04/04/2026
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ, ಇಂದು, ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ಆಯೋಜಿಸಿದ ಚುನಾವಣಾ ಪಾದಯಾತ್ರೆಯು ಹೊಸ ಮುನ್ನುಡಿಯನ್ನು ಬರೆದಿದೆ. "ಹಿಂದುಳಿದ ವರ್ಗದವರ ನಡೆ – ಬಿಜೆಪಿಯ ಕಡೆ" (OBC With BJP) ಎಂಬ ಘೋಷದೊಂದಿಗೆ ನಡೆದ ಈ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಜನರು ಮತ್ತು ಅಭಿಮಾನಿಗಳು ಪಕ್ಷದ ಮೇಲಿನ ನಂಬಿಕೆ ಮತ್ತು ಬೆಂಬಲವನ್ನು ಸ್ಪಷ್ಟವಾಗಿ ತೋರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ರವರ ಮಾರ್ಗದರ್ಶನದಲ್ಲಿ ಹಾಗೂ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್ ರಘು ಕೌಟಿಲ್ಯ ರವರ ಮುಂದಾಳುತ್ವದಲ್ಲಿ, ಕಾರ್ಯಕರ್ತರು ಮತ್ತು ಮುಖಂಡರ ಸಕ್ರಿಯ ಭಾಗವಹಿಸುವಿಕೆಯಿಂದ ಪಾದಯಾತ್ರೆಯು ಯಶಸ್ವಿಯಾಯಿತು. ಈ ಪಾದಯಾತ್ರೆಯು ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಹಿಂದುಳಿದ ವರ್ಗದವರ ಸಬಲೀಕರಣದ ಸಂಕೇತವಾಗಿದೆ. ಸಮಾಜದ ಪ್ರತಿಯೊಂದು ವರ್ಗದವರನ್ನು ಒಂದೇ ವೇದಿಕೆಯಲ್ಲಿ ತರಲು ಬಿಜೆಪಿ ಕೈಗೊಂಡ ಈ ಪ್ರಯತ್ನವು ಹೊಸ ಇತಿಹಾಸವನ್ನು ನಿರ್ಮಿಸಿದೆ... ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಜೊತೆ ಕೈಜೋಡಿಸೋಣ, ಹಿಂದುಳಿದ ವರ್ಗದ ಧ್ವನಿ ಬಿಜೆಪಿಯ ಧ್ಯೇಯ, ಬಿಜೆಪಿ ಜೊತೆ ಕೈಜೋಡಿಸಿ ಅಭಿವೃದ್ಧಿಯ ದಾರಿಯಲ್ಲಿ ಸಾಗೋಣ.
Vijayendra Yediyurappa