13/10/2021
ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಬಿಬಿಎಂಪಿ ವಾರ್ಡಿನ 194 ಗೊಟ್ಟಿಗೆರೆ ಸಮೀಪದ ಜಂಬುಸವಾರಿ ದಿನ್ನೆಯಲ್ಲಿರುವ ಸರ್ಕಾರಿ ಶಾಲೆ ಆವರಣದಲ್ಲಿ ಕಾಂಗ್ರೆಸ್ ಮುಖಂಡ ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ. ರಮೇಶ್ ರವರ ನೇತೃತ್ವದಲ್ಲಿ ಹಾಗೂ ನಾರಾಯಣ ಹೃದಯಾಲಯದ ಸಹಭಾಗಿತ್ವದಲ್ಲಿ 2000 ಸಾವಿರಕ್ಕಿಂತ ಹೆಚ್ಚು ಕೋವಿಡ್ ಲಸಿಕೆ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಇನ್ನು ಕೋವಿಡ್ ಲಸಿಕಾ ಅಭಿಯಾನಕ್ಕೆ ಕಾಂಗ್ರೆಸ್ ಮುಖಂಡ ಆರ್.ಕೆ. ರಮೇಶ್ ರವರು ಚಾಲನೆ ನೀಡಿದರು. ಇನ್ನು ಕಾರ್ಯಕ್ರಮದಲ್ಲಿ ಐ.ಎನ್.ಟಿ.ಯುಸಿ ನ ರಾಜ್ಯಾಧ್ಯಕ್ಷ ಪ್ರಕಾಶಂ, ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ, ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಲಕ್ಷ್ಮಣ್, ಕಾಂಗ್ರೆಸ್ ಮುಖಂಡರಾದ ಗೋಪಿನಾಥ್ ರಾಜ್. ಕಮ್ಮನಹಳ್ಳಿ ಮಂಜುನಾಥ್. G.kರವಿ. ಗೊಟ್ಟಿಗೆರೆ ಮುನಿರಾಜು ಎಸ್.ಸಿ ಎಸ್.ಟಿ ಅಧ್ಯಕ್ಷರು ಗೊಟ್ಟಿಗೆರೆ ಬ್ಲಾಕ್,ರೇಖಾ ನವೀನಗೌಡ ಮಹಿಳಾ ಅಧ್ಯಕ್ಷರು ಗೊಟ್ಟಿಗೆರೆ ಬ್ಲಾಕ್,ದಿನೇಶ್ ಕೆಪಿಸಿಸಿ ಕಾರ್ಮಿಕ ವಿಭಾಗ ಪ್ರಧಾನ ಕಾರ್ಯದರ್ಶಿ, ಸುದರ್ಶನ್ ಗೊಟ್ಟಿಗೆರೆ ವಾರ್ಡ್ ಅಧ್ಯಕ್ಷರು,ಫ್ರಾಂಕ್ಲಿನ್ ಕೆಪಿಸಿಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಬ್ಲಾಕ್, ಬಿ.ಟಿ.ನಾಗರಾಜ್,ರವಿ ರಂಗರಾಜ್ ಉಪಾಧ್ಯಕ್ಷರು ಗೊಟ್ಟಿಗೆರೆ ಬ್ಲಾಕ್, ಚಂದ್ರಶೇಖರ್ ಲೇಬರ್ ಸೆಲ್ ಗೊಟ್ಟಿಗೆರೆ ಬ್ಲಾಕ್ ಅಧ್ಯಕ್ಷರು, ಹರ್ಷ ಸಾಮಾಜಿಕ ಜಾಲತಾಣ ಗೊಟ್ಟಿಗೆರೆ ಬ್ಲಾಕ್ ಅಧ್ಯಕ್ಷರು,ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು...