03/06/2026
ರವರಿಗೆ,
*ಶ್ರೀ ರಣದೀಪ್ ಸಿಂಗ್ ಸುರ್ಜೇವಾಲಾ ರವರು*
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಸ್ತುವಾರಿಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ನವದೆಹಲಿ.
ಗೌರವಾನ್ವಿತರೇ,
*ವಿಷಯ: ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಮಾಜಿ ಸಚಿವರು* , *ವಿಜಯನಗರ ಶಾಸಕ ಶ್ರೀ ಎಂ. ಕೃಷ್ಣಪ್ಪರವರಗೆ ಹಾಗೂ ಗೋವಿಂದರಾಜನಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಾಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ* .
ರಾಷ್ಟ್ರ ಮಟ್ಟದಲ್ಲಿ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುತ್ತಿರುವ ತಮಗೆ ನಮ್ಮ ಹೃತ್ಪೂರ್ವಕ ವಂದನೆಗಳು.
ಈ ಪತ್ರದ ಮೂಲಕ *ಕರ್ನಾಟಕ ಕಾಂಗ್ರೆಸ್ನ ನಿಷ್ಠಾವಂತ ನಾಯಕರು, ಕಾರ್ಯಕರ್ತರು, ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಅಭಿಮಾನಿಗಳ ಪರವಾಗಿ* ಅತ್ಯಂತ ಪ್ರಮುಖವಾದ ವಿಷಯವೊಂದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇವೆ. ಕಳೆದ ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಬೆಂಗಳೂರು ನಗರದಲ್ಲಿ *ಕಾಂಗ್ರೆಸ್ ಪಕ್ಷದ ಅಸ್ತಿತ್ವ ಮತ್ತು ಪಕ್ಷದ ಗೆಲುವಿನಲ್ಲಿ* ಪ್ರಮುಖ ಪಾತ್ರ ವಹಿಸಿರುವ *ಶ್ರೀಯುತ ಎಂ.ಕೃಷ್ಣಪ್ಪ ರವರಿಗೆ ಹಾಗೂ ಶ್ರೀ ಪ್ರಿಯಕೃಷ್ಣ ಅವರಿಗೆ ನೂತನ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕಿರುವುದು* ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಅತ್ಯಂತ ಅನಿವಾರ್ಯವಾಗಿದೆ. ಈ ಇಬ್ಬರು ನಾಯಕರ ಪರವಾಗಿ ಹೈಕಮಾಂಡ್ ಪರಿಗಣಿಸಬೇಕಾದ ಪ್ರಮುಖ ಅಂಶಗಳು ಕೆಳಗಿನಂತಿವೆ:
ಬೆಂಗಳೂರಿನ ರಾಜಕೀಯ ಶಕ್ತಿ: *ಎಂ. ಕೃಷ್ಣಪ್ಪ (ಲೇಔಟ್ ಕೃಷ್ಣಪ್ಪ) ಅವರು* ವಿಜಯನಗರ ಕ್ಷೇತ್ರದಲ್ಲಿ ಸತತವಾಗಿ 4 ಬಾರಿ ಗೆದ್ದು ಬಂದಿರುವದರ ಜೊತೆಗೆ, ಬೆಂಗಳೂರು ನಗರ ಭಾಗದಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಮಾಜಿ ವಸತಿ ಸಚಿವರಾಗಿ ಅವರ ಆಡಳಿತಾತ್ಮಕ ಅನುಭವ ಅತ್ಯಂತ ಅಪಾರವಾದದ್ದು ಮತ್ತು ಯುವ ಸಮುದಾಯದ ಯುವಕರ ಮತ್ತು *ವಿದ್ಯಾರ್ಥಿಗಳ ಕಣ್ಮಣಿ, ಯೂತ್ ಐಕಾನ್ ಪ್ರಿಯಕೃಷ್ಣ* : ಗೋವಿಂದರಾಜನಗರ ಕ್ಷೇತ್ರದ ಶಾಸಕ ಶ್ರೀ ಪ್ರಿಯಕೃಷ್ಣ ಅವರು ರಾಜ್ಯದ ಯುವ ಜನತೆಯ ಆಶಾಕಿರಣವಾಗಿದ್ದಾರೆ. ಯುವ ಸಮುದಾಯ, *ವಿದ್ಯಾರ್ಥಿಗಳು, ಮಹಿಳೆಯರು ಮತ್ತು ತಳಮಟ್ಟದ ಕಾರ್ಮಿಕರನ್ನು* ಪಕ್ಷದ ಕಡೆಗೆ ಸೆಳೆಯುವಲ್ಲಿ ಇವರ ಜನಪ್ರಿಯತೆ ಪಕ್ಷಕ್ಕೆ ದೊಡ್ಡ ಆಸ್ತಿಯಾಗಿದೆ.
ಸಾಮಾಜಿಕ ಸಮತೋಲನ ಮತ್ತು ಸಂಘಟನೆ: ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಪಕ್ಷದ ಸಂಘಟನೆಯನ್ನು ಜೀವಂತವಾಗಿಡಲು ಮತ್ತು ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಗರ ಪಾಲಿಕೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪಕ್ಷಕ್ಕೆ ಪೂರ್ಣ ಬಹುಮತ ತರಲು ಇಂತಹ *ಪ್ರಭಾವಿ ನಾಯಕರಿಗೆ ಸಚಿವ ಸ್ಥಾನ ನೀಡುವುದು* ಅಗತ್ಯವಾಗಿದೆ. ಇವರ ಒಟ್ಟಾರೆ ರಾಜಕೀಯ ಹಿನ್ನೆಲೆ ಮತ್ತು ದಕ್ಷತೆ ಪಕ್ಷಕ್ಕೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಕರ್ನಾಟಕ ಭಾಗದಲ್ಲಿ ದೊಡ್ಡ ಬಲ ನೀಡಲಿದೆ. ಒಬ್ಬ ನಿಷ್ಠಾವಂತ ಹಿರಿಯ ನಾಯಕರು ಮತ್ತು ಒಬ್ಬ ಕ್ರಿಯಾಶೀಲ ಯುವ ನಾಯಕರ ಈ ಅಪರೂಪದ ಸಂಯೋಜನೆಯು ಕರ್ನಾಟಕ ಸರ್ಕಾರದ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಆದ್ದರಿಂದ, ಲಕ್ಷಾಂತರ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಿ, *ನಮ್ಮ ನಾಯಕರುಗಳಾದ ಶ್ರೀ ಎಂ. ಕೃಷ್ಣಪ್ಪ ಹಾಗೂ ಶ್ರೀ ಪ್ರಿಯಕೃಷ್ಣ* ಅವರಿಗೆ ಮುಂಬರುವ *ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ಕಲ್ಪಿಸಿಕೊಡಬೇಕಾಗಿ* ಕೇಳಿಕೊಳ್ಳುತ್ತಿದ್ದೇನೆ.