Yathiish Chandrappa For Corporator Dr Rajkumar Ward No 106

Yathiish Chandrappa For  Corporator Dr Rajkumar Ward No 106 BPAC CIVIC LEADER, VICE PRESIDENT GOVINDARAJUNAGAR BLOCK CONGRESS COMMITTEE, GEN SEC SWASTIK SKATERS

ರವರಿಗೆ,  *ಶ್ರೀ ರಣದೀಪ್ ಸಿಂಗ್ ಸುರ್ಜೇವಾಲಾ ರವರು* ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಸ್ತುವಾರಿಗಳು ಭಾರತೀಯ ರಾಷ್ಟ್ರೀಯ ಕಾಂಗ...
03/06/2026

ರವರಿಗೆ,
*ಶ್ರೀ ರಣದೀಪ್ ಸಿಂಗ್ ಸುರ್ಜೇವಾಲಾ ರವರು*
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಸ್ತುವಾರಿಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ನವದೆಹಲಿ.

ಗೌರವಾನ್ವಿತರೇ,

*ವಿಷಯ: ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಮಾಜಿ ಸಚಿವರು* , *ವಿಜಯನಗರ ಶಾಸಕ ಶ್ರೀ ಎಂ. ಕೃಷ್ಣಪ್ಪರವರಗೆ ಹಾಗೂ ಗೋವಿಂದರಾಜನಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಾಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ* .

ರಾಷ್ಟ್ರ ಮಟ್ಟದಲ್ಲಿ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುತ್ತಿರುವ ತಮಗೆ ನಮ್ಮ ಹೃತ್ಪೂರ್ವಕ ವಂದನೆಗಳು.

ಈ ಪತ್ರದ ಮೂಲಕ *ಕರ್ನಾಟಕ ಕಾಂಗ್ರೆಸ್‌ನ ನಿಷ್ಠಾವಂತ ನಾಯಕರು, ಕಾರ್ಯಕರ್ತರು, ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಅಭಿಮಾನಿಗಳ ಪರವಾಗಿ* ಅತ್ಯಂತ ಪ್ರಮುಖವಾದ ವಿಷಯವೊಂದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇವೆ. ಕಳೆದ ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಬೆಂಗಳೂರು ನಗರದಲ್ಲಿ *ಕಾಂಗ್ರೆಸ್ ಪಕ್ಷದ ಅಸ್ತಿತ್ವ ಮತ್ತು ಪಕ್ಷದ ಗೆಲುವಿನಲ್ಲಿ* ಪ್ರಮುಖ ಪಾತ್ರ ವಹಿಸಿರುವ *ಶ್ರೀಯುತ ಎಂ.ಕೃಷ್ಣಪ್ಪ ರವರಿಗೆ ಹಾಗೂ ಶ್ರೀ ಪ್ರಿಯಕೃಷ್ಣ ಅವರಿಗೆ ನೂತನ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕಿರುವುದು* ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಅತ್ಯಂತ ಅನಿವಾರ್ಯವಾಗಿದೆ. ಈ ಇಬ್ಬರು ನಾಯಕರ ಪರವಾಗಿ ಹೈಕಮಾಂಡ್ ಪರಿಗಣಿಸಬೇಕಾದ ಪ್ರಮುಖ ಅಂಶಗಳು ಕೆಳಗಿನಂತಿವೆ:

ಬೆಂಗಳೂರಿನ ರಾಜಕೀಯ ಶಕ್ತಿ: *ಎಂ. ಕೃಷ್ಣಪ್ಪ (ಲೇಔಟ್ ಕೃಷ್ಣಪ್ಪ) ಅವರು* ವಿಜಯನಗರ ಕ್ಷೇತ್ರದಲ್ಲಿ ಸತತವಾಗಿ 4 ಬಾರಿ ಗೆದ್ದು ಬಂದಿರುವದರ ಜೊತೆಗೆ, ಬೆಂಗಳೂರು ನಗರ ಭಾಗದಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಮಾಜಿ ವಸತಿ ಸಚಿವರಾಗಿ ಅವರ ಆಡಳಿತಾತ್ಮಕ ಅನುಭವ ಅತ್ಯಂತ ಅಪಾರವಾದದ್ದು ಮತ್ತು ಯುವ ಸಮುದಾಯದ ಯುವಕರ ಮತ್ತು *ವಿದ್ಯಾರ್ಥಿಗಳ ಕಣ್ಮಣಿ, ಯೂತ್ ಐಕಾನ್ ಪ್ರಿಯಕೃಷ್ಣ* : ಗೋವಿಂದರಾಜನಗರ ಕ್ಷೇತ್ರದ ಶಾಸಕ ಶ್ರೀ ಪ್ರಿಯಕೃಷ್ಣ ಅವರು ರಾಜ್ಯದ ಯುವ ಜನತೆಯ ಆಶಾಕಿರಣವಾಗಿದ್ದಾರೆ. ಯುವ ಸಮುದಾಯ, *ವಿದ್ಯಾರ್ಥಿಗಳು, ಮಹಿಳೆಯರು ಮತ್ತು ತಳಮಟ್ಟದ ಕಾರ್ಮಿಕರನ್ನು* ಪಕ್ಷದ ಕಡೆಗೆ ಸೆಳೆಯುವಲ್ಲಿ ಇವರ ಜನಪ್ರಿಯತೆ ಪಕ್ಷಕ್ಕೆ ದೊಡ್ಡ ಆಸ್ತಿಯಾಗಿದೆ.

ಸಾಮಾಜಿಕ ಸಮತೋಲನ ಮತ್ತು ಸಂಘಟನೆ: ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಪಕ್ಷದ ಸಂಘಟನೆಯನ್ನು ಜೀವಂತವಾಗಿಡಲು ಮತ್ತು ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಗರ ಪಾಲಿಕೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪಕ್ಷಕ್ಕೆ ಪೂರ್ಣ ಬಹುಮತ ತರಲು ಇಂತಹ *ಪ್ರಭಾವಿ ನಾಯಕರಿಗೆ ಸಚಿವ ಸ್ಥಾನ ನೀಡುವುದು* ಅಗತ್ಯವಾಗಿದೆ. ಇವರ ಒಟ್ಟಾರೆ ರಾಜಕೀಯ ಹಿನ್ನೆಲೆ ಮತ್ತು ದಕ್ಷತೆ ಪಕ್ಷಕ್ಕೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಕರ್ನಾಟಕ ಭಾಗದಲ್ಲಿ ದೊಡ್ಡ ಬಲ ನೀಡಲಿದೆ. ಒಬ್ಬ ನಿಷ್ಠಾವಂತ ಹಿರಿಯ ನಾಯಕರು ಮತ್ತು ಒಬ್ಬ ಕ್ರಿಯಾಶೀಲ ಯುವ ನಾಯಕರ ಈ ಅಪರೂಪದ ಸಂಯೋಜನೆಯು ಕರ್ನಾಟಕ ಸರ್ಕಾರದ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಆದ್ದರಿಂದ, ಲಕ್ಷಾಂತರ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಿ, *ನಮ್ಮ ನಾಯಕರುಗಳಾದ ಶ್ರೀ ಎಂ. ಕೃಷ್ಣಪ್ಪ ಹಾಗೂ ಶ್ರೀ ಪ್ರಿಯಕೃಷ್ಣ* ಅವರಿಗೆ ಮುಂಬರುವ *ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ಕಲ್ಪಿಸಿಕೊಡಬೇಕಾಗಿ* ಕೇಳಿಕೊಳ್ಳುತ್ತಿದ್ದೇನೆ.

ನಿನ್ನೆ ಸಂಜೆಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಅದಗೆಟ್ಟಿದ್ದ  ರಸ್ತೆಗಳ ದುರಸ್ತಿ ಕಾರ್ಯ.ಡಾ ರಾಜಕುಮಾರ್ ವಾರ್ಡ್,14 C ಕ್ರಾಸ್, ಕೆಂಪಯ್ಯ ಎಕ್...
30/04/2026

ನಿನ್ನೆ ಸಂಜೆಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಅದಗೆಟ್ಟಿದ್ದ ರಸ್ತೆಗಳ ದುರಸ್ತಿ ಕಾರ್ಯ.

ಡಾ ರಾಜಕುಮಾರ್ ವಾರ್ಡ್,14 C ಕ್ರಾಸ್, ಕೆಂಪಯ್ಯ ಎಕ್ಸ್ಟೆಂಶನ್ ಅಗ್ರಹಾರ ದಾಸರಹಳ್ಳಿ

ಶಾಸಕರ ಕಚೇರಿಗೆ ಬಂದ ದೂರಿನ ಅನ್ವಯ ವಾರ್ಡ್ ಅಧ್ಯಕ್ಷರಾದ ಪುರುಷೋತ್ತಮ್ ಮತ್ತು ನಾಯಕರ ಜೊತೆಗೂಡಿ ಸ್ವಚ್ಛತಾ ಕಾರ್ಯ.

ಸ್ವಸ್ತಿಕ್ ಯತೀಶ್
ಡಾ ರಾಜಕುಮಾರ್ ವಾರ್ಡ್

ನಮ್ಮ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಕೃಷ್ಣರವರ ಹುಟ್ಟುಹಬ್ಬದಂದು ಅವರಿಗೆ ನಾವು, ರಾ ನರಸಿಂಹ ಮೂರ್ತಿರವರು ...
28/04/2026

ನಮ್ಮ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಕೃಷ್ಣರವರ ಹುಟ್ಟುಹಬ್ಬದಂದು ಅವರಿಗೆ ನಾವು, ರಾ ನರಸಿಂಹ ಮೂರ್ತಿರವರು ಹಾಗೂ ಪುಟ್ಟರಾಜರವರು ಶಾಸಕರಿಗೆ ಶುಭ ಹಾರೈಸಿದ ಸಂದರ್ಭದ.

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಡವರ ಬಂಧು ಶ್ರೀ ಪ್ರಿಯಕೃಷ್ಣರವರು ಗೋವಿಂದರಾಜನಗರ ಕ್ಷೇತ್ರದಲ್ಲಿ ಜಯದೇವ ಹೃದ್ರೋಗ ವಿ...
25/04/2026

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಡವರ ಬಂಧು ಶ್ರೀ ಪ್ರಿಯಕೃಷ್ಣರವರು ಗೋವಿಂದರಾಜನಗರ ಕ್ಷೇತ್ರದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 100 ಹಾಸಿಗೆಗಳ ಘಟಕವನ್ನು ಸ್ಥಾಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜೊತೆ ಇಂದು ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಹಿರಿಯರ ಹೃದಯ ಆರೈಕೆಗಾಗಿ ಗೋವಿಂದರಾಜನಗರದಲ್ಲಿ ಆರೋಗ್ಯ ಸೇವೆಯನ್ನು ನೀಡಲು ಆಡಳಿತ ವಿಕೇಂದ್ರೀಕರಣ ಮಾಡುವ ಮುಖಾಂತರ ಎಲ್ಲರಿಗೂ ಹೃದಯ ಆರೋಗ್ಯ ಸೇವೆ ದೊರಕಲಿ ಎಂಬ ಮಹತ್ವದ ಹೆಜ್ಜೆ ಇರಿಸಲಾಗಿದೆ.

ಬೆಂಗಳೂರು ನಗರದ ರಾಜಾಜಿನಗರ, ಯಶವಂತಪುರ, ರಾಜರಾಜೇಶ್ವರಿನಗರ ಸೇರಿದಂತೆ ದಾಸರಹಳ್ಳಿ, ಪೀಣ್ಯ ಹಾಗೂ ಬೆಂಗಳೂರು ಗ್ರಾಮಾಂತರ ನಿವಾಸಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ರಾಮನಗರ,‌ ಮಂಡ್ಯ, ತುಮಕೂರು ಮತ್ತು ಹಾಸನ ಜಿಲ್ಲೆಗಳಿಂದ ಬರುವ ರೋಗಿಗಳಿಗೂ ಸಹಾಯವಾಗಲಿದೆ.

ಸಚಿವರಾದ ಶರಣಪ್ರಕಾಶ ಪಾಟೀಲ್, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಬಿ. ದಿನೇಶ್ ಮತ್ತು ಜಿಬಿಎ ಮುಖ್ಯ ಆಯುಕ್ತ ಎನ್. ಮಹೇಶ್ವರ ರಾವ್, ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್, ಪಶ್ಚಿಮ ಮಹಾನಗರ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ನಮ್ಮ ನೆಚ್ಚಿನ ನಾಯಕರು , ಕರ್ನಾಟಕ ಸರ್ಕಾರದ ಮಾಜಿ ವಸತಿ ಸಚಿವರು, ವಿಜಯನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ  ಎಂ. ಕೃಷ...
16/04/2026

ನಮ್ಮ ನೆಚ್ಚಿನ ನಾಯಕರು , ಕರ್ನಾಟಕ ಸರ್ಕಾರದ ಮಾಜಿ ವಸತಿ ಸಚಿವರು, ವಿಜಯನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎಂ. ಕೃಷ್ಣಪ್ಪ ಅಪ್ಪಾಜಿ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

Govindaraj Nagar Incident | Pradeep Krishnappa | ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ ನಲ್ಲಿ ದಿನಾಂಕ 06-04-202...
09/04/2026

Govindaraj Nagar Incident | Pradeep Krishnappa | ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ ನಲ್ಲಿ ದಿನಾಂಕ 06-04-2026 ರಂದು ಮಹಡಿ ಮೇಲಿಂದ 1.5 ವರ್ಷದ ಮಗು ಬಿದ್ದು, ರಂಗಾದೊರೈ ಆಸ್ಪತ್ರೆಯ ಐ ಸಿ ಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶಾಸಕರಾದ ಶ್ರೀ ಪ್ರಿಯಕೃಷ್ಣ ರವರ ಪರವಾಗಿ ವಿಜಯನಗರ ವಿಧಾನಸಭಾ ಕ್ಷೇತ್ರದ ಯುವ ನಾಯಕರು ಶ್ರೀ ಪ್ರದೀಪ್ ಕೃಷ್ಣಪ್ಪ ರವರು ಆಸ್ಪತ್ರೆಗೆ ಭೇಟಿ ನೀಡಿ ಮಗು ಶೀಘ್ರ ಗುಣಮುಖವಾಗಲಿ ಎಂದು ಪೋಷಕರಿಗೆ ಧೈರ್ಯ ತುಂಬಿ 2 ಲಕ್ಷ ರೂಪಾಯಿಗಳ ಸಹಾಯಾರ್ಥವಾಗಿ ಚಿಕಿತ್ಸೆ ವೆಚ್ಚಕ್ಕೆ ನೀಡಿದರು.| Speed News Kannada

27/3/2026 ರ ಸಂಜೆ 4:30 ಗಂಟೆಗೆ ಡಾ. ರಾಜಕುಮಾರ್ ವಾರ್ಡಿನ ಬಿ ಎಲ್ ಓ ಮತ್ತು ಬಿ ಎಲ್ ಎ ಗಳ ಸಭೆಯನ್ನು ಬಿಬಿಎಂಪಿ   ಕಂದಾಯ ನಿರೀಕ್ಷಕ (Revenu...
28/03/2026

27/3/2026 ರ ಸಂಜೆ 4:30 ಗಂಟೆಗೆ ಡಾ. ರಾಜಕುಮಾರ್ ವಾರ್ಡಿನ ಬಿ ಎಲ್ ಓ ಮತ್ತು ಬಿ ಎಲ್ ಎ ಗಳ ಸಭೆಯನ್ನು ಬಿಬಿಎಂಪಿ ಕಂದಾಯ ನಿರೀಕ್ಷಕ (Revenue Inspector - RI) ಅಧಿಕಾರಿಯಾದ ರವಿರಾಜ್ ರವರು ಬಿಬಿಎಂಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಬಿ ಎಲ್ ಓ ಗಳ ಜೊತೆ ಮಾತನಾಡಿದ ಸಂದರ್ಭ🙏💞

ಅಗ್ರಹಾರ ದಾಸರಹಳ್ಳಿಯ ಶ್ರೀ ಭಕ್ತ ಆಂಜನೇಯ ಸ್ವಾಮಿ ಮತ್ತು ಗ್ರಾಮ ದೇವತೆ ಶ್ರೀ ಪಟಾಲಮ್ಮ ದೇವಿಯ ಮತ್ತು ನಮ್ಮ ನೆಚ್ಚಿನ ನಾಯಕರಾದ ವಿಜಯನಗರ ವಿಧಾನ...
31/01/2026

ಅಗ್ರಹಾರ ದಾಸರಹಳ್ಳಿಯ ಶ್ರೀ ಭಕ್ತ ಆಂಜನೇಯ ಸ್ವಾಮಿ ಮತ್ತು ಗ್ರಾಮ ದೇವತೆ ಶ್ರೀ ಪಟಾಲಮ್ಮ ದೇವಿಯ ಮತ್ತು ನಮ್ಮ ನೆಚ್ಚಿನ ನಾಯಕರಾದ ವಿಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಜನಪ್ರಿಯ ಶಾಸಕರಾದ ಶ್ರೀ ಎಂ ಕೃಷ್ಣಪ್ಪನವರು ಹಾಗೂ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಕೃಷ್ಣರವರ ಆಶೀರ್ವಾದದೊಂದಿಗೆ, ವಾರ್ಡಿನ ಸಮಸ್ತ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಹಾಗೂ ವಾರ್ಡಿನ ನಾಗರಿಕರ ಆಶೀರ್ವಾದ ಮತ್ತು ಬೆಂಬಲದಿಂದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ, ಪಶ್ಚಿಮ ನಗರ ಪಾಲಿಕೆಯ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಡಾಕ್ಟರ್ ರಾಜಕುಮಾರ್ ವಾರ್ಡ್, ವಾರ್ಡ್ ಸಂಖ್ಯೆ 70ರ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಲಾಯಿತು.

ಇಂದು ಬೆಳಗ್ಗೆ ನಮ್ಮ ನೆಚ್ಚಿನ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಕೃಷ್ಣರವರನ್ನು ಭೇಟಿ ಮಾಡಿದ ಸಂದರ್ಭ💕
16/01/2026

ಇಂದು ಬೆಳಗ್ಗೆ ನಮ್ಮ ನೆಚ್ಚಿನ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಕೃಷ್ಣರವರನ್ನು ಭೇಟಿ ಮಾಡಿದ ಸಂದರ್ಭ💕

14/01/2026

*ಎಲ್ಲ ನನ್ನ ಪ್ರೀತಿಯ ಬಂಧುಗಳಲ್ಲಿ ಮನವಿ* *ಮಾಜಿ ಸಚಿವರು ವಿಜಯನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ* *ಶಾಸಕರಾದ ಶ್ರೀ ಎಂ* *ಕೃಷ್ಣಪ್ಪನವರು ಹಾಗೂ ಬಡವರ ಬಂಧು* *ಯುವಕರ ಕಣ್ಮಣಿ* *ಗೋವಿಂದರಾಜ ನಗರ ವಿಧಾನಸಭಾ* *ಕ್ಷೇತ್ರದ ಶಾಸಕರಾದ ಶ್ರೀ* *ಪ್ರಿಯಾಕೃಷ್ಣರವರ ಆಶೀರ್ವಾದದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶ್ಚಿಮ ಜಿಲ್ಲೆಯ ಡಾ. ರಾಜಕುಮಾರ್* *ವಾರ್ಡ್ ವಾರ್ಡ್ ಸಂಖ್ಯೆ 70 ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾಗಿರುತ್ತೇನೆ ವಾರ್ಡಿನ ಎಲ್ಲಾ ಜನತೆ ಹಾಗೂ ನಮ್ಮ ಕ್ಷೇತ್ರದ ಹಾಗೂ ವಾರ್ಡಿನ ಎಲ್ಲ ವಿಭಾಗದ ಅಧ್ಯಕ್ಷರುಗಳು ಪದಾಧಿಕಾರಿಗಳು* *ಕಾರ್ಯಕರ್ತರು ಎಲ್ಲ ನಮ್ಮ ಆತ್ಮೀಯ ಸ್ನೇಹಿತರುಗಳು ಈ ನನ್ನ ಒಂದು ಪ್ರಯತ್ನಕ್ಕೆ ಕೈ ಜೋಡಿಸಬೇಕಾಗಿ ಆತ್ಮೀಯ ಮನವಿ*🙏🩷.

*ಡಾ ll ಡಿ ಸಿ ಯತೀಶ್ (BA)* *ನಾಡಪ್ರಭು ಕೆಂಪೇಗೌಡ ಪ್ರಶಸ್ತಿ *ಪುರಸ್ಕೃತರು ಗೋವಿಂದರಾಜನಗರ* *ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು ಸಂಸ್ಥಾಪಕರು ಸ್ವಸ್ತಿಕ್* *ಚಾರ್ಟಬಲ್ ಟ್ರಸ್ಟ್* *ಡಾಕ್ಟರ್ ರಾಜಕುಮಾರ್ ವಾರ್ಡ್ *ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ*🙏

Address

#29/1, 5th Main Road, AGRAHARA Dasarahalli
Bangalore
560079

Website

Alerts

Be the first to know and let us send you an email when Yathiish Chandrappa For Corporator Dr Rajkumar Ward No 106 posts news and promotions. Your email address will not be used for any other purpose, and you can unsubscribe at any time.

Contact The Organization

Send a message to Yathiish Chandrappa For Corporator Dr Rajkumar Ward No 106:

Shortcuts

Share