21/04/2019
ಅನನ್ಯ ಸಂಸದ ಅನಂತಕುಮಾರ ಹೆಗಡೆ - ೬
ತತ್ವಜ್ಞಾನದ ಬೇರು, ತಂತ್ರಜ್ಞಾನದ ಚಿಗುರು
ಆಧುನಿಕ ಬದುಕಿನ ಸಂಕಟವಿರುವುದು ತತ್ವಜ್ಞಾನ ಹಾಗೂ ತಂತ್ರಜ್ಞಾನದ ನಡುವಿನ ಅಂತರದಲ್ಲಿ. ತತ್ವಜ್ಞಾನ ಬಲ್ಲವರಿಗೆ ತಂತ್ರಜ್ಞಾನದ ಆಳ ಗೊತ್ತಿಲ್ಲ, ತಂತ್ರಜ್ಞಾನ ಬಲ್ಲವರಿಗೆ ತತ್ವಜ್ಞಾನದ ಅರಿವಿಲ್ಲ ಎನ್ನುವ ಸ್ಥಿತಿ ಇದೆ. ಬದುಕಿನ ಅನುಕೂಲಗಳನ್ನು ತಂತ್ರಜ್ಞಾನ ಸೃಷ್ಟಿಸುತ್ತದೆ, ಬದುಕಿನ ನೆಮ್ಮದಿಯನ್ನು ತತ್ವಜ್ಞಾನ ತೋರಿಸುತ್ತದೆ. ಬದುಕಿನ ಮಿತಿಗಳ ಅರಿವಿಲ್ಲದಿದ್ದರೆ ಅಪರಿಮಿತವಾದ ಅನುಕೂಲಗಳೂ ನೆಮ್ಮದಿಯನ್ನು ನೀಡುವುದಿಲ್ಲ. ತತ್ವಜ್ಞಾನದ ತಿಳಿವಳಿಕೆ ಎಷ್ಟೇ ಇದ್ದರೂ ಅನುಕೂಲಗಳಿಲ್ಲದಿದ್ದರೆ ಬದುಕಿನಲ್ಲಿ ಸುಖವಿರುವುದಿಲ್ಲ. ಬದುಕಿನ ಸುಖವನ್ನೂ ಬಾಳಿನ ನೆಮ್ಮದಿಯನ್ನೂ ಒಟ್ಟಿಗೇ ಅನುಭವಿಸಲು, ತತ್ವಜ್ಞಾನ ತಂತ್ರಜ್ಞಾನಗಳೆರಡೂ ನಮಗೆ ಬೇಕು.
ಶ್ರೀ ಅನಂತಕುಮಾರ ಹೆಗಡೆಯವರು ತತ್ವಜ್ಞಾನ ತಂತ್ರಜ್ಞಾನಗಳೆರಡನ್ನೂ ಜೋಡಿಸಿಕೊಂಡವರು. ಭಾರತೀಯ ತತ್ವಜ್ಞಾನದ ಕುರಿತು ಅಧ್ಯಯನ ಮಾಡಿದಂತೆಯೇ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡುವಷ್ಟು ಅಧ್ಯಯನ ಮಾಡಿದ್ದಾರೆ. ಇಂದು ವೇಗದಲ್ಲಿ ವಿಕಾಸವಾಗುತ್ತಿರುವ ನ್ಯಾನೋ ತಂತ್ರಜ್ಞಾನ ಹಾಗೂ ಕೃತ್ರಿಮ ಬುದ್ಧಿಮತ್ತೆ (Artificial Intelligence), ಇವೆರಡರ ವಿಷಯದಲ್ಲಿಯೂ ಸಾಕಷ್ಟು ಅಧ್ಯಯನ ಮಾಡಿರುವ ಅನಂತಕುಮಾರ ಹೆಗಡೆಯವರು ಹೊಸ ತಂತ್ರಜ್ಞಾನದ ಬಳಕೆಯ ವಿಧಾನವನ್ನು ಬಹಳ ಬೇಗ ಕಲಿಯಬಲ್ಲರು. ದೇಶದ ಅನೇಕ ವಿಜ್ಞಾನಿಗಳು, ತಂತ್ರಜ್ಞಾನಿಗಳ ಸಂಗಡ ಸಂವಾದ ಮಾಡುವಷ್ಟು ವಿಷಯ ಜ್ಞಾನವನ್ನೂ ಸ್ನೇಹವನ್ನೂ ಗಳಿಸಿದ್ದಾರೆ. ಉದಾಹರಣೆಗೆ: ಡಾ. ಕಟ್ಟೇಶ ಕಟ್ಟಿ ಅಂತಾರಾಷ್ಟಿçÃಯ ಮಾನ್ಯತೆ ಪಡೆದ ವಿಜ್ಞಾನಿ. ಅವರು ಮಾಡಿದ ವಿಜ್ಞಾನದ ಶೋಧಕ್ಕಾಗಿ ನೊಬೆಲ್ ಪ್ರಶಸ್ತಿಗೆ ಅವರ ಹೆಸರು ಸೂಚಿತವಾಗಿತ್ತು, ಅಂತಹ ಸಾಧಕರವರು. ಡಾ. ಕಟ್ಟೇಶ ಕಟ್ಟಿಯವರಿಗೆ ಆಯುರ್ವೇದವನ್ನಾಧರಿಸಿದ ಔಷಧ ಶೋಧಕ್ಕೆ ಅನಂತಕುಮಾರ ಹೆಗಡೆಯವರು ಒತ್ತಾಸೆ ನೀಡಿದವರು. ಕ್ಯಾನ್ಸರ್ ಕಾಯಿಲೆಗೆ ನ್ಯಾನೋ ತಂತ್ರಜ್ಞಾನ ಆಧಾರಿತ ಆಯುರ್ವೇದದ ಔಷಧವೊಂದನ್ನು ಡಾ. ಕಟ್ಟೇಶ ಕಟ್ಟಿ ಕಂಡುಹಿಡಿದಿದ್ದಾರೆ. ಅದು ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ. ಆ ಪ್ರಕ್ರಿಯೆಯಲ್ಲಿ ಅನಂತಕುಮಾರ ಹೆಗಡೆಯವರ ಪಾತ್ರವೂ ಮಹತ್ವದ್ದಾಗಿದೆ. ಮೂಲಭೂತ ಸಂಶೋಧನೆಗಳು, ಪರ್ಯಾಯ ಚಿಂತನೆಗಳ ಮಾರ್ಗದಲ್ಲಿ ಹೆಗಡೆಯವರು ಅನೇಕರ ಒಡನಾಟವನ್ನು ಮಾಡಿದ್ದಾರೆ. ದೇಶ ವಿದೇಶಗಳಲ್ಲಿ ತಿರುಗಿ ಹೊಸ ಶೋಧಗಳ ಅನುಕೂಲಗಳನ್ನು ನೋಡಿ ತಿಳಿದಿದ್ದಾರೆ.
ಕರ್ನಾಟಕದ ರಾಜಕಾರಣಿಗಳಲ್ಲಿ ಹೆಗಡೆಯವರಷ್ಟು ತಂತ್ರಜ್ಞಾನವನ್ನು ಅಭ್ಯಾಸ ಮಾಡಿದವರು ವಿರಳ. ಅಭ್ಯಾಸ ಮಾಡಿದ, ಕಂಡು ತಿಳಿದ ಸಂಗತಿಗಳನ್ನು ಕ್ಷೇತ್ರದ ಜನರಿಗೆ ಪರಿಚಯಿಸಿ ಅವರಿಗೆ ಅನುಕೂಲ ಮಾಡಿಕೊಡದಿದ್ದರೆ ಅವರಿಗೆ ಸಮಾಧಾನವಿರುವುದಿಲ್ಲ. ನೀರಾವರಿಯನ್ನು ಮೊಬೈಲ್ ಮೂಲಕ ನಿಯಂತ್ರಿಸುವ, ನಿರ್ವಹಿಸುವ ಮೊಬಿಟೆಕ್ ತಂತ್ರಜ್ಞಾನವನ್ನು ತಮಿಳುನಾಡಿನಲ್ಲಿ ನೋಡಿದ ಹೆಗಡೆಯವರು ಅದನ್ನು ಕ್ಷೇತ್ರಕ್ಕೆ ಪರಿಚಯಿಸಿದರು. ಬಾನಿಯಲ್ಲಿ ಎಷ್ಟು ನೀರಿದೆ, ಎಷ್ಟು ಹೊಲ/ತೋಟಕ್ಕೆ ನೀರು ಹಾಯಿಸಬಹುದು ಎನ್ನುವುದನ್ನು ತಿಳಿಸುವ, ಸಮಯಕ್ಕೆ ತಕ್ಕಂತೆ ಗಿoಟve ನ್ನು ತನ್ನಿಂದ ತಾನೇ ಬದಲಾಯಿಸಿಕೊಳ್ಳಬಹುದಾದ, ಬೇರೊಂದು ಕೆಲಸದ ಜೊತೆಯೂ ಕೃಷಿ ನೀರಾವರಿಯನ್ನು ಸಮರ್ಥವಾಗಿ ನಿರ್ವಹಿಸಬಹುದಾದ ಮೊಬಿಟೆಕ್ ತಂತ್ರಜ್ಞಾನವನ್ನು ಕ್ಷೇತ್ರದ ಜನತೆಗೆ ಪರಿಚಯಿಸಿದ್ದಾರೆ. ಅಷ್ಟೇ ಅಲ್ಲ, ಎಲ್ಲರಿಗಿಂತ ಮೊದಲು ತಮ್ಮ ತೋಟದಲ್ಲಿಯೇ ಪ್ರಯೋಗ ಮಾಡಿ ಅನುಭವ ಪಡೆದು, ಆ ಅನುಭವದ ಆಧಾರದಲ್ಲಿಯೇ ಸಾರ್ವಜನಿಕರಿಗೆ ಈ ತಂತ್ರಜ್ಞಾನವನ್ನು ತಿಳಿಹೇಳುತ್ತಿರುವುದು ನಿಜಕ್ಕೂ ಅಪರೂಪ ಮತ್ತು ಶ್ಲಾಘನೀಯ ಸಂಗತಿ. ಶಿರಸಿ ತಾಲೂಕು ಮುಂಡ್ಗೆÃರಿಯ ಶ್ರೀ ಜಿ.ವಿ.ಹೆಗಡೆಯವರ ತೋಟದಲ್ಲಿಯೂ ಮೊಬಿಟೆಕ್ ತಂತ್ರಜ್ಞಾನದ ಕೆಲಸವನ್ನು ನೋಡಬಹುದು. ಅನಂತಕುಮಾರ ಹೆಗಡೆ ನೇತೃತ್ವದ ಕದಂಬ ಫೌಂಡೇಶನ್, ಅನೇಕರಿಗೆ ಈ ತಂತ್ರಜ್ಞಾನವನ್ನು ಪರಿಚಯಿಸಿದೆ.
ರಾಸಾಯನಿಕ ಕೃಷಿಗೆ ಸಾವಯವ ಪರ್ಯಾಯವೊಂದರ ಹುಡುಕಾಟದಲ್ಲಿ ಅನೇಕ ಪ್ರಯೋಗಗಳು ನಡೆದಿವೆ. ಅಂತಹದರಲ್ಲಿ ಹೆಗಡೆಯವರ ಕಣ್ಣಿಗೆ ಬಿದ್ದ ಉತ್ಕೃಷ್ಟ ತಂತ್ರಜ್ಞಾನವೆಂದರೆ ಸೂಕ್ಷಾö್ಮಣುಜೀವಿ ತಂತ್ರಜ್ಞಾನ (Micribial Technology). ಅತ್ಯಂತ ಕಡಿಮೆ ಪ್ರಮಾಣದ ಜೀವ ರಸಾಯನಗಳನ್ನು ಬಳಸಿ ಸಸ್ಯಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು ಈ ತಂತ್ರಜ್ಞಾನದ ಕಾರ್ಯವಿಧಾನ. ೧೫೦೦ ಕೇ.ಜಿ. ಕೊಟ್ಟಿಗೆ ಗೊಬ್ಬರ ಬಳಸುವಲ್ಲಿ ೬೦ ಕೇ.ಜಿ. ಸೂಕ್ಷಾö್ಮಣುಜೀವಿ ಉತ್ಪನ್ನ ಬಳಸಿದರೆ ಸಾಕಾಗುತ್ತದೆ. ಅಮೇರಿಕೆಯಲ್ಲಿ ಶೋಧವಾದ ಈ ತಂತ್ರಜ್ಞಾನವನ್ನು ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ಶಿಲೀಂಧ್ರ ರೋಗದ ಸೋಂಕಿನಿಂದ ಬಳಲುತ್ತಿದ್ದ ವೆನಿಲ್ಲಾ, ಕಾಳುಮೆಣಸು ಮುಂತಾದ ಬೆಳೆಗಳಿಗೆ ಸೂಕ್ಷಾö್ಮಣುಜೀವಿ ತಂತ್ರಜ್ಞಾನದಿಂದ ಕಾಯಕಲ್ಪ ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದ ನಡೆದ ಪ್ರಯೋಗ ಯಶಸ್ವಿಯಾಗುತ್ತಿದೆ. ಭತ್ತ, ಹೂವು, ತೆಂಗು ಮುಂತಾದ ಬೆಳೆಗಳಲ್ಲಿಯೂ ಈ ತಂತ್ರಜ್ಞಾನದ ಪ್ರಯೋಗ ನಡೆದಿದೆ ಅಷ್ಟೇ ಅಲ್ಲ, ದೇಶದ ಅನೇಕ ರಾಜ್ಯಗಳಲ್ಲಿ ಇದು ಒಂದು ಆಂದೋಲನವಾಗಿ ಬೆಳೆಯುತ್ತಿದೆ. ಹೀಗೆ ಹೊಸದನ್ನು ತಿಳಿಯುವ, ತಿಳಿದದ್ದರ ಪ್ರಯೋಜನ ಪಡೆಯುವ ನಿರಂತರ ಹಂಬಲದಿಂದಲೇ ಹೆಗಡೆಯವರು ರಾಜಕಾರಣದಲ್ಲಿ ವಿಶಿಷ್ಟರೆನಿಸುತ್ತಾರೆ.
ವೈಜ್ಞಾನಿಕ ಮನೋಭಾವನೆಂದರೆ ಶ್ರದ್ಧೆಯನ್ನು ಅಲ್ಲಗಳೆಯುವುದು, ಧಾರ್ಮಿಕತೆಯೆಂದರೆ ತರ್ಕವನ್ನು ತ್ಯಜಿಸುವುದು ಎನ್ನುವ ಸಾಮಾನ್ಯ ಪ್ರಮೇಯವನ್ನು ತಿರಸ್ಕರಿಸಿ, ಪರಂಪರೆಯ ಪರಿಷ್ಕಾರದಲ್ಲಿ, ಪುನರುತ್ಥಾನದಲ್ಲಿ ಸುಸ್ಥಿರ ಭವಿಷ್ಯವನ್ನು ಕಾಣುವವರು ಹೆಗಡೆಯವರು. ಋಷಿ ವಾಕ್ಯದೊಡನೆ ವಿಜ್ಞಾನವನ್ನು ಮೇಳೈಸುವ, ಆ ಮೂಲಕ ಪರಿಸರ ಸ್ನೇಹಿ ಪ್ರಗತಿಯತ್ತ ಸಾಗುವ ಅನಂತಕುಮಾರ ಹೆಗಡೆಯವರ ನಿತ್ಯ ಹುಡುಕಾಟ, ನಿರಂತರ ಕಲಿಕೆ ಅವರನ್ನು ಅನನ್ಯರೆನ್ನುವಂತೆ ಮಾಡುತ್ತದ್ದಲ್ಲವೆ?
Kulkarni.18