Dr.C.N Manjunath

Dr.C.N Manjunath Senior Cardiologist and Member of parliament from Bengaluru Rural Lok sabha constituency.
(3)

“ಕರುಣೆಗೆ ಗಡಿಗಳಿಲ್ಲ” ❤️ಬೆಂಗಳೂರಿನಲ್ಲಿ ನಡೆದ “1000 Beginnings – A Thousand Lives. Countless Beginnings” ಕಾರ್ಯಕ್ರಮದಲ್ಲಿ ಮುಖ್ಯ...
05/09/2026

“ಕರುಣೆಗೆ ಗಡಿಗಳಿಲ್ಲ” ❤️

ಬೆಂಗಳೂರಿನಲ್ಲಿ ನಡೆದ “1000 Beginnings – A Thousand Lives. Countless Beginnings” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, 1,000 ಮಕ್ಕಳಿಗೆ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ನೆರವೇರಿಸಿರುವ ಐತಿಹಾಸಿಕ ಸಾಧನೆಯನ್ನು ಅಭಿನಂದಿಸಿದೆ.

ಗುಣಮಟ್ಟದ ವೈದ್ಯಕೀಯ ಸೇವೆ, ಕೈಗೆಟುಕುವ ಚಿಕಿತ್ಸೆ, ದಾನ ಮತ್ತು ಮಾನವೀಯತೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವ DKMS, ಸಂಕಲ್ಪ್ ಇಂಡಿಯಾ ಫೌಂಡೇಶನ್ ಮತ್ತು ಮಹಾವೀರ್ ಜೈನ್ ಆಸ್ಪತ್ರೆಗಳ ಸೇವೆ ನಿಜಕ್ಕೂ ಶ್ಲಾಘನೀಯ.

ಬೋನ್ ಮ್ಯಾರೋ ಕಸಿ ಚಿಕಿತ್ಸೆ ಅನೇಕ ಕುಟುಂಬಗಳಿಗೆ ಆರ್ಥಿಕವಾಗಿ ಸವಾಲಿನದ್ದಾಗಿರುವ ಸಂದರ್ಭದಲ್ಲಿ, ಅಗತ್ಯವಿರುವ ಮಕ್ಕಳಿಗೆ ಹೊಸ ಬದುಕು ನೀಡುತ್ತಿರುವ ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಿರುವ ವೈದ್ಯರು, ನರ್ಸ್‌ಗಳು, ದಾನಿಗಳು ಹಾಗೂ ಎಲ್ಲಾ ಸಹಭಾಗಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

ಒಂದು ಮಗು ಚೇತರಿಸಿಕೊಂಡು, ಒಂದು ಕುಟುಂಬ ಮತ್ತೆ ನಗುವುದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ.

ಈ 1,000ನೇ ಮೈಲಿಗಲ್ಲು ಇನ್ನೂ ಸಾವಿರಾರು ಜೀವಗಳಿಗೆ ಹೊಸ ಆರಂಭವಾಗಲಿ. 🙏

ರಾಜರಾಜೇಶ್ವರಿನಗರದ ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಆತ್ಮೀಯರಾದ ಶ್ರೀ ರಾಮಚಂದ್ರು ಅವರ ಜನ್ಮದಿನ ಆಚರಣೆಯಲ್ಲಿ ಭಾಗಿಯಾಗಿ, ಆತ್ಮೀಯವಾಗಿ ಶುಭ ಹಾರ...
05/09/2026

ರಾಜರಾಜೇಶ್ವರಿನಗರದ ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಆತ್ಮೀಯರಾದ ಶ್ರೀ ರಾಮಚಂದ್ರು ಅವರ ಜನ್ಮದಿನ ಆಚರಣೆಯಲ್ಲಿ ಭಾಗಿಯಾಗಿ, ಆತ್ಮೀಯವಾಗಿ ಶುಭ ಹಾರೈಸಿದೆ.

ಭಗವಂತನು ಅವರಿಗೆ ಉತ್ತಮ ಆರೋಗ್ಯ, ಆಯುರಾರೋಗ್ಯ ಹಾಗೂ ಸಂತೋಷ, ಸಮೃದ್ಧಿಯಿಂದ ಕೂಡಿದ ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.

ಶಿಕ್ಷಕರ ದಿನದ ಶುಭಾಶಯಗಳು “ಜ್ಞಾನವೆಂಬ ಬೆಳಕನ್ನು ನೀಡಿ, ಬದುಕಿನ ದಾರಿಗೆ ದಾರಿ ತೋರುವ ಪ್ರತಿಯೊಬ್ಬ ಶಿಕ್ಷಕರಿಗೂ ಹೃತ್ಪೂರ್ವಕ ನಮನಗಳು.”ವಿದ್ಯ...
05/09/2026

ಶಿಕ್ಷಕರ ದಿನದ ಶುಭಾಶಯಗಳು

“ಜ್ಞಾನವೆಂಬ ಬೆಳಕನ್ನು ನೀಡಿ, ಬದುಕಿನ ದಾರಿಗೆ ದಾರಿ ತೋರುವ ಪ್ರತಿಯೊಬ್ಬ ಶಿಕ್ಷಕರಿಗೂ ಹೃತ್ಪೂರ್ವಕ ನಮನಗಳು.”

ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಿರುವ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು.
ನಿಮ್ಮ ಜ್ಞಾನ, ತ್ಯಾಗ ಮತ್ತು ಮಾರ್ಗದರ್ಶನ ಸದಾ ಸಮಾಜಕ್ಕೆ ದಾರಿದೀಪವಾಗಿರಲಿ.

ಶಿಕ್ಷಕರಿಗೆ ಗೌರವ – ಜ್ಞಾನಕ್ಕೆ ನಮನ.

ಜನರ ಸಮಸ್ಯೆಗಳಿಗೆ ಸ್ಪಂದಿಸುವುದೇ ನನ್ನ ಮೊದಲ ಆದ್ಯತೆ.ರಾಮನಗರದ ನನ್ನ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ, ಅವರ ಅಹವಾಲುಗಳನ್ನು ನೇರವಾಗಿ ...
04/09/2026

ಜನರ ಸಮಸ್ಯೆಗಳಿಗೆ ಸ್ಪಂದಿಸುವುದೇ ನನ್ನ ಮೊದಲ ಆದ್ಯತೆ.

ರಾಮನಗರದ ನನ್ನ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ, ಅವರ ಅಹವಾಲುಗಳನ್ನು ನೇರವಾಗಿ ಆಲಿಸಿ ಸ್ವೀಕರಿಸಿದೆ.

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡರು. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸುವ ಮೂಲಕ, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸುವುದು, ಪರಿಹಾರದತ್ತ ಪ್ರಾಮಾಣಿಕವಾಗಿ ಹೆಜ್ಜೆ ಇಡುವುದು — ಇದೇ ನನ್ನ ಜನಸೇವೆಯ ಸಂಕಲ್ಪ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರಿದ, ಪ್ರೀತಿ, ಕರುಣೆ, ಜ್ಞಾನ ಮತ್ತು ಧರ್ಮದ ಪ್ರತೀಕವಾ...
04/09/2026

ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು

ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರಿದ, ಪ್ರೀತಿ, ಕರುಣೆ, ಜ್ಞಾನ ಮತ್ತು ಧರ್ಮದ ಪ್ರತೀಕವಾದ ಶ್ರೀಕೃಷ್ಣ ಪರಮಾತ್ಮನ ಜನ್ಮದಿನದ ಪಾವನ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು.

ಶ್ರೀಕೃಷ್ಣನ ಕೃಪೆಯಿಂದ ಪ್ರತಿಯೊಬ್ಬರ ಜೀವನದಲ್ಲೂ ಸುಖ, ಶಾಂತಿ, ಸಮೃದ್ಧಿ ಹಾಗೂ ನೆಮ್ಮದಿ ನೆಲೆಸಲಿ.

ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಬಳೆಬಸಪ್ಪನದೊಡ್ಡಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ರೈತ ಶ್ರೀ ಪರಶಿವಯ್ಯ ಅವರ ಮನೆಗೆ ಬೆಂಕಿ ...
01/09/2026

ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಬಳೆಬಸಪ್ಪನದೊಡ್ಡಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ರೈತ ಶ್ರೀ ಪರಶಿವಯ್ಯ ಅವರ ಮನೆಗೆ ಬೆಂಕಿ ತಗುಲಿ, ಮನೆಯ ಬಹುತೇಕ ವಸ್ತುಗಳು ಸುಟ್ಟುಹೋದ ಘಟನೆ ತಿಳಿದು ಇಂದು ಸ್ಥಳಕ್ಕೆ ಭೇಟಿ ನೀಡಿದೆ.

ಪರಶಿವಯ್ಯ ಹಾಗೂ ಅವರ ಕುಟುಂಬದವರನ್ನು ಭೇಟಿಯಾಗಿ ಘಟನೆಯ ಸಂಪೂರ್ಣ ವಿವರ ಪಡೆದು, ಅವರ ನೋವು ಮತ್ತು ಸಂಕಷ್ಟವನ್ನು ಆಲಿಸಿ ಸಾಂತ್ವನ ಹೇಳಿದೆ. ಈ ಕಷ್ಟದ ಸಂದರ್ಭದಲ್ಲಿ ಕುಟುಂಬಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಧನ ಸಹಾಯದ ಜೊತೆಗೆ ಅಗತ್ಯ ದಿನಬಳಕೆಯ ವಸ್ತುಗಳು, ಹೊದಿಕೆ ಹಾಗೂ ಆಹಾರ ಪದಾರ್ಥಗಳನ್ನು ಒದಗಿಸಿದೆ.

ಸ್ಥಳದಲ್ಲಿದ್ದ ಕಂದಾಯ ಇಲಾಖೆ, ಬೆಸ್ಕಾಂ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಘಟನೆಯ ಕುರಿತು ಮಾಹಿತಿ ಪಡೆದು, ಸರ್ಕಾರದ ವತಿಯಿಂದ ದೊರೆಯಬಹುದಾದ ಅಗತ್ಯ ನೆರವು ಹಾಗೂ ಪರಿಹಾರವನ್ನು ತ್ವರಿತವಾಗಿ ಒದಗಿಸುವಂತೆ ಸೂಚಿಸಿದೆ.

ಸಂಕಷ್ಟದ ಸಂದರ್ಭದಲ್ಲಿ ಜನರೊಂದಿಗೆ ನಿಲ್ಲುವುದು ನನ್ನ ಕರ್ತವ್ಯ. ಪರಶಿವಯ್ಯ ಅವರ ಕುಟುಂಬಕ್ಕೆ ಅಗತ್ಯ ನೆರವು ದೊರೆಯುವಂತೆ ಮುಂದೆಯೂ ಸಹಕಾರ ನೀಡುತ್ತೇನೆ.

ಗುಣಮಟ್ಟದ ಶಿಕ್ಷಣಕ್ಕೆ ಮೂಲಸೌಕರ್ಯದ ಬಲಹಾರೋಹಳ್ಳಿ ತಾಲ್ಲೂಕಿನ ದೊಡ್ಡಮರಳವಾಡಿ, ಚಿಕ್ಕಕಲ್‌ಬಾಳು ಹಾಗೂ ಕಗ್ಗಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಗಳಲ್...
01/09/2026

ಗುಣಮಟ್ಟದ ಶಿಕ್ಷಣಕ್ಕೆ ಮೂಲಸೌಕರ್ಯದ ಬಲ

ಹಾರೋಹಳ್ಳಿ ತಾಲ್ಲೂಕಿನ ದೊಡ್ಡಮರಳವಾಡಿ, ಚಿಕ್ಕಕಲ್‌ಬಾಳು ಹಾಗೂ ಕಗ್ಗಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್ ಸಂಸ್ಥೆಯ CSR ಅನುದಾನ ಹಾಗೂ ರೋಟರಿ ಬೆಂಗಳೂರು ಇಂದಿರಾನಗರದ ಸಹಯೋಗದಲ್ಲಿ ನಿರ್ಮಿಸಲಾದ 10 ನೂತನ ತರಗತಿ ಕೊಠಡಿಗಳನ್ನು ಉದ್ಘಾಟಿಸಲಾಯಿತು.

ಈ ಭಾಗದ ಗ್ರಾಮಸ್ಥರು ಶಾಲೆಗಳಲ್ಲಿ ತರಗತಿ ಕೊಠಡಿಗಳ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವ ಕುರಿತು ನನ್ನ ಗಮನಕ್ಕೆ ತಂದಿದ್ದರು. ಅವರ ಮನವಿಗೆ ಸ್ಪಂದಿಸಿ, ಮೈಕ್ರೋ ಲ್ಯಾಬ್ಸ್ ಸಂಸ್ಥೆ ಹಾಗೂ ರೋಟರಿ ಬೆಂಗಳೂರು ಇಂದಿರಾನಗರದ ಸಹಕಾರದೊಂದಿಗೆ ₹1.42 ಕೋಟಿ ವೆಚ್ಚದಲ್ಲಿ ಈ ತರಗತಿ ಕೊಠಡಿಗಳ ನಿರ್ಮಾಣಕ್ಕೆ ನೆರವು ದೊರಕಿಸಲಾಯಿತು.

ಹೊಸ ತರಗತಿ ಕೊಠಡಿಗಳ ಜೊತೆಗೆ ವಿದ್ಯಾರ್ಥಿಗಳಿಗೆ ಪೀಠೋಪಕರಣಗಳು, ಗ್ರೀನ್‌ಬೋರ್ಡ್‌ಗಳು ಹಾಗೂ ಇಂಟರಾಕ್ಟಿವ್ ಸ್ಮಾರ್ಟ್‌ಬೋರ್ಡ್‌ಗಳನ್ನೂ ಒದಗಿಸಲಾಗಿದ್ದು, ಮಕ್ಕಳಿಗೆ ಆಧುನಿಕ ಹಾಗೂ ಉತ್ತಮ ಕಲಿಕಾ ವಾತಾವರಣ ಕಲ್ಪಿಸಲಾಗಿದೆ.

ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಮೂಲಸೌಕರ್ಯ ಅತ್ಯಂತ ಮಹತ್ವದ್ದಾಗಿದೆ. ಗ್ರಾಮೀಣ ಭಾಗದ ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣದ ಅವಕಾಶ ದೊರೆಯಬೇಕು ಎಂಬುದು ನಮ್ಮ ಸಂಕಲ್ಪ. ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಿದ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್ ಹಾಗೂ ರೋಟರಿ ಬೆಂಗಳೂರು ಇಂದಿರಾನಗರ ಸಂಸ್ಥೆಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.

ಮಕ್ಕಳ ಭವಿಷ್ಯದಲ್ಲಿ ಮಾಡುವ ಹೂಡಿಕೆಯೇ ದೇಶದ ಭವಿಷ್ಯವನ್ನು ನಿರ್ಮಿಸುವ ಹೂಡಿಕೆ.

31/08/2026

ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿಯ ಬಳೆಬಸಪ್ಪನದೊಡ್ಡಿ ಗ್ರಾಮದಲ್ಲಿ ರೈತ ಪರಶಿವಯ್ಯ ಅವರ ಮನೆಗೆ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ತಗುಲಿ, ಮನೆಯಲ್ಲಿದ್ದ ದವಸ-ಧಾನ್ಯಗಳು, ಬಟ್ಟೆಬರೆ, ಎಲೆಕ್ಟ್ರಾನಿಕ್ ಉಪಕರಣಗಳು, ಬೆಲೆಬಾಳುವ ವಸ್ತುಗಳು ಸೇರಿದಂತೆ ಬಹುತೇಕ ವಸ್ತುಗಳು ಸುಟ್ಟುಹೋಗಿರುವುದು ವಿಷಾದನೀಯ.

ಘಟನೆಯ ವಿಷಯ ತಿಳಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಹಾನಿಗೊಳಗಾದ ಕುಟುಂಬಕ್ಕೆ ಅಗತ್ಯ ನೆರವು ಹಾಗೂ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸೂಚಿಸಿದ್ದೇನೆ.

ಈ ಆಕಸ್ಮಿಕ ಅವಘಡದಿಂದ ಸಂಕಷ್ಟಕ್ಕೊಳಗಾಗಿರುವ ಪರಶಿವಯ್ಯ ಅವರ ಕುಟುಂಬದೊಂದಿಗೆ ನಾನಿದ್ದೇನೆ. ಕುಟುಂಬಕ್ಕೆ ಅಗತ್ಯ ನೆರವು ದೊರೆಯುವಂತೆ ಎಲ್ಲಾ ರೀತಿಯ ಸಹಕಾರ ನೀಡಲು ಕ್ರಮ ಕೈಗೊಳ್ಳಲಾಗುವುದು.

ಶ್ರೀ ಕ್ಷೇತ್ರ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ಜನ್ಮದಿನದ ಪಾವನ ಸಂದರ್ಭದಲ್ಲಿ ಶ್ರೀಗಳ ಪಾದಾರವಿಂದಗಳಿ...
31/08/2026

ಶ್ರೀ ಕ್ಷೇತ್ರ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ಜನ್ಮದಿನದ ಪಾವನ ಸಂದರ್ಭದಲ್ಲಿ ಶ್ರೀಗಳ ಪಾದಾರವಿಂದಗಳಿಗೆ ಭಕ್ತಿಪೂರ್ವಕ ನಮನಗಳು.

ಆಧ್ಯಾತ್ಮಿಕತೆ, ಶಿಕ್ಷಣ ಹಾಗೂ ಸಮಾಜಸೇವೆಯ ಮೂಲಕ ನಾಡಿನ ಜನತೆಗೆ ಶ್ರೀಗಳು ನೀಡುತ್ತಿರುವ ಮಾರ್ಗದರ್ಶನ ಮತ್ತು ಸೇವೆ ಸದಾ ಸ್ಮರಣೀಯ.

ಶ್ರೀಗಳ ಅನುಗ್ರಹ, ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಹಾಗೂ ಲೋಕಕಲ್ಯಾಣದ ಕೈಂಕರ್ಯ ನಿರಂತರವಾಗಿ ಸಾಗಲಿ ಎಂದು ಪ್ರಾರ್ಥಿಸುತ್ತೇನೆ.

Address

Bangalore
562114

Website

Alerts

Be the first to know and let us send you an email when Dr.C.N Manjunath posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dr.C.N Manjunath:

Shortcuts

Share