22/08/2021
" *ಕುಡಚಿ ಮತಕ್ಷೇತದಲ್ಲಿ ಯುವಕರು ಬಿಜೆಪಿ ತೊರೆದು ಯುವ ಕಾಂಗ್ರೆಸ್ ಸೇರ್ಪಡೆ"*
ಪಾಲಬಾವಿ: ರಾಯಬಾಗ ತಾಲೂಕಿನ ಕುಡಚಿ ಮತ ಕ್ಷೇತ್ರದ ಪಾಲಬಾವಿ ಗ್ರಾಮದಲ್ಲಿ ನೂರಾರೂ ಯುವಕರು ಬಿಜೆಪಿ ತೋರೆದು ಯುವ ಕಾಂಗ್ರೆಸ್ ಸೇರ್ಪಡೆಯಾದರು.
ಚಿಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಯಲ್ಲಪ್ಪ ಶಿಂಗೆ ಅವರ ನೇತೃತ್ವದಲ್ಲಿ ಕುಡಚಿ ಮತಕ್ಷೇತ್ರದ ಪಾಲಬಾವಿ ಗ್ರಾಮದ ಯುವಕರು ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು,
ಇದೆ ಸಂದರ್ಭದಲ್ಲಿ ಯಲ್ಲಪ್ಪ ಶಿಂಗೆ ಅವರು ಮಾತನಾಡಿ ದೇಶದಲ್ಲಿ ಯುವಕರ ಜೀವನ ಹಾಳಾಗಿ ಹೋಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲ. ದೇಶದ ಪ್ರಧಾನಿಗಳು ವರ್ಷಕ್ಕೆ ಎರಡು ಕೋಟಿ ಉದ್ಯಗ ಕೊಡುತ್ತೆನೆ ಎಂದು ಹೆಳಿದ್ದರು. ಆದರೆ ಅಧಿಕಾರ ಹಿಡಿದು ಇವತ್ತಿಗೆ ಎಳು ವರ್ಷಚಾಯಿತು. ಅಂದರೆ ಈವತ್ತಿಗೆ ಸರಿಸುಮಾರು ಹದಿನಾಲ್ಕು ಕೋಟಿ ಉದ್ಯೋಗ ಕೊಡಬೇಕಾಗಿತ್ತು, ಆದರೆ ಇವತ್ತು ದೇಶದ ಸುಮಾರು ಹನ್ನೆರಡು ಕೋಟಿ ಯುವಕರು ಕೆಲಸಗಳನ್ನು ಕಳೆದುಕೊಂಡಿದ್ದಾರೆ.
ಬಿ.ಇ, ಎಮ್.ಟೆಕ್ ಅಂತಹ ಉನ್ನತ ಶಿಕ್ಷಣ ಪಡೆದು ಗಾರೆ ಕೆಲಸ, ಪಕೊಡಾ ಮಾರೊ ಪರಿಸಿಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್, ಡಿಸೇಲ್, ದಿನಸಿ ಹಾಗೂ ಅಡುಗೆ ಏಣ್ಣೆ ಬೆಲೆ ಜಾಸ್ತಿಯಾಗಿದೆ. ಹಿಗಾಗಿ ಯುವಕರಿಗೆ ಬಿಜೆಪಿ ಬಗ್ಗೆ ಬೆಸರವಾಗಿದೆ.
ಇದಲ್ಲದೆ ಕುಡಚಿ ಮತಕ್ಷೇತ್ರದ ಶಾಸಕರ ಬಾಷಣಕ್ಕೆ ಮೊರೆಹೋಗಿ ಕ್ಷೇತ್ರದ ಯುವಕರೆಲ್ಲ ಬಿಜೆಪಿ ಗೆ ಮತಹಾಕಿದರು, ಈ ಕ್ಷೇತ್ರದ ಯುವಕರಿಗೆ ಹತ್ತು ಸಾವಿರ ಉದ್ಯೋಗ ಕೊಡುತ್ತೆನೆಂದು ಹೇಳಿ ನಂಬಿಸಿ ಮೊಸಮಾಡಿದ್ದಾರೆ. ಹೀಗಾಗಿ ಕ್ಷೇತ್ರದ ಯುವಕರು ಬಿಜೆಪಿ ತೊರೆದು ಈವತ್ತು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರೆಲ್ಲರಿಗು ನಾನು ಶುಭಕೊರುತ್ತೆನೆಂದು ಮಾತನಾಡಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ವಕ್ತಾರರಾದ ರಾಹುಲ ಮಾಚನಕನೂರ, ಕುಡಚಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಿರಣ ಪಾಟೀಲ, ಊರಿನ ಹಿರಿಯರಾದ ಗಿರಪ್ಪಾ ಬಳಿಗಾರ, ಪಾರುಕ್ ಕಾಗವಾಡೆ, ಇಲಾಯಿ ಕಾಗಾವಾಡೆ, ಮಾನಿಂಗ ತೆಗೂರ, ಮಹಾನಂತೇಶ ತೇಗೂರ, ಮುಸ್ತಕ ಮುಲ್ಲಾ, ಸರದಾರ ಕಾಗವಾಡೆ, ವಿವೇಕ್ ಬಳಿಗಾರ, ಹೊನ್ನಪ್ಪ ಲಗಳಿ ಹಾಗೂ ಮುಂತಾದ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.