26/11/2014
ನಿಮಗಿದು ಗೊತ್ತಾ?
ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ, ವರ್ಷಕ್ಕೆ ನಾಲ್ಕು ತಿಂಗಳು ಮಳೆ ಬೀಳುವ ಭಾರತದಲ್ಲಿ, ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಮೊನ್ನೆ ಅಗಸ್ಟ್ 14, 2013 ರಂದು ಮೋದಿ, ಗುಜರಾತ್ ರಾಜ್ಯಸರ್ಕಾರದ ವತಿಯಿಂದ 27 ಕೀ.ಮೀ ಉದ್ದದ ಪೈಪ್ ಲೈನಿನಿಂದ ನರ್ಮದಾ ನದಿಯಿಂದ ಭಾರತ ಪಾಕಿಸ್ತಾನ ಗಡಿಯಲ್ಲಿರುವ ಕುಛ್ ಪ್ರದೇಶದ ಧರ್ಮಶಾಲಾ ಗಡಿಭದ್ರತಾ ಪಡೆಯ ಕ್ಯಾಂಪಿಗೆ ಖಾಯಂ ಕುಡಿಯುವ ನೀರು ಒದಗಿಸುವವರೆಗೂ ನಮ್ಮನ್ನು ಕಾಯುವ ಸೈನಿಕರು ಕುಡಿಯುವ ನೀರನ್ನು ತರಲುಅವಲಂಭಿಸಿದ್ದು 800 ಒಂಟೆಗಳನ್ನು..!..ಯಾಕೇ ಹಾಗೆ ಎಂದು ಕೇಳ್ತೀರಾ? ಅದು ಹಾಗೆ, ಬ್ರೀಟಿಷರ ಕಾಲದಿಂದಲೂ ಇತ್ತು, ಅದಕ್ಕೆ ಹೀಗೆ ಇರಲಿ ಅಂದರು. ಅಜ್ಜ ಹಾಕಿದ ಆಲದ ಮರಕ್ಕೆ ನೇತಾಡುವ ಚಾಳಿಯನ್ನು ಬದಲಾಯಿಸಲು ಯಾರೂ ಒಪ್ಪುವುದಿಲ್ಲ, ಅದು ಒಂತರಹದ ಮನಸ್ತಿತಿ ಅಷ್ಠೆ. ಇಷ್ಟಾದರೂ ಧರ್ಮಶಾಲಾ ಗಡಿಭದ್ರತಾ ಪಡೆಯ ಕ್ಯಾಂಪಿಗೆ ಖಾಯಂ ಕುಡಿಯುವ ನೀರಿನ ಯೋಜನೆ ಕಾರ್ಯಗತಗೊಳಿಸುವುದು ಮಹಾನ್ ಕಷ್ಟದ ಕೆಲಸವಾ? ಕೊಂಕಣ ರೈಲ್ವೆಯ ಸುರಂಗ ಕೊರೆದಷ್ಟು ಕಠಿಣವಾಗಿತ್ತಾ? ಇಲ್ಲವೇ ಇಲ್ಲ, ನರೇಂದ್ರ ಮೋದಿ ಇದನ್ನು ಬರೇ 9 ಕೋಟಿ ವೆಚ್ಚದಲ್ಲಿ 1 ವರ್ಷದಲ್ಲಿ ನಮ್ಮ ಸೈನಿಕರಿಗೆ ಅರ್ಪಿಸಿದರು. ಹಿಂದೊಮ್ಮೆ ಮೋದಿ ಈ ಕ್ಯಾಂಪಿಗೆ ಹೋದಾಗ ಸೈನಿಕರ ಕಷ್ಟವನ್ನು ಕಣ್ಣಾರೆ ಕಂಡು ಬಂದಿದ್ದರು. ಅಲ್ಲಿ ಕಂಡದ್ದನ್ನು ಅಲ್ಲಿಯೇ ಮರೆಯದೇ, ಬೆಳಿಗ್ಗೆಯೆದ್ದು ಯೋರೋಪ್ ದೇಶಕ್ಕೆ ಕೂದಲು ಕತ್ತರಿಸಲು ವಿಮಾನ ಹಿಡಿದು ಹೋಗದೆ, ತನ್ನ ಸರ್ಕಾರದ ಅಧಿಕಾರಿಗಳೊಂದಿಗೆಚರ್ಚಿಸಿ, ಸಮಗ್ರವಾದ ಯೋಜನೆಯನ್ನು ತಯಾರಿಸಿ, ಮರುಭೂಮಿಯಲ್ಲಿ ಹನಿ ಹನಿ ನೀರಿಗಾಗಿ ಒಂಟೆಗಳ ದಾರಿ ಕಾದು ಕುಳಿತು, ದೇಶ ಕಾಯುತ್ತಿರುವ ನಮ್ಮ ಆ ಸೈನಿಕರ ಕಷ್ಟ ನೀಗಿಸಿದರು. ಲಾಭನಷ್ಟಗಳ ಲೆಕ್ಕಾಚಾರ ಮಾಡಿದರೂ, ಪ್ರತಿ ಒಂಟೆಗೆ ಕನಿಷ್ಠ 25,000 ರೂಪಾಯಿಯಂತೆ 800 ಒಂಟೆಗಳಿಗೆ ಒಂದು ವರ್ಷಕ್ಕೆ 2 ಕೋಟಿ ಬೇಕಾಗುತ್ತಿತ್ತು.ಆದರೆ ನರೇಂದ್ರ ಮೋದಿ ಈಯೋಜನೆಗೆ ಖರ್ಚು ಮಾಡಿದ್ದು ಬರೇ 9 ಕೋಟಿ..! 60 ವರ್ಷಕ್ಕೂ ನಮ್ಮನ್ನಾಳಿದ ಆ ಪರಿವಾರದವರು ಮಾಡಿದ್ದೇನು? ನೂರು ಕೋಟಿ ಹೆತ್ತ ಭಾರತ ಮಾತೆಯ ಖಜಾನೆಯಲ್ಲಿ, ತನ್ನನ್ನು ಕಾಯುವ ಸೈನಿಕರಿಗೆ ನೀರು ಕೊಡಲು 9 ಕೋಟಿ ರೂಪಾಯಿ ಇರಲಿಲ್ಲವೇ, ಗಡಿಕಾಯುವ ಯೋಧರಿಗೆ ನೀರು ಕುಡಿಯುವ ಯೋಜನೆಗೆ ಸರಕಾರದ ಖಜಾನೆ ಖಾಲಿಯಾಗಿದೆ, ನೀವೆಲ್ಲರೂ ಧನಸಹಾಯ ಮಾಡಿ ಅಂದಿದ್ದರೆ, ನಾವು ಕೊಡೋದಿಲ್ಲ ಎಂದು ಹೇಳುವಷ್ಟು ಪಾಪಿಗಳಾ ಈ ಭಾರತ ಮಾತೆಯ ಮಕ್ಕಳು ? ಇದು ಸಂಪನ್ಮೂಲದ ಸಮಸ್ಯೆಯಲ್ಲ, ತಂತ್ರಜ್ನಾನದ ಕೊರತೆಯಲ್ಲ, ದೇಶದ ಹಿತಕ್ಕೆ ಮಿಡಿಯುವ ಮನಸ್ಸುಗಳ ಕೊರತೆ. ನಾವು ನಮ್ಮ ಬೆಚ್ಚನೆಯ ಮನೆಯಲ್ಲಿ , ನಮ್ಮ ಕುಟುಂಬದೊಂದಿಗೆ ಹೊಟ್ಟೆತುಂಬಾ ಉಂಡು ಮಲಗಿರುವಾಗ, ತನ್ನ ಪರಿವಾರದವರನ್ನೆಲ್ಲಾ ಬಿಟ್ಟು, ದೇಶಭಕ್ತಿಯನ್ನು ಮಾತ್ರ ಎದೆಯ ಗುಂಡಿಗೆಯಲ್ಲಿ ಬಚ್ಚಿಟ್ಟುಕೊಂಡು,ಗಡಿಯಾಚೆಗಿನ ಶತ್ರುವಿನ ಎಚ್ಚರದೆದುರು ನಿದ್ದೆಗೆ ಜಾರದೆ ಜಾಗ್ರತೆಯಾಗಿ ನಮ್ಮ ರಕ್ಷಣೆಯನ್ನು ಮಾಡುತ್ತಿರುವ ಗಡಿಭಧ್ರತಾ ಪಡೆಗೆ ಕನಿಷ್ಟ 9 ಕೋಟಿ ಖರ್ಚು ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗದ ನಾವು ದಿನವಿಡಿ ಮಲಗಿ, ಐದು ವರ್ಷಕ್ಕೊಮ್ಮೆ ಓಟು ಹಾಕುವವರಿಗೆ, ಬಿಟ್ಟಿ ಅನ್ನ ಕೊಡಲು ಲಕ್ಷ ಲಕ್ಷ ಕೋಟಿ ವೆಚ್ಚಮಾಡಿದರೇನು ಫಲ? ಬರೇ 27 KM ದೂರದ ನರ್ಮದಾ ನದಿಯಿಂದ ಕಳೆದ 60 ವರ್ಷದಿಂದ ನೀರು ತಂದು ಆ ಸೈನಿಕರ ಹೊಟ್ಟೆತಣಿಸದ ನಾವು ಲಕ್ಷಾಂತರ ಕೀಲೋಮೀಟರ್ ದೂರದ ಮಂಗಳನ ಆಂಗಳಕ್ಕೆ ನೌಕೆ ಉಡಾಯಿಸಿದರೇನು ಫಲ? ಬರೇ 9 ಕೋಟಿಯ ಯೋಜನೆಯನ್ನು ಜಾರಿ ಮಾಡಿದೇ, ಇವರೆಗೂ ವ್ಯರ್ಥವಾಗಿ ಪ್ರತಿವರ್ಷವೂ 2 ಕೋಟಿಯಷ್ಟು ಹಣವನ್ನು ಒಂಟೆಗಳ ಹೊಟ್ಟೆಗೆ ಹಾಕುತ್ತಿದ್ದ ನಮಗೆ ಹಾರ್ವಡ್ ನಲ್ಲಿ ಕಲಿತ ಆರ್ಥಮಂತ್ರಿಯನ್ನಿಟ್ಟುಕೊಂಡರೇನು ಫಲ? ನಮ್ಮ ನಾಯಕ ಚಾಯ್ ಮಾರುವವನೇ ಆಗಲಿ, ಬಾರ್ ಕೆಲಸಗಾರ್ತಿಯೇ ಆಗಲಿ, ಆದರೆ ತಲೆಯಲ್ಲಿ ಸ್ವಲ್ಪ ಲೆಕ್ಕಾಚಾರದ ಬುದ್ಧಿ ಇರಲಿ, ದೇಶದ ಬಗ್ಗೆ ಹೆಮ್ಮೆ ಇರಲಿ, ದೇಶದ ಪ್ರಜೆಗಳ ಬಗ್ಗೆ ಕಾಳಜಿ ಇರಲಿಯೆಂಬುದಷ್ಟೆ ನಮ್ಮ ಬಯಕೆ. ಮೋದಿಯಂತಹ ಕೆಲವೇ ಕೆಲವರನ್ನು ಬಿಟ್ಟು ಮತ್ತುಳಿದವೆರೆಲ್ಲಾ ಸೇರಿ ನಮ್ಮ ಸೈನಿಕರಿಗೆ ನೀರು ಕುಡಿಸಿದರೇ ಹೊರತು, ಕುಡಿಯುವ ನೀರು ಕೊಡಲಿಲ್ಲವಲ್ಲ ಎಂದು ಟೈಪ್ ಮಾಡುವಾಗ ನನ್ನ ಕಣ್ಣತೇವಗೊಳ್ಳುತ್ತಿದೆ....!