Raghupathi Bhat

Raghupathi Bhat Social Activist
BJP Worker

02/06/2026

ನನ್ನ ಆತ್ಮೀಯರಾದ ರಘು ಕೊಲಂಬೆ ಅವರ ಪುತ್ರಿ ಕು. ವೃದ್ಧಿ ಆರ್. ಬ್ರಹ್ಮಾವರ ಇವರು ಜೀ - ಕನ್ನಡದ ಸ.ರೆ.ಗ.ಮ.ಪ. (Zee Kannada Sa Re Ga Ma Pa) ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮವಾಗಿ ಹಾಡಿ ಮೆಚ್ಚುಗೆ ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.

ಅವರಿಗೆ ತಮ್ಮ ಅದ್ಭುತ ಗಾಯನ ಪ್ರತಿಭೆಗೆ ಇನ್ನಷ್ಟು ಉತ್ತಮ ಅವಕಾಶಗಳು ಲಭಿಸಲಿ. ಸಿಕ್ಕ ಅವಕಾಶಗಳಲ್ಲಿ ವಿಜಯಶಾಲಿಯಾಗಲಿ ಎಂದು ಹಾರೈಸುತ್ತೇನೆ.

ಕು. ವೃದ್ಧಿ ಅವರಿಗೆ ಹಾರ್ದಿಕ ಶುಭಾಶಯಗಳು. ನಿಮ್ಮ ಕನಸುಗಳು ನನಸಾಗಲಿ. ಯಶಸ್ಸು ಸದಾ ನಿಮ್ಮೊಂದಿಗಿರಲಿ.

ಎಲ್ಲರೂ ವೃದ್ಧಿ ಪೂಜಾರಿ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಪ್ರೋತ್ಸಾಹಿಸಬೇಕು ಎಂದು ವಿನಂತಿಸುತ್ತೇನೆ.

ಈ ಕೆಳಗೆ ಸೂಚಿಸಿರುವ link (ZEE5 App) ಮೂಲಕ ನಿಮ್ಮ ಅಮೂಲ್ಯ ಮತವನ್ನು ನೀಡಿ ನಮ್ಮ ಉಡುಪಿಯ ಪ್ರತಿಭೆಗೆ ಬೆಂಬಲ ನೀಡಿ ಎಂಬೂದು ನನ್ನ ಮನವಿಯಾಗಿದೆ.

https://zee5.onelink.me/RlQq/fkDownloadZEE5App

ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ಸ್ ಆಗಿರುವ ಆರ್‌ಸಿಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.ನಿಮ್ಮ ಅದ್ಭುತ ಪ್ರದರ್ಶನ, ಹೋರಾಟದ ಮನೋಭಾವ ಮತ್...
31/05/2026

ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ಸ್ ಆಗಿರುವ ಆರ್‌ಸಿಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

ನಿಮ್ಮ ಅದ್ಭುತ ಪ್ರದರ್ಶನ, ಹೋರಾಟದ ಮನೋಭಾವ ಮತ್ತು ತಂಡದ ಒಗ್ಗಟ್ಟು ಮತ್ತೊಮ್ಮೆ ವಿಜಯದ ಶಿಖರಕ್ಕೇರಿಸಿದೆ

ವಿಶ್ವ ತಂಬಾಕು ರಹಿತ ದಿನತಂಬಾಕು ಸೇವನೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕೆ ಹಾನಿಕರತಂಬಾಕು ತ್ಯಜಿಸಿ ಜೀವ ಉಳಿಸಿತಂಬಾಕು ಮುಕ್ತ ಆರೋಗ್ಯ...
31/05/2026

ವಿಶ್ವ ತಂಬಾಕು ರಹಿತ ದಿನ

ತಂಬಾಕು ಸೇವನೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕೆ ಹಾನಿಕರ
ತಂಬಾಕು ತ್ಯಜಿಸಿ ಜೀವ ಉಳಿಸಿ
ತಂಬಾಕು ಮುಕ್ತ ಆರೋಗ್ಯವಂತ ಭಾರತವನ್ನು ರೂಪಿಸುವಲ್ಲಿ ನಾವೆಲ್ಲ ಕೈಜೋಡಿಸೋಣ.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ನಿರ್ಮಿಸಿ ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಒತ್ತನ್ನು ನೀಡಿ  ಕ್ರೀಡೆಯ ವಿವಿಧ ವಿಭಾಗಗಳಲ್ಲಿ ಸಾವಿರಾರು ಮಂದ...
31/05/2026

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ನಿರ್ಮಿಸಿ ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಒತ್ತನ್ನು ನೀಡಿ ಕ್ರೀಡೆಯ ವಿವಿಧ ವಿಭಾಗಗಳಲ್ಲಿ ಸಾವಿರಾರು ಮಂದಿ ಪ್ರತಿಭಾನ್ವಿತರನ್ನು ಮುಖ್ಯ ಭೂಮಿಗೆ ತಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಲು ಪ್ರೋತ್ಸಾಹಿಸಿದ, ಮೂಡುಬಿದಿರೆಗೆ ಹಲವು ರೀತಿಯ ಹೊಸತನವನ್ನು ನೀಡಿದ ಯುವಮನಸ್ಸುಗಳ ಪ್ರೇರಣಾ ಶಕ್ತಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧಿಪತಿ ಡಾ.ಎಂ ಮೋಹನ್ ಆಳ್ವ ಅವರಿಗೆ 75ನೇ ಜನುಮ ದಿನದ ಶುಭಾಶಯಗಳು.

ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ದೇಶಕ್ಕಾಗಿ ೫೦ ವರ್ಷಗಳ ಕಠಿಣ ಕರಿನೀರಿನ ಶಿಕ್ಷೆ ಅನುಭವಿಸಿದ ವೀರ ಶ್ರೀ ವಿನಾಯಕ ದಾಮೋದರ ಸಾವರ್ಕರ...
28/05/2026

ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ದೇಶಕ್ಕಾಗಿ ೫೦ ವರ್ಷಗಳ ಕಠಿಣ ಕರಿನೀರಿನ ಶಿಕ್ಷೆ ಅನುಭವಿಸಿದ ವೀರ ಶ್ರೀ ವಿನಾಯಕ ದಾಮೋದರ ಸಾವರ್ಕರ್ ಅವರ ಜಯಂತಿಯಂದು ನನ್ನ ಅನಂತಕೋಟಿ ನಮನಗಳು.

26/05/2026

https://zee5.onelink.me/RlQq/fkDownloadZEE5App

ನನ್ನ ಆತ್ಮೀಯ ಸ್ನೇಹಿತರು ಹಾಗೂ ಪಂಚಾಯತ್ ಸದಸ್ಯರಾದ ರಘು ಕೊಲಂಬೆ ಅವರ ಪುತ್ರಿ ವೃದ್ಧಿ ಆರ್ ಬ್ರಹ್ಮಾವರ ಉಡುಪಿ ಅವರು Zee Kannada Sa Re Ga Ma Pa ಸ್ಪರ್ಧೆಯಲ್ಲಿ ಭಾಗವಹಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

ತಮ್ಮ ಅದ್ಭುತ ಗಾಯನ ಪ್ರತಿಭೆಯಿಂದ ಇನ್ನಷ್ಟು ಎತ್ತರಗಳಿಗೆ ಏರಿ, ಈ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಲಿ ಎಂದು ಹಾರೈಸುತ್ತೇನೆ.
ಉಡುಪಿಯ ಹೆಸರನ್ನು ರಾಜ್ಯಮಟ್ಟದಲ್ಲಿ ಮತ್ತಷ್ಟು ಮೆರೆದಿಡಲಿ.

ವೃದ್ಧಿ ಅವರಿಗೆ ಹಾರ್ದಿಕ ಶುಭಾಶಯಗಳು — ನಿಮ್ಮ ಕನಸುಗಳು ನನಸಾಗಲಿ, ಯಶಸ್ಸು ಸದಾ ನಿಮ್ಮೊಂದಿಗಿರಲಿ!

ಎಲ್ಲರೂ ವೃದ್ಧಿ ಪೂಜಾರಿ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಪ್ರೋತ್ಸಾಹಿಸಬೇಕು ಎಂದು ವಿನಂತಿಸುತ್ತೇನೆ.
ZEE5 App ಮೂಲಕ ನಿಮ್ಮ ಅಮೂಲ್ಯ ಮತವನ್ನು ನೀಡಿ ನಮ್ಮ ಉಡುಪಿಯ ಪ್ರತಿಭೆಗೆ ಬೆಂಬಲ ನೀಡಿರಿ.

ನನ್ನ ಗುರುಗಳಾದ ಕೀರ್ತಿಶೇಷ ಪದ್ಮವಿಭೂಷಣ ಪೇಜಾವರ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣಾರ್ಥ "ಶ್ರೀ ವಿಶ್ವೇಶ್ವ ತೀರ್ಥ ಸ್ಮೃತಿವನ" ಇಂದು...
25/05/2026

ನನ್ನ ಗುರುಗಳಾದ ಕೀರ್ತಿಶೇಷ ಪದ್ಮವಿಭೂಷಣ ಪೇಜಾವರ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣಾರ್ಥ "ಶ್ರೀ ವಿಶ್ವೇಶ್ವ ತೀರ್ಥ ಸ್ಮೃತಿವನ" ಇಂದು ಉದ್ಘಾಟನೆಗೊಂಡಿದೆ. ಅಲ್ಲಿಗೆ ಭೇಟಿ ನೀಡಿ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆಶೀರ್ವಾದ ಬೇಡಿಕೊಂಡೆ.

ಮೊದಲಾಗಿ ನಾನು ಈ ಯೋಜನೆಯನ್ನು 2021-22ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿ ರೂ 2.00 ಕೋಟಿ ಅನುದಾನ ಮಂಜೂರು ಮಾಡಿದ ಅಂದಿನ ಮುಖ್ಯಮಂತ್ರಿಯವರಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೃದಯ ಅಂತರಾಳದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ
ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನಾಡಿನ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರಾಗಿದ್ದರು. ಉಡುಪಿ ಶ್ರೀಕೃಷ್ಣ ಮಠದ ಇತಿಹಾಸದಲ್ಲಿ ಐದು ಬಾರಿ 'ಪರ್ಯಾಯ' ಪೀಠವನ್ನೇರಿದ ಏಕೈಕ ಅಪರೂಪದ ಯತಿಗಳಾದ ಇವರು ಸಮಾಜ ಸುಧಾರಣೆ ಮತ್ತು ಹಿಂದುತ್ವದ ಪ್ರಮುಖ ಚಿಂತಕರಾಗಿದ್ದರು. ಇವರ ಸಾಮಾಜಿಕ ಮತ್ತು ಧಾರ್ಮಿಕ ಕೊಡುಗೆಗಳು, ಪರಿಸರ ಕಾಳಜಿ ಹಾಗೂ ನೆನಪುಗಳನ್ನು ಮೆಲುಕು ಹಾಕಲು ಮತ್ತು ದೈವಿಕ ಸೇವೆಗಳನ್ನು ಚಿರಸ್ಥಾಯಿಯಾಗಿಸಲು ಮತ್ತು ಮುಂದಿನ ಪೀಳಿಗೆಗೆ ತಿಳಿಸಲು ಒಂದು ಸುಂದರ ಯೋಜನೆಯ ಅವಶ್ಯಕತೆ ಉಡುಪಿಯಲ್ಲಿ ಮಾಡಬೇಕಿತ್ತು. ಈ ಸಂಬಂಧ ಅಂದು ಮುಖ್ಯಮಂತ್ರಿಯಾಗಿದ್ದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ವಿಷಯ ಪ್ರಸ್ತಾಪಿಸಿ ಮನವಿಯನ್ನು ಮಾಡಿದ್ದೆ. ಅದರಂತೆ 2021-22ನೇ ಸಾಲಿನ ಆಯವ್ಯಯದಲ್ಲಿ ಉಡುಪಿಯಲ್ಲಿ ಪೇಜಾವರ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಗೌರವಾರ್ಥ ಸ್ಮೃತಿವನ ನಿರ್ಮಿಸಲು ರೂ. 2.00 ಕೋಟಿ ಘೋಷಿಸಿದರು.

ಈಗಿನ ಪೇಜಾವರ ಶ್ರೀಪಾದರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ "ಶ್ರೀ ವಿಶ್ವೇಶ್ವ ತೀರ್ಥ ಸ್ಮೃತಿವನ" ವನ್ನು ನೀಲಾವರ ಗೋ ಶಾಲೆಯ ಮುಂಭಾಗದಲ್ಲಿ ನಿರ್ಮಿಸಲು ಜಾಗ ಗುರುತಿಸಿ ಆಗಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಅರಣ್ಯ ಸಚಿವರಾಗಿದ್ದ ದಿll ಉಮೇಶ ಕತ್ತಿಯವರೊಂದಿಗೆ ಸಭೆ ನಡೆಸಿ ಚರ್ಚಿಸಿ ಅರಣ್ಯ ಇಲಾಖೆಯ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು.

ಕೀರ್ತಿಶೇಷ ಪದ್ಮವಿಭೂಷಣ ಪೇಜಾವರ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಕನಸಿನ ಯೋಜನೆಯಾದ ನೀಲಾವರ ಗೋಶಾಲೆಯನ್ನು ನೋಡಲು ಬರುವವರಿಗೆ ಅದರ ಪಕ್ಕದಲ್ಲಿ ಈ "ಶ್ರೀ ವಿಶ್ವೇಶ್ವ ತೀರ್ಥ ಸ್ಮೃತಿವನ"ಕ್ಕೂ ಭೇಟಿ ನೀಡಬಹುದು. ಇದರಿಂದಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡಬಹುದಾಗಿದೆ.

ಈ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಿದ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅಂದಿನ ಅರಣ್ಯ ಸಚಿವರಾದ ದಿll ಉಮೇಶ್ ಕತ್ತಿ ಅವರಿಗೆ ಹಾಗೂ ನಂತರದ ದಿನಗಳಲ್ಲಿ ಆ ಯೋಜನೆಯನ್ನು ಪೂರ್ಣಗೊಳಿಸಿದ ಪ್ರಸ್ತುತ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಹಾಗೂ ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಯೋಜನೆಯ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ನಿರ್ಮಿತಿ ಕೇಂದ್ರದವರಿಗೆ ನಾನು ವಂದನೆಗಳನ್ನು ಸಲ್ಲಿಸುತ್ತೇನೆ.

ಕಾರವಾರ ಜಿಲ್ಲೆಯಲ್ಲಿ ಸಂಭವಿಸಿದ ದುರ್ಘಟನೆಯ ಸುದ್ದಿ ತಿಳಿದು ತುಂಬಾ ಮನನೊಂದಿದ್ದೇನೆ. ಈ ದುರ್ಘಟನೆಯಲ್ಲಿ ತಮ್ಮ ಪ್ರಿಯವರನ್ನು ಕಳೆದುಕೊಂಡ ಕುಟು...
25/05/2026

ಕಾರವಾರ ಜಿಲ್ಲೆಯಲ್ಲಿ ಸಂಭವಿಸಿದ ದುರ್ಘಟನೆಯ ಸುದ್ದಿ ತಿಳಿದು ತುಂಬಾ ಮನನೊಂದಿದ್ದೇನೆ. ಈ ದುರ್ಘಟನೆಯಲ್ಲಿ ತಮ್ಮ ಪ್ರಿಯವರನ್ನು ಕಳೆದುಕೊಂಡ ಕುಟುಂಬಗಳ ನೋವು ಅಪಾರವಾಗಿದೆ. ಅಗಲಿದ ಆತ್ಮಗಳಿಗೆ ಭಗವಂತ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.

ಗಾಯಗೊಂಡಿರುವ ಎಲ್ಲರೂ ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂಬುದು ನನ್ನ ಹೃತ್ಪೂರ್ವಕ ಆಶಯ.

ಓಂ ಶಾಂತಿ 🙏🏻

ಗೆಳೆಯರ ಬಳಗ ಕನ್ನಾರು, ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್ ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ ಮಣಿಪಾಲ ದಂತ ಚಿಕಿತ್ಸಾ ವಿಭಾಗ, ಕೆ.ಎಂ.ಸಿ ಮಣ...
24/05/2026

ಗೆಳೆಯರ ಬಳಗ ಕನ್ನಾರು,
ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್ ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ ಮಣಿಪಾಲ ದಂತ ಚಿಕಿತ್ಸಾ ವಿಭಾಗ, ಕೆ.ಎಂ.ಸಿ ಮಣಿಪಾಲ ಪ್ರಸಾದ್‌ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್‌ ಉಡುಪಿ ಜಿಲ್ಲಾ ಆಸ್ಪತ್ರೆ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಪೇತ್ರಿ ಗ್ರಾಮ ವಿಕಾಸ ಸಮಿತಿ ಚೇರ್ಕಾಡಿ ಇವರ ಸಹಯೋಗದಲ್ಲಿ ದಿನಾಂಕ 24.05.2026 ರಂದು ಆರ್‌.ಕೆ. ಪಾಟ್ಕರ್ ಶಾಲೆ ಮುಂಡ್ಕಿನಜಡ್ಡು ಇಲ್ಲಿ "ಉಚಿತ ನೇತ್ರ ಮತ್ತು ದಂತ ತಪಾಸಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರ" ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರಾದ ಶ್ರೀ.ಕೆ ರಘುಪತಿ ಭಟ್ ರವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Address

Udupi
576102

Alerts

Be the first to know and let us send you an email when Raghupathi Bhat posts news and promotions. Your email address will not be used for any other purpose, and you can unsubscribe at any time.

Contact The Organization

Send a message to Raghupathi Bhat:

Share