15/10/2024
👆 *ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು*
*ಆಕ್ಟೊಬರ್ 18 ಶುಕ್ರವಾರ ಮಧ್ಯಾಹ್ನ 12 ಕ್ಕೆ*
*ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದ*
*ಲಿಂಗಾಯತ ಪಂಚಮಸಾಲಿ ಅಡ್ವೊಕೇಟ್ ಪರಿಷತ್ ನಿಯೋಗಕ್ಕೆ*
*ಪಂಚಮಸಾಲಿ 2A ಹಾಗೂ ಲಿಂಗಾಯತ obc ಮೀಸಲಾತಿಗಾಗಿ* ಸಭೆಯನ್ನು
*ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಕರೆಯಲಾಗಿದೆ*.
*ಸೆಪ್ಟೆಂಬರ್ 22 ರಂದು ಬೆಳಗಾವಿ ಲಿಂಗಾಯತ ಪಂಚಮಸಾಲಿ ವಕೀಲರ ಮಾಹಾಪರಿಷತ್ ಸಮಾವೇಶದ ಸಂಧರ್ಭದಲ್ಲಿ ಸಂಧಾನಕಾರರಾಗಿ ಆಗಮಿಸಿದ್ದ ಶಾಸಕ ವಿನಯ್ ಕುಲಕರ್ಣಿಯವರ ಮೂಲಕ ಸ್ವತಃ ಮುಖ್ಯಮಂತ್ರಿಗಳು ಶ್ರೀಗಳವರಿಗೆ ಸಭೆ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ*.
*ಮುಖ್ಯಮಂತ್ರಿಗಳು ಎರಡೂ ಬಾರಿ ಸಭೆ ನಡೆಸುತ್ತೇವೆ ಎಂದು ಮಾತು ಕೊಟ್ಟಿದ್ದರೂ ಸಹ ಸಭೆ ನಿಗದಿ ಆಗಿರಲಿಲ್ಲ*.
*ಇಂದು ವಕೀಲರ ಚಳುವಳಿಗೆ ಸ್ಪಂದಿಸಿ ಸಭೆ ನಡೆಸಲು ನಿರ್ಧರಿಸಿರುವುದು ಸಮಾಧಾನ ತಂದಿದೆ*.
*ಆದ್ದರಿಂದ ಈ ಸಭೆಗೆ ರಾಜ್ಯದ ಪಂಚಮಸಾಲಿ - ಮಲೆಗೌಡ- ಗೌಡ-ದೀಕ್ಷಾ ಲಿಂಗಾಯತ ವಕೀಲರು , ಸಮಾಜದ ಹಾಲಿ ಮಾಜಿ ಸಚಿವ , ಸಂಸದ , ಶಾಸಕರು , ಜಿಲ್ಲಾ ಘಟಕಗಳ ಪದಾಧಿಕಾರಿಗಳು , ಪಂಚ ಸೇನಾ , ಯುವ , ರೈತ , ಮಹಿಳಾ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು
ಆಗಮಿಸಿ ಯಾಶಸ್ವಿಗೊಳಿಸಬೇಕಾಗಿ ವಿನಂತಿ.
*ಸಾವಿರಾರು ಸಂಖ್ಯೆಯಲ್ಲಿ ವಕೀಲರು , ಸಮಾಜದ ಗಣ್ಯವ್ಯಕ್ತಿಗಳು ಹಾಗೂ ಮೀಸಲಾತಿ ಚಳುವಳಿಗಾರರು ಬನ್ನಿ , ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ*.
*All are share*