ಬಿಲ್ಲವ ಸಮಾಜ ಸೇವಾ ಸಂಘ, ಕಾವಳಪಡೂರು, ವಗ್ಗ

  • Home
  • India
  • Bantwall
  • ಬಿಲ್ಲವ ಸಮಾಜ ಸೇವಾ ಸಂಘ, ಕಾವಳಪಡೂರು, ವಗ್ಗ

ಬಿಲ್ಲವ ಸಮಾಜ ಸೇವಾ ಸಂಘ, ಕಾವಳಪಡೂರು, ವಗ್ಗ Contact information, map and directions, contact form, opening hours, services, ratings, photos, videos and announcements from ಬಿಲ್ಲವ ಸಮಾಜ ಸೇವಾ ಸಂಘ, ಕಾವಳಪಡೂರು, ವಗ್ಗ, Social service, Amin Compound, Vogga Post, kavalapadoor Village, Bantwall.

ದಿನಾಂಕ : 19.10.2025 ರಂದು ಬಿಲ್ಲವ ಸಮಾಜ ಸೇವಾ ಸಂಘ (ರಿ) ವಗ್ಗ ಘಟಕದ ಕಾವಳಪಡೂರು 1ನೇ ವಾರ್ಡ್ ವತಿಯಿಂದ ಸಮಾಜಮುಖಿ ದೃಷ್ಟಿಯಿಂದ ಒಂದು ಮಹತ್ವ...
19/10/2025

ದಿನಾಂಕ : 19.10.2025 ರಂದು ಬಿಲ್ಲವ ಸಮಾಜ ಸೇವಾ ಸಂಘ (ರಿ) ವಗ್ಗ ಘಟಕದ ಕಾವಳಪಡೂರು 1ನೇ ವಾರ್ಡ್ ವತಿಯಿಂದ ಸಮಾಜಮುಖಿ ದೃಷ್ಟಿಯಿಂದ ಒಂದು ಮಹತ್ವದ ಸೇವಾ ಚಟುವಟಿಕೆ ನಡೆಸಲಾಯಿತು. ವಗ್ಗ – ಪಚ್ಚಾಜೆ – ಮಾಂಗಜೆ ಮಾರ್ಗದ ಸುಮಾರು 3 ಕಿಲೋಮೀಟರ್ ದಟ್ಟವಾದ ರಸ್ತೆ ಭಾಗದಲ್ಲಿ ಹುಲ್ಲು ತೆಗೆಯುವ ಸ್ವಚ್ಛತಾ ಕಾರ್ಯ ಮತ್ತು ರಸ್ತೆಯಲ್ಲಿನ ಗುಂಡಿ ಮುಚ್ಚುವ ಕೆಲಸ ಸಂಘದ ಸದಸ್ಯರ ನೇತೃತ್ವದಲ್ಲಿ ಶ್ರದ್ಧೆಯಿಂದ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಗೂ ಸ್ಥಳೀಯ ಯುವಕರು ತೀವ್ರ ಸೂರ್ಯನ ತಾಪವನ್ನೂ ಲೆಕ್ಕಿಸದೇ, ಗ್ರಾಮಸ್ಥರ ಸಂಚಾರ ಸುಗಮವಾಗುವಂತೆ ಶ್ರಮಿಸಿದರು. ರಸ್ತೆ ನಿರ್ವಹಣೆಯ ಈ ಕಾರ್ಯದಿಂದ ಸ್ಥಳೀಯ ಜನರಿಗೆ ತುಂಬಾ ಅನುಕೂಲವಾಗಿದ್ದು, ಗ್ರಾಮಸ್ಥರಿಂದ ಸಂಘದ ಈ ಮುಂದಾಳತ್ವಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸೇವಾ ಕೈಂಕರ್ಯದಲ್ಲಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಯುವಕರು ಹಾಗೂ ಸ್ಥಳೀಯ ನಾಗರಿಕರು ಪಾಲ್ಗೊಂಡು, ಶ್ರಮದ ಸೇವೆ ಸಲ್ಲಿಸಿದರು.

ಗುರುಪೂಜೆ ಮಹೋತ್ಸವದಂದು ನಡೆದ ಸಾಂಸ್ಕೃತಿಕ ಝೆಂಕಾರಾ 🌸✨
15/10/2025

ಗುರುಪೂಜೆ ಮಹೋತ್ಸವದಂದು ನಡೆದ ಸಾಂಸ್ಕೃತಿಕ ಝೆಂಕಾರಾ 🌸✨

ಬಿಲ್ಲವ ಸಮಾಜ ಸೇವಾ ಸಂಘ ( ರಿ.) ಮತ್ತು ಬಿಲ್ಲವ ಮಹಿಳಾ ಘಟಕ, ಕಾವಳಪಡೂರು ಗ್ರಾಮ, ವಗ್ಗ ಇದರ ವತಿಯಿಂದ, ದಿನಾಂಕ : 12/10/202ಪ5ನೇ ಆದಿತ್ಯವಾರ ...
15/10/2025

ಬಿಲ್ಲವ ಸಮಾಜ ಸೇವಾ ಸಂಘ ( ರಿ.) ಮತ್ತು ಬಿಲ್ಲವ ಮಹಿಳಾ ಘಟಕ, ಕಾವಳಪಡೂರು ಗ್ರಾಮ, ವಗ್ಗ ಇದರ ವತಿಯಿಂದ, ದಿನಾಂಕ : 12/10/202ಪ5ನೇ ಆದಿತ್ಯವಾರ ಕಾಡಬೆಟ್ಟು ಶಾರದಾ ಮಂದಿರದಲ್ಲಿ
ಬ್ರಹ್ಮಶ್ರೀ ನಾರಾಯಣಗುರುವರ್ಯರ 171ನೇ ಜನ್ಮದಿನಾಚರಣೆಯ ಪ್ರಯುಕ್ತ ಗುರುಪೂಜಾ ಮಹೋತ್ಸವ ಮತ್ತು ಪ್ರತಿಭಾ ಪುರಸ್ಕಾರ, ವಿಧ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಜರಗಿತು.
ನಾರಾಯಣ ಗುರು ಸಂದೇಶ :
ಪುಂಜಾಲಕಟ್ಟೆ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲ ಸಂತೋಷ್ ಕುಮಾರ್ ಸನಿಲ್ ಅವರು ಮಾತನಾಡಿ ಬಹ್ಮಶ್ರೀ ನಾರಾಯಣಗುರುಗಳ ತತ್ವ ಆದರ್ಶಗಳನ್ನು ಇಂದಿನ ಯುವ ಸಮುದಾಯ ಜೀವನದಲ್ಲಿ ಅಳವಡಿಕೊಂಡು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿ ಗಳಾಗಬೇಕು ಎಂದರು.
ಸನ್ಮಾನ ಕಾರ್ಯಕ್ರಮ :
ಕಾರಿಂಜೇಶ್ವರ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ವೀರೆಂದ್ರ ಬಿ.ಅಮೀನ್ ಹಾಗೂ ರಾಷ್ಟ್ರಪತಿ ಪದಕ ಪುರಸ್ಕೃತ
ಪೋಲಿಸ್ ಇನ್ಸ್ ಪೆಕ್ಟರ್ ಶಾಂತರಾಮ್ ಕುಂದರ್, ರಾಷ್ಟ್ರ ಮಟ್ಟದ ಪ್ರತಿಭೆ
ಕು ! ಯಶಸ್ವಿನಿ, ಇವರನ್ನು ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೈದ ಸಮುದಾಯದ 12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 2 ಬಡ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಾಲಕೃಷ್ಣ ಆರ್ ಅಂಚನ್, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಮಾಜಿ ಅಧ್ಯಕ್ಷರಾದ ಸಂಜೀಪ ಪೂಜಾರಿ ಗುರುಕೃಪಾ ಬಿ.ಸಿ ರೋಡ್, ಯುವವಾಹಿನಿ ( ರಿ.) ನ ಪದಾಧಿಕಾರಿಗಳು ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ರಮೇಶ್ ಪೂಜಾರಿ ಮದ್ವ ಪಲ್ಕೆ, ಅಧ್ಯಕ್ಷತೆ ವಹಿಸಿ
ಮಧುಸೂಧನ್ ಮದ್ವ ಸ್ವಾಗತಿಸಿ, ಪ್ರಶಾಂತ್ ಕುದ್ಯಾಡಿ ನಿರೂಪಿಸಿ ಧನುಷ್ ಮದ್ವ ವಂದಿಸಿದರು. ಕಾರ್ಯದರ್ಶಿ ಯತಿನ್ ಮಾಂಗಾಜೆ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಬಿಲ್ಲವ ಪ್ರತಿಭೆಗಳಿಗಾಗಿ
ಸಮೂಹ ನೃತ್ಯ ಸ್ಪರ್ಧೆ ನಡೆಯಿತು. ಬೆಳಿಗ್ಗೆ ಮಧ್ವ ಬರ್ಕಟ ಬಳಿಯಿಂದ
ಗುರುಸಂದೇಶ ಯಾತ್ರೆ ವಾಹನ ಜಾಥಾ ನಡೆಯಿತು. ವೈದಿಕ ಕಾರ್ಯಕ್ರಮವನ್ನು ವಸಂತ ಶಾಂತಿ ಮಣಿಹಳ್ಳ ಮತ್ತು ತಂಡದವರು ನಡೆಸಿಕೊಟ್ಟರು.

14/10/2025
🌼 ಕಾವಳಮೂಡೂರಿನಲ್ಲಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ವತಿಯಿಂದ ಗುರುಪೂಜಾ ಕಾರ್ಯಕ್ರಮ ಭವ್ಯವಾಗಿ ನೆರವೇರಿತು 🌼ಕಾವಳಮೂಡೂರು, ಅ.5 :ಬಿಲ್ಲವ ಸಮಾಜ...
05/10/2025

🌼 ಕಾವಳಮೂಡೂರಿನಲ್ಲಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ವತಿಯಿಂದ ಗುರುಪೂಜಾ ಕಾರ್ಯಕ್ರಮ ಭವ್ಯವಾಗಿ ನೆರವೇರಿತು 🌼

ಕಾವಳಮೂಡೂರು, ಅ.5 :
ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕಾವಳಮೂಡೂರು ಇವರ ಆಶ್ರಯದಲ್ಲಿ ಶ್ರೀ ನಾರಾಯಣ ಗುರುವರ್ಯರ 171ನೇ ಜಯಂತಿಯ ಅಂಗವಾಗಿ ಗುರುಪೂಜಾ ಕಾರ್ಯಕ್ರಮವು ಶ್ರೀ ರವಿತಂತ್ರಿ ಇವರ ಪೌರೋಹಿತ್ಯದಲ್ಲಿ ಭಕ್ತಿಪೂರ್ಣವಾಗಿ ಮತ್ತು ಭವ್ಯವಾಗಿ ಜರುಗಿತು.

ಕಾರ್ಯಕ್ರಮವು ಭಾನುವಾರ ಬೆಳಿಗ್ಗೆ 9 ಗಂಟೆಗೆ ಕಾವಳಮೂಡೂರು ಬಿಲ್ಲವ ಸಂಘದ ಆವರಣದಲ್ಲಿ ಆರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಪೂಜಾರಿ ವಹಿಸಿದರು.

ಪ್ರಸ್ತಾವಿಕ ಭಾಷಣವನ್ನು ಜಯಪ್ರಸನ್ನ ನಿಡ್ವಾಲ್ ನಿರ್ವಹಿಸಿದರು. ಗುರುಸಂದೇಶವನ್ನು ಪಾರ್ಶ್ವನಾಥ ಪಿ. ನೀಡಿದರು.

ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು ಶ್ರೀ ಭುವನೇಶ್ ಪಚ್ಚಿನಡ್ಕ, ಶ್ರೀ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ವೀರೇಂದ್ರ ಬಿ. ಅಮೀನ್, ಹಾಗೂ ಸುಂದರ ಪೂಜಾರಿ ಕನ್ನಡಮಜಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಗೀತೇಶ್ ನೈವೆಲು, ಧ್ಯಾನಂ ಜನಾರ್ಧನ, ಪ್ರತಿಕ್ಷಾ ಪಿ, ಸಮೀಕ್ಷಾ ಎಂ, ಸೃಜನ್, ಶ್ರಾವ್ಯ ಜೆ.ವಿ. ಮತ್ತು ತುಷಾರ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ಕವನ ಬೊಳ್ಳಿಮಾರ್ ವಿದ್ಯಾರ್ಥಿವೇತನ ವಿತರಿಸಲಾಯಿತು.

ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಈ ಭವ್ಯ ಗುರುಪೂಜಾ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಅನೇಕ ಭಕ್ತಾದಿಗಳು ಭಕ್ತಿಭಾವದಿಂದ ಭಾಗವಹಿಸಿ ಗುರುಭಕ್ತಿಯನ್ನು ವ್ಯಕ್ತಪಡಿಸಿದರು.
Dated : 05.10.2025

Address

Amin Compound, Vogga Post, Kavalapadoor Village
Bantwall
574265

Website

Alerts

Be the first to know and let us send you an email when ಬಿಲ್ಲವ ಸಮಾಜ ಸೇವಾ ಸಂಘ, ಕಾವಳಪಡೂರು, ವಗ್ಗ posts news and promotions. Your email address will not be used for any other purpose, and you can unsubscribe at any time.

Shortcuts

Share

Category