Dr. Uday B. Garudachar, MLA Chikpet Assembly Constituency

Dr. Uday B. Garudachar, MLA Chikpet Assembly Constituency Contact information, map and directions, contact form, opening hours, services, ratings, photos, videos and announcements from Dr. Uday B. Garudachar, MLA Chikpet Assembly Constituency, Political Party, Office of MLA chickpet, New KR Road, Basvanagudi Bangalore, Bangalore.

🌺 ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ 🌺ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ ।ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ॥ 🙏ಪವಿತ್...
30/08/2026

🌺 ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ 🌺

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ ।
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ॥ 🙏

ಪವಿತ್ರ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ವಿ.ವಿ.ಪುರಂ ಹಾಗೂ ಗಾಂಧಿಬಜಾರ್‌ನಲ್ಲಿರುವ ಶ್ರೀ ವ್ಯಾಸರಾಜ ಮಠಕ್ಕೆ ಭೇಟಿ ನೀಡಿ, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು, ಪೂಜೆ ಹಾಗೂ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದದ್ದು ಅತ್ಯಂತ ಪುಣ್ಯಕರ ಹಾಗೂ ಆಧ್ಯಾತ್ಮಿಕ ಅನುಭವವಾಯಿತು.

ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪಾಕಟಾಕ್ಷವು ಎಲ್ಲರ ಮೇಲೂ ಸದಾ ಇರಲಿ. ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಶ್ರೀ ಗುರು ರಾಘವೇಂದ್ರಾಯ ನಮಃ! 🙏

🌺Sri Raghavendra Swamy Aradhana Mahotsava 🌺

Pujyaya Raghavendraya Satyadharma Rataya Cha |
Bhajatam Kalpavrukshaya Namatam Kamadhenave || 🙏

On the auspicious occasion of the sacred Sri Raghavendra Swamy Aradhana Mahotsava, I had the divine opportunity to visit Sri Vyasa Raja Mutt at V.V. Puram and Gandhi Bazaar, seek the sacred darshan and blessings of Sri Guru Raghavendra Swamy, and participate in the pooja and Aradhana Mahotsava. It was a deeply blessed and spiritually fulfilling experience.

May the divine grace and blessings of Sri Raghavendra Swamy always be upon everyone. I pray that He blesses the people of our state with happiness, peace, good health and prosperity.

Sri Gururaghavendraya Namaha! 🙏

🌺🙏 ನಮ್ಮ ಸಂಪ್ರದಾಯ, ನಮ್ಮ ಶಾಸ್ತ್ರ — ನಮ್ಮ ಹೆಮ್ಮೆ! 🙏🌺ಶುಭ ಶ್ರಾವಣ ಮಾಸದ ಹಬ್ಬಗಳ ಸೊಬಗು ಮನಸ್ಸಿಗೆ ಮುದ ನೀಡಲಿ, ಮನೆ-ಮನಗಳಲ್ಲಿ ಶುಭ, ಶಾಂತಿ...
28/08/2026

🌺🙏 ನಮ್ಮ ಸಂಪ್ರದಾಯ, ನಮ್ಮ ಶಾಸ್ತ್ರ — ನಮ್ಮ ಹೆಮ್ಮೆ! 🙏🌺

ಶುಭ ಶ್ರಾವಣ ಮಾಸದ ಹಬ್ಬಗಳ ಸೊಬಗು ಮನಸ್ಸಿಗೆ ಮುದ ನೀಡಲಿ, ಮನೆ-ಮನಗಳಲ್ಲಿ ಶುಭ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ. 🙏

ಶ್ರಾವಣ ಮಾಸದ ಪವಿತ್ರ ಹುಣ್ಣಿಮೆಯಂದು ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತಾಚರಣೆಯೊಂದಿಗೆ, ಶ್ರೀ ವರಮಹಾಲಕ್ಷ್ಮಿ ದೇವಿಯನ್ನು ಭಕ್ತಿಭಾವದಿಂದ ಬರಮಾಡಿಕೊಂಡು, ಯಜುರ್ ಉಪಾಕರ್ಮದ ಪಾವನ ಆಚರಣೆಯೊಂದಿಗೆ, ಅಣ್ಣ-ತಂಗಿಯರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ರಕ್ಷಾ ಬಂಧನದ ಆತ್ಮೀಯತೆಯನ್ನು ಸಂಭ್ರಮಿಸುವುದು ನಮ್ಮ ಶ್ರೀಮಂತ ಹಿಂದೂ ಸಂಸ್ಕೃತಿಯ ವೈಶಿಷ್ಟ್ಯ.

ನಮ್ಮ ಪ್ರತಿಯೊಂದು ಆಚರಣೆಯ ಹಿಂದೆ ಆಧ್ಯಾತ್ಮಿಕ ಮಹತ್ವದ ಜೊತೆಗೆ, ಜೀವನಕ್ಕೆ ಪೂರಕವಾದ ವೈಜ್ಞಾನಿಕ ಹಾಗೂ ಸಾಮಾಜಿಕ ಒಳನೋಟವೂ ಅಡಗಿದೆ. ಇಂತಹ ಅಮೂಲ್ಯ ಸಂಪ್ರದಾಯ, ಸಂಸ್ಕಾರ ಮತ್ತು ಜ್ಞಾನವನ್ನು ತಲೆಮಾರುಗಳಿಂದ ನಮಗೆ ಉಣಬಡಿಸಿದ ನಮ್ಮ ಹಿರಿಯರಿಗೆ ಶತಶಃ ಪ್ರಣಾಮಗಳು. 🙏🌺

ಸನಾತನ ಸಂಸ್ಕೃತಿಯ ಈ ಅಮೂಲ್ಯ ಪರಂಪರೆಯನ್ನು ಅರಿತು, ಆಚರಿಸಿ, ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಕೊಂಡೊಯ್ಯೋಣ. 🙏

🌺 ನಮ್ಮ ಸಂಪ್ರದಾಯ — ನಮ್ಮ ಹೆಮ್ಮೆ | ನಮ್ಮ ಸಂಸ್ಕೃತಿ — ನಮ್ಮ ಶಕ್ತಿ 🌺

🌺🙏 Our Traditions, Our Scriptures — Our Pride! 🙏🌺

The auspicious month of Shravan brings with it a beautiful tapestry of festivals that fills our hearts with devotion, brings joy to our homes, and spreads peace, prosperity and auspiciousness all around.

From observing the sacred Sri Satyanarayana Swamy Vrata on the holy full-moon day and welcoming Goddess Sri Varamahalakshmi with devotion, to performing the sacred Yajur Upakarma and celebrating the loving bond between brothers and sisters through Raksha Bandhan — each tradition reflects the richness, depth and timeless values of our Hindu heritage.

Behind every age-old tradition lies not only profound spiritual significance but also valuable scientific, social and cultural wisdom. My heartfelt salutations to our elders who preserved these timeless traditions and passed down their priceless knowledge, values and samskara from one generation to another. 🙏🌺

Let us understand, practise and proudly pass on the timeless heritage of Sanatana Dharma to future generations. 🙏

🌺 Our Traditions — Our Pride | Our Culture — Our Strength 🌺


🙏🌺 ಪಾವನ ದರ್ಶನ ಹಾಗೂ ಆಶೀರ್ವಾದ 🌺🙏ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಶ್ರೀ ಯದುಗಿರಿ ಯತಿರಾಜ ಮಠದ 41ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಯದ...
25/08/2026

🙏🌺 ಪಾವನ ದರ್ಶನ ಹಾಗೂ ಆಶೀರ್ವಾದ 🌺🙏

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಶ್ರೀ ಯದುಗಿರಿ ಯತಿರಾಜ ಮಠದ 41ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಯವರ ದಿವ್ಯ ದರ್ಶನ ಪಡೆದು, ಅವರ ಪಾವನ ಆಶೀರ್ವಾದವನ್ನು ಪಡೆಯುವ ಸೌಭಾಗ್ಯ ದೊರೆಯಿತು.

ಪರಮಪೂಜ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಆಶೀರ್ವಾದ ಪಡೆದ ಈ ದಿನವು ಅತ್ಯಂತ ಪಾವನ ಹಾಗೂ ಅವಿಸ್ಮರಣೀಯವಾಗಿತ್ತು. ಅವರ ಅನುಗ್ರಹ, ಮಾರ್ಗದರ್ಶನ ಹಾಗೂ ಆಶೀರ್ವಾದ ಸದಾ ಸರ್ವರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ. 🙏🌺

🙏🌺 Blessed Darshan & Divine Blessings 🌺🙏

It was a truly blessed and spiritually uplifting day to have the divine darshan of His Holiness Sri Sri Yadugiri Yathiraja Narayana Ramanuja Jeeyar Swamiji, the 41st Pontiff of Sri Yadugiri Yathiraja Mutt, at Malleswaram, Bengaluru, and to seek His Holiness’s sacred blessings.

Being in the revered presence of His Holiness and receiving His divine blessings was a deeply fulfilling and memorable experience. I pray that His Holiness’s grace, guidance and blessings continue to shower upon everyone. 🙏🌺

🚧 ಸ್ಯಾನಿಟರಿ ಸಮಸ್ಯೆ ಪರಿಶೀಲನೆ | ದೇವರಾಜ ಅರಸು ವಾರ್ಡ್ 🚧ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ದೇವರಾಜ ಅರಸು ವಾರ್ಡ್‌ನ ಕೆ.ಜಿ. ನಗರದಲ್ಲಿ ಸ್ಥಳೀ...
25/08/2026

🚧 ಸ್ಯಾನಿಟರಿ ಸಮಸ್ಯೆ ಪರಿಶೀಲನೆ | ದೇವರಾಜ ಅರಸು ವಾರ್ಡ್ 🚧

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ದೇವರಾಜ ಅರಸು ವಾರ್ಡ್‌ನ ಕೆ.ಜಿ. ನಗರದಲ್ಲಿ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಸ್ಯಾನಿಟರಿ ಸಮಸ್ಯೆಯ ಕುರಿತು ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲಾಯಿತು.

ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಚಿಕ್ಕಪೇಟೆ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಮಧುಸೂದನ್, ಜಿ.ಬಿ.ಎ. ಹಾಗೂ ಬಿ.ಡಬ್ಲ್ಯೂ.ಎಸ್.ಎಸ್.ಬಿ. ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಸ್ವಚ್ಛತೆ ಹಾಗೂ ಉತ್ತಮ ಮೂಲಸೌಕರ್ಯ ಕಲ್ಪಿಸುವುದು ನಮ್ಮ ನಿರಂತರ ಆದ್ಯತೆಯಾಗಿದೆ.

🚧 Inspection of Sanitation Issue | Devaraja Arasu Ward 🚧

Visited K.G. Nagar in Devaraja Arasu Ward of Chickpet Assembly Constituency to personally inspect the sanitation issue faced by the local residents.

Interacted with the residents and directed the concerned officials to take necessary steps to resolve the issue at the earliest.

Chickpet Mandal BJP General Secretary Shri Madhusudan, GBA and BWSSB officials, and local residents were present during the visit.

Ensuring cleanliness and better civic infrastructure remains our constant priority.

🙏🌺 ರಾಮಚರಿತಮಾನಸ ಕಥಾ ಪ್ರವಚನ | ಭಕ್ತಿಭಾವದ ಕಾರ್ಯಕ್ರಮ 🌺🙏‘ಸರ್ವ ಜನ ಏಕತಾ ಮಂಚ್’ ವತಿಯಿಂದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಶೋಕ ಪಿಲ್ಲರ್ ಸ...
23/08/2026

🙏🌺 ರಾಮಚರಿತಮಾನಸ ಕಥಾ ಪ್ರವಚನ | ಭಕ್ತಿಭಾವದ ಕಾರ್ಯಕ್ರಮ 🌺🙏

‘ಸರ್ವ ಜನ ಏಕತಾ ಮಂಚ್’ ವತಿಯಿಂದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಶೋಕ ಪಿಲ್ಲರ್ ಸಮೀಪದ ಅಗ್ರಸೇನಾ ಭವನದಲ್ಲಿ ಆಯೋಜಿಸಲಾಗಿದ್ದ ‘ರಾಮಚರಿತಮಾನಸ’ ಕಥಾ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸರ್ವರಿಗೂ ಶುಭ ಹಾರೈಸಲಾಯಿತು.

ಭಗವಾನ್ ಶ್ರೀರಾಮನ ಆದರ್ಶ, ಧರ್ಮ ಹಾಗೂ ಮೌಲ್ಯಗಳನ್ನು ಸಾರುವ ರಾಮಚರಿತಮಾನಸದ ಸಂದೇಶಗಳು ನಮ್ಮೆಲ್ಲರ ಜೀವನಕ್ಕೆ ಸದಾ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ.

ಈ ಸಂದರ್ಭದಲ್ಲಿ ಗರುಡ ಫೌಂಡೇಶನ್‌ನ ಮುಖ್ಯಸ್ಥರಾದ ಶ್ರೀಮತಿ ಮೇದಿನಿ ಉದಯ್ ಗರುಡಾಚಾರ್, ಸರ್ವ ಜನ ಏಕತಾ ಮಂಚ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

🙏🌺 Ramcharitmanas Katha Pravachan | A Spiritually Enriching Programme 🌺🙏

Attended the ‘Ramcharitmanas Katha Pravachan’ programme organised by the Sarva Jana Ekata Manch at Agrasena Bhavan near Ashoka Pillar in Chickpet Assembly Constituency. Had the privilege of inaugurating the programme and extending my best wishes to everyone.

May the timeless teachings of the Ramcharitmanas, which embody the ideals, values and principles of Lord Shri Ram, continue to inspire us all in our lives.

On this occasion, Smt. Medini Uday Garudachar, Head of Garuda Foundation, office-bearers and members of Sarva Jana Ekata Manch, along with several dignitaries, were present.

ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪೆಯಿಂದ ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಹಾಗೂ ಸಮೃದ್ಧಿ ಸದಾ ನೆಲೆಸಲಿ ಎಂದು ಪ್ರಾರ್ಥಿಸು...
21/08/2026

ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪೆಯಿಂದ ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಹಾಗೂ ಸಮೃದ್ಧಿ ಸದಾ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.

ಎಲ್ಲರಿಗೂ ಪವಿತ್ರ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🙏🌺

May the divine blessings of Goddess Varamahalakshmi bring happiness, peace, good health, prosperity and abundance to everyone.

Heartiest greetings on the auspicious occasion of Varamahalakshmi Festival! 🙏🌺

🇮🇳 ಸೇವಾ ಸಂಕಲ್ಪ ಮಹೋತ್ಸವ | ಪೂರ್ವಭಾವಿ ಸಭೆಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ಸಾರ್ವಜನಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿದ ಹ...
20/08/2026

🇮🇳 ಸೇವಾ ಸಂಕಲ್ಪ ಮಹೋತ್ಸವ | ಪೂರ್ವಭಾವಿ ಸಭೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ಸಾರ್ವಜನಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಆಯೋಜಿಸಲಾಗುತ್ತಿರುವ ‘ಸೇವಾ ಸಂಕಲ್ಪ ಮಹೋತ್ಸವ’ದ ಕಾರ್ಯಕ್ರಮಗಳ ರೂಪುರೇಷೆ ಹಾಗೂ ಸಿದ್ಧತೆಗಳ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯಾಲಯದ ಉಸ್ತುವಾರಿ ಶ್ರೀ ತರುಣ್ ಚುಗ್, ರಾಜ್ಯಸಭಾ ಸಂಸದರಾದ ಡಾ. ಅಲ್ಕಾ ಗುರ್ಜರ್, ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರೊ. ಎಂ. ನಾಗರಾಜ್, ರಾಜ್ಯ ಉಸ್ತುವಾರಿ ಶ್ರೀ ಸುಧಾಕರ್ ರೆಡ್ಡಿ, ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಸೇರಿದಂತೆ ರಾಜ್ಯ ಪದಾಧಿಕಾರಿಗಳು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಶ್ರೀ ನರೇಂದ್ರ ಮೋದಿ ಜೀ ಅವರ 25 ವರ್ಷಗಳ ಜನಸೇವೆಯ ಪಯಣವನ್ನು ಸ್ಮರಿಸಿ, ಅವರ ಸೇವಾ ಸಂಕಲ್ಪವನ್ನು ಮತ್ತಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

🇮🇳 Seva Sankalp Mahotsav | Preparatory Meeting

Participated in the preparatory meeting held to discuss the programmes and preparations for the nationwide ‘Seva Sankalp Mahotsav’, being organised to mark 25 years of Prime Minister Shri Narendra Modi Ji’s journey in public service.

The meeting was attended by National Office In-charge Shri Tarun Chugh, Rajya Sabha MP Dr. Alka Gurjar, National Vice-President Prof. M. Nagaraj, State In-charge Shri Sudhakar Reddy, Karnataka BJP President Shri Vijayendra Yediyurappa, Leader of Opposition in the Legislative Assembly Shri R. Ashoka, Leader of Opposition in the Legislative Council Shri Chalavadi Narayanaswamy, along with State office-bearers, MPs, MLAs, MLCs and senior party leaders.

The meeting discussed plans to successfully organise the Mahotsav and highlight Shri Narendra Modi Ji’s 25-year journey of dedicated public service and his unwavering commitment to the nation.

ಬಿಜೆಪಿಯ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಶ್ರೀ ಬಿ. ಸಿ. ನಾಗೇಶ್ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಅವರ ನಿಧನದಿಂದ ಪಕ್ಷಕ್...
18/08/2026

ಬಿಜೆಪಿಯ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಶ್ರೀ ಬಿ. ಸಿ. ನಾಗೇಶ್ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಅವರ ನಿಧನದಿಂದ ಪಕ್ಷಕ್ಕೆ ಹಾಗೂ ಸಮಾಜಕ್ಕೆ ಅಪಾರ ನಷ್ಟ ಉಂಟಾಗಿದೆ.

ದಿವಂಗತ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾ, ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಓಂ ಶಾಂತಿಃ 🙏

Deeply saddened by the passing away of senior BJP leader and former Minister Shri B. C. Nagesh Ji. His demise is an irreparable loss to the party and society.

I offer my heartfelt tributes to the departed soul and pray to the Almighty to grant eternal peace to his soul and strength to his family and admirers to bear this profound loss.

Om Shanti. 🙏

🇮🇳 ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಆಜಾದ್ ಹಿಂದ್ ಫೌಜ್‌ನ ಸಂಸ್ಥಾಪಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯತಿಥಿಯಂದು ...
18/08/2026

🇮🇳 ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಆಜಾದ್ ಹಿಂದ್ ಫೌಜ್‌ನ ಸಂಸ್ಥಾಪಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯತಿಥಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು.

“ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂಬ ಅವರ ವೀರೋಚಿತ ಕರೆ ಸದಾ ದೇಶಭಕ್ತಿಗೆ ಸ್ಫೂರ್ತಿಯಾಗಿರಲಿ.

🇮🇳 On the death anniversary of Netaji Subhas Chandra Bose, an iconic patriot, freedom fighter and founder of the Indian National Army, I pay my respectful tributes to his immortal legacy.

His courage, patriotism and sacrifice will continue to inspire generations of Indians.

🇮🇳 ಜೈ ಹಿಂದ್! | Jai Hind! 🇮🇳

Address

Office Of MLA Chickpet, New KR Road, Basvanagudi Bangalore
Bangalore
560004

Alerts

Be the first to know and let us send you an email when Dr. Uday B. Garudachar, MLA Chikpet Assembly Constituency posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dr. Uday B. Garudachar, MLA Chikpet Assembly Constituency:

Shortcuts

Share