28/05/2026
ರಾಜ್ಯ ರಾಜಕಾರಣದ ಕಾಂಗ್ರೆಸ್ ಪಕ್ಷದ ಮಾಸ್ಟರ್ ಮೈಂಡ್ ಟ್ರಬಲ್ ಶೂಟರ್ ಹಾಗೂ ನನ್ನ ರಾಜಕೀಯ ಗುರುಗಳು, ಹಾಲಿ ಉಪಮುಖ್ಯಮಂತ್ರಿಗಳು ಆದ *ಶ್ರೀಯುತ ಡಿಕೆ ಶಿವಕುಮಾರ್ ಅಣ್ಣನವರು* ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಶ್ರೀ ಶ್ರೀ ಶ್ರೀ ತಿರುಮಲ ತಿರುಪತಿ ವೆಂಕಟರಮಣಸ್ವಾಮಿಯಲ್ಲಿ ಹರಕೆ ಇಟ್ಟುಕೊಂಡಿದ್ದು,
ಅದರಂತೆ ಇಂದು ಭೇಟಿ ನೀಡಿ ಶ್ರೀವಾರಿ ಬೆಟ್ಟಕ್ಕೆ ಮೆಟ್ಟಿಲುಗುಗಳ ಮುಖಾಂತರ ಕಾಲ್ನಡಿಗೆ ಜಾತಾ ನಡೆಸಿ ಹೆಜ್ಜೆ ಹೆಜ್ಜೆಗೂ ಹರಕೆ ನೆರವೇರತ್ತಿರುವ ಹಿನ್ನಲೆ ಅಧಿಕಾರ ಸ್ವೀಕಾರಕ್ಕೆ ಯಾವುದೇ ವಿಘ್ನಗಳು ನಡೆಯದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತ ಸನ್ನಿಧಾನಕ್ಕೆ ಭೇಟಿ ನೀಡಿದೆವು.
ಅದೇ ರೀತಿ ಹರಕೆಯ ಪ್ರತಿಥಿಯಂತೆ ಕೇಶ ಮುಡಿ ಕೊಡುವ ಮೂಲಕ ಭಗವಂತನಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾಪ್ತಿ ಕೋರಿದೆ.
ವಿಶೇಷ ಪೂಜೆ ಸಲ್ಲಿಸಲು ಪಲ್ಲಕ್ಕಿ ಉತ್ಸವ ಕಂಕರ್ಯ ನಡೆಸಿ ನನ್ನ ಗುರುಗಳು ಆದ ಶ್ರೀಯುತ ಡಿಕೆ ಶಿವಕುಮಾರ್ ರವರು ತಮ್ಮ ಅಧಿಕಾರ ಅವಧಿಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಮಾಡೆಲ್ ರಾಜ್ಯವಾಗಿ ತಮ್ಮ ಕನಸಿನ ಗ್ರೇಟರ್ ಬೆಂಗಳೂರು ನಿರ್ಮಾಣದಂತೆ, ಗ್ರೇಟರ್ ಕರ್ನಾಟಕವಾಗಲಿ ತಮ್ಮ ರಾಜಕೀಯ ಹೆಜ್ಜೆಗೆ ಯಾವುದೇ ಕೇಡು ಆಗದಿರಲಿ ಎಂದು ಕೋರಿದೆವು.
ಅದೇ ರೀತಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೂ ಅತಿ ಹೆಚ್ಚಿನ ಅನುದಾನ ನೀಡಿ ನಮ್ಮ ಕ್ಷೇತ್ರವು ಉತ್ಯುನ್ನತ ಮಟ್ಟಕ್ಕೆ ತಲುಪಲು ನಿಮ್ಮ ಸಹಕಾರ ಇರಲಿ ಎಂದು ಕೋರಿದೆ.
ಜನ ಬೆಂಬಲ, ದೈವಬಲದೊಂದಿಗೆ ಮತ್ತಷ್ಟು ಉತ್ಯುನ್ನತ ಮಟ್ಟಕ್ಕೆ ನನ್ನ ಗುರುಗಳು ಬೆಳೆಯಿಲಿ ಎನ್ನುವುದು ನಮ್ಮ ಹಂಬಲ.
!!ಓಂ ವೆಂಕಟೇಶಾಯ ನಮಃ!!