29/07/2025
ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಯ ಕುರಿತಾಗಿ ಆದೇಶ ನೀಡಿ ಒಂದು ವರ್ಷ ಕಳೆದರೂ ಇಲ್ಲಿಯವರೆಗೂ ರಾಜ್ಯದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಯಲ್ಲಿ ವಿಳಂಬ ನಾಟಕೀಯ ಧೋರಣೆ ಅನುಸರಿಸುತ್ತಿದೆ. ಮೊದಲ ಸಚಿವ ಸಂಪುಟ ಸಭೆಯಲ್ಲೇ ಒಳಮೀಸಲಾತಿ ಅನುಷ್ಠಾನ ಮಾಡುವ ಪ್ರಣಾಳಿಕೆ ಹೊರಡಿಸಿದ್ದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಗಣಿತ ಕಾರ್ಯ ಮಾಡಿ ಸುಮ್ಮನಾಗಿದೆ. ಒಳಮೀಸಲಾತಿಯ ಕುರಿತು ದೊಡ್ಡ ದೊಡ್ಡ ಭಾಷಣ ಬಿಗಿದ ಕಾಂಗ್ರೆಸಿನ ಮುಖ್ಯಮಂತ್ರಿ, ಸಚಿವರು, ಶಾಸಕರು ಮೌನಿ ಬಾಬಾಗಳಾಗಿದ್ದಾರೆ. ಇವರಿಗೆ ಮಾದಿಗರ ಹೋರಾಟದ ಧ್ವನಿ ಕೇಳುತ್ತಿಲ್ಲ , ಒಳಮೀಸಲಾತಿ ಅನುಷ್ಠಾನದ ಕುರಿತು ನಿಜವಾದ ಧೋರಣೆ ಕಾಣುತ್ತಿಲ್ಲ. ಆದ ಕಾರಣ ಒಳಮೀಸಲಾತಿ ಜಾರಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್ 1ರಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಮುದಾಯದ ಎಲ್ಲ ಬಾಂಧವರು, ಹೋರಾಟಗಾರರು, ಯುವ ಮುಖಂಡರು ಹೋರಾಟವನ್ನು ಯಶಸ್ವಿಗೊಳಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿ.