26/03/2023
"ಜನಾಂಗ ನಿಂದನೆ ತಪ್ಪು, ಅದಕ್ಕಾಗಿ ರಾಹುಲ್ ಗಾಂಧಿಗೆ ನ್ಯಾಯಾಲಯ ಶಿಕ್ಷೆ ನೀಡಿದೆ, ನೀವೇಕೆ ಮೋದಿ ಸರಕಾರವನ್ನು ಹೊಣೆ ಮಾಡುತ್ತೀರಿ, ಕಾನೂನು ಅದರ ದಾರಿಯಲ್ಲಿ ನಡೆಯುತ್ತದೆ' ಎಂದು ಬಿಜೆಪಿ ಬೆಂಬಲಿಗರು ರಾಹುಲ್ ಅನರ್ಹತೆಯ ಸಮರ್ಥನೆಗಿಳಿದಿದ್ದಾರೆ. ಇದೇ ಜನಗಳು ಸಿಟಿ ರವಿ, ನಳಿನ್ ಕುಮಾರ್ ಕಟೀಲ್, ಈಶ್ವರಪ್ಪ, ಯತ್ನಾಳ್, ಮುತಾಲಿಕ್, ಜಗದೀಶ ಕಾರಂತ, ಕಲ್ಲಡ್ಕ ಭಟ್ ಗಳ ಜನಾಂಗ ದ್ವೇಷದ ಹೀನಾತಿಹೀನ ಮಾತುಗಳನ್ನು ಖಂಡಿಸುವುದು ಬಿಡಿ, ಬಾಯಿ ಚಪ್ಪರಿಸಿ ಹಂಚುತ್ತಾರೆ. ಚಪ್ಪಾಳೆಯ ಸುರಿಮಳೆ ಸುರಿಸುತ್ತಾರೆ. ಇತ್ತೀಚೆಗೆ ಮುಸ್ಲಿಮರ ಕೊಲೆಗಳನ್ನು ಸಮರ್ಥಿಸಿದ ಶರಣ್ ಪಂಪ್ ವೆಲ್ ಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಮೇಲೂ ಪೊಲೀಸರು ಬಂಧಿಸುವ ಪ್ರಯತ್ನ ಮಾಡದಿರುವ ಕುರಿತು ಮಾತಾಡುವುದಿಲ್ಲ. ಇದು ಮೋದಿ ಕಾಲದ ಭಾರತ.
Sfi doddaballopur