02/09/2026
ಚಿಕ್ಕಮಗಳೂರಿನ ದಂಟರಮಕ್ಕಿಯಲ್ಲಿರುವ "ಶ್ರೀ ಸ್ವಾಮಿ ಸಮರ್ಥ ರಾಮದಾಸ ವಿದ್ಯಾ ಮಂದಿರ"ದ ಅಭಿವೃದ್ಧಿ ಕಾಮಗಾರಿಗೆ ನನ್ನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಕಲ್ಪಿಸಲಾಗಿದ್ದು, ಇಂದು ನಿರ್ಮಾಣ ಹಂತದ ಕಾಮಗಾರಿಯನ್ನು ವೀಕ್ಷಿಸಲಾಯಿತು.
ಈ ವಿದ್ಯಾಮಂದಿರದಲ್ಲಿ ಮಕ್ಕಳಿಗೆ ಕೇವಲ ಪಠ್ಯ ಶಿಕ್ಷಣವಷ್ಟೇ ಅಲ್ಲದೆ; ಆಧ್ಯಾತ್ಮಿಕ ಜ್ಞಾನ, ವೇದ ಪಠಣ, ಭಾರತೀಯ ಸಂಸ್ಕೃತಿ, ಸಂಸ್ಕಾರ, ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಬಾಲ್ಯದಿಂದಲೇ ಕಲಿಸುತ್ತಿರುವುದು ಅತ್ಯಂತ ಸಂತಸದ ವಿಚಾರ.
ವಿದ್ಯಾಮಂದಿರದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಶುಭವಾಗಲಿ.