16/08/2026
ಮಾಗಡಿಗೆ ನೂತನ ವೇಗದೂತ (Express) ಬಸ್ ಸೇವೆಗಳಿಗೆ ಚಾಲನೆ
ಮಾಗಡಿ, ಆಗಸ್ಟ್ 16: ಪ್ರಯಾಣಿಕರ ಅನುಕೂಲತೆ ಹಾಗೂ ಗುಣಮಟ್ಟದ ಸಾರ್ವಜನಿಕ ಸಾರಿಗೆ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವತಿಯಿಂದ ಮಾಗಡಿಗೆ ನೂತನ ವೇಗದೂತ (Express) ಬಸ್ ಸೇವೆಗಳಿಗೆ ಇಂದು ಚಾಲನೆ ನೀಡಲಾಯಿತು.
ಮಾನ್ಯ ಪೌರಾಡಳಿತ ಸಚಿವರಾದ ಶ್ರೀ ಹೆಚ್.ಸಿ. ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಮಾಗಡಿ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸೇವೆಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಸಚಿವರಾದ ಶ್ರೀ ಹೆಚ್.ಸಿ. ಬಾಲಕೃಷ್ಣ ಅವರು, ಮಾಗಡಿಯಲ್ಲಿ ಬಿಎಂಟಿಸಿಗೆ ಸುಮಾರು 4 ಎಕರೆ ಜಾಗವನ್ನು ಒದಗಿಸಿಕೊಡಲಾಗುವುದು. ಆದಷ್ಟು ಬೇಗ ಮಾಗಡಿಯಲ್ಲಿ ಬಿಎಂಟಿಸಿ ಘಟಕವನ್ನು ಸ್ಥಾಪಿಸಿ, ಮಾಗಡಿ–ಬೆಂಗಳೂರು ಮಾರ್ಗಕ್ಕೆ ಮಾತ್ರ ಸೀಮಿತವಾಗದೆ, ಮಾಗಡಿಯಿಂದ ರಾಮನಗರ, ನೆಲಮಂಗಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸಮರ್ಪಕ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ನಿಕೇತ್ ರಾಜ್.ಎಂ., ಉಪಾಧ್ಯಕ್ಷರು, ಬೆಂ.ಮ.ಸಾ.ಸಂಸ್ಥೆ, ಶ್ರೀ ಚಂದ್�