12/05/2017
ಪತ್ರಿಕಾ ಪ್ರಕಟಣೆ
ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗ
ದಿನಾಂಕ :10-05-2017
ಬನಶಂಕರಿ ಪೊಲೀಸರಿಂದ ಕುಖ್ಯಾತ ಕನ್ನ ಕಳವು ಆರೋಪಿಗಳ ಬಂಧನ ಸುಮಾರು 18.5 ಲಕ್ಷ ಬೆಲೆ ಬಾಳುವ 602 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 1 ಕೆಜಿ ಬೆಳ್ಳಿ ವಶ.
ದಿನಾಂಕ:07-11-2016 ರಂದು ರಾತ್ರಿ 21-15 ಗಂಟೆಯಲ್ಲಿ ಫಿಯರ್ಾದುದಾರರಾದ ಶ್ರೀ.ರಾಮಲಿಂಗಂ ನಂ-70, 2ನೇ ಮಹಡಿ, 2ನೇ ಮೈನ್, ಕದಿರೇನಹಳ್ಳಿ, ಬನಶಂಕರಿ 2ನೇ ಹಂತ, ಬೆಂಗಳೂರು-70 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:07-11-2016 ರಂದು ಸಂಜೆ ಸುಮಾರು 06-45 ಗಂಟೆಯಲ್ಲಿ ಫಿಯರ್ಾದುದಾರರ ಹೆಂಡತಿರವರು ವಾಕಿಂಗ್ಗೆ ಹೋಗಿದ್ದಾಗ ಯಾರೋ ಕಳ್ಳರು ಮನೆಯ ಕಿಟಕಿಯಲ್ಲಿಟ್ಟಿದ್ದ ಕೀ ತೆಗೆದುಕೊಂಡು ಮನೆಯ ಬಾಗಿಲನ್ನು ತೆಗೆದು ಒಳಗೆ ಪ್ರವೇಶ ಮಾಡಿ ಮನೆಯ ಅಲ್ಮೇರಾದಲ್ಲಿದ್ದ ಚೀಟಿ ಹಣ, ಒಂದು ಲಾಂಗ್ ಗುಂಡು ಮಾದರಿಯ ಚೈನ್ 30ಗ್ರಾಂ, 3 ಚಿನ್ನದ ಉಂಗುರಗಳು 15ಗ್ರಾಂ, ಕಳವಾಗಿರುತ್ತೆ. ಈ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಠಾಣಾ ಮೊ.ಸಂ.326/2016 ಕಲಂ 380 ಐಪಿಸಿ ರಿತ್ಯ ಕೇಸು ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.
ಈ ಕೇಸಿನಲ್ಲಿ ಆರೋಪಿತರಾದ,
ಎ1-ಲಕ್ಷ್ಮಣ್ @ ಸೋನಿ ಬಿನ್ ತಿಪ್ಪಣ್ಣ, 48ವರ್ಷ,
ಎ2-ಉದಯ್ @ ನೀರ್ ಮಜ್ಜಿಗೆ ಬಿನ್ ಲೇಟ್ ಗೋವಿಂದಪ್ಪ, 30ವರ್ಷ,
ಎ3-ಚಂದ್ರ.ಎಸ್ @ ಡೋಂಗಿ ಬಿನ್ ಲೇಟ್ ಶಿವಣ್ಣ, 28ವರ್ಷ,
ರವರುಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ವರ್ತಮಾನದ ಮೇರೆಗೆ, ಈ ಕೇಸಿಗೆ ಸಂಬಂಧಪಟ್ಟ ಚಿನ್ನದ ಆಭರಣಗಳನ್ನು ಸ್ವಾಧೀನಪಡಿಸಿರುತ್ತೆ ಹಾಗೂ ಆರೋಪಿಗಳ ವರ್ತಮಾನದ ಮೇರೆಗೆ
1)ಬನಶಂಕರಿ ಪೊಲೀಸ್ ಠಾಣೆಯ ಇತರೆ 3 ಪ್ರಕರಣಗಳು,
2)ಜಯನಗರ ಪೊಲೀಸ್ ಠಾಣೆಯ 3 ಪ್ರಕರಣಗಳು,
3)ಸುಬ್ರಮಣ್ಯಪುರ ಪೊಲೀಸ್ ಠಾಣೆಯ 2 ಪ್ರಕರಣಗಳು,
4)ಜೆಪಿ ನಗರ ಪೊಲೀಸ್ ಠಾಣೆಯ 1 ಪ್ರಕರಣ
5) ಬೆಂಗಳೂರು ರೈಲ್ವೇ ಪೊಲೀಸ್ ಠಾಣೆಯ 1 ಪ್ರಕರಣಸ ಒಟ್ಟು 10 ಪ್ರಕರಣಗಳನ್ನು ಪತ್ತೆ ಮಾಡಿದ್ದು ಸದರಿ ಪ್ರಕರಣಗಳಿಗೆ ಸಂಬಂಧಿಸಿದಂತೆ 18.5 ಲಕ್ಷ ರೂ ಬೆಲೆ ಬಾಳುವ ಸುಮಾರು 602 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 1 ಕೆಜಿ ಬೆಳ್ಳಿಯ ವಸ್ತುಗಳನ್ನು ಸ್ವಾಧೀನಪಡಿಸಿರುತ್ತೆ.
ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ನಗರದ ಪಶ್ಚಿಮ ವಲಯದ ಅಪರ ಪೊಲೀಸ್ ಆಯುಕ್ತರಾದ ಶ್ರೀಮತಿ ಮಾಲಿನಿ ಕೃಷ್ಣಮೂತರ್ಿ ಮತ್ತು ದಕ್ಷಿಣ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಡಾ||ಶರಣಪ್ಪ.ಎಸ್.ಡಿ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಶ್ರೀ.ಜೆ.ಎಂ.ಕಾಂತರಾಜ್ ಬನಶಂಕರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಕೃಷ್ಣ ಟಿ.ಟಿ, ಪಿಎಸ್ಐಗಳಾದ ಶ್ರೀ.ಅಜರ್ುನ್ ಸಿ.ಆರ್, ಪಿಎಸ್ಐ, ಶ್ರೀ.ಗಿರಿಮಲ್ಲಪ್ಪ ಉಪ್ಪಾರ್ ಪ್ರೋ.ಪಿಎಸ್ಐ, ಕು||ಪುಷ್ಪಲತಾ ಪ್ರೋ.ಮಪಿಎಸ್ಐ, ಕು||ವಿದ್ಯಶ್ರೀ ಪ್ರೋ.ಮಪಿಎಸ್ಐ, ಶ್ರೀಮತಿ ರೇಷ್ಮಾ ಪ್ರೋ.ಮಪಿಎಸ್ಐ, ಬನಶಂಕರಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಎಎಸ್ಐ ಶ್ರೀ.ಪಿ.ಚಿಕ್ಕಣ್ಣ, ಹೆಚ್ಸಿಗಳಾದ ಶ್ರೀ.ಮುತ್ತಾ ನಾಯ್ಕ್, ಶ್ರೀ.ಮಂಜುನಾಥ್, ಶ್ರೀ.ವೆಂಕಟೇಶ್, ಶ್ರೀ.ಹರೀಶ್, ಪಿಸಿಗಳಾದ ಶ್ರೀ.ಎಸ್.ಖೇ.ರಾಠೋಡ, ಶ್ರೀ.ಶರತ್ ಕುಮಾರ್, ಶ್ರೀ.ಶಿವರಾಜು, ಜಯನಗರ ಪೊಲೀಸ್ ಠಾಣೆಯ ಪಿಸಿಗಳಾದ ಶ್ರೀ.ಶೇಷಗಿರಿ ನಾಯ್ಕ್ ಎಂ.ಆರ್, ಶ್ರೀ.ನಿಂಗಪ್ಪ ಆರಿ ರವರುಗಳು ಆರೋಪಿಯನ್ನು ಹಿಡಿದು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿಗಳನ್ನು ಪೊಲೀಸ್ ಅಭೀರಕ್ಷೆಗೆ ಪಡೆದು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿರುತ್ತೆ.