23/04/2023
*ಚುನಾವಣಾ ಕೆಲಸಗಳ ಕುರಿತು ತರಬೇತಿ*
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ, ಅಂಚೆ ಮತಪತ್ರ ವಿತರಣೆ, ಅಂಚೆ ಮತದಾನಕ್ಕೆ ಕೇಂದ್ರ ತೆರೆದು ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಡಾ: ಹೆಚ್ ಎನ್ ಗೋಪಾಲಕೃಷ್ಣ ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ತರಬೇತಿ ನೀಡಿದರು.
ಅಭ್ಯರ್ಥಿಗಳಿಗೆ ಚಿಹ್ನ ವಿತರಣೆ ಮಾಡುವಾಗ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸಿ. ಯಾವುದೇ ಲೋಪ ಉಂಟಾಗದಂತೆ ಕಾರ್ಯನಿರ್ವಹಿಸಿ ಎಂದರು.
ಮತಗಟ್ಟೆ ಅಧಿಕಾರಿಗಳಿಗೆ ಅಂಚೆ ಮತದಾನಕ್ಕೆ ಸ್ಥಾಪಿಸಲಾಗುವ ಮತಕೇಂದ್ರದಲ್ಲಿ ಮತ ಚಲಾಯಿಸಲು ಮೇ 2, 3 ಹಾಗೂ 4 ರಂದು ಅವಕಾಶ ಕಲ್ಪಿಸಲಾಗಿದೆ ಎಂದರು.
ಅಗತ್ಯ ಸೇವಾ ವಲಯದಡಿ ಈಗಾಗಲೇ 12 ಡಿ
ಸಲ್ಲಿಸಿರುವವರಿಗೆ ಮತ ಚಲಾಯಿಸಲು ತಾಲ್ಲೂಕು ಕಚೇರಿ/ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂಚೆ ಮತಪತ್ರದ ಮತ ಕೇಂದ್ರವನ್ನು ಮೇ 2, 3 ಹಾಗೂ 4 ರಂದು ಅವಕಾಶ ಕಲ್ಪಿಸಲಾಗಿದೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದರು.
80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತನರಿಗೆ ಮನೆ ಮನೆಗೆ ಮತಪತ್ರ ನೀಡಿ ಅಂಚೆ ಮತದಾನ ಮಾಡಲು ಮೇ 3,4 ಮತ್ತು 5 ರಂದು ವ್ಯವಸ್ಥೆ ಮಾಡಲಾಗಿದೆ. ವೇಳಪಟ್ಟಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಹಾಗೂ ವಿವರವನ್ನು ಅಭ್ಯಾರ್ಥಿಗಳಿಗೆ ಒದಗಿಸಲಾಗುವುದು ಎಂದರು.
80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತನರ ಅಂಚೆ ಮತದಾನದಲ್ಲಿ ಭಾಗವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ವಿಡಿಯೋಗ್ರಾಫರ್, ಪೊಲೀಸ್ ಸಿಬ್ಬಂದಿಯ ತಂಡ ರಚಿಸಿ ಪ್ರತ್ಯೇಕವಾಗಿ ಕಚೇರಿ ಆದೇಶ ನೀಡಿ. ಕಚೇರಿ ಆದೇಶ ಹಾಗೂ ವೇಳಪಟ್ಟಿಯ ವಿವರವನ್ನು ಅಭ್ಯರ್ಥಿಗಳಿಗೆ ಒದಗಿಸಿ ಎಂದರು.
ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜು ಅವರು ಮಾತನಾಡಿ ಅಂಚೆ ಮತದಾನದ ಮೂಲಕ ಮತ ಮಾಡುವವರಿಗೆ ಯಾವ ರೀತಿ ಮತ ಮಾಡಬೇಕು ಎಂಬ ವಿವರವನ್ನು ಅನಾವರಣಗೊಳಿಸಿ. ಜಿಲ್ಲೆಯಲ್ಲಿ ಅಂದಾಜು 5000 ಅಧಿಕಾರಿ/ ನೌಕರರು ಇದ್ದು,
ಅಂಚೆ ಮತದಾನ ಮಾಡಲು ಹೆಚ್ಚಿನ ಸಮಯ ಬೇಕಿದ್ದು, ತರಬೇತಿ ಸ್ಥಳದಲ್ಲಿ ಹೆಚ್ಚಿನ ಕೊಠಡಿಗಳ ವ್ಯವಸ್ಥೆ ಮಾಡಿ ಎಂದರು.
ಮತದಾರರಿಗೆ ವೋಟರ್ ಸ್ಲಿಪ್ ನೀಡಲು ಬೂತ್ ಲೆವಲ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸರಿಯಾಗಿ ಮತದಾರರ ಮನೆಗೆ ನಿಯೋಜಿತ ಸಿಬ್ಬಂದಿಗಳು ತಲುಪಿಸುವಂತೆ ನೋಡಿಕೊಳ್ಳಿ ಎಂದರು.
ಸಭೆಯಲ್ಲಿ ಅಂಚೆ ಮತಪತ್ರ ಮುದ್ರಣ, ಅಂಚೆ ಮತಪತ್ರದ ವಿತರಣೆ ಹಾಗೂ ಮತದಾನ ಕೇಂದ್ರ ಸ್ಥಾಪನೆ, ಎರಡನೇ ಹಂತದ ಮತಗಟ್ಟೆ ಅಧಿಕಾರಿಗಳ ರ್ಯಾಂಡಮೈಜೇಷನ್, ಇವಿಎಂ ರ್ಯಾಂಡಮೈಜೇಷನ್, ಮೈಕ್ರೋ ಅಬ್ಸರ್ವರ್ ಗಳ ರ್ಯಾಂಡಮೈಜೇಷನ್ ಹಾಗೂ ತರಬೇತಿ, , ಮತದಾನದ ದಿನದಂದು ಅಂಕಿ ಅಂಶಗಳ ಸಂಗ್ರಹಣೆ, , ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಕುರಿತಂತೆ ತರಬೇತಿ ನೀಡಲಾಯಿತು.
ಸಭೆಯಲ್ಲಿ ಚುನಾವಣಾಧಿಕಾರಿ ಎಚ್ ಹೆಸ್ ಕೀರ್ತನ, ಕೃಷ್ಣಕುಮಾರ್,ನಾಗಾರಾಜು, ಅಲಿ ಅಕ್ರಂ ಶಾ, ವಿಕ್ರಂ ರಾಜೇ ಅರಸ್, ಮಲ್ಲಿಕಾರ್ಜುನ್, ಬಾಬು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.