26/12/2021
ಸೀತಾಫಲ
ಗಂಧಗಾತ್ರ,ಸೀತಾಫಲ್,ಸೀತಾಫಲಂ,
ಸೀತಾಫಲಮು,ದುರಂಜಿಕಾಯಿ ಎಂಬ ಹೆಸರುಗಳಿಂದ
ಕರೆಯುತ್ತಾರೆ.
ಸೀತಾಫಲದಲ್ಲಿ ಸುಮಾರು 40 ಪ್ರಭೇದಗಳಿವೆ ಎಂದು ಅನೇಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
"ಅನೋನ" ಬ್ರೆಜಿಲ್ ನ "ಬರೀಬ" ಹಾಗೂ ಅಮೇರಿಕಾದ "ಪೆಪ್ಪೊ" ಜಾತಿಗಳನ್ನು ಬಿಟ್ಟು ಉಳಿದವು ಸೇವಿಸಲು ಅಷ್ಟೊಂದು ಯೋಗ್ಯವಲ್ಲವೆಂದು ಗ್ರಂಥಗಳಲ್ಲಿ ತಿಳಿಸಲಾಗಿದೆ.ಆದರೆ ತಳಿಕರಣ ಕ್ರಿಯೆಯಲ್ಲಿ ಹಾಗೂ ಕಸಿ ಕಟ್ಟುವಿಕೆಯಲ್ಲಿ ಸಸ್ಯ ಪೇಠವಾಸಿ ಉಪಯುಕ್ತ ತಳಿ ಎಂದು ಹೇಳುತ್ತಾರೆ.
ಸೀತಾಫಲದ ತವರೂರು ಭಾರತ ಎನ್ನುವುದಕ್ಕೆ ಹಲವು ಪ್ರಮುಖ ಆಧಾರಗಳಿವೆ.ಭಾರತದ ಅತ್ಯಂತ ಪುರಾತನ ಸಂಸ್ಕೃತ ಗ್ರಂಥಗಳಲ್ಲಿಯೂ ಸೀತಾಫಲದ ಉಲ್ಲೇಖ ಇದೆ. ಈ ಕುಟುಂಬಕ್ಕೆ ಸೇರಿದ ಸೀತಾಫಲ,ರಾಮಫಲ,ಹನುಮಫಲ,ಲಕ್ಷ್ಮಣಫಲ ಎಲ್ಲವು ಸಂಸ್ಕೃತದ ಹೆಸರುಗಳೆ, ಅಲ್ಲದೆ ಅಜಂತಾ ಎಲ್ಲೋರಾ ಮುಂತಾದ ಸ್ಥಳಗಳಲ್ಲಿರುವ ಶಿಲ್ಪಗಲ್ಲಿ ಈ ಹಣ್ಣುಗಳ ಚಿತ್ರಣವಿದೆ.ಸೀತಾಫಲವು ಭಾರತದ ನಾನಾ ಕಾಡುಗಳಲ್ಲಿ ನೈಸರ್ಗಿಕವಾಗಿ 10 ರಿಂದ 20 ಅಡಿ ಪೊದೆಯಂತೆ ಬೆಳೆಯುತ್ತದೆ.ಬೆಟ್ಟ ಗುಡ್ಡಗಳಲ್ಲೂ ಸಹಾ ಸಮೃದ್ಧಿಯಾಗಿ ಬೆಳೆಯುತ್ತವೆ.
ಸೀತಾಫಲ ಕಾಡು ಹಣ್ಣಾಗಿ ಬೆಳೆದರೂ ಕ್ಯಾಲರಿ ಮತ್ತು C ಜೀವಸತ್ವದ ಅಗರ.ಅಧಿಕ ಪೌಷ್ಟಿಕಾಂಶದಿಂದ ಕೂಡಿರುವ ಹಣ್ಣು.ಬಹಳಷ್ಟು ಶರ್ಕರ ಪಿಷ್ಟಗಳಿವೆ.
ಅಲವು ಪ್ರಾಂತ್ಯಗಳಲ್ಲಿ ಇದರ ಕಾಯಿಗಳನ್ನು ಬೇಯಿಸಿ ತಿನ್ನುತ್ತಾರೆ.ಏಕೆಂದರೆ ಕಾಯಿಯಲ್ಲಿ ಔಷಧೀಯ ಗುಣಗಳು ಅಧಿಕವಾಗಿದೆ ಎಂಬ ನಂಬಿಕೆ.
100 ಗ್ರಾಂ ಸೀತಾಫಲದಲ್ಲಿ 94% ಕ್ಯಾಲರಿ ಇದೆ.ಸೇಬು 56% ಸೀಬೆ 49% ಮಾವು 70% ಪಪ್ಪಾಯಿಯಲ್ಲಿ 32% ಮಾತ್ರ ಇದೆ.
ತುಂಬಾ ಸಣ್ಣಗಿರುವುವರು ಸೀತಾಫಲ ನಿಯಮಿತವಾಗಿ ಸೇವಿಸುತ್ತಿದ್ದರೆ ಆರೋಗ್ಯದಿಂದ ಪುಷ್ಟಿಯಾಗಿ ಬೆಳೆಯುತ್ತಾರೆ.ನಿಶಕ್ತಿಯಿಂದ ಬಳಲುತ್ತಿರುವುವರು ಈ ಹಣ್ಣು ಸೇವಿಸಿದರೆ ತಕ್ಷಣ ಶಕ್ತಿ ಬಂದಂತಾಗುತ್ತದೆ.
ಸೀತಾಫಲದಲ್ಲಿರುವ ವಿಟಮಿನ್ C ಸಹಜವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ.
ಶ್ವಾಸಕೋಶದ ಬಲ ಹೆಚ್ಚಿಸಿ ಅಸ್ತಮಾವನ್ನು ತಗ್ಗಿಸುತ್ತೆ.ಕ್ಯಾನ್ಸರ್, ಮೂತ್ರಪಿಂಡ ವ್ಯಾಧಿಗಳನ್ನು ಗುಣಪಡಿಸುತ್ತೆ.ಜೀರ್ಣಕ್ರಿಯೆ ಸುಗುಮವಾಗುತ್ತೆ.
ಕರಳು ಸಂಬಂಧಿ ವ್ಯಾಧಿಗಳಿಂದ ಕಾಪಾಡುತ್ತೆ.
ಇದರಲ್ಲಿರುವ ಅಧಿಕ ಕಬ್ಬಿಣಾಂಶ ದೇಹದಲ್ಲಿ ರಕ್ತಹೀನತೆಯನ್ನು ತಗ್ಗಿಸುತ್ತೆ.
ವಿಟಮಿನ್ C ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತೆ.ತಾಯಿ ಗರ್ಭದಲ್ಲಿರುವ ಮಗುವಿನ ಕೂದಲು, ಚರ್ಮ, ಕಣ್ಣು ಚೆನ್ನಾಗಿ ಬೆಳವಣಿಗೆ ಹೊಂದಲು ಸಹಕರಿಸುತ್ತೆ.
ಕಲ್ಲು ಸಕ್ಕರೆ ಅಥವಾ ಜೇನುತುಪ್ಪದೊಂದಿಗೆ ಬಿಳಿ ತಿರಳನ್ನು ಹಾಲಿನೊಂದಿಗೆ ಸೇವಿಸಿದರೆ,ಹಾಲುಣಿಸುವ ತಾಯಂದರಲ್ಲಿ ಸ್ತನ್ಯೋತ್ಪತ್ತಿ ಹೆಚ್ಚುತ್ತೆ.
ಮೆಗ್ನಿಶಿಯಂ, ಕ್ಯಾಲ್ಸಿಯಂ ಅಧಿಕವಿದ್ದು ದೇಹದಲ್ಲಿನ ಮೂಳೆಗಳಿಗೆ ಶಕ್ತಿ ತುಂಬುತ್ತೆ.ಇದರಲ್ಲಿರುವ ಪೊಟ್ಯಾಸಿಯಂ ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತೆ.ಇದರಲ್ಲಿರುವ ನಿಯೋಸಿನ್ ಮೈಯಲ್ಲಿರುವ ಕೆಟ್ಟ ಕೊಬ್ಬನ್ನು ಕರಗಿಸುತ್ತೆ.
ತಾಮ್ರದ ಅಂಶ ಅಧಿಕವಿದ್ದು ಕೂದಲು ಬೆಳವಣಿಗೆಗೆ ಸಹಕರಿಸುತ್ತೆ.ನಿಶಕ್ತಿಯಿಂದ ಬಳಲುತ್ತಿರುವ ಗರ್ಭಿಣಿಯರಿಗೆ ಶಕ್ತಿ ತುಂಬುತ್ತೆ.ಹೊಟ್ಟೆಯಲ್ಲಿರುವ ಮಗುವಿನ ಮೆದಳು, ನಾಡಿ ವ್ಯವಸ್ಥೆ ಬೆಳೆಯಲು ಸಹಕರಿಸುತ್ತೆ.ಗರ್ಭಿಣಿಯರ ಮಾನಸಿಕ ಆಂದೋಲನ, ಆಲಸ್ಯ ನಿವಾರಣೆಯಾಗುತ್ತೆ.
ಬೆಳವಣಿಗೆ ಇಲ್ಲದ ಮಕ್ಕಳು ಬೆಳವಣಿಗೆಗೆ ಸಹಕರಿಸುತ್ತೆ.
ಇದರಲ್ಲಿನ ಪೋಷಕಾಂಶಗಳು ಕ್ಯಾನ್ಸರ್, ಮೂತ್ರಪಿಂಡ ಸಮಸ್ಯೆಗಳು ಬರದಂತೆ ಕಾಪಾಡುತ್ತೆ.
ಎಲೆಗಳನ್ನು ಅರೆದು ಗಾಯ, ಬಾವು, ಗಜಕರ್ಣ, ದದ್ದುಗಳಿಗೆ ಲೇಪನ ಮಾಡಿದರೆ ವಾಸಿಯಾಗುತ್ತೆ.ಇದರ ರಸವನ್ನು ವಸುಡುಗಳಿಗೆ ಲೇಪನ ಮಾಡಿದ್ರೆ ಹಲ್ಲುನೋವು,ವಸಡು ನೋವು ನಿವಾರಣೆಯಾಗುತ್ತೆ.
ಬೀಜದ ಚೂರ್ಣವನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ತಲೆಗೆ ಹಚ್ಚಿದರೆ, ತಲೆಯಲ್ಲಿನ ಹೇನು ಸಾಯುತ್ತೆ.
ಸೂಚನೆ:-ಬೀಜದ ಚೂರ್ಣ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಿ.ಕಣ್ಣಿಗೆ ಬಿದ್ದರೆ ದೃಷ್ಟಿ ಹೋಗುವ ಸಂಭವ ಇರುತ್ತೆ.
ಒಂದು ಸೀತಾಫಲದ ಎಲೆಯನ್ನು ಶುಭ್ರಗೊಳಿಸಿ, ಅದಕ್ಕೆ ಒಂದು ಬಟಾಣಿಕಾಳು ಗಾತ್ರ ಇಂಗುವ ಸೇರಿಸಿ, ನುಣ್ಣಗೆ ಅರೆದು ಉಂಡೆ ರೀತಿ ಮಾಡಿ, ಹುಳುಕಲ್ಲಿನ ಮೇಲೆ 2-3 ನಿಮಿಷವಿಟ್ಟು, ಹೊರಗೆ ಉಗಳಿದರೆ, ಹಲ್ಲಿನಲ್ಲಿರುವ ಹುಳುಗಳು ಸತ್ತು ಹೊರಬರುತ್ತವೆ, ಹಲ್ಲುನೋವು ನಿವಾರಣೆಯಾಗುತ್ತೆ.
ಸೀತಾಫಲ ಔಷಧೀಯ ಗುಣಗಳು ತುಂಬಿರುವ ಕಣಜವೆಂದರೆ ತಪ್ಪಾಗಲಾರದು.
ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಮೂಲಿಕೆ ಪರಿಚಯ ಮಾಡಿಕೊಳ್ಳೋಣ.
ವಂದನೆಗಳು