BJP Bengaluru Central

BJP Bengaluru Central Official Page of BJP Bangalore Central

Our Hon'ble MP of Bengaluru Central LokSabha Shri PC Mohan chaired the meeting of the Parliamentary Standing Committee o...
05/08/2026

Our Hon'ble MP of Bengaluru Central LokSabha Shri PC Mohan chaired the meeting of the Parliamentary Standing Committee on Social Justice & Empowerment in New Delhi.

ಒಂದು ಕಾಲದಲ್ಲಿ ಕಾಶ್ಮೀರದಲ್ಲಿ ಕಲ್ಲುತೂರಾಟವೇ ದಿನನಿತ್ಯದ ಸುದ್ದಿಯಾಗಿದ್ದು ನೆನಪಿರಬಹುದು. ಆದರೆ, 2024ರಲ್ಲಿ ಕಲ್ಲುತೂರಾಟದ ಒಂದೂ ಘಟನೆ ದಾಖಲ...
05/08/2026

ಒಂದು ಕಾಲದಲ್ಲಿ ಕಾಶ್ಮೀರದಲ್ಲಿ ಕಲ್ಲುತೂರಾಟವೇ ದಿನನಿತ್ಯದ ಸುದ್ದಿಯಾಗಿದ್ದು ನೆನಪಿರಬಹುದು. ಆದರೆ, 2024ರಲ್ಲಿ ಕಲ್ಲುತೂರಾಟದ ಒಂದೂ ಘಟನೆ ದಾಖಲಾಗಿಲ್ಲ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ 370 ಕಲಂ ಅನ್ನು ರದ್ದುಗೊಳಿಸಿದ ಮೇಲೆ ಕಾಶ್ಮೀರದಲ್ಲಿ ಶಾಂತಿ ಮನೆ ಮಾಡಿದೆ.

2019 ರ ಆಗಸ್ಟ್ 5 ರ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ.370 ನೇ ವಿಧಿಯ ನಿರ್ಮೂಲನೆಯಿಂದ ಜಮ್ಮು ಮತ್ತು ಕಾಶ್ಮೀರದಲ್...
05/08/2026

2019 ರ ಆಗಸ್ಟ್ 5 ರ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ.

370 ನೇ ವಿಧಿಯ ನಿರ್ಮೂಲನೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ದ್ವಿ-ಸಾಂವಿಧಾನಿಕ ಚೌಕಟ್ಟುಗಳ ಯುಗ ಅಂತ್ಯವಾಯಿತು. ಆಗಸ್ಟ್ 5, 2019 ರ ನಂತರ, ಜಮ್ಮು ಮತ್ತು ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತೀಯ ಸಂವಿಧಾನದ ಚೌಕಟ್ಟಿನೊಳಗೆ ತರಲಾಯಿತು.

ಒಂದು ಕಾಲದಲ್ಲಿ ಭಾರತದ ಅತ್ಯಂತ ವಿವಾದಾತ್ಮಕ ಸಾಂವಿಧಾನಿಕ ನಿಬಂಧನೆಯೊಂದು ಕೊನೆಗೊಂಡಿತು. 370 ನೇ ವಿಧಿ ಈಗ ಇತಿಹಾಸದ ಪುಟ ಸೇರಿದ್ದು, ಜಮ್ಮು- ಕಾಶ್ಮೀರವು ಅಭಿವೃದ್ಧಿ, ಶಾಂತಿ ಮತ್ತು ಜಾಗತಿಕ ಮನ್ನಣೆಯತ್ತ ದಾಪುಗಾಲಿಡುತ್ತಿದೆ.

05/08/2026

ಸಂಕಷ್ಟದಲ್ಲಿರುವ ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸುತ್ತಿದೆ ಬಿಜೆಪಿ !

ಬರಗಾಲದ ಈ ವಿಷಮ ಪರಿಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷ್ಯದಿಂದ ಭರವಸೆ ಕಳೆದುಕೊಂಡಿರುವ ತುಮಕೂರು ಜಿಲ್ಲೆಯ ರೈತರನ್ನು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಭೇಟಿ ಮಾಡಿ ಸಂಕಷ್ಟ ಆಲಿಸಿ, ಧೈರ್ಯ ತುಂಬಿದರು.


#ರೈತವಿರೋಧಿಕಾಂಗ್ರೆಸ್

ನಮ್ಮ ಜಿಲ್ಲಾ ಕಚೇರಿಯಾದ 'ಭವೂರಾವ್ ದೇಶಪಾಂಡೆ ಭವನ'ದಲ್ಲಿ, ಜಿಲ್ಲೆಯ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ...
04/08/2026

ನಮ್ಮ ಜಿಲ್ಲಾ ಕಚೇರಿಯಾದ 'ಭವೂರಾವ್ ದೇಶಪಾಂಡೆ ಭವನ'ದಲ್ಲಿ, ಜಿಲ್ಲೆಯ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಮಹಾನಗರದ ಸಹ-ಉಸ್ತುವಾರಿ ಶ್ರೀ ಚಂದ್ರಶೇಖರ ರಾಜು, ನಮ್ಮ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಂದ್ರ ಮೋದಿ, ಶ್ರೀ ರಾಘವೇಂದ್ರ ರಾವ್ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.

ನಮ್ಮ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ ಅವರ ನೇತೃತ್ವದಲ್ಲಿ, ಜಿಲ್ಲಾ ಕಚೇರಿಯಾದ 'ಭಾವೂರಾವ್ ದೇಶಪಾಂಡೆ ಭವನ'ದಲ್ಲಿ ಜಿಲ್ಲಾ ಮಟ್ಟದ ಮಾಸ...
04/08/2026

ನಮ್ಮ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ ಅವರ ನೇತೃತ್ವದಲ್ಲಿ, ಜಿಲ್ಲಾ ಕಚೇರಿಯಾದ 'ಭಾವೂರಾವ್ ದೇಶಪಾಂಡೆ ಭವನ'ದಲ್ಲಿ ಜಿಲ್ಲಾ ಮಟ್ಟದ ಮಾಸಿಕ ಸಭೆಯು ನಡೆಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಮಹಾನಗರದ ಸಹ-ಉಸ್ತುವಾರಿ ಶ್ರೀ ಚಂದ್ರಶೇಖರ ರಾಜು,ನಮ್ಮ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಂದ್ರ ಮೋದಿ, ಶ್ರೀ ರಾಘವೇಂದ್ರ ರಾವ್ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳ ಸಮುದಾಯದ ಶಾಸಕರಿಗೆ ಕಾಂಗ್ರೆಸ್‌ ಮತ್ತೆ ಅನ್ಯಾಯ!ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಹಿಂದುಳಿದ ವರ್ಗಕ್ಕೆ ಸೇರಿದ್ದ ಮಂಕಾಳ ವೈದ್...
04/08/2026

ಹಿಂದುಳಿದ ವರ್ಗಗಳ ಸಮುದಾಯದ ಶಾಸಕರಿಗೆ ಕಾಂಗ್ರೆಸ್‌ ಮತ್ತೆ ಅನ್ಯಾಯ!

ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಹಿಂದುಳಿದ ವರ್ಗಕ್ಕೆ ಸೇರಿದ್ದ ಮಂಕಾಳ ವೈದ್ಯ ಹಾಗೂ ಹಾಲುಮತ ಸಮುದಾಯದ ಶ್ರೀಮತಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟಿರುವುದು ಸಮುದಾಯಗಳಿಗೆ ಮಾಡಿದ ಅಪಮಾನವಲ್ಲವೇ?

ಇದೇನಾ ಕಾಂಗ್ರೆಸ್‌ನ ಸಾಮಾಜಿಕ ನ್ಯಾಯ?

ಕುರ್ಚಿ ಕಿತ್ತಾಟದಲ್ಲೇ ಮೂರು ವರ್ಷ ವ್ಯರ್ಥವಾಯಿತು! ಖಾತೆ ಕಸರತ್ತು, ಬಣ ಬಡಿದಾಟ ಹಾಗೂ ಹೈಕಮಾಂಡ್ ಅಂಗಳಕ್ಕೆ ಅಲೆದಾಡುವುದರಲ್ಲೇ ಕಾಲ ಕಳೆಯುತ್ತಿ...
04/08/2026

ಕುರ್ಚಿ ಕಿತ್ತಾಟದಲ್ಲೇ ಮೂರು ವರ್ಷ ವ್ಯರ್ಥವಾಯಿತು!

ಖಾತೆ ಕಸರತ್ತು, ಬಣ ಬಡಿದಾಟ ಹಾಗೂ ಹೈಕಮಾಂಡ್ ಅಂಗಳಕ್ಕೆ ಅಲೆದಾಡುವುದರಲ್ಲೇ ಕಾಲ ಕಳೆಯುತ್ತಿರುವ Indian National Congress - Karnataka ಸರ್ಕಾರದಿಂದ ರಾಜ್ಯದ ಜನರಿಗೆ ಸಿಕ್ಕಿದ್ದು ದುರಾಡಳಿತ ಮಾತ್ರ.


ರಾಜ್ಯದ 111 ತಾಲ್ಲೂಕುಗಳಲ್ಲಿ ಬರಗಾಲದ ಪರಿಣಾಮ ರೈತರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅತ್ತ ರೈತರು ನೀರಿಲ್ಲದೆ, ಬಿತ್ತನೆ ಮಾಡೋಕೆ ಸಾಧ್ಯ...
04/08/2026

ರಾಜ್ಯದ 111 ತಾಲ್ಲೂಕುಗಳಲ್ಲಿ ಬರಗಾಲದ ಪರಿಣಾಮ ರೈತರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅತ್ತ ರೈತರು ನೀರಿಲ್ಲದೆ, ಬಿತ್ತನೆ ಮಾಡೋಕೆ ಸಾಧ್ಯವಾಗದೆ ಕಣ್ಣೀರಿಡುತ್ತಿದ್ದರೆ, ಇತ್ತ Indian National Congress - Karnataka ಸರ್ಕಾರದ ನಾಯಕರು ಕುರ್ಚಿ ಕಚ್ಛಾಟದಲ್ಲಿಯೇ ಮುಳುಗಿದ್ದಾರೆ.

ದೆಹಲಿಗೆ ಹೋಗಿ ರಾಹುಲ್ ಗಾಂಧಿ ಮನೆ ಕಾಯಲು ಸಮಯ ಇರುವ ರಾಜ್ಯದ ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿನ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮಸ್ಯೆಗೆ ಸ್ಪಂದಿಸಲು ಬಿಡುವು ಇಲ್ಲದಂತಾಗಿದೆ. ಅನ್ನದಾತರ ಮನೆಗೆ ಹೋಗಿ ಅವರ ಸಂಕಷ್ಟಕ್ಕೆ ಸ್ಪಂದಿಸುವ ಮಾನವೀಯತೆಯೂ ಇಲ್ಲದ ಬಂಡೆ ಹೃದಯ ಮುಖ್ಯಮಂತ್ರಿಗಳದ್ದಾಗಿದೆ.

ಸಿಎಂ ಡಿಕೆಶಿ ಅವರೇ, ಸಚಿವ ಸಂಪುಟ ವಿಸ್ತರಿಸಿದ್ದಾಯಿತು, ಇನ್ನಾದರೂ ರೈತರ ಸಂಕಷ್ಟಕ್ಕೆ ನೆರವಾಗಿ ಅವರಿಗೆ ಪರಿಹಾರ ಘೋಷಿಸಿ.


#ರೈತವಿರೋಧಿಕಾಂಗ್ರೆಸ್

ಬರಗಾಲದ ಹೊಡೆತಕ್ಕೆ ನಾಡಿನ ರೈತಾಪಿ ವರ್ಗ ಸಂಪೂರ್ಣವಾಗಿ ಕಂಗೆಟ್ಟಿದೆ. ನೀರಿಲ್ಲದೆ, ಬೆಳೆಯಿಲ್ಲದೆ, ಬದುಕಲು ದಾರಿಯಿಲ್ಲದೆ ಅನ್ನದಾತರು ಪರದಾಡುತ್...
04/08/2026

ಬರಗಾಲದ ಹೊಡೆತಕ್ಕೆ ನಾಡಿನ ರೈತಾಪಿ ವರ್ಗ ಸಂಪೂರ್ಣವಾಗಿ ಕಂಗೆಟ್ಟಿದೆ. ನೀರಿಲ್ಲದೆ, ಬೆಳೆಯಿಲ್ಲದೆ, ಬದುಕಲು ದಾರಿಯಿಲ್ಲದೆ ಅನ್ನದಾತರು ಪರದಾಡುತ್ತಿದ್ದಾರೆ.

ಸಿಎಂDK Shivakumar ಅವರೇ, ರೈತ ಬದುಕಿದರೆ ಮಾತ್ರ ರಾಜ್ಯ ಬದುಕಲು ಸಾಧ್ಯ.. ತಕ್ಷಣವೇ ರೈತರ ಸಂಕಷ್ಟ ಆಲಿಸಿ, ಬರ ಪರಿಹಾರ ಬಿಡುಗಡೆ ಮಾಡಿ.

#ರೈತವಿರೋಧಿಕಾಂಗ್ರೆಸ್

Address

Bangalore
560003

Website

Alerts

Be the first to know and let us send you an email when BJP Bengaluru Central posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Bengaluru Central:

Shortcuts

Share