03/08/2021
ವಿದ್ಯುತ್ ಖಾಸಗೀಕರಣದಿಂದ ಬಡ ವರು ಮತ್ತು ರೈತರಿಗೆ ಸಂಕಷ್ಟ,ಬಂಡವಾಳ ಶಾಯಿಗಳನ್ನು ಶ್ರೀಮಂತರನ್ನಾಗಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರವಿರಲಿ,
ಪರಿವರ್ತನೆಯ ಹೆಸರಲ್ಲಿ
ಪ್ರವರ್ತಕರ ಹೆಸರಲ್ಲಿ
*ಪರಬ್ರಹ್ಮನೆಂದು ಬಂದವರು*
*ಪ್ರೈವೇಟೈಸೇಶನ್ ಮಾಡಲು ಹೊರಟಿಹರು...*
ಬದಲಾವಣೆ ಮಾಡಲೆಂದು
ಬಂದವರು
ಬವಣೆಗಳನಂಚಿ ನಸುನಗುತಿಹರು...
ಬಂಡವಾಳಕಾಗಿ
ಬಲ್ಲಿದರ ಮರ್ಜಿಗಾಗಿ
*ಖಾಸಗೀಕರಣದ ಕರಿನೆರಳನು ತಂದಿಹರು.....*
ಅಬ್ಬರಿಸಿದಾಗ ಚಪ್ಪಾಳೆ
ಕೆಕ್ಕರಿಸಿದಾಗ ಚಪ್ಪಾಳೆ
ಗರಿಗರಿ ಜುಬ್ಬವ ನೋಡಿ ಚಪ್ಪಾಳೆ
ನೋಟ್ಬಂದಿಗೂ ಚಪ್ಪಾಳೆ
ಮನ್-ಕೀ-ಬಾತಿಗೂ ಗಡಚಿಕ್ಕುವ ಚಪ್ಪಾಳೆ
ಮತ್ತೊಮ್ಮೆ ಆರಿಸಿ ಬರಲೂ ಬೇಕಿತ್ತು
ನಮ್ಮೆಲ್ಲರ ಚಪ್ಪಾಳೆ
*ಸದ್ದಿಲ್ಲದೇ ದೇಶಮಾರಲು* *ಹೊರಟವರಿಗೇಕೆ ಈ ಚಪ್ಪಾಳೆ..!?*
LICಯೂ ಖಾಸಗಿ
BHELಕೂಡಾ ಖಾಸಗಿ
ವಿಮೆ ರಕ್ಷಣಾ ವಲಯಗಳೂ ಖಾಸಗಿ
ಹರಿಯುವ ರೈಲು-ನಿಲ್ಲುವ ನಿಲ್ದಾಣ
ಹಾರುವ ವಿಮಾನ-ಇಳಿಯುವ ನಿಲ್ದಾಣ
ಕಲ್ಲಿದ್ದಲು ಗಣಿಗಳೂ ಖಾಸಗಿ
ಇದೀಗ
ವಿದ್ಯುತ್ ವಲಯಗಳೂ ಖಾಸಗಿ
*ಎಲ್ಲವೂ ಖಾಸಗಿಯಾದ ಮೇಲೆ*
*ನೀವು ಕಿಸಿಯುವುದೇನಿದೆ....?!*
ಜನಪರ ಕಾಳಜಿಗಷ್ಟೇ ನಮ್ಮ ಬೆಂಬಲ
ಜನತಾ ಕರ್ಪ್ಯೂಗಷ್ಟೇ ನಮ್ಮ ಬೆಂಬಲ
ಜನಪರ ಸರ್ಕಾರಗಳ ನಿರ್ಧಾರಗಳಿಗಷ್ಟೇ
ನಮ್ಮ ಬೆಂಬಲ
ಜನರ ಹೆಸರಿನಲ್ಲಿ
*ಝಣಝಣ ಕಾಂಚಾಣಕ್ಕಾಗಿ*
*ಮಾಡಲು ಹೊರಟಿರುವ ಖಾಸಗೀಕರಣಕ್ಕೆ ನಮ್ಮ ಬೆಂಬಲವಿಲ್ಲ*
*ಕಾರ್ಮಿಕ ವಿರೋಧೀ ನೀತಿಗಿಲ್ಲ ನಮ್ಮ ಬೆಂಬಲ*
ಜೈ ಎಂದವರು
ಧಿಕ್ಕಾರ ಕೂಗುವ ಮುನ್ನ
ಅರಿತುಕೊಳ್ಳಿ
*ಖಾಸಗೀಕರಣಕ್ಕೆ ಧಿಕ್ಕಾರವಿರಲಿ*
ಅಧಿಸೂಚನೆ-ಭೂಗತ ಓಎಫ್ ಸಿ ಮತ್ತು ಮೆಲುಮಾರ್ಗದ ದಾರಿಯ ಹಕ್ಕುಗಳನ್ನು ಗುತ್ತಿಗೆ ನೀಡಲು ಆಸಕ್ತ ಸಂಸ್ಥೆಗಳಿಂದ ಒಳಹರಿವುಗಳನ್ನು ಆಹ್ವ.....