INC Mysore City

INC Mysore City The party which develops and consolidates the feelings of national unity irrespective of caste, religion or province.

ಮೈಸೂರು ನಗರಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಸರ್ಕಾರದ ಆಹಾರ,ನಾಗರೀಕ ಸರಬರಾಜು,ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರು,ಮೈಸೂರಿನ ಸುಪುತ್ರರೂ ಆದ ಶ...
02/09/2026

ಮೈಸೂರು ನಗರಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಸರ್ಕಾರದ ಆಹಾರ,ನಾಗರೀಕ ಸರಬರಾಜು,ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರು,ಮೈಸೂರಿನ ಸುಪುತ್ರರೂ ಆದ ಶ್ರೀ ರಿಜ್ವಾನ್ ಹರ್ಷದ್ ರವರನ್ನು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಂ.ಕೆ ಸೋಮಶೇಖರ್ ರವರು ಅಭಿನಂದಿಸಿದರು.ಈ ವೇಳೆ ಮಾಜಿ ಮೇಯರ್ ಆರೀಫ್ ಹುಸೇನ್,ಮುಖಂಡರಾದ ರವಿಶಂಕರ್,ಹರವೆ ಸಿದ್ದು,ಲತಾ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

8000 ಸಾವಿರಕ್ಕೂ ಹೆಚ್ಚು ಹುದ್ದೆಗಳ ಅವಕಾಶದ ಬೃಹತ್ ಉದ್ಯೋಗ ಮೇಳನಮ್ಮ ಸಂಸ್ಥೆಯಾದ ಜನ ಸ್ಪಂದನಾ ಟ್ರಸ್ಟ್ ವತಿಯಿಂದ ಕಳೆದ 9 ವರ್ಷಗಳಿಂದ 15 ಭಾರಿ...
02/09/2026

8000 ಸಾವಿರಕ್ಕೂ ಹೆಚ್ಚು ಹುದ್ದೆಗಳ ಅವಕಾಶದ ಬೃಹತ್ ಉದ್ಯೋಗ ಮೇಳ

ನಮ್ಮ ಸಂಸ್ಥೆಯಾದ ಜನ ಸ್ಪಂದನಾ ಟ್ರಸ್ಟ್ ವತಿಯಿಂದ ಕಳೆದ 9 ವರ್ಷಗಳಿಂದ 15 ಭಾರಿ ಯಶಸ್ವಿಯಾಗಿ ಉದ್ಯೋಗ ಮೇಳವನ್ನು ನಡೆಸಿ 16ನೇ ಭಾರಿ ಈ ವರ್ಷವು ನಡೆಸುತ್ತಿದ್ದು, ನಿರುದ್ಯೋಗಿ ಉತ್ಸಾಹಿ ಯುವಕ/ಯುವತಿಯರಿಗೆ ಚೈತನ್ಯ ತುಂಬಿ ನಿರುದ್ಯೋಗ ಸಮಸ್ಯೆಯನ್ನು ನಿರ್ಮೂಲನೆ ಮಾಡುವತ್ತ ನಮ್ಮ ಸಂಸ್ಥೆಯೂ ಸಾವಿರಾರು ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಸಫಲರಾಗಿದ್ದೇವೆ. ಯಾವುದೇ ಅಪೇಕ್ಷೆ ಇಲ್ಲದೆ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಪ್ರತಿಭೆಯಿದ್ದು ಅವಕಾಶವಿಲ್ಲದೆ ವಂಚಿತರಾಗಿ ಸಂಕಷ್ಟದಲ್ಲಿರುವವರು ಒಂದು ಕಡೆಯಾದರೆ, ಉದ್ಯೋಗಗಳಿದ್ದೂ ಪ್ರತಿಭೆಗಳನ್ನು ಹುಡುಕುವವರು ಇನ್ನೊಂದುಕಡೆ, ಇವರಿಬ್ಬರ ನಡುವೆ ಸೇತುವೆಯಾಗಿ ನಿರುದ್ಯೋಗಿ ಯುವಕ ಯುವತಿಯರಿಗೆ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ನಿರುದ್ಯೋಗಿ ಯುವಕರಲ್ಲಿ ಭರವಸೆ ಮೂಡಿಸಲು ಈ ಭಾರಿಯೂ ಮೈಸೂರಿನ ಸೇವಾ ಸಂಸ್ಥೆಯಾದ ಜನ ಸ್ಪಂದನ ಟ್ರಸ್ಟ್ ವತಿಯಿಂದ ಉದ್ಯೋಗಮೇಳ, ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ದಿನಾಂಕ 05/09/26ರಂದು ಬೆಳಿಗ್ಗೆ 9:00 ರಿಂದ ಸಂಜೆ 5:00ರ ವರೆಗೆ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಚಿಕ್ಕಮ್ಮಾನಿಕೇತನ ಸಮುದಾಯ ಭವನದಲ್ಲಿ ಏರ್ಪಡಿಸಿದೆ. ಈ ಉದ್ಯೋಗ ಮೇಳವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರಾದ ಸನ್ಮಾನ್ಯ ಶ್ರೀ ಯತೀಂದ್ರ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದು ಇತರೆ ಆನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉದ್ಯೋಗ ಮೇಳದಲ್ಲಿ ನಿರುದ್ಯೋಗ ಯುವಕ/ಯುವತಿಯರಿಗೆ ಅನುಕೂಲವಾಗುವ ಉದ್ದೇಶದಿಂದ Job Portal ನ್ನು ಪ್ರಾರಂಭಿಸಲಾಗುತ್ತಿದ್ದು ನೋಂದಣಿಗಾಗಿ ನಿರುದ್ಯೋಗಿಗಳು Google form ಗೆ Online ಮೂಲಕ ತಮ್ಮ ವ್ಯಕ್ತಿಪರಿಚಯಪತ್ರ (BIO-DATA) ಸಲ್ಲಿಸಬಹುದಾಗಿದೆ.

ಈ ಉದ್ಯೋಗ ಮೇಳದಲ್ಲಿ ಮೈಸೂರು ಮತ್ತು ಬೆಂಗಳೂರಿನ ಕಂಪನಿಗಳು, ಹಾಗೂ ಕೆಲವು ಐ.ಟಿ.ಕಂಪನಿಗಳು ಸಹ ಭಾಗವಹಿಸಲಿವೆ. ಈ ಮೇಳದಲ್ಲಿ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಐ.ಟಿ.ಐ., ಡಿಪ್ಲೊಮೊ, ಕಂಪ್ಯೂಟರ್ ತರಬೇತಿವುಳ್ಳವರು, ಪದವಿಧರರು ಹಾಗೂ ಇಂಜಿನಿಯರಿಂಗ್ ಪದವಿವರೆಗೂ ವಿವಿಧ ವಿದ್ಯಾರ್ಹತೆಗಳಿಗನುಗುಣವಾಗಿ ನೂರಾರು ನಿರುದ್ಯೋಗಿಗಳಿಗೆ

ಈ ಉದ್ಯೋಗ ಮೇಳದಲ್ಲಿ ಮೈಸೂರು ಮತ್ತು ಬೆಂಗಳೂರಿನ ಕಂಪನಿಗಳು, ಹಾಗೂ ಕೆಲವು ಐ.ಟಿ.ಕಂಪನಿಗಳು ಸಹ ಭಾಗವಹಿಸಲಿವೆ. ಈ ಮೇಳದಲ್ಲಿ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಐ.ಟಿ.ಐ., ಡಿಪ್ಲೊಮೊ, ಕಂಪ್ಯೂಟರ್ ತರಬೇತಿವುಳ್ಳವರು, ಪದವಿಧರರು ಹಾಗೂ ಇಂಜಿನಿಯರಿಂಗ್ ಪದವಿವರೆಗೂ ವಿವಿಧ ವಿದ್ಯಾರ್ಹತೆಗಳಿಗನುಗುಣವಾಗಿ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಅವಕಾಶವಿದೆ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಲು ವಿನಂತಿಸಲಾಗಿದೆ.

ಈ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಂದ ಹಾಗೂ ಯಾರಿಂದಲೂ ಯಾವುದೇ ರೀತಿಯ ಸದ್ಯಸತ್ವದ ಶುಲ್ಕವನ್ನು ಪಡೆಯಲಾಗುವುದಿಲ್ಲ. ಇದು ಪೂರ್ಣವಾಗಿ ಉಚಿತವಾಗಿ ಸೇವಾ ಮನೋಭಾವದಿಂದ ನಡೆಯುವ ಉದ್ಯೋಗ ಮೇಳವಾಗಿದೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ದಾಖಲಾತಿಗಳು, ಜೆರಾಕ್ಸ್ ಪ್ರತಿಗಳು, ಭಾವಚಿತ್ರಗಳು, ಮತ್ತು ವ್ಯಕ್ತಿಪರಿಚಯಪತ್ರ (BIO-DATA) ಗಳನ್ನು ಜೊತೆಯಲ್ಲಿ ತರುವುದು.

ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಚಿಸುವ ಮೈಸೂರು ಜಿಲ್ಲೆಯ ವಿವಿಧ ಕೈಗಾರಿಕೆಗಳ ಮುಖ್ಯಸ್ಥರುಗಳು ತಮ್ಮ ಬೇಡಿಕೆಗಳಿಗನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರತ್ಯೇಕ ಕೌಂಟರ್ ತೆರೆಯಲಾಗುವುದು.

ಒಟ್ಟಾರೆ 60ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 8000ಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗುರಿಯನ್ನು ಹೊಂದಿರುತ್ತೇವೆ. ಈ ಮೇಳದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜನಸ್ಪಂದನಾ ಸೇವಾ ಟ್ರಸ್ಟ್ 7018442164 ವಿನಂತಿಸಿದೆ. ಹೆಚ್ಚಿನ ವಿವರಗಳಿಗೆ ಮೊಬೈಲ್ ನಂ. 8892628009-7892253897-8618448164-9900244955, ಇವರನ್ನು ಸಂಪರ್ಕಿಸಬಹುದು.

ವಂದನೆಗಳೊಂದಿಗೆ

ತಮ್ಮ ವಿಶ್ವಾಸಿ
ಎಂ ಕೆ ಸೋಮಶೇಖರ್ ಮಾಜಿ ಶಾಸಕರು ಕೆಆರ್ ಕ್ಷೇತ್ರ
ಬೃಹತ್ ಉದ್ಯೋಗ ಮೇಳದ ಕುರಿತು ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ಪತ್ರಿಕಾಗೋಷ್ಠಿಯಲ್ಲಿ

ಎಂ ಕೆ ಸೋಮಶೇಖರ್
ಮಾಜಿ ಶಾಸಕರು
ಕೃಷ್ಣರಾಜ ವಿಧಾನ ಸಭಾ ಕ್ಷೇತ್ರ
ಅಧ್ಯಕ್ಷರು
ಜನಸ್ಪಂದನ ಟ್ರಸ್ಟ್ (ರಿ.)
ಶ್ರೀಧರ್
ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಸಮಿತಿ
ಜೆ.ಗೋಪಿ
ಮಾಜಿ ಪಾಲಿಕೆ ಸದಸ್ಯರು
ಎಂ.ಸುನೀಲ್
ಮಾಜಿ ಪಾಲಿಕೆ ಸದಸ್ಯರು
,ವಿನಯ್ ಕುಮಾರ್ ಜೆ
ಅಧ್ಯಕ್ಷರು
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
,ರವಿಶಂಕರ್
ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
,ಕಾಂಗ್ರೆಸ್ ಮುಖಂಡರಾದ
ಅಶೋಕಪುರಂ ಪಟಾಕಿ ಮಂಜುನಾಥ್
,ಹರವೆ ಸಿದ್ದು,
ವಿಶ್ವ
ಉಪಸ್ಥಿತರಿದ್ದರು.

02/09/2026

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ!

ಜನಸ್ಪಂದನ ಟ್ರಸ್ಟ್ (ರಿ.) ವತಿಯಿಂದ ಬೃಹತ್ ಉದ್ಯೋಗ ಮೇಳ–2026 ಆಯೋಜಿಸಲಾಗಿದೆ.

ಉದ್ಯೋಗ ಹುಡುಕುತ್ತಿರುವ ಯುವಜನರಿಗೆ ಉದ್ಯೋಗದ ಅವಕಾಶಗಳು, ಉದ್ಯೋಗ ಮಾಹಿತಿ ಹಾಗೂ ಸೂಕ್ತ ಮಾರ್ಗದರ್ಶನ ಪಡೆಯಲು ಇದೊಂದು ಉತ್ತಮ ವೇದಿಕೆ.

ದಿನಾಂಕ: 05-09-2026, ಶನಿವಾರ
⏰ ಸಮಯ: ಬೆಳಿಗ್ಗೆ 9.00 ಗಂಟೆಗೆ
📍 ಸ್ಥಳ: ಚಿಕ್ಕಮ್ಮನಿಕೇತನ , ಕಲ್ಯಾಣ ಮಂಟಪ, ಮೈಸೂರು

ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಎಂ.ಕೆ. ಸೋಮಶೇಖರ್
ಮಾಜಿ ಶಾಸಕರು, ಕೃಷ್ಣರಾಜ ವಿಧಾನಸಭಾ ಕ್ಷೇತ್ರ

#ಉದ್ಯೋಗಮೇಳ2026

ಜನಸ್ಪಂದನ ಟ್ರಸ್ಟ್ (ರಿ.) ಮತ್ತು ಜಿಲ್ಲಾ ಉದ್ಯೋಗ ವಿನಿಮಯಕಚೇರಿ, ಮೈಸೂರು ಇವರ ಸಹಯೋಗದೊಂದಿಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿಆಯೋಜಿಸಲಾಗಿ...
01/09/2026

ಜನಸ್ಪಂದನ ಟ್ರಸ್ಟ್ (ರಿ.) ಮತ್ತು ಜಿಲ್ಲಾ ಉದ್ಯೋಗ ವಿನಿಮಯ
ಕಚೇರಿ, ಮೈಸೂರು ಇವರ ಸಹಯೋಗದೊಂದಿಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ
ಆಯೋಜಿಸಲಾಗಿರುವ ಬೃಹತ್ ಉದ್ಯೋಗ ಮೇಳ - 2026 ಕ್ಕೆ ತಮ್ಮ ಸಂಸ್ಥೆಗೆ ಆತ್ಮೀಯ ಆಹ್ವಾನ.

📅ದಿನಾಂಕ:
05-09-2026 (ಶನಿವಾರ)

⏰ಸಮಯ: ಬೆಳಿಗ್ಗೆ 9:00 ಗಂಟೆಯಿಂದ

📍ಸ್ಥಳ:
ಚಿಕ್ಕಮ್ಮನಿಕೇತನ ಕಲ್ಯಾಣ ಮಂಟಪ, ಕುವೆಂಪುನಗರ, ಮೈಸೂರು.

ಜನಸ್ಪಂದನ ಟ್ರಸ್ಟ್ (ರಿ.) ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮೈಸೂರು ಇವರ ಜಂಟಿ ಆಶ್ರಯದಲ್ಲಿ ಮತ್ತು ಮಾಜಿ ಶಾಸಕರಾದ ಶ್ರೀ ಎಂ. ಕೆ. ಸ...

📢 ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ! ಜನಸ್ಪಂದನ ಟ್ರಸ್ಟ್ (ರಿ.) ವತಿಯಿಂದ ಬೃಹತ್ ಉದ್ಯೋಗ ಮೇಳ–2026 ಆಯೋಜಿಸಲಾಗಿದೆ.ಉದ್ಯೋಗ ಹುಡುಕುತ್ತಿರು...
31/08/2026

📢 ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ!

ಜನಸ್ಪಂದನ ಟ್ರಸ್ಟ್ (ರಿ.) ವತಿಯಿಂದ ಬೃಹತ್ ಉದ್ಯೋಗ ಮೇಳ–2026 ಆಯೋಜಿಸಲಾಗಿದೆ.

ಉದ್ಯೋಗ ಹುಡುಕುತ್ತಿರುವ ಯುವಜನರಿಗೆ ಉದ್ಯೋಗದ ಅವಕಾಶಗಳು, ಉದ್ಯೋಗ ಮಾಹಿತಿ ಹಾಗೂ ಸೂಕ್ತ ಮಾರ್ಗದರ್ಶನ ಪಡೆಯಲು ಇದೊಂದು ಉತ್ತಮ ವೇದಿಕೆ.

📅 ದಿನಾಂಕ: 05-09-2026, ಶನಿವಾರ
⏰ ಸಮಯ: ಬೆಳಿಗ್ಗೆ 9.00 ಗಂಟೆಗೆ
📍 ಸ್ಥಳ: ಚಿಕ್ಕಮ್ಮನಿಕೇತನ , ಕಲ್ಯಾಣ ಮಂಟಪ, ಮೈಸೂರು

ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಎಂ.ಕೆ. ಸೋಮಶೇಖರ್
ಮಾಜಿ ಶಾಸಕರು, ಕೃಷ್ಣರಾಜ ವಿಧಾನಸಭಾ ಕ್ಷೇತ್ರ

#ಉದ್ಯೋಗಮೇಳ2026 #ಉದ್ಯೋಗಾವಕಾಶ #ಯುವಜನತೆ

ಅಶೋಕಪುರಂನಲ್ಲಿ ಸಂಸದ ಸುನೀಲ್ ಬೋಸ್ ಹುಟ್ಟು ಹಬ್ಬ ಆಚರಣೆ.ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಸುನೀಲ್ ಬೋಸ್ ರವರ ಜನ್ಮದಿನದ ಹಿನ್ನೆ...
31/08/2026

ಅಶೋಕಪುರಂನಲ್ಲಿ ಸಂಸದ ಸುನೀಲ್ ಬೋಸ್ ಹುಟ್ಟು ಹಬ್ಬ ಆಚರಣೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಸುನೀಲ್ ಬೋಸ್ ರವರ ಜನ್ಮದಿನದ ಹಿನ್ನೆಲೆಯಲ್ಲಿ ಮೈಸೂರಿನ ಅಶೋಕಪುರಂ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಸುನೀಲ್ ಬೋಸ್ ರವರ ಅಭಿಮಾನಿಗಳ ಬಳಗದ ವತಿಯಿಂದ ಅಶೋಕಪುರಂ ಎನ್ ಟಿ ಎಂ ಶಾಲೆಯಲ್ಲಿ ಅಶೋಕಪುರಂ ಜೈರಾಜ್ ಮತ್ತು ಜೋಗಿ ಮಹೇಶ್ ರವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಾಗ್ರಿಗಳು,ಶೂ ವಿತರಿಸಲಾಯಿತು.ಈ ವೇಳೆ ಮಾಜಿ ಶಾಸಕರಾದ ಶ್ರೀ ಎಂ.ಕೆ ಸೋಮಶೇಖರ್,ಮಾಜಿ ಮೇಯರ್ ಪುರುಷೋತ್ತಮ್,ಆದಿ ಕರ್ನಾಟಕ ಮಹಾಸಂಸ್ಥೆಯ ಅಧ್ಯಕ್ಷರಾದ ಸಿದ್ದರಾಜು,ಉಪಾಧ್ಯಕ್ಷರಾದ ಶಿವ ಸ್ವಾಮಿ,ದೊಡ್ಡಗರಡಿ ಅಧ್ಯಕ್ಷರಾದ ಜೋಗಿಮಹೇಶ್,ಚಿಕ್ಕಗರಡಿ ಅಧ್ಯಕ್ಷರಾದ ನಾಗರಾಜ್ ಬಿಲ್ಲಯ್ಯ,ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಿ.ಸೋಮಶೇಖರ್, ಮುಖಂಡರಾದ ರಮೇಶ್,ಪಟಾಕಿ ಮಂಜುನಾಥ್, ಫಾರೆಸ್ಟ್ ವಿಶ್ವ,ಪ್ರಗತಿಪರ ಚಿಂತಕರಾದ ರಾಮಸ್ವಾಮಿ,ಸ್ವಾಮಿ , ಪ್ರವೀಣ್,ದಾಸ್,ರವಿ,ಆಟೋ ಪುಟ್ಟರಾಜು, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಜೆ, ಓಬಿಸಿ ಅಧ್ಯಕ್ಷರಾದ ಕುಮಾರ್ (ಕುಮ್ಮಿ), ಆನಂದ್,ಹರವೆ ಸಿದ್ದು ಮತ್ತಿತರರು ಉಪಸ್ಥಿತರಿದ್ದರು.

ಮೈಸೂರಿನಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್: ಮಾಧ್ಯಮಗೋಷ್ಠಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಕುರಿತು ಪತ್ರಿಕಾ ವರದಿಗಳು.
30/08/2026

ಮೈಸೂರಿನಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್: ಮಾಧ್ಯಮಗೋಷ್ಠಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಕುರಿತು ಪತ್ರಿಕಾ ವರದಿಗಳು.

30/08/2026

Address

Arun Gangadhar
Mysore

Website

Alerts

Be the first to know and let us send you an email when INC Mysore City posts news and promotions. Your email address will not be used for any other purpose, and you can unsubscribe at any time.

Shortcuts

Share