗೆ ಎಂದೋ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸಿ ಆ ಗದ್ದುಗೆಯನ್ನು ಏರಬಹುದಿತ್ತು.ಆದರೆ ಈ ಬಗ್ಗೆ ಅವರು ಎಂದೂ ಅವಸರ ಪಟ್ಟವರಲ್ಲ.ಪಕ್ಷದ ವರಿಷ್ಟರ ಸೂಚನೆಯಂತೆಯೇ ಪಕ್ಷದ ಕೊಟ್ಟ ಜವಬ್ಧಾರಿಯನ್ನು ನಿರ್ವಹಿಸುವವರು ಸಂತೋಷ್ ಜೀ.
ಮಾಧ್ಯಮದಿಂದ ದೂರ ದೂರ
ಸಂತೋಷ್ ಜೀ ಎಂದೂ ಪ್ರಚಾರದ ಹಿಂದೆ ಬಿದ್ದವರಲ್ಲ ಎಂಬುವುದಕ್ಕೆ ಇದೊಂದೇ ನಿದರ್ಶನ ಸಾಕು.ಇವರು ಎಂದೂ ಮಾಧ್ಯಮದ ಮುಂದೆ ಕಾಣಿಸೋದೇ ಇಲ್ಲ.ಯಾವ ಸುದ್ಧಿ ವಾಹಿನಿಗಳೂ ಇವರ ಸಂದರ್ಶನವನ್ನು ಬಯಸಿದರೂ ಅವರು ಹತ್ತಿರಕ್ಕೂ ಸುಳಿಯೋದಿಲ್ಲ.ಸದಾ ತಮಗೆ ಕೊಟ್ಟ ಕೆಲಸದಲ್ಲೇ ಬ್ಯುಸಿಯಾಗಿರುವ ಸಂತೋಷ್ ಜೀ ವಿವಾದಾತ್ಮಕ ವಿಚಾರದಲ್ಲಿ ಮೂಗುತೂರಿಸುವುದೇ ಇಲ್ಲ. ಹೀಗಾಗಿಯೇ ಇವರು ರಾಜಕೀಯ ಜ್ಞಾನ ಇಲ್ಲದ ಸಾಮಾನ್ಯ ಜನರಿಗೆ ಪರಿಚಿತರಾಗಿದ್ದು ಕಡಿಮೆ.
ಮೋದಿ-ಶಾಗೆ ಹತ್ತಿರ
ಸಂತೋಷ್ ಜೀ ಮಾತು ಬಿಜೆಪಿಯ ರಾಷ್ಟ್ರೀಯ ಅಂಗಳದಲ್ಲಿ ತುಂಬಾನೇ ಪರಿಣಾಮಕಾರಿಯಾಗಿರುತ್ತೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾರಿಗೂ,ಗೃಹ ಮಂತ್ರಿ ಚಾಣಕ್ಯ ಅಮಿತ್ ಷಾರಿಗೂ ಸಂತೋಷ್ ಜೀ ಅಂದರೆ ಸಂಘಟನಾ ಶಕ್ತಿ ಎಂಬ ಸತ್ಯ ಗೊತ್ತಿದೆ.ಹೀಗಾಗಿ ಕರ್ನಾಟಕ ಮಾತ್ರವಲ್ಲದೆ ವಿವಿಧ ರಾಜ್ಯಗಳಿಗೂ ಇವರನ್ನು ಪ್ರಭಾರಿಯಾಗಿ ನೇಮಿಸುತ್ತಾರೆ.
ಲಕ್ಷದ್ವೀಪದಲ್ಲೂ ಸಂತೋಷ್ ಜೀ ತಮ್ಮ ಸಂಘಟನಾ ಕೆಲಸವನ್ನು ಮಾಡಿರುವ ಅನೇಕ ಉದಾಹರಣೆಗಳೂ ಇವೆ.
ಅದೊಂದು ದಿನ ಪ್ರಧಾನಿ ಮೋದಿಯವರ ಸಮಾವೇಶ ಬೆಂಗಳೂರಿನಲ್ಲಿ ಇತ್ತು. ಈ ಸಂದರ್ಭದಲ್ಲಿ ಮತ್ತದೇ ಶುಭ್ರ ವಸ್ತ್ರದ ಒಬ್ಬ ವ್ಯಕ್ತಿ ಟ್ರಾಫಿಕ್ ಕಂಟ್ರೋಲ್ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.ಮೋದಿಯವರು ಬಂದು ಹೋಗುವವರೆಗೂ ಈ ವ್ಯಕ್ತಿ ರಸ್ತೆ ಮಧ್ಯೆಯೇ ತನ್ನ ಕೆಲಸ ಮಾಡುತ್ತಿದ್ದರು.
ನಂತರ ಯಾರೋ ಒಬ್ಬರು ಈ ವ್ಯಕ್ತಿ ಯಾರೆಂದು ಚರ್ಚಿಸಿದಾಗ,ಅವರು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಎಂದು ಹೇಳಿದ್ದಾಗಲೇ ಹೊತ್ತಾಗಿದ್ದು.ಈ ಪುಣ್ಯಾತ್ಮ ಈ ಪರಿಯೂ ಕೆಲಸ ಮಾಡುತ್ತಾರಾ ಎಂದು.ಸಣ್ಣ ಹುದ್ದೆ ಸಿಕ್ಕರೂ ವೇದಿಕೆಯ ಮುಂಭಾಗದಲ್ಲಿ ಕುರ್ಚಿ ಸಿಗಬಹುದೇ ಎಂದು ನಿರೀಕ್ಷಿಸುವವರೇ ಹೆಚ್ಚಾಗಿರುವ ಈ ರಾಜಕೀಯದಲ್ಲಿ ಇಂತಹಾ ಓರ್ವ ವ್ಯಕ್ತಿ ಇದ್ದಾರೆಂದರೆ ನಿಜಕ್ಕೂ ಗ್ರೇಟ್ ಎನ್ನಿಸದಿರದು.
ಶಿಸ್ತಿನ ಸಿಪಾಯಿಯ ಪಕ್ಷನಿಷ್ಟೆ, ರಾಷ್ಟ್ರಭಕ್ತಿ ಹಾಗೂ ದೇಶ ಮತ್ತು ಪಕ್ಷಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡಿರುವ ಇವರ ರೀತಿನೀತಿಗಳು, ಸಂಘಟನಾತ್ಮಕ ಶಕ್ತಿಯನ್ನು ಗಮನಿಸಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದೆ.ಯಾವ ಟೀಕೆ ಟಿಪ್ಪಣಿಗಳಿಗೂ ಕಿವಿಕೊಡದೆ ತನ್ನಷ್ಟಕ್ಕೇ ತಾನು ಕೆಲಸ ನಡೆಸಿಕೊಂಡು ಹೋಗುತ್ತಿರುವುದೇ ಅವರ ಮುನ್ನಡೆಯ ಸೀಕ್ರೇಟ್.
ಹಸನ್ಮುಖಿ,ಶಾಂತ ಸ್ವಭಾವದ ವ್ಯಕ್ತಿತ್ವವುಳ್ಳ ಸಂತೋಷ್ ಜೀಯಂತಹ ವ್ಯಕ್ತಿಗಳು ರಾಜಕೀಯ ಪಡಸಾಲೆಯಲ್ಲಿ ಇರುವುದು ತುಂಬಾನೇ ಕಡಿಮೆ.ಈ ಹಿಂದೆ ನರೇಂದ್ರ ಮೋದಿಯೂ ಇದೇ ಸಂಘಟನಾ ಕಾರ್ಯದರ್ಶಿ ಹುದ್ದೆಯನ್ನು ಹೊಂದಿದ್ದು ಇಂತಹದ್ದೇ ನಿಯಮಗಳನ್ನು ಹೊಂದಿದ್ದರು. ಇದೀಗ ಸಂತೋಷ್ ಜೀಯವರೂ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ.
Iಸಂಗ್ರಹI
Muniraju Gowda P.M.
Santhosh BL