23/04/2023
*ಚುನಾವಣೆ: ಸಾರ್ವಜನಿಕರು ದೂರುಗಳಿದ್ದಲ್ಲಿ ವೀಕ್ಷಕರನ್ನು ಭೇಟಿ ಮಾಡಿ ಸಲ್ಲಿಸಿ*
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ಮಂಡ್ಯ ಜಿಲ್ಲೆಗೆ ಸಾಮಾನ್ಯ, ವೆಚ್ಚ ಹಾಗೂ ಪೊಲೀಸ್ ವೀಕ್ಷಕರುಗಳನ್ನು ನೇಮಕ ಮಾಡಲಾಗಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರೂ ದೂರುಗಳಿದ್ದಲ್ಲಿ ಸಾರ್ವಜನಿಕರು ನಿಗಧಿಪಡಿಸಿರುವ ಸಮಯ ಹಾಗೂ ಸ್ಥಳದಲ್ಲಿ ವೀಕ್ಷಕರುಗಳನ್ನು ಭೇಟಿ ಮಾಡಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ: ಹೆಚ್.ಎನ್ ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ.
*ಸಾಮಾನ್ಯ ವೀಕ್ಷಕರ ವಿವರ* : 186-ಮಳವಳ್ಳಿ ಮತ್ತು 187-ಮದ್ದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಎ.ಎಸ್ ಅಧಿಕಾರಿ ಅಮಿತ್ ಕುಮಾರ್ ಮೊಬೈಲ್ ಸಂಖ್ಯೆ 9141010124 ಇವರನ್ನು ಮದ್ದೂರು ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.
190-ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಎ.ಎಸ್ ಅಧಿಕಾರಿ ಡಾ: ಎಸ್ ಸುರೇಶ್ ಕುಮಾರ್ ಮೊಬೈಲ್ ಸಂಖ್ಯೆ 9141010125 ಇವರನ್ನು ಶ್ರೀರಂಗಪಟ್ಟಣ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.
189-ಮಂಡ್ಯ ಮತ್ತು 191- ನಾಗಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಎ.ಎಸ್ ಅಧಿಕಾರಿ ತನ್ಮಯ್ ಚಕ್ರಬರ್ತಿ ಮೊಬೈಲ್ ಸಂಖ್ಯೆ 9141010126 ಇವರನ್ನು ಮಂಡ್ಯ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.
188- ಮೇಲುಕೋಟೆ ಮತ್ತು 192- ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಎ.ಎಸ್ ಅಧಿಕಾರಿ ಅಮಿತ್ವ್ ಬ್ಯಾನರ್ಜಿ ಮೊಬೈಲ್ ಸಂಖ್ಯೆ 9141010127 ಇವರನ್ನು ಪಾಂಡವಪುರ ಉಪವಿಭಾಗಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಸಂಜೆ 5 ರಿಂದ 6 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.
*ಚುನಾವಣಾ ವೆಚ್ಚ ವೀಕ್ಷಕರವಿವರ*: 186-ಮಳವಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಆರ್ ಎಸ್ ಅಧಿಕಾರಿ ಕೇದುಪ್ ಬುಟಿಯಾ ಮೊಬೈಲ್ ಸಂಖ್ಯೆ 9141010129 ಇವರನ್ನು ಮಳವಳ್ಳಿಯ ಪುರಸಭೆ ಕಾರ್ಯಾಲಯzಲ್ಲಿ ಬೆಳಿಗ್ಗೆ 11.30 ರಿಂದ 12.30 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.
187-ಮದ್ದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಆರ್ ಎಸ್ ಅಧಿಕಾರಿ ಗೌರಿಶಂಕರ್ ಸಿಂಗ್ ಮೊಬೈಲ್ ಸಂಖ್ಯೆ 9141010130 ಇವರನ್ನು ಮದ್ದೂರು ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.
188- ಮೇಲುಕೋಟೆ ಮತ್ತು 192- ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಆರ್ ಎಸ್ ಅಧಿಕಾರಿ ಪ್ರಸನ್ನ ದಾತರ್ ಮೊಬೈಲ್ ಸಂಖ್ಯೆ 9141010131 ಇವರನ್ನು ಪಾಂಡವಪುರ ಪ್ರವಾಸಿ ಮಂದಿರದಲ್ಲಿ ಸಂಜೆ 4 ರಿಂದ 6 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.
189-ಮಂಡ್ಯ ಮತ್ತು 191- ನಾಗಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಆರ್ ಎಸ್ (ಸಿಮತ್ತು ಸಿಇ) ಅಧಿಕಾರಿ ಲೋಕೇಶ್ ದಾಮೊರ್ ಮೊಬೈಲ್ ಸಂಖ್ಯೆ 9141010132 ಇವರನ್ನು ಮಂಡ್ಯ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10.30 ರಿಂದ 11.30 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.
190-ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಆರ್ ಎಸ್ ಅಧಿಕಾರಿ ಪ್ರದೀಪ್ ಕುಮಾರ್ ಮೊಬೈಲ್ ಸಂಖ್ಯೆ 9141010133 ಇವರನ್ನು ಶ್ರೀರಂಗಪಟ್ಟಣ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 9.30 ರಿಂದ 10.30 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.
*ಪೊಲೀಸ್ ವೀಕ್ಷಕರು* : ಜಿಲ್ಲೆಯ ಎಲ್ಲಾ ವಿಭಾಗದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಐ,ಪಿ.ಎಸ್.ಅಧಿಕಾರಿ ಅವಿನಾಶ್ ಕುಮಾರ್ ಮೊಬೈಲ್ ಸಂಖ್ಯೆ 9141010128 ಇವರನ್ನು ಮಂಡ್ಯ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 8.30 ರಿಂದ 9.30 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.