Akhila Karnataka State Government Employees Federation

Akhila Karnataka State Government Employees Federation for the employes

10/10/2025
19/09/2025
18/09/2025

*"ತಂಬೂರಿಯೊಂದಿಗೆ ತನ್ಮಯರಾಗಿ ಹಾಡುತ್ತಾ, ತತ್ವಪದ, ದಾಸಪದ, ಸೂಫಿಪದ ಮತ್ತು ಭಾವಪ್ರಧಾನವಾದ ಗೀತೆಗಳನ್ನು ವಿಭಿನ್ನ ಶೈಲಿಯಲ್ಲಿ ಪ್ರಸ್ತುತಪಡಿಸಿ ನಾಡಿನೆಲ್ಲೆಡೆ ಸಂಚಲನ ಮೂಡಿಸುತ್ತಿರುವ _'ನಾದ ಮಣಿನಾಲ್ಕೂರು'_ ನಾಳೆ ಸಚಿವಾಲಯಕ್ಕೆ ಬರಲಿದ್ದಾರೆ.. ಬನ್ನಿ ಅವರ ದನಿಗೆ ಕಿವಿಯಾಗೋಣ.."*

ಆತ್ಮೀಯರೇ...., ಅರಿವಿನ ಗೀತೆಗಳ ಮೂಲಕ ನಾಡಿನಲ್ಲಿ ಹೊಸದನಿಯ ಹಾಡುಗಳನ್ನು ಹೊಸೆಯುತ್ತಿರುವ ಹೆಮ್ಮೆಯ ಗಾಯನ ಮನಸ್ಸು ಶ್ರೀ ನಾದ ಮಣಿನಾಲ್ಕೂರುರವರು...
16/09/2025

ಆತ್ಮೀಯರೇ....,

ಅರಿವಿನ ಗೀತೆಗಳ ಮೂಲಕ ನಾಡಿನಲ್ಲಿ ಹೊಸದನಿಯ ಹಾಡುಗಳನ್ನು ಹೊಸೆಯುತ್ತಿರುವ ಹೆಮ್ಮೆಯ ಗಾಯನ ಮನಸ್ಸು ಶ್ರೀ ನಾದ ಮಣಿನಾಲ್ಕೂರುರವರು. ಅವರ ವಿಭಿನ್ನ ಹಾಗೂ ವಿಶೇಷ ರೀತಿಯ ಹಾಡುಗಳನ್ನು ಕೇಳಲು ಬನ್ನಿರಿ.

ದಿ: 19.09.2025, ಇದೇ ಶುಕ್ರವಾರ ಮಧ್ಯಾಹ್ನ 1.30 ಕ್ಕೆ. ಸಚಿವಾಲಯ ಕ್ಲಬ್ ನ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ.

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ʼಬಿಡುವಿನ ಸಮಯದಿ ಅರಿವಿನ ಯಾನʼ ಮಾಲಿಕೆಯ 2 ನೇ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಅವರ ಹಾಡಿನ ಸೊಬಗನ್ನು ಸವಿಯುವ ಅವಕಾಶವಿದು. ದಯವಿಟ್ಟು ಆಗಮಿಸಿ.

ಬೇಡಿಕೆಗಳ ಈಡೇರಿಕೆಗೆ ಸಂಘಟಿತರಾಗಿ  ಹೋರಾಡಲು ಕರೆಹೊಸಪೇಟೆ ಅಗಸ್ಟ್ 24 - ನೌಕರರು ಹಾಗೂ ನಿವೃತ್ತ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಸಂಘಟಿತರ...
24/08/2025

ಬೇಡಿಕೆಗಳ ಈಡೇರಿಕೆಗೆ ಸಂಘಟಿತರಾಗಿ ಹೋರಾಡಲು ಕರೆ

ಹೊಸಪೇಟೆ ಅಗಸ್ಟ್ 24 - ನೌಕರರು ಹಾಗೂ ನಿವೃತ್ತ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ಅಖಿಲ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಒಕ್ಕೂಟದ ರಾಜ್ಯ ಅಧ್ಯಕ್ಷ ಮಹದೇವಯ್ಯ ಮಠಪತಿ ಕರೆ ನಿಡಿದರು. ಅವರು ಇಂದು ಇಲ್ಲಿನ ತಾಲೂಕು ಪಂಚಾಯತಿಯ ಸಭಾಂಗಣದಲ್ಲಿ ನಡೆದ ನಿವೃತ್ತ ನೌಕರರು ಹಾಗೂ ನೌಕರರ ಒಕ್ಕೂಟಗಳ ಜಂಟಿ ಸಮಾವೇಶವನ್ನು ಮಹದೇವಯ್ಯ ಮಠಪತಿಯವರು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ನಿವೃತ್ತ ನೌಕರರಿಂದ ವಸೂಲು ಮಾಡುವ ಕಮ್ಯುಟೇಷನ್ ಹಣವನ್ನು ನಮ್ಮ ರಾಜ್ಯದಲ್ಲಿ ಹದಿನೈದು ವರ್ಷಗಳ ಕಾಲ ಮುರಾವಳಿ ಮಾಡಲಾಗುತ್ತಿದೆ. ಆಂಧ್ರಪ್ರದೇಶದ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹತ್ತುವರೆ ವರ್ಷಗಳ ಕಾಲ ಮಾತ್ರ ಮುರಾವಳಿ ಮಾಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿನ ನೀತಿಯಿಂದಾಗಿ ಪ್ರತಿ ನಿವೃತ್ತ ನೌಕರನೂ ಏನಿಲ್ಲವೆಂದರೂ ಹತ್ತಾರು ಲಕ್ಷ ರೂಪಾಯಿಗಳನ್ನು ಹೆಚ್ಚುವರಿಯಾಗಿ ಕಟ್ಟುತ್ತಿದ್ದಾರೆ. ಹಾಗಾಗಿ ರಾಜ್ಯ ಸರಕಾರಕ್ಕೆ ಇದನ್ನು ಮನವರಿಕೆ ಮಾಡಿ ನಮ್ಮ ರಾಜ್ಯದಲ್ಲಿ ಕೂಡಾ ಕಮ್ಯಟೇಷನ್ ಮುರಾವಳಿ ಅವಧಿಯನ್ನು ಹತ್ತುವರೆ ವರ್ಷಗಳಿಗೆ ಕಡಿಮೆ ಮಾಡಿ ಮರು ಆದೇಶ ಮಾಡುವಂತೆ ಒತ್ತಾಯಿಸಲು ಒಕ್ಕೂಟವು ಹೋರಾಟವನ್ನು ಸಂಘಟಿಸಲಿದೆ ಎಂದು ಅವರು ಹೇಳಿದರು.

ನೌಕರರ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಹೆಚ್ ಎಸ್ ಜಯಕುಮಾರ್ ಮಾತನಾಡಿ ರಾಜ್ಯದಲ್ಲಿ ಮಂಜೂರಾಗಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಕೂಡಲೇ ಕಾಯಂ ಆಗಿ ನೇಮಕ ಮಾಡಬೇಕೆಂದು ಅವರು ಸರಕಾರವನ್ನು ಒತ್ತಾಯ ಮಾಡಿದರು.

ಸರಕಾರಗಳನ್ನು ಓಲೈಸುವುದರಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಸಮಸ್ಯೆಗಳ ವೈಜ್ಞಾನಿಕ ಅಧ್ಯಯನ ಹಾಗೂ ಸಂಘಟಿತ ಹೋರಾಟಗಳ ಮೂಲಕ ಮಾತ್ರವೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದೂ ಅವರು ಅಭಿಪ್ರಾಯ ಪಟ್ಟರು.

ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಶೇಖರ ಲೆಂಡಿ, ರಾಜ್ಯ ಉಪಾಧ್ಯಕ್ಷ ಈ ಕೃಷ್ಣಮೂರ್ತಿ, ಜಿಲ್ಲಾ ಸಂಚಾಲಕಿ ಸುನೀತಾ ಆಣ್ವೇಕರ್, ಜಿಲ್ಲಾ ಸಂಚಾಲಕ ಬಿಸಾಟಿ ತಾಯಪ್ಪ ನಾಯಕ , ರಾಜ್ಯಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ ಶಿವಶಂಕರ ಮಾತನಾಡಿದರು. ಮುಖಂಡ ಮರಡಿ ಜಂಬಯ್ಯ ನಾಯಕ ಮಾತನಾಡಿ ಎರಡನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳು ನೌಕರರ ವಿರೋಧಿ ಆಗಿವೆ. ಹಾಗಾಗಿ ಸರಕಾರ ಆ ಶಿಫಾರಸ್ಸುಗಳನ್ನು ಜಾರಿ ಮಾಡಬಾರದೆಂದು ಸರಕಾರವನ್ನು ಒತ್ತಾಯ ಮಾಡಿದರು.‌

ಸರಕಾರಗಳು ಜಾರಿ ಮಾಡುತ್ತಿರುವ ನೌಕರರ ವಿರೋಧಿ ನೀತಿಗಳನ್ನು ವಿಶ್ವಬ್ಯಾಂಕ್ ಮತ್ತು ಐಎಂಎಫ್ ನಿರ್ದೇಶಿಸಿ ನಿಯಂತ್ರಿಸುತ್ತಿರುವುದನ್ನು ನೌಕರರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದೂ ಅವರು ಹೇಳಿದರು.

ಜಿಲ್ಲೆಯ ನೂರಾರು ನಿವೃತ್ತ ನೌಕರರು, ಹಾಲಿ ನೌಕರರು, ಎನ್ ಪಿ ಎಸ್ ನೌಕರರು, ಗುತ್ತಿಗೆ ನೌಕರರು, ಅಥಿತಿ ಶಿಕ್ಷಕರು, ಅಥಿತಿ ಉಪನ್ಯಾಸಕರು ಇಂದಿನ ಜಂಟಿ ಸಮಾವೇಶದಲ್ಲಿ ಭಾಗವಹಿಸಿದ್ದರು.

ಕಂಪ್ಲಿ ಚಂದ್ರಪ್ಪ ಸ್ವಾಗತಿಸಿದರು, ನಾಗರಾಜ ಪತ್ತಾರ್ ನಿರೂಪಿಸಿದರು, ಎಂ ಧನರಾಜ್ ವಂದಿಸಿದರು.

ಇಂದು ವಿಜಯಪುರ‌‌ದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟ ( KSGEF ) ಜಿಲ್ಲಾ ಸಮಾವೇಶ  ಹಾಗೂ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕ...
23/08/2025

ಇಂದು ವಿಜಯಪುರ‌‌ದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟ ( KSGEF ) ಜಿಲ್ಲಾ ಸಮಾವೇಶ ಹಾಗೂ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಸಮಿತಿ ಸಭೆಯಲ್ಲಿ ಕಾಮ್ರೇಡ್ ಮಹದೇವಯ್ಯ ಮಠಪತಿ, ಶ್ರೀ ಜೈಕುಮಾರ್.ಹೆಚ್.ಎಸ್, ಡಿ.ಶಿವಶಂಕರ್, ಚಂದ್ರಶೇಖರ್ ಲೆಂಡಿ, ಸುರೇಶ್ ಜೀಬಿ, ದಾಕ್ಷಾಯಿಣಿ ಹುಡೇದ್, ಅಶೋಕ್ ಇಳಕಲ್ ಅವರು ಹೋರಾಟದ ದಾರಿಗಳಲ್ಲಿ ನಮ್ಮ ಒಕ್ಕೂಟದ ನಡಿಗೆ, ನಮ್ಮ ಹೋರಾಟ ಕುರಿತು ಮಾತನಾಡುತ್ತಿರುವುದು.

ಅಖಿಲ ಭಾರತ ರಾಜ್ಯ ಸರ್ಕಾರಿ‌ ನೌಕರರ ಒಕ್ಕೂಟದರಾಷ್ಟ್ರೀಯ ಕಾರ್ಯಕಾರಿ‌ ಸಭೆಯು ದಿನಾಂಕ16.08.2025 ಮತ್ತು ದಿನಾಂಕ 17.08.2025 ರಂದು ನವದೆಹಲಿಯ ...
17/08/2025

ಅಖಿಲ ಭಾರತ ರಾಜ್ಯ ಸರ್ಕಾರಿ‌ ನೌಕರರ ಒಕ್ಕೂಟದ
ರಾಷ್ಟ್ರೀಯ ಕಾರ್ಯಕಾರಿ‌ ಸಭೆಯು ದಿನಾಂಕ16.08.2025 ಮತ್ತು ದಿನಾಂಕ 17.08.2025 ರಂದು ನವದೆಹಲಿಯ ಸುಕೋಮಲ್ ಸೇನ್ ಭವನದಲ್ಲಿ ನಡೆದಿದ್ದು,
ಕರ್ನಾಟಕದಿಂದ ಅಧ್ಯಕ್ಷರಾದ Jaykumar Hs , ಪ್ರಧಾನ ಕಾರ್ಯದರ್ಶಿ ಎನ್. ಶೋಭಾ ಲೋಕನಾಗಣ್ಣ, ಎನ್.ಇ.ಸಿ ಸದಸ್ಯರಾದ Ranganath Havaldar, Dakshayini V Huded , ಸುನೀಲ್ ಕುಮಾರ್ ಭಾಗವಹಿಸಿದ್ದರು.

ಸದರಿ ಸಭೆಯಲ್ಲಿ ಒಕ್ಕೂಟದ " **ರಾಷ್ಟ್ರೀಯ ಉಪಾಧ್ಯಕ್ಷ" (TUI-ಅಂತರಾಷ್ಟ್ರೀಯ ವಿಭಾಗ) ರಾಗಿ** ಒಕ್ಕೂಟದ ರಾಜ್ಯಾದ್ಯಕ್ಷರಾದ ಶ್ರೀ ಹೆಚ್.ಎಸ್. ಜೈಕುಮಾರ್ ರವರು ಆಯ್ಕೆಯಾಗಿರುತ್ತಾರೆ.

ಅವರಿಗೆ ರಾಜ್ಯ ಒಕ್ಕೂಟದ ಪರವಾಗಿ ಅಭಿನಂದನೆಗಳು.💐

ರಾಷ್ಟ್ರೀಯ ಕಚೇರಿ(ನವದೆಹಲಿ)ಯಲ್ಲಿನ ಗ್ರಂಥಾಲಯವನ್ನು ಉದ್ಘಾಟಿಸುವ ಮೂಲಕ ಅಖಿಲ ಭಾರತ ಒಕ್ಕೂಟದ ಸಂಸ್ಥಾಪಕರಾದ ಶ್ರೀ ಅರಬಿಂದೊ ಘೋಷ್ ರವರ ಜನ್ಮ‌ಶತಮಾನೋತ್ಸವದ ಪ್ರಯುಕ್ತ ಕರ್ನಾಟಕದ ಕಾರ್ಮಿಕ ಮುಖಂಡರು ಹಾಗೂ ಸಿ.ಐ.ಟಿ.ಯುನ ರಾಷ್ಟ್ರೀಯ ಕಾರ್ಯದರ್ಶಿಯಾದ ಕಾಮ್ರೇಡ್ Umesh ರವರು ಉಪನ್ಯಾಸ ನೀಡಿದರು.

ಸಭೆಯಲ್ಲಿ ವರದಿ ಸಲ್ಲಿಸುತ್ತಿರುವ ಕರ್ನಾಟಕದ ಪದಾಧಿಕಾರಿಗಳು..

Address

Bangalore
560001

Website

Alerts

Be the first to know and let us send you an email when Akhila Karnataka State Government Employees Federation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Akhila Karnataka State Government Employees Federation:

Share