Sunil Kambogi

Sunil Kambogi ಧೈರ್ಯಂ ಸರ್ವತ ಸಾಧನಂ

ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಯ ಕುರಿತಾಗಿ ಆದೇಶ ನೀಡಿ ಒಂದು ವರ್ಷ ಕಳೆದರೂ ಇಲ್ಲಿಯವರೆಗೂ ರಾಜ್ಯದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಯಲ್...
29/07/2025

ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಯ ಕುರಿತಾಗಿ ಆದೇಶ ನೀಡಿ ಒಂದು ವರ್ಷ ಕಳೆದರೂ ಇಲ್ಲಿಯವರೆಗೂ ರಾಜ್ಯದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಯಲ್ಲಿ ವಿಳಂಬ ನಾಟಕೀಯ ಧೋರಣೆ ಅನುಸರಿಸುತ್ತಿದೆ. ಮೊದಲ ಸಚಿವ ಸಂಪುಟ ಸಭೆಯಲ್ಲೇ ಒಳಮೀಸಲಾತಿ ಅನುಷ್ಠಾನ ಮಾಡುವ ಪ್ರಣಾಳಿಕೆ ಹೊರಡಿಸಿದ್ದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಗಣಿತ ಕಾರ್ಯ ಮಾಡಿ ಸುಮ್ಮನಾಗಿದೆ. ಒಳಮೀಸಲಾತಿಯ ಕುರಿತು ದೊಡ್ಡ ದೊಡ್ಡ ಭಾಷಣ ಬಿಗಿದ ಕಾಂಗ್ರೆಸಿನ ಮುಖ್ಯಮಂತ್ರಿ, ಸಚಿವರು, ಶಾಸಕರು ಮೌನಿ ಬಾಬಾಗಳಾಗಿದ್ದಾರೆ. ಇವರಿಗೆ ಮಾದಿಗರ ಹೋರಾಟದ ಧ್ವನಿ ಕೇಳುತ್ತಿಲ್ಲ , ಒಳಮೀಸಲಾತಿ ಅನುಷ್ಠಾನದ ಕುರಿತು ನಿಜವಾದ ಧೋರಣೆ ಕಾಣುತ್ತಿಲ್ಲ. ಆದ ಕಾರಣ ಒಳಮೀಸಲಾತಿ ಜಾರಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್ 1ರಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಮುದಾಯದ ಎಲ್ಲ ಬಾಂಧವರು, ಹೋರಾಟಗಾರರು, ಯುವ ಮುಖಂಡರು ಹೋರಾಟವನ್ನು ಯಶಸ್ವಿಗೊಳಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿ.

ಹಿರಿಯ ಪತ್ರಕರ್ತರು, ನೇರ ನುಡಿಯ ನೇತಾರರು ಅಣ್ಣನ ಸ್ವರೂಪಿ, ನಮ್ಮ ಮಾರ್ಗದರ್ಶಕರಾದ  #ಶ್ರೀ_ಉದಯ_ಅಣ್ಣಾ_ಕುಲಕರ್ಣಿ ಅವರ ಜನ್ಮದಿನವನ್ನು ಸರಳವಾಗಿ...
19/09/2024

ಹಿರಿಯ ಪತ್ರಕರ್ತರು, ನೇರ ನುಡಿಯ ನೇತಾರರು
ಅಣ್ಣನ ಸ್ವರೂಪಿ, ನಮ್ಮ ಮಾರ್ಗದರ್ಶಕರಾದ
#ಶ್ರೀ_ಉದಯ_ಅಣ್ಣಾ_ಕುಲಕರ್ಣಿ ಅವರ ಜನ್ಮದಿನವನ್ನು ಸರಳವಾಗಿ ಮುಧೋಳದ ಶ್ರೀ ವಿಜಯ ಅನಾಥಾಶ್ರಮದಲ್ಲಿ
ಮಕ್ಕಳೊಂದಿಗೆ ಆಚರಿಸಲಾಯಿತು. ಜನ್ಮದಿನದ ಅಂಗವಾಗಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು, ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜೆ.ಕೆ ಸಿಮೆಂಟ್ ಕೈಗಾರಿಕೆಯ ಮುಖ್ಯಸ್ಥರು, ಸಂಘ ಪರಿವಾರದ ಪ್ರಮುಖರಾದ #ಶ್ರೀಶೈಲಗೌಡರು, ಶ್ರೀ ಹಣಮಂತ ಅಡವಿಯವರು ಹಾಗೂ ಸಮುದಾಯದ ಮುಖಂಡರಾದ ವಿಠ್ಠಲ ಮರಡಿ ಸೇರಿದಂತೆ ಯುವಕ ಮಿತ್ರರು ಮತ್ತು ಹಲವಾರು ಸಂಘಟನೆಗಳು ಮುಖಂಡರು ಭಾಗವಹಿಸಿ ಶುಭಾಶಯ ಕೋರಿದರು.

ಮುಧೋಳ ನಗರದ ಡಾ. ಬಿ.ಆರ್.ಅಂಬೇಡ್ಕರ ಭವನದಲ್ಲಿ ಇಂದು, ಮುಧೋಳ ತಾಲೂಕಾ ಪರಿಶಿಷ್ಟ ಜಾತಿ ಸಮುದಾಯಗಳ ವತಿಯಿಂದ, ಪರಿಶಿಷ್ಟ ಜಾತಿಯ ಜನಸಂಖ್ಯಾಧಾರಿತ ...
05/08/2024

ಮುಧೋಳ ನಗರದ ಡಾ. ಬಿ.ಆರ್.ಅಂಬೇಡ್ಕರ ಭವನದಲ್ಲಿ ಇಂದು, ಮುಧೋಳ ತಾಲೂಕಾ ಪರಿಶಿಷ್ಟ ಜಾತಿ ಸಮುದಾಯಗಳ ವತಿಯಿಂದ,
ಪರಿಶಿಷ್ಟ ಜಾತಿಯ ಜನಸಂಖ್ಯಾಧಾರಿತ ಒಳಮೀಸಲಾತಿಗಾಗಿ ಶ್ರಮಿಸಿದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ #ಸನ್ಮಾನ್ಯ_ಶ್ರೀ_ಗೋವಿಂದ_ಕಾರಜೋಳ ಸಾಹೇಬರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಧೋಳ ತಾಲೂಕಿನ ವಿವಿಧ ಪರಿಶಿಷ್ಟ ಜಾತಿ ಸಮುದಾಯಗಳ ಹಿರಿಯರು,ಒಳಮೀಸಲಾತಿ ಹೋರಾಟಗಾರರು, ಯುವಕರು, ತಾಯಂದಿರು ಪಾಲ್ಗೊಂಡಿದ್ದರು.

🙏🙏🙏🙏
11/06/2024

🙏🙏🙏🙏

ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ! #ಹುಬ್ಬಳ್ಳಿಯ_ಸಹೋದರಿ_ಅಂಜಲಿ_ಅಂಬಿಗೇರ ಪ್ರಕರಣದಲ್ಲಿ ದಕ್ಷ ಮತ್ತು ಪ್ರಾಮಾಣಿಕ ಐಪಿಎಸ್ ಅಧಿಕಾರಿ  #ಹುಬ...
21/05/2024

ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ!
#ಹುಬ್ಬಳ್ಳಿಯ_ಸಹೋದರಿ_ಅಂಜಲಿ_ಅಂಬಿಗೇರ ಪ್ರಕರಣದಲ್ಲಿ ದಕ್ಷ ಮತ್ತು ಪ್ರಾಮಾಣಿಕ ಐಪಿಎಸ್ ಅಧಿಕಾರಿ #ಹುಬ್ಬಳ್ಳಿಯ_ಡಿಸಿಪಿ_ರಾಜೀವ್_ಎಮ್. ರವರನ್ನು ಅಮಾನತುಗೊಳಿಸಿದ ಸರ್ಕಾರ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ದಲಿತ ಸಮುದಾಯಕ್ಕೆ ಸೇರಿದ ದಕ್ಷ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಸರ್ಕಾರ ಪದೇ ಪದೇ ತನ್ನ ಒಡೆದಾಳುವ ನೀತಿಯನ್ನು ಪ್ರದರ್ಶನ ಮಾಡುತ್ತಿದ್ದೆ.

ಸದಾ ದಲಿತರ ಪರವಾಗಿ ಇದ್ದೇನೆ ಎಂದು ಬೊಬ್ಬಿಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ , ಸಚಿವರಾದ ಡಾ.ಜಿ ಪರಮೇಶ್ವರ ರವರೇ, ಪ್ರಿಯಾಂಕ ಖರ್ಗೆ, ಕೆ ಎಚ್ ಮುನಿಯಪ್ಪ ಮತ್ತು ಸಮುದಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಚಿವರೇ ಸಮುದಾಯದ ಕೇಳುತ್ತಿದೆ ಉತ್ತರಿಸಿ.. ಈ ಅಧಿಕಾರಾಯವರ ಅಮಾನತಿಗೆ ಅಸಲಿ ಕಾರಣವೇನೆಂದು..?

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಟಗೇರಿ-ನಂದಗಾಂವ ಗ್ರಾಮದಲ್ಲಿ ಲಕ್ಕವ್ವದೇವಿ ದೇವಸ್ಥಾನ ಪ್ರವೇಶ ಮಾಡಿ ಗ್ರಾಮದ ಸವರ್ಣೀಯರಿಂದ ಮಾರಣಾಂತಿಕ ಹಲ್ಲ...
16/01/2024

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಟಗೇರಿ-ನಂದಗಾಂವ ಗ್ರಾಮದಲ್ಲಿ ಲಕ್ಕವ್ವದೇವಿ ದೇವಸ್ಥಾನ ಪ್ರವೇಶ ಮಾಡಿ ಗ್ರಾಮದ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ ಮತ್ತು ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಾದ
ಪುಟ್ಟಪ್ಪ ಕಲ್ಲಪ್ಪ ಮಾದಿಗರ@ಗಣಾಚಾರಿಯವರ ಕುಟುಂಬವನ್ನು ಭೇಟಿ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು ಮತ್ತು ನಮ್ಮ ಸಂಘಟನೆಯು ಯಾವಾಗಲೂ ತಮ್ಮ ಜೊತೆ ಇರುವುದಾಗಿ ಧೈರ್ಯ ತುಂಬಲಾಯಿತು.
ಸವರ್ಣೀಯರು ಹಲ್ಲೆ ನಡೆಸಿದ್ದಲ್ಲದೆ ಸಂತ್ರಸ್ತರ ಆಸ್ತಿಪಾಸ್ತಿಗಳನ್ನು ಸುಟ್ಟು ಹಾಕಿದ್ದಾರೆ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ. ಈ ಅಮಾನವೀಯ ಘಟನೆಯನ್ನು ಖಂಡಿಸಿ ಆರೋಪಿತರಿಗೆ ಉಗ್ರ ಮತ್ತು ಕಠಿಣ ಶಿಕ್ಷೆ ವಿಧಿಸಬೇಕೆಂದು ಭೀಮ ಆರ್ಮಿ ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ ರಾಜ್ಯ ಘಟಕ ಮತ್ತು ಅಥಣಿ ತಾಲೂಕ ಘಟಕದ ನೇತೃತ್ವದಲ್ಲಿ ತಹಶೀಲ್ದಾರರ ಮುಖಾಂತರ ಗೃಹ ಸಚಿವರಿಗೆ ಮತ್ತು ಸಂಬಂಧಿಸಿದ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಇಂದು ಮುಧೋಳ ನಗರದ ವಾರ್ಡ್ ನಂ 24 ಹಿರಿಕೇರಿ ಗಲ್ಲಿಗೆ ಭೇಟಿ ನೀಡಿದ ಬಾಗಲಕೋಟೆಯ ಮಾನ್ಯ  #ಜಿಲ್ಲಾಧಿಕಾರಿಗಳಾದ_ಶ್ರೀಮತಿ_ಜಾನಕಿ_ಮೇಡಂ_ಅವರಿಗೆ,  ...
09/12/2023

ಇಂದು ಮುಧೋಳ ನಗರದ ವಾರ್ಡ್ ನಂ 24 ಹಿರಿಕೇರಿ ಗಲ್ಲಿಗೆ ಭೇಟಿ ನೀಡಿದ ಬಾಗಲಕೋಟೆಯ ಮಾನ್ಯ #ಜಿಲ್ಲಾಧಿಕಾರಿಗಳಾದ_ಶ್ರೀಮತಿ_ಜಾನಕಿ_ಮೇಡಂ_ಅವರಿಗೆ, #ಜೈಹಿಂದ_ನಂ_1_ಪ್ರಾಥಮಿಕ_ಮತ್ತು_ಪ್ರೌಢ_ಶಾಲೆಯ ಸಮಸ್ಯೆ ಮತ್ತು ವಿವಿಧ ಕುಂದುಕೊರತೆಗಳ ಕುರಿತು ತಿಳಿಸಲಾಯಿತು. ನಮ್ಮ ಮನವಿಯನ್ನು ಆಲಿಸಿದ ಮಾನ್ಯರವರು ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು ಮತ್ತು ಮತ್ತೊಮ್ಮೆ ನಿಮ್ಮ ಕೇರಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಬಾಗಲಕೋಟೆ, ತಾಲೂಕು ಆಡಳಿತ ಮುಧೋಳ ನೇತೃತ್ವದಲ್ಲಿಂದು ಮುಧೋಳ ನಗರದಲ್ಲಿ ನಡೆದ ಪ್ರಾಥಮಿಕ ...
12/09/2023

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಬಾಗಲಕೋಟೆ, ತಾಲೂಕು ಆಡಳಿತ ಮುಧೋಳ ನೇತೃತ್ವದಲ್ಲಿಂದು ಮುಧೋಳ ನಗರದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ನಮ್ಮ ಸಂಘಟನೆಯಿಂದ ಸಹಾಯ-ಸಹಕಾರ ನೀಡಿದ್ದಕ್ಕಾಗಿ ನಮ್ಮನ್ನು ಅಭಿನಂದಿಸಿದ ಎಲ್ಲ ಕುಸ್ತಿ ಸಂಘಟಕರಿಗೆ ಮತ್ತು ಅಧಿಕಾರಿ ವೃಂದದವರಿಗೆ ಹೃತ್ಪೂರ್ವಕ ಧನ್ಯವಾದಗಳು.🙏

ಚಿತ್ರದುರ್ಗದ ಕಾವಾಡಿಗರ ಹಟ್ಟಿಯ ಪ್ರಕರಣ, ಮಾದಿಗ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಹಾಗೂ SCP-TSP ಅನುದಾನವನ್ನು ರಾಜ...
12/09/2023

ಚಿತ್ರದುರ್ಗದ ಕಾವಾಡಿಗರ ಹಟ್ಟಿಯ ಪ್ರಕರಣ, ಮಾದಿಗ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಹಾಗೂ SCP-TSP ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತರನ್ನು ಅಭಿವೃದ್ಧಿ ವಂಚಿತರನ್ನಾಗಿ ಮಾಡುತ್ತಿರುವುದನ್ನು ಮತ್ತು ಜಿಲ್ಲೆಯಲ್ಲಿ ಮಾದಿಗ ಸಮಾಜದ ಹೆಸರಿನಲ್ಲಿ ಸಮಾವೇಶ ನಡೆಸಿ ಸಮಾಜವನ್ನು ದಿಕ್ಕು ತಪ್ಪಿಸುತ್ತಿರುವುದನ್ನು ಖಂಡಿಸಿ ಇಂದು ರಾಜ್ಯ ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷರಾದ ಶ್ರೀ ಮುತ್ತಣ್ಣ ಬೆನ್ನೂರ್ ಅವರ ನೇತೃತ್ವದಲ್ಲಿ ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.

 #ಸೌಜನ್ಯ_ಹೆಣ್ಣಲ್ಲವೆ.....?ಈ ಪ್ರಕರಣದಲ್ಲಿ ಸಂತೋಷ ರಾವ್ ಒಬ್ಬರು ನಿರಪ್ರಾದ್ದಿಯಾದರೆ ಅಪರಾಧಿಗಳು ಯಾರು....?ಹೆಗಡೆಯವರೇ ನಿಮ್ಮದೇ ಒಡೆತನದಲ್ಲ...
12/08/2023

#ಸೌಜನ್ಯ_ಹೆಣ್ಣಲ್ಲವೆ.....?
ಈ ಪ್ರಕರಣದಲ್ಲಿ ಸಂತೋಷ ರಾವ್ ಒಬ್ಬರು ನಿರಪ್ರಾದ್ದಿಯಾದರೆ ಅಪರಾಧಿಗಳು ಯಾರು....?
ಹೆಗಡೆಯವರೇ ನಿಮ್ಮದೇ ಒಡೆತನದಲ್ಲಿ ನಿಮ್ಮದೇ ಆಡಳಿತದಲ್ಲಿ ಈ ಘಟನೆ ನಡೆದಿದ್ದೆ ಇದಕ್ಕೆ ನಿಮ್ಮ ಉತ್ತರ ಏನು...?
ಬೆಳ್ತಂಗಡಿ ಮಾಜಿ ಶಾಸಕರೇ.. ನಿಮಗೆ ಈ ಪ್ರಕರಣದ ಬದಲು ಗೊತ್ತಿದೆ ಎಂದು ಘಂಟಾಘೋಷವಾಗಿ ವೇದಿಕೆ ಮೇಲೆ ಹೇಳುತ್ತೀರಿ ಅಪರಾಧಿಯನ್ನು ಮುಚ್ಚಿ ಇಡುವುದು ದೊಡ್ಡ ಅಪರಾಧ ಎಂದು ನಿಮಗೆ ಗೊತ್ತು ಶಾಸಕರಿಗೆ ನಿಮಗೆ ಯಾರ ಭಯ ನಿಮಗೆ ಹೀಗಾದರೆ ಸಾಮಾನ್ಯ ಜನರ ಗತಿಯೇನು...?
ಬಂಧುಗಳೇ ನಿಮಗೆ ಗೊತ್ತಿರಲಿ ಒಬ್ಬಳ ಸೌಜನ್ಯ ಆದ ಅನ್ಯಾಯ ಅಲ್ಲ ಇದು ನಮ್ಮ ನಿಮ್ಮ ಹೆಣ್ಣು ಮಗಳಿಗೆ ಆದ ಅನ್ಯಾಯ ಇದಕ್ಕೆ ನ್ಯಾಯ ಸಿಗಲೇಬೇಕು ಸಿಗುವವರೆಗೂ ಹೋರಾಟ ಮಾಡೋಣ ಯಾವುದೇ ಸರ್ಕಾರ ಇರಲಿ ಅಂದು #ಜಗದೀಶ್_ಶೆಟ್ಟರ್_ಸದಾನಂದಗೌಡ_ಯಡಿಯೂರಪ್ಪ
#ಸಿದ್ದರಾಮಯ್ಯನವರೇ_ನೀವುಗಳೇ #ಮುಖ್ಯಮಂತ್ರಿಗಳಾಗಿದ್ದರು, ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಿದ್ದಾರೆ 11 ವರ್ಷ ಪ್ರಕರಣ ಕಳೆದಿದೆ ಈಗ ನಿರ್ದೋಷಿ ಎಂದು ನ್ಯಾಯಾಲಯ ಹೇಳಿದೆ, ಈ ಪ್ರಕರಣಕ್ಕೆ ಮುಖ್ಯಮಂತ್ರಿಗಳೇ,ಗೃಹ ಮಂತ್ರಿಗಳೇ,ಸಮಾಜ ಕಲ್ಯಾಣ ಮಂತ್ರಿಗಳೇ, #ನಮ್ಮ #ರಾಜ್ಯದ_224ಜನ_ಶಾಸಕರೇ_ಮಂತ್ರಿಗಳೇ_ಉತ್ತರ #ನೀಡಿ...?
ಆ ಹೆಣ್ಣು ಮಗಳಿಗೆ ಆದ ಅನ್ಯಾಯ ನಿಮಗೆ ಗೊತ್ತಿಲ್ಲವೇ.. ಅವಳು ಒಂದು ಹೆಣ್ಣಲ್ಲವೇ...
ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ರಾಜ್ಯದ ಜನರ ಕಣ್ಮುಂದೆ ಕಂಡಿದೆ ಇದು ಅನ್ಯಾಯ ನ್ಯಾಯ ಸಿಗಲೇಬೇಕು ಡಾ // ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಜೀವನದ ಉದ್ದಕ್ಕೂ ಹೆಣ್ಣಿಗಾಗಿ ಸಮಾನತೆ ಹಕ್ಕಿಗಾಗಿ ಹೋರಾಟ ನಡೆಸಿದ ನನ್ನ ತಂದೆ ಬಾಬಾ ಸಾಹೇಬ್ ಅಂಬೇಡ್ಕರ್ ಈ ಹೆಣ್ಣು ಮಗಳಿಗೇ ಅನ್ಯಾಯ ಆಗಕೂಡದು ಒಂದು ವೇಳೆ ಈ ಪ್ರಕರಣ ಮುಚ್ಚಿ ಹಾಕಲು ಎಷ್ಟೇ ಬಲಿಷ್ಠರು ಇದ್ದರು ಅವರನ್ನು ಹೆಡೆಮುರಿ ಕಟ್ಟಿ ಈ ಪ್ರಕರಣದಲ್ಲಿ ಅವರನ್ನು ಕೂಡ ಅಪರಾಧಿ ಮಾಡಿ ಶಿಕ್ಷೆ ವಿಧಿಸಬೇಕೆಂದು ಅಗ್ರಹಿಸುತ್ತೇನೆ...✊✊✊ ಜೈ ಭೀಮ✊✊✊

✍️ಇಂತಿ ನಿಮ್ಮವ
ಸುನಿಲ್ ಎಚ್ ಕಂಬೋಗಿ

 #ಚಿತ್ರದುರ್ಗ ಜಿಲ್ಲೆಯ ಕಾವಾಡಿಗರಹಟ್ಟಿ ಗ್ರಾಮದಲ್ಲಿ  ಾದಿಗರ_ಕೊಲೆ ಮತ್ತು ಅದೇ ಜಿಲ್ಲೆಯ ಅಂಬೇಡ್ಕರ್  ನಾಮಪಲಕ ಹಾಕಿದ್ದಕ್ಕೆ ಕೇರಿಯ ಜನರ ಮೇಲೆ...
11/08/2023

#ಚಿತ್ರದುರ್ಗ ಜಿಲ್ಲೆಯ ಕಾವಾಡಿಗರಹಟ್ಟಿ ಗ್ರಾಮದಲ್ಲಿ
ಾದಿಗರ_ಕೊಲೆ ಮತ್ತು ಅದೇ ಜಿಲ್ಲೆಯ ಅಂಬೇಡ್ಕರ್ ನಾಮಪಲಕ ಹಾಕಿದ್ದಕ್ಕೆ ಕೇರಿಯ ಜನರ ಮೇಲೆ ಹಲ್ಲೆ, #ಸೌಜನ್ಯ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳಾರು, #ಬಾಗಲಕೋಟೆ_ಜಿಲ್ಲೆಯ_ಬದಾಮಿ #ತಾಲೂಕಿನ_ಕಾಡರಕೊಪ್ಪ_ಗ್ರಾಮದ_ಬೈಲಪ್ಪ_ಮಾದರ ಕಾಣೆಯಾದ ಬಗ್ಗೆ ಇದುವರೆಗೂ ಯಾವ ವರದಿಯು ಬರಲಿಲ್ಲ, #ಮಣಿಪುರಂ_ನಿರಂತರ_ದೌರ್ಜನ್ಯ, ಬೆತ್ತಲೆ ಮೆರವಣಿಗೆ,ಜೀವಂತ ಸಜೀವ ದಹನ, ಇನ್ನು ಹಲವಾರು ಪ್ರಕರಣಗಳ ಇವೆಲ್ಲವನ್ನೂ ಖಂಡಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ನೀಡವ ಮುಖಾಂತರ ಅಗ್ರಹಿಸಲಾಗುವುದು.✊✊

Address

Mudhol

Website

Alerts

Be the first to know and let us send you an email when Sunil Kambogi posts news and promotions. Your email address will not be used for any other purpose, and you can unsubscribe at any time.

Share