ದಾವಣಗೆರೆ ಜಿಲ್ಲಾ ಎಸ್.ಸಿ/ಎಸ್.ಟಿ ಉದ್ಯಮಿದಾರರ ಸಂಘ

  • Home
  • India
  • Davangere
  • ದಾವಣಗೆರೆ ಜಿಲ್ಲಾ ಎಸ್.ಸಿ/ಎಸ್.ಟಿ ಉದ್ಯಮಿದಾರರ ಸಂಘ

ದಾವಣಗೆರೆ ಜಿಲ್ಲಾ ಎಸ್.ಸಿ/ಎಸ್.ಟಿ ಉದ್ಯಮಿದಾರರ ಸಂಘ ಆರ್ಥಿಕ ಸ್ವಾತಂತ್ರ್ಯದ ಕಡೆಗೆ

17/03/2026

ಇಂದು ದಾವಣಗೆರೆ ಕೆ.ಐ.ಎ.ಡಿ.ಬಿ, ಅಭಿವೃದ್ಧಿ ಅಧಿಕಾರಿಗಳಾದ ಶ್ರಿಯುತ ಅನಿಲ್ ಕುಮಾರ್ ರಾಥೋಡ್ ಅವರನ್ನು ಭೇಟಿ ಮಾಡಿ ಸಾರಥಿ-ಕುರುಬರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಮತ್ತು ಇ-ಸ್ವತ್ತು ನೀಡುವಲ್ಲಿ ತೊಂದರೆಯಾಗುತ್ತಿರುವ ಬಗ್ಗೆ ದಾವಣಗೆರೆ ಜಿಲ್ಲಾ SC/ST ಉದ್ಯಮಿದಾರರ ಸಂಘದ ವತಿಯಿಂದ ಮನವಿ ಸಲ್ಲಿಸಿ ಚರ್ಚಿಸಲಾಯಿತು.

24/02/2026

ಇಂದು ದಾವಣಗೆರೆ ಮಹಾನಗರಪಾಲಿಕೆಯ ನೂತನ ಕಮೀಷನರ್ ಆದ ಮಹಾಂತೇಶ.ಎನ್ ರವರಿಗೆ ದಾವಣಗೆರೆ ಜಿಲ್ಲಾ ಎಸ್.ಸಿ/ಎಸ್.ಟಿ ಉದ್ಯಮಿದಾರರ ಸಂಘದವತಿಯಿಂದ ಶುಭಾಶಯ ಕೋರಲಾಯಿತು ಜೊತೆಗೆ ನಗರ ಭಾಗದಲ್ಲಿ ಸಣ್ಣ ಉದ್ಯಮಗಳಿಗೆ ಉತ್ತೇಜಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಬೇಡಿಕೆ ಸಲ್ಲಿಸಲಾಯಿತು.

30/01/2026

ದಾವಣಗೆರೆ ಜಿಲ್ಲಾ ಎಸ್.ಸಿ./ಎಸ್.ಟಿ. ಉದ್ಯಮಿದಾರರ ಸಂಘದ ವತಿಯಿಂದ ದಾವಣಗೆರೆ ಜಿಲ್ಲೆಯ ವ್ಯಾಪ್ತಿಗೆ ಬರುವ ಪರಿಶಿಷ್ಟ ಪಂಗಡ (ST) ಜಾತಿಯ ಬಡ ರೈತ ಕುಟುಂಬಗಳಿಗೆ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ ಕಲ್ಪಿಸುವ ಉದ್ದೇಶದಿಂದ,
ಈ ಸಮುದಾಯದ ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುವಂತೆ, ಆರ್ಥಿಕ ಶ್ರೇಯೋಭಿವೃದ್ಧಿಗಾಗಿ ವಿಶೇಷವಾಗಿ ಹಿಂದುಳಿದ ರೈತ ಕುಟುಂಬಗಳಿಗೆ ಗಂಗಾ ಕಲ್ಯಾಣ ಯೋಜನೆ ಮತ್ತು ನಿರುದ್ಯೋಗ ಯುವಕರಿಗೆ ಸಾರಥಿ ಯೋಜನೆಯಡಿ ವಾಹನ ಖರೀದಿಗೆ ವಿಶೇಷ ಅನುದಾನವನ್ನು ಮಂಜೂರು ಮಾಡಬೇಕೆಂದು ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಬಸನಗೌಡ ದದ್ದಲ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಮೇಶ ಬಿ ನಾಯಕ, ಸುರೇಶ್ ಗೋಶಾಲೆ, ಪಾಲಾಕ್ಷಿ ಬಟ್ಟಲಕಟ್ಟೆ, ಗಣೇಶ್ ಗೊಲ್ಲರಹಳ್ಳಿ, ಮಂಜುನಾಥ್ ಗೊಲ್ಲರಹಳ್ಳಿ, ರಾಜು ಆನಗೋಡು, ಸತೀಶ್ ಗೋಶಾಲೆ, ಪರಶುರಾಮ್ ಹೊಸಳ್ಳಿ, ವಿನಯ್, ಚೇತನ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

28/01/2026

ಹರಿಹರ ತಾಲೂಕಿನ ಸಾರಥಿ ಕುರುಬರಹಳ್ಳಿ ಮೊದಲನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಸ್ವಾಧೀನ ಪತ್ರ ಪಡೆದಿರುವ ಉದ್ಯಮಿದಾರರಿಗೆ ಸಾರಥಿ ಗ್ರಾಮ ಪಂಚಾಯಿತಿಯಿಂದ ಇ-ಸ್ವತ್ತು ನೀಡುವಲ್ಲಿ ಆಗುತ್ತಿರುವ ತಾಂತ್ರಿಕದೋಷದ ತೊಂದರೆಯನ್ನು ಆದಷ್ಟು ಬೇಗ ಬಗೆಹರಿಸಲು ಕ್ರಮಕೈಗೊಳ್ಳಬೇಕೆಂದು ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀಯುತ ಗಿತ್ತೆ ಮಾಧವ ವಿಠ್ಠಲ ರಾವ್ ರವರಿಗೆ ದಾವಣಗೆರೆ ಜಿಲ್ಲಾ ಎಸ್.ಸಿ/ಎಸ್.ಟಿ ಉದ್ಯಮಿದಾರರ ಸಂಘ ದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು .0 Ramesha B Nayaka

12/01/2026

ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ಸ್ವಾಮಿ ವಿವೇಕಾನಂದ ಅವರ ಜನ್ಮದಿನದಂದು ಶತ ಶತ ನಮನಗಳು.
#ಸ್ವಾಮಿವಿವೇಕಾನಂದ Ramesha B Nayaka

   #ಇಸ್ವತ್ತು
10/01/2026

#ಇಸ್ವತ್ತು

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 🎉🎉
01/01/2026

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 🎉🎉

ರೈತರು ಕೇವಲ 20% ಪಾಲು ಭರಿಸಿದರೆ ಸಾಕು!ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಶೇ.30ರಷ್ಟು ಹಾಗೂ ರಾಜ್ಯ ಸರ್ಕಾರದ ಶೇ.50ರಷ್ಟು ಸಹಾಧನದೊದಿಗೆ ರೈ...
30/12/2025

ರೈತರು ಕೇವಲ 20% ಪಾಲು ಭರಿಸಿದರೆ ಸಾಕು!
ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಶೇ.30ರಷ್ಟು ಹಾಗೂ ರಾಜ್ಯ ಸರ್ಕಾರದ ಶೇ.50ರಷ್ಟು ಸಹಾಧನದೊದಿಗೆ ರೈತರಿಗೆ ಶೇ. 80 ರಷ್ಟು ದೊಡ್ಡ ಮೊತ್ತದ ಸಬ್ಸಿಡಿ ಲಭ್ಯವಾಗಲಿದೆ. ರೈತರು ತಾವು ಖರೀಸುವ ಹೊಸ ಸೌರ ಪಂಪ್‌ಸೆಟ್‌ ಮೇಲೆ ಕೇವಲ 20% ಪಾಲನ್ನು ಮಾತ್ರ ಭರಿಸಬೇಕಾಗುತ್ತದೆ.

ಸೋಲಾರ್‌ ಪಂಪ್‌ಸೆಟ್‌ಗೆ ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ರೈತರು ಈ ಕೆಳಗಿನ ಪ್ರಕ್ರಿಯೆಯ ಮೂಲಕ ಅರ್ಜಿ ಸಲ್ಲಿಸಬಹುದು:
ಆನ್‌ಲೈನ್ ನೋಂದಣಿ: ರೈತರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL) ದ ಸಹಯೋಗದೊಂದಿಗೆ ನಿರ್ವಹಿಸಲಾಗುತ್ತಿರುವ ಅಧಿಕೃತ ವೆಬ್‌ಸೈಟ್‌ souramitra.com ನಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು.
ಮಾರಾಟಗಾರರ ಆಯ್ಕೆ: ಪೋರ್ಟಲ್‌ನಲ್ಲಿ ನೋಂದಾಯಿಸಿದ ನಂತರ, ರೈತರು ಮಾರಾಟಗಾರ/ಏಜೆನ್ಸಿಯನ್ನು ಆಯ್ಕೆ ಮಾಡಬೇಕು.
ವಂತಿಗೆ ಪಾವತಿ: ರೈತರು ತಮ್ಮ ಪಾಲಿನ 20% ಮೊತ್ತವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆಗೆ ಪ್ರಮುಖ ಸೂಚನೆಗಳು
ಯೋಜನೆಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳನ್ನು kredl.karnataka.gov.in ವೆಬ್‌ಸೈಟ್‌ನಿಂದ ಪಡೆಯಬಹದುದಾಗಿದೆ.
ನೋಂದಣಿ ಪ್ರಕ್ರಿಯೆಯಲ್ಲಿ ಯಾರೊಂದಿಗೂ ಒ.ಟಿ.ಪಿ (OTP) ಹಂಚಿಕೊಳ್ಳಬೇಡಿ. ನಿಮ್ಮ ನೋಂದಣಿಯನ್ನು ನೀವೇ ಖುದ್ದಾಗಿ ಪೂರ್ಣಗೊಳಿಸಿ.

ಸೋಲಾರ್‌ ಪಂಪ್‌ಸೆಟ್‌ ಸಬ್ಸಿಡಿಗೆ ಯಾರೆಲ್ಲಾ ಅರ್ಹರು?
ಪಿಎಂ-ಕುಸುಮ್ ಯೋಜನೆಗೆ ಈ ಕೆಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ:
ರೈತರು
ರೈತರ ಗುಂಪುಗಳು
ರೈತರ ಉತ್ಪಾದಕ ಸಂಸ್ಥೆಗಳು
ಪಂಚಾಯತ್‌ಗಳು
ಸಹಕಾರ ಸಂಘಗಳು
ನೀರು ಬಳಕೆದಾರರ ಸಂಘಗಳು
ಅಗತ್ಯವಿರುವ ದಾಖಲೆಗಳು
ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅವಶ್ಯಕ:
ಆಧಾರ್ ಕಾರ್ಡ್
ಭೂ ದಾಖಲೆಗಳು
ಬ್ಯಾಂಕ್ ಖಾತೆ ಪಾಸ್‌ಬುಕ್
ಘೋಷಣಾ ನಮೂನೆ
ಮೊಬೈಲ್ ಸಂಖ್ಯೆ
ಪಾಸ್‌ಪೋರ್ಟ್ ಗಾತ್ರದ ಫೋಟೋ

ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ವಾಲ್ಮೀಕಿ ಗುರುಪೀಠ. ರಾಜನಹಳ್ಳಿ ಹಾಗೂ ಶ್ರೀ ಪುಣ್ಯಕೋಟಿ ಶ್ರೀಗಳು ಇಂದು ಬೆಳ್ಳಗೆ ದಾವಣಗೆರೆ ಜಿಲ...
23/12/2025

ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ವಾಲ್ಮೀಕಿ ಗುರುಪೀಠ. ರಾಜನಹಳ್ಳಿ ಹಾಗೂ ಶ್ರೀ ಪುಣ್ಯಕೋಟಿ ಶ್ರೀಗಳು ಇಂದು ಬೆಳ್ಳಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಭೇಟಿ ನೀಡಿ ಶ್ರೀಯುತ ಲಿಂಗೈಕ ಡಾ. ಶಾಮನೂರು ಶಿವಶಂಕರಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು.
#ಶಾಮನೂರುಶಿವಶಂಕರಪ್ಪ

ಶಿರಾ ಕೈಗಾರಿಕಾ ಪ್ರದೇಶದಲ್ಲಿ
16/12/2025

ಶಿರಾ ಕೈಗಾರಿಕಾ ಪ್ರದೇಶದಲ್ಲಿ

Address

ನಂ.737/ಇ5, ಎರಡನೇ ಮಹಡಿ ಮಳಿಗೆ ಸಂಘ.12,13, ವಿ.ಎಸ್ ಪ್ಲಾಜಾ, ಕೃಷ್ಣ ಕಾಂಪೌಂಡ್, ಮಹಿಳಾ ಸಮಾಜ ರಸ್ತೆ
Davangere
577002

Website

Alerts

Be the first to know and let us send you an email when ದಾವಣಗೆರೆ ಜಿಲ್ಲಾ ಎಸ್.ಸಿ/ಎಸ್.ಟಿ ಉದ್ಯಮಿದಾರರ ಸಂಘ posts news and promotions. Your email address will not be used for any other purpose, and you can unsubscribe at any time.

Shortcuts

Share

Category