Vijay Metgud

Vijay Metgud Politician

20/08/2026
ರಾಷ್ಟ್ರ ಗೌರವದ ಸಂಕೇತವಾಗಿರುವ ನಮ್ಮ ತ್ರಿವರ್ಣ ಧ್ವಜವು ಪ್ರತಿಯೊಬ್ಬ ಭಾರತೀಯನಲ್ಲೂ **ಐಕ್ಯತೆ, ಹೆಮ್ಮೆ, ದೇಶಾಭಿಮಾನ ಮತ್ತು ದೇಶಭಕ್ತಿಯ ಮನೋಭಾ...
13/08/2026

ರಾಷ್ಟ್ರ ಗೌರವದ ಸಂಕೇತವಾಗಿರುವ ನಮ್ಮ ತ್ರಿವರ್ಣ ಧ್ವಜವು ಪ್ರತಿಯೊಬ್ಬ ಭಾರತೀಯನಲ್ಲೂ **ಐಕ್ಯತೆ, ಹೆಮ್ಮೆ, ದೇಶಾಭಿಮಾನ ಮತ್ತು ದೇಶಭಕ್ತಿಯ ಮನೋಭಾವವನ್ನು** ಮೂಡಿಸುತ್ತದೆ.

ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬೈಲಹೊಂಗಲ ಮಂಡಲದ ವತಿಯಿಂದ ಆಯೋಜಿಸಲಾಗಿದ್ದ **‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಭವ್ಯ ತಿರಂಗಾ ಯಾತ್ರೆ** ನಡೆಯಿತು.

ನಗರದ ವೀರರಾಣಿ ಕಿತ್ತೂರು ಚೆನ್ನಮ್ಮನ ಐಕ್ಯ ಸ್ಥಳದಿಂದ ಪ್ರಾರಂಭವಾದ ತಿರಂಗಾ ಯಾತ್ರೆಯು ಹಳೆ ಹನುಮಂತ ದೇವರ ದೇವಸ್ಥಾನ, ಇಂಚಲ್ ಕ್ರಾಸ್ ಹಾಗೂ ಬಸ್ ನಿಲ್ದಾಣದ ಮೂಲಕ ಸಾಗಿ **ಸಂಗೊಳ್ಳಿ ರಾಯಣ್ಣ ಸರ್ಕಲ್‌ವರೆಗೆ** ನಡೆಯಿತು.

ರಾಷ್ಟ್ರ ಗೌರವದ ಸಂಕೇತವಾಗಿರುವ ಈ ಭವ್ಯ ತಿರಂಗಾ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇಶಭಕ್ತ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿಯ ಮೆರೆದರು.

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆಬೈಲಹೊಂಗಲ ಮತಕ್ಷೇತ್ರದ ಕಾರಿಮನಿ ಗ್ರಾಮದಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆ ಹಾಗೂ ಕೆಎಲ...
11/08/2026

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ

ಬೈಲಹೊಂಗಲ ಮತಕ್ಷೇತ್ರದ ಕಾರಿಮನಿ ಗ್ರಾಮದಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆ ಹಾಗೂ ಕೆಎಲ್‌ಇ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ತೆನಿಕೊಳ್ಳ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ (NSS) ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಲಾಯಿತು.

ಯುವಜನರಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಹಾಗೂ ಗ್ರಾಮೀಣ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಗ್ರಾಮಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುರಗೋಡ ಮಹಾಂತ ದುರದುಂಡೇಶ್ವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ನೀಲಕಂಠ ಸ್ವಾಮೀಜಿಗಳು ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಿ.ಡಿ. ಬಿರಾದಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಮಂಜುಳಾ ಪಾಟೀಲ, ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದ ಹಿರಿಯ ವಿಜ್ಞಾನಿ ಡಾ. ಮಂಜುನಾಥ್ ಚವರಡಿ, ವ್ಯವಸ್ಥಾಪಕರಾದ ಶಂಕರಗೌಡ ಪಾಟೀಲ ಸೇರಿದಂತೆ ವೀರಭದ್ರಪ್ಪ ದೇಸಾಯಿ, ಅಶೋಕ ಶೆಟ್ಟರ, ಶಿವನಗೌಡ ಪಾಟೀಲ, ವಿರೂಪಾಕ್ಷ ಪೂಜೇರಿ, ಶಿವಾನಂದ ಪೂಜೇರಿ, ವಿರೂಪಾಕ್ಷ ಗುಡದೂರ ಹಾಗೂ ಶ್ರೀಕಾಂತ ಪೂಜೇರಿ ಉಪಸ್ಥಿತರಿದ್ದರು.
ಕೆಎಲ್‌ಇ ಕೃಷಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಕಾರಿಮನಿ ಗ್ರಾಮದ ಸಮಸ್ತ ಗುರು-ಹಿರಿಯರು, ತಾಯಂದಿರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

#ರಾಷ್ಟ್ರೀಯಸೇವಾಯೋಜನೆ #ವಾರ್ಷಿಕವಿಶೇಷಶಿಬಿರ #ಕಾರಿಮನಿ #ಯುವಶಕ್ತಿ #ಸಾಮಾಜಿಕಸೇವೆ

ಒಬ್ಬ ಉತ್ತಮ ಗುರು ಕೇವಲ ಒಬ್ಬ ವಿದ್ಯಾರ್ಥಿಯನ್ನಲ್ಲ, ಇಡೀ ಸಮಾಜದ ಭವಿಷ್ಯವನ್ನು ರೂಪಿಸುತ್ತಾರೆ. ಜ್ಞಾನ, ಮೌಲ್ಯಗಳು ಮತ್ತು ಉತ್ತಮ ಸಂಸ್ಕಾರಗಳ ಮ...
29/07/2026

ಒಬ್ಬ ಉತ್ತಮ ಗುರು ಕೇವಲ ಒಬ್ಬ ವಿದ್ಯಾರ್ಥಿಯನ್ನಲ್ಲ, ಇಡೀ ಸಮಾಜದ ಭವಿಷ್ಯವನ್ನು ರೂಪಿಸುತ್ತಾರೆ. ಜ್ಞಾನ, ಮೌಲ್ಯಗಳು ಮತ್ತು ಉತ್ತಮ ಸಂಸ್ಕಾರಗಳ ಮೂಲಕ ಸಮಾಜವನ್ನು ಸದೃಢಗೊಳಿಸುವ ಮಹತ್ತರ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಗುರು ವೃಂದಕ್ಕೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

ನೂತನ ಕೇಂದ್ರ ಶಿಕ್ಷಣ ಸಚಿವರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿರುವ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ Pralhad Joshi  ಜೀ ಅವರಿಗ...
26/07/2026

ನೂತನ ಕೇಂದ್ರ ಶಿಕ್ಷಣ ಸಚಿವರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿರುವ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ Pralhad Joshi ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.💐

ನಿಮ್ಮ ಸುದೀರ್ಘ ಅನುಭವ ಹಾಗೂ ದಕ್ಷ ಆಡಳಿತ ವೈಖರಿಯಿಂದ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಹಾಗೂ ಪ್ರಗತಿ ಸಾಧ್ಯವಾಗಲಿ ಎಂದು ಹಾರೈಸುತ್ತೇನೆ.

"ಸ್ವರಾಜ್ಯವೇ ನನ್ನ ಜನ್ಮ ಸಿದ್ದ ಹಕ್ಕು ಅದನ್ನು ನಾನೇ ಪಡೆದೇ ತೀರುತ್ತೇನೆ"  ........ಲೋಕಮಾನ್ಯ ತಿಲಕ.ದುಷ್ಮನೋಂಕೆ ಗೋಲಿಯೋಂಕಾ ಹಮ್ ಸಾಮ್ನಾ ಕ...
23/07/2026

"ಸ್ವರಾಜ್ಯವೇ ನನ್ನ ಜನ್ಮ ಸಿದ್ದ ಹಕ್ಕು ಅದನ್ನು ನಾನೇ ಪಡೆದೇ ತೀರುತ್ತೇನೆ" ........ಲೋಕಮಾನ್ಯ ತಿಲಕ.

ದುಷ್ಮನೋಂಕೆ ಗೋಲಿಯೋಂಕಾ ಹಮ್ ಸಾಮ್ನಾ ಕರೇಂಗೆ ಆಜಾದ್ ಥೆ ಆಜಾದ್ ಹೈ ಔರ ಆಜಾದ್ ಹೀ ರಹೇಂಗೆ! .....
ಚಂದ್ರಶೇಖರ್ ಆಜಾದ

ಇಂದು ಇಬ್ಬರು ಮಹಾನ ಕ್ರಾಂತಿಕಾರಿಗಳು ಜನಿಸಿದ ದಿನ.....
ಮಹಾನ ಕ್ರಾಂತಿಕಾರಿಗಳಿಗೆ ಕೋಟಿ ನಮನಗಳು.....

🇮🇳 ಭಾರತ್ ಮಾತಾ ಕೀ ಜೈ 🇮🇳

Address

Bail Hongal
591102

Alerts

Be the first to know and let us send you an email when Vijay Metgud posts news and promotions. Your email address will not be used for any other purpose, and you can unsubscribe at any time.

Shortcuts

Share

Category