06/05/2023
ಮಾನ್ಯರೇ
ದಿನಾಂಕ 6.05.2023 ರಂದು ಚುನಾವಣಾ ರಾಲಿ ಹಮ್ಮಿಕೊಳ್ಳಲಾಗಿದೆ ದಯಮಾಡಿ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಂಧುಗಳು ಹಾಗೂ ಎಲ್ಲಾ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಹಿರಿಯ ಮುಖಂಡರುಗಳು ಸಾರ್ವಜನಿಕರು ವಾಲೆಂಟೆರಿಯಾಗಿ(ಸ್ವ ಇಚ್ಛೆಯಿಂದ) ಈ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಯಶವಂತಪುರ ಕ್ಷೇತ್ರದ ಎಂಎಲ್ಎ ಅಭ್ಯರ್ಥಿ ಆದ ನನ್ನನ್ನು ಬಹುಮತಗಳಿಂದ ಗೆಲ್ಲಲು ಸಹಕಾರ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ,
ಸಮಯ,"ಬೆಳಗ್ಗೆ 10 ಗಂಟೆಯಿಂದ
ಸ್ಥಳ: R.T.O. ಆಫೀಸ್ ಮುಂಬಾಗ ಕಾಂಗ್ರೆಸ್ ಕಚೇರಿಯಿಂದ ಉಲ್ಲಾಳ ಇಲ್ಲಿಂದ, ಅಮ್ಮ ಆಶ್ರಮ, ಭುವನೇಶ್ವರಿ ನಗರ, ರಿಂಗ್ ರಸ್ತೆ ಮೂಲಕ ಶಿರ್ಕೆ, ಹೊಯ್ಸಳ ಸರ್ಕಲ್ ನಂತರ ಉಪನಗರ 6ನೇ ಮುಖ್ಯರಸ್ತೆ ಮೂಲಕ ಮೈಸೂರು ರಸ್ತೆ ನಂತರ ಅಂಚೆಪಾಳ್ಯ, ಕುಂಬಳಗೋಡು, ತಗಚುಗುಪ್ಪೆ, ದೇವಗೆರೆ, ಗಂಗಸಂದ್ರ, ಆಗ್ರಾ, ತಾತುಗುಣಿ, ಕನಕಪುರ ರಸ್ತೆ, ಕಗ್ಗಲಿಪುರ ಪಂಚಾಯಿತಿ, ತರಳು ಪಂಚಾಯಿತಿ, ಸೋಮನಹಳ್ಳಿ ಪಂಚಾಯಿತಿ, ನೆಲಗುಳಿ ಪಂಚಾಯಿತಿ, ನಂತರ ತಲಘಟ್ಟಪುರ, ಹೊಸಹಳ್ಳಿ ಭಯ್ಯನ ಪಾಳ್ಯ, 80 ಅಡಿ ರಸ್ತೆ ಮೂಲಕ ಚಿಕ್ಕೇಗೌಡನ್ ಪಾಳ್ಯ ನಂತರ ಸಮಯ ನೋಡಿ ಮುಂದಿನ ರ್ಯಾಲಿಯನ್ನು ತೀರ್ಮಾನಿಸಲಾಗುವುದು.
ಸೂಚನೆ, ಈ ರ್ಯಾಲಿ ಹೊರಡುವ ಮಾರ್ಗ ಮಧ್ಯದಲ್ಲಿ ಆ ಭಾಗದ ವಾರ್ಡ್ ಮುಖಂಡರುಗಳು, ಪಂಚಾಯಿತಿ ಮುಖಂಡರುಗಳು ಸಭೆಗಳನ್ನು ಸ್ವಯಿಚ್ಛೆಯಿಂದ ಏರ್ಪಡಿಸಿಕೊಂಡು ತಿಳಿಸಿದರೆ ಅಲ್ಲಿ ರ್ಯಾಲಿಯನ್ನು ನಿಲ್ಲಿಸಿ ಜನಗಳನ್ನು ಉದ್ದೇಶಿಸಿ ಮಾತನಾಡಲಾಗುವುದು
ಧನ್ಯವಾದಗಳೊಂದಿಗೆ,,
ಇಂತಿ ತಮ್ಮ ವಿಶ್ವಾಸಿ
ಎಸ್. ಬಾಲರಾಜ್ ಗೌಡ
ಯಶವಂತಪುರ ವಿಧಾನಸಭಾ ಕ್ಷೇತ್ರದ ಎಂಎಲ್ಎ ಅಭ್ಯರ್ಥಿ.