31/08/2026
ರಾಜ್ಯದ ಜನರ ಕುಂದು-ಕೊರತೆಗಳಿಗೆ, ದೂರುಗಳಿಗೆ ಪ್ರತಿಸ್ಪಂದಿಸಿ, ತುರ್ತು ಪರಿಹಾರ ಒದಗಿಸಲು ಕಾಂಗ್ರೆಸ್ ಸರ್ಕಾರ ಪ್ರಜಾಸೇವಾ ಇಲಾಖೆಯಿಂದ ಸೆಪ್ಟೆಂಬರ್ 5 ರಿಂದ ʻಪ್ರಜಾಸೇವೆ ಅಭಿಯಾನʼ ಆರಂಭಿಸುತ್ತಿದೆ.
ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಪ್ರತಿ ಶನಿವಾರ ಜನರಿಂದ ಅಹವಾಲು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಿದ್ದು, 21 ದಿನದಲ್ಲಿ ಜನರ ದೂರುಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲು ಆದೇಶಿಸಿದೆ.
ಜನಪರ ಆಡಳಿತ, ತುರ್ತು ಪರಿಹಾರ ನಮ್ಮ ಗುರಿ