04/06/2026
ತಮ್ಮ ಸುಮಧುರ ಕಂಠ ಗಾಯನದ ಮೂಲಕ ಕೋಟ್ಯಂತರ ಭಾರತೀಯರ, ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿರುವ ಗಾನಗಂಧರ್ವ, ಪದ್ಮವಿಭೂಷಣ ಕೀರ್ತಿಶೇಷ ಶ್ರೀ ಡಾ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದಂದು ಆ ಕಲಾಚೇತನಕ್ಕೆ ಗೌರವದ ನಮನಗಳು.
ಸಂಗೀತ ಲೋಕದ ದಿಗ್ಗಜರೆನಿಸಿಕೊಂಡ ಅವರ ಗಾನ ಮಾಧುರ್ಯ ಅಮರ. ನಾಡಿನ ಸಾಂಸ್ಕೃತಿಕ ಲೋಕಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಆ ಸ್ವರ ಮಾಂತ್ರಿಕನಿಗೆ ಭಾವಪೂರ್ಣ ನಮನಗಳು.