06/03/2019
ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ
ಬೆಂಗಳೂರು;
ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಯಾರೇ ಅಡ್ಡಪಡಿಸಿದರು, ಯೋಜನೆ ಅರ್ಧಕ್ಕೆ ನಿಲ್ಲಿಸದೇ ಸರಕಾರದೊಂದಿಗೆ ಚರ್ಚಿಸಿ ಮುನ್ನಡೆಯಿರಿ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬೇಗೂರು ವಾರ್ಡ್ ವ್ಯಾಪ್ತಿಯ ಉತ್ತರಹಳ್ಳಿ, ವಸಂತಪುರ, ಯಲಚೇನಹಳ್ಳಿ, ತಿಪ್ಪಸಂದ್ರ, ಗೊಟ್ಟಿಗೆರೆಯಲ್ಲಿ ಕುಡೊಯುವ ನೀರು ಹಾಗೂ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಉತ್ತರಹಳ್ಳಿ ಭಾಗದಲ್ಲಿ 24 ದಶಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಗಾರ ನಿರ್ಮಾಣವಾಗಿ ಎರಡು ವರತಷ ಪೂರೈಸಿದ್ದರೂ ಉದ್ಘಾಟನೆ ಮಾತ್ರ ನೆರವೇರಿಲ್ಲ. ಕುಡಿಯಿವ ನೀರಿನ ಯೋಜನೆ ಟರ್ಥಕ್ಕೆ ಸ್ಥಗಿತಗೊಂಡರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಅಷ್ಟೆ ಅಲ್ಲದೆ ಈ ಯೋಜನೆ ಅನುಷ್ಠಾನಕ್ಕೆ ಸಾಲ ಪಡಯಲಾಗಿದೆ. ಎರಡು ವರ್ಷದಿಂದ ಅನುಷ್ಠಾನ ಆಗದೇ ಇರುವುದರಿಂದ ಆ ಸಾಲದ ಬಡ್ಡಿ ಕೂಡ ಹೆಚ್ಚಾಗುತ್ತದೆ. ಈ ಎಲ್ಲದರ ಹೊರೆ ಸರಕಾರದ ಮೇಲೆಯೇ ಬೀಳುತ್ತದೆ. ಹೀಗಾಗಿ ಇಂಥ ಯೋಜನೆ ತಡೆಯೊಡ್ಡುವವರನ್ನು ನಿರ್ಲಕ್ಷಿಸಿ ಎಂದರು.
ಉತ್ತರಹಳ್ಳಿ ಭಾಗದ 17 ಹಳ್ಳಿಗಳಿಗೆ ನೀರು ಪೂರೈಕೆ ಆಗಲಿದೆ. ಇದಕ್ಕಾಗಿ 15 ಸಾವಿರ ಕೆನೆಕ್ಷನ್ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಇಲ್ಲಿನ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕಾವೇರಿ ೫ನೇ ಹಂತಕ್ಕೆ ತಲುಪುದ್ದೇನೆ.ಇದು ಕೊನೆಯ ಹಂತ. ಹೀಗಾಗಿ ಎತ್ತಿನ ಹೊಳೆ, ಹೇಮಾವತಿ ಹಾಗೂ ಇತರೆ ಮಾರ್ಗಗಳಿಂದ ನೀರು ತರುವ ಯೋಜನೆ ಹಾಕಿಕೊಳ್ಳಲಾಗಿದೆ. ಜನರು ಸಹ ಸರಕಾರದೊಂದಿಗೆ ಸಹಕಾರ ನೀಡಬೇಕು. ನೀರು ಪೋಲಾಗುವುದನ್ನು ನಿಲ್ಲಸಬೇಕು. ಮೊದಲು ಶೇ.೪೯ ರಷ್ಟು ನೀರು ಪೋಲಾಗುತ್ತಿತ್ತು. ಈ ಪ್ರಮಾಣ ಶೇ. ೩೭ ಕ್ಕೆ ಇಳಿದಿದೆ. ಈ ಪ್ರಮಾಣ ಇನ್ನಷ್ಟು ಕಡಿಮೆಯಾಗಬೇಕು. ಕೆಲವರು ಕುಡಿಯುವ ನೀರನ್ನೇ ಇತರೆ ಕೆಲಗಳಿಗೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಲೇ ನೀರಿನ ಪೋಲು ಹೆಚ್ಚಾಗಿದೆ. ಹೀಗಾಗಿ ಇತರೆ ಬಳಕೆಗೆ ಶುದ್ದೀಕರಿಸಿದ ನೀರನ್ನು ಮತ್ತೊಂದು ಪೈಪ್ ಮೂಲಕ ಸರಬರಾಜು ಮಾಡಲು ತೀರ್ಮಾನಿಸಿರುವುದಾಗಿ ಹೇಳಿದರು.