SDPI Belagavi

SDPI Belagavi SDPI Belagavi District Official Page

Politics For a Cause, Not For a Career

ತ್ಯಾಗ ಮತ್ತು ಭಕ್ತಿಯ ಮಹತ್ವವನ್ನು ಸಾರುವ ಪವಿತ್ರ ಈದ್-ಉಲ್-ಅಝ್ಹಾ ಹಬ್ಬದ ಈ ಶುಭ ಸಂದರ್ಭದಲ್ಲಿ ಜಿಲ್ಲೆಯ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು....
27/05/2026

ತ್ಯಾಗ ಮತ್ತು ಭಕ್ತಿಯ ಮಹತ್ವವನ್ನು ಸಾರುವ ಪವಿತ್ರ ಈದ್-ಉಲ್-ಅಝ್ಹಾ ಹಬ್ಬದ ಈ ಶುಭ ಸಂದರ್ಭದಲ್ಲಿ ಜಿಲ್ಲೆಯ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು.
ಈ ಹಬ್ಬವು ಸಮಾಜದಲ್ಲಿ ಸಹೋದರತ್ವ,ಶಾಂತಿ,ಪರಸ್ಪರ ಗೌರವ ಮತ್ತು ಮಾನವೀಯತೆಯ ಸಂದೇಶವನ್ನು ಹರಡಲಿ.
ಪ್ರತಿಯೊಬ್ಬರ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಆರೋಗ್ಯ ನೆಲೆಸಲಿ ಎಂದು ಹಾರೈಸುತ್ತೇನೆ.
ಬಡವರೊಂದಿಗೆ ಹಂಚಿಕೊಳ್ಳುವ ದಾನಧರ್ಮದ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳೋಣ.

ಅಬುಬಕರ್ ಖಾದ್ರಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸಡಿಪಿಐ ಬೆಳಗಾವಿ

ತ್ಯಾಗ, ಸಮರ್ಪಣೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಪವಿತ್ರ ಸಂದೇಶ ಸಾರುವ ಈ ಬಕ್ರೀದ್ ಹಬ್ಬವು ಸಮಾಜದಲ್ಲಿ ಪ್ರೀತಿ, ಶಾಂತಿ ಮತ್ತು ಐಕ್ಯತೆಯನ...
27/05/2026

ತ್ಯಾಗ, ಸಮರ್ಪಣೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಪವಿತ್ರ ಸಂದೇಶ ಸಾರುವ ಈ ಬಕ್ರೀದ್ ಹಬ್ಬವು ಸಮಾಜದಲ್ಲಿ ಪ್ರೀತಿ, ಶಾಂತಿ ಮತ್ತು ಐಕ್ಯತೆಯನ್ನು ಮತ್ತಷ್ಟು ಬಲಪಡಿಸಲಿ.
ಹೃದಯಪೂರ್ವಕ ಈದ್-ಉಲ್-ಅಝ್ಹಾ ಶುಭಾಶಯಗಳು.

ಮೊಅಜ್ಜಮಜಾ ಮುಲ್ಲಾನಿ ಜಿಲ್ಲಾಧ್ಯಕ್ಷರು ಎಸಡಿಪಿಐ ಬೆಳಗಾವಿ
💚❤️

26/05/2026

ರಾಜ್ಯದಲ್ಲಿ ಗಲಭೆಕೋರ ಸಂಘ ಪರಿವಾರದವರ ಕೇಸ್ ಹಿಂಪಡೆದದ್ದನ್ನು ವಿರೋಧಿಸಿ ಮತ್ತು ಗೋರಕ್ಷಣೆ ನೆಪದಲ್ಲಿ ಗೂಂಡಾಗಿರಿ ಖಂಡಿಸಿ ಪ್ರತಿಭಟನೆ

💚❤️

ಕನ್ನಡಪರ ಹೋರಾಟಗಾರರು,ರೈತಪರ ಹೋರಾಟಗಾರರು ಮತ್ತು ದ್ವೇಷ ಭಾಷಣ ಮಾಡುವರು,ಸಮಾಜ ಒಡೆಯುವ ಶಕ್ತಿಗಳು ಹೇಗೆ ಸರಿಸಮವಾಗುತ್ತಾರೆ.ದ್ವೇಷ ಭಾಷಣ,ಪ್ರಚೋದ...
26/05/2026

ಕನ್ನಡಪರ ಹೋರಾಟಗಾರರು,ರೈತಪರ ಹೋರಾಟಗಾರರು ಮತ್ತು ದ್ವೇಷ ಭಾಷಣ ಮಾಡುವರು,ಸಮಾಜ ಒಡೆಯುವ ಶಕ್ತಿಗಳು ಹೇಗೆ ಸರಿಸಮವಾಗುತ್ತಾರೆ.ದ್ವೇಷ ಭಾಷಣ,ಪ್ರಚೋದನೆ ಹಾಗೂ ಸಮಾಜ ಒಡೆಯುವ ರಾಜಕಾರಣ ನಡೆಸಿದವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುವುದು ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ತೆಗೆದುಕೊಂಡ ನಿರ್ಧಾರವಾಗಿದ್ದು,ಇದು ಕರ್ನಾಟಕದ ಶಾಂತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಅಪಾಯವಾಗಿದೆ.

ಮೊಅಜ್ಜಮಜಾ ಮುಲ್ಲಾನಿ
ಜಿಲ್ಲಾಧ್ಯಕ್ಷರು ಎಸಡಿಪಿಐ ಬೆಳಗಾವಿ

ಬೆಳಗಾವಿ: ರಾಜ್ಯದಲ್ಲಿ ಪದೇ ಪದೇ ಕೋಮು ವಿಷ ಬೀಜ ಬಿತ್ತಿ ಸಮಾಜದ ಶಾಂತಿ ಹಾಗೂ ಸೌಹಾರ್ದ ಹಾಳು ಮಾಡಿದ ಕೋಮುವಾದಿ ಶಕ್ತಿಗಳ ಮೇಲಿನ ಕ್ರಿಮಿನಲ್ ಪ್ರ...
26/05/2026

ಬೆಳಗಾವಿ: ರಾಜ್ಯದಲ್ಲಿ ಪದೇ ಪದೇ ಕೋಮು ವಿಷ ಬೀಜ ಬಿತ್ತಿ ಸಮಾಜದ ಶಾಂತಿ ಹಾಗೂ ಸೌಹಾರ್ದ ಹಾಳು ಮಾಡಿದ ಕೋಮುವಾದಿ ಶಕ್ತಿಗಳ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯುತ್ತಿರುವುದು ಅತ್ಯಂತ ಖಂಡನೀಯ ಹಾಗೂ ಅಪಾಯಕಾರಿ ಬೆಳವಣಿಗೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಬೆಳಗಾವಿ ಜಿಲ್ಲಾಧ್ಯಕ್ಷ ಮೊಅಜ್ಜಮಜಾ ಮುಲ್ಲಾನಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಮೊಅಜ್ಜಮಜಾ ಮುಲ್ಲಾನಿ,ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಆಂದೋಲ ಸ್ವಾಮಿ ಸೇರಿದಂತೆ ಕೋಮು ದ್ವೇಷ ಹರಡಿ, ಗಲಭೆ ಸೃಷ್ಟಿಸುವವರ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ತೆಗೆದುಕೊಂಡಿರುವ ನಿರ್ಧಾರ ರಾಜ್ಯದ ಜನತಂತ್ರ, ಕಾನೂನು ಸುವ್ಯವಸ್ಥೆಯ ಮೂಲ ತತ್ವಗಳ ಮೇಲಿನ ನೇರ ದಾಳಿಯಾಗಿದೆ. ಸಂವಿಧಾನ,ಕಾನೂನು ಮತ್ತು ಸೌಹಾರ್ದದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ದ್ವೇಷ ರಾಜಕಾರಣ ಮಾಡಿದವರನ್ನೇ ರಕ್ಷಿಸುವ ಕೆಲಸ ಮಾಡುತ್ತಿದೆ.ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸಿ,ಯುವಕರ ಮನಸ್ಸಿನಲ್ಲಿ ವಿಷ ತುಂಬಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಸರ್ಕಾರವೇ ಇಂದು ಅವರಿಗೆ ಕ್ಲೀನ್ ಚಿಟ್ ನೀಡುತ್ತಿರುವುದು ರಾಜ್ಯದ ಕಾನೂನು ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕಾರ್ಯವಾಗಿದೆ ಎಂದು ಅವರು ಆರೋಪಿಸಿದರು.

ಇಲ್ಲಿ ರಾಜ್ಯ ಸರಕಾರ ಅಮಾಯಕರ ಮೇಲಿನ ಕೇಸುಗಳನ್ನು ಹಿಂಪಡೆದದ್ದು ಅಥವಾ ಕನ್ನಡ ಪರ ಸಂಘಟನೆಗಳ ಹೋರಾಟಗಾರರ ಕೇಸುಗಳನ್ನು ಹಿಂಪಡೆದದ್ದು,ರೈತರ ಹೋರಾಟ,ರೈತ ಪರಹೋರಾಟಗಾರರ ಕೇಸುಗಳನ್ನು ಹಿಂಪಡೆದದ್ದನ್ನು ನಾವು ಸ್ವಾಗತಿಸುತ್ತೇವೆ. ಅದೇ ಸಂದರ್ಭದಲ್ಲಿ ಪುನರಾವರ್ತಿತವಾಗಿ ನಿರಂತರವಾಗಿ ಕೋಮು ಪ್ರಚೋದನೆ ಮಾಡುವಂತಹ, ಕೋಮು ಘರ್ಷಣೆಗೆ, ಕೋಮು ಗಲಭೆಗಳಿಗೆ ಉತ್ತೇಜಿಸುವಂತಹ ರೀತಿಯಲ್ಲಿ ಅಥವಾ ದೇಶದ ವಿರುದ್ಧ ರೀತಿಯಲ್ಲಿ ಹೇಳಿಕೆ ಕೊಡುವಂತಹ ಬಿಜೆಪಿ ಸಂಘ ಪರಿವಾರದ ನಾಯಕರ ಮೇಲಿನ ಕೇಸುಗಳನ್ನು ಹಿಂಪಡೆದಿರುವುದನ್ನು ಒಪ್ಪಲಿಕ್ಕೆ ಸಾಧ್ಯವಿಲ್ಲ.
ದ್ವೇಷ ಭಾಷಣ,ಪ್ರಚೋದನೆ ಹಾಗೂ ಸಮಾಜ ಒಡೆಯುವ ರಾಜಕಾರಣ ನಡೆಸಿದವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುವುದು ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ತೆಗೆದುಕೊಂಡ ನಿರ್ಧಾರವಾಗಿದ್ದು,ಇದು ಕರ್ನಾಟಕದ ಶಾಂತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಅಪಾಯವಾಗಿದೆ.ಸರ್ಕಾರದ ಈ ದ್ವಂದ್ವ ನಿಲುವಿನಿಂದ ಜನರ ವಿಶ್ವಾಸ ಕುಸಿಯುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ತಕ್ಷಣ ಈ ನಿರ್ಧಾರವನ್ನು ಮರುಪರಿಶೀಲಿಸಿ, ಕೋಮುವಾದಿ ಶಕ್ತಿಗಳಿಗೆ ನೀಡುತ್ತಿರುವ ರಾಜಕೀಯ ರಕ್ಷಣೆಯನ್ನು ನಿಲ್ಲಿಸಬೇಕು. ಇಲ್ಲವಾದರೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇನ್ನಷ್ಟು ತೀವ್ರವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಳಗಾವಿ ನಗರದಲ್ಲಿ ಶ್ರೀರಾಮ ಸೇನೆ ಸಂಘಟನೆಯ ದೂರಿನ ಆಧಾರದ ಮೇಲೆ “ಅಕ್ರಮ ವಲಸಿಗರು” ಎಂಬ ಅನುಮಾನದ ಮೇಲೆ 20ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪ...
26/05/2026

ಬೆಳಗಾವಿ ನಗರದಲ್ಲಿ ಶ್ರೀರಾಮ ಸೇನೆ ಸಂಘಟನೆಯ ದೂರಿನ ಆಧಾರದ ಮೇಲೆ “ಅಕ್ರಮ ವಲಸಿಗರು” ಎಂಬ ಅನುಮಾನದ ಮೇಲೆ 20ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಘಟನೆ ಗಂಭೀರ ಆತಂಕಕ್ಕೆ ಕಾರಣವಾಗಿದೆ. ನಂತರ ಅವರು ಪಶ್ಚಿಮ ಬಂಗಾಳದ ಕಾರ್ಮಿಕರು ಎಂದು ದಾಖಲೆಗಳ ಮೂಲಕ ಸ್ಪಷ್ಟವಾದ ಮೇಲೂ,ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲದೆ ಜನರನ್ನು ಅನುಮಾನಿಸಿ ಸಾರ್ವಜನಿಕವಾಗಿ ಅವಮಾನಕ್ಕೆ ಒಳಪಡಿಸಿರುವುದು ಕಾನೂನು ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುತ್ತದೆ.
ಪ್ರಶ್ನೆ ಏನೆಂದರೆ — ಶ್ರೀರಾಮ ಸೇನೆಗೆ ಈ ರೀತಿಯಾಗಿ ಜನರನ್ನು ಗುರುತಿಸಿ “ಅಕ್ರಮ ವಲಸಿಗರು” ಎಂದು ಘೋಷಿಸುವ ಅಧಿಕಾರವನ್ನು ನೀಡಿದವರು ಯಾರು? ಯಾವ ಕಾನೂನು ಆಧಾರದ ಮೇಲೆ ಅವರ ಹೇಳಿಕೆಯನ್ನು ಪೊಲೀಸರು ತಕ್ಷಣ ಸತ್ಯವೆಂದು ಪರಿಗಣಿಸಿದರು? ಒಂದು ಸಂಘಟನೆ ಆರೋಪ ಮಾಡಿದೆ ಅಂದರೆ ಸಾಕೇ, ಪೊಲೀಸರು ನಿರಪರಾಧ ನಾಗರಿಕರನ್ನು ತಡೆದು ವಿಚಾರಣೆ ನಡೆಸಲು?
ಭಾಷೆ, ವೇಷಭೂಷಣ ಅಥವಾ ಧರ್ಮದ ಆಧಾರದ ಮೇಲೆ ಜನರನ್ನು ಅನುಮಾನಿಸುವುದು ಅತ್ಯಂತ ಅಪಾಯಕಾರಿ ಮತ್ತು ಸಂವಿಧಾನ ವಿರೋಧಿ ಮನೋಭಾವವಾಗಿದೆ.ದೇಶದ ಬೇರೆ ರಾಜ್ಯಗಳಿಂದ ದುಡಿಮೆಗೆ ಬಂದ ಕಾರ್ಮಿಕರನ್ನು “ಬಾಂಗ್ಲಾದೇಶಿಗರು” ಎಂದು ಕರೆಯುವುದು ಅವರ ಗೌರವ ಮತ್ತು ಮೂಲಭೂತ ಹಕ್ಕುಗಳ ಮೇಲಿನ ದಾಳಿ ಆಗಿದೆ.ಇಂತಹ ಘಟನೆಗಳು ಸಮಾಜದಲ್ಲಿ ಭಯ ಮತ್ತು ದ್ವೇಷದ ವಾತಾವರಣ ಸೃಷ್ಟಿಸುತ್ತವೆ.
ಆದ್ದರಿಂದ:
• ಯಾವುದೇ ಅಧಿಕೃತ ಅಧಿಕಾರವಿಲ್ಲದೆ ಜನರ ಮೇಲೆ ಆರೋಪ ಮಾಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಶ್ರೀರಾಮ ಸೇನೆ ಸಂಘಟನೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
• ಮುಂದಿನ ದಿನಗಳಲ್ಲಿ ಯಾವುದೇ ಸಂಘಟನೆಯ ಒತ್ತಡ ಅಥವಾ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
• ನಿರಪರಾಧ ಕಾರ್ಮಿಕರನ್ನು ಅನಗತ್ಯವಾಗಿ ಕಿರುಕುಳ ನೀಡಿ ಅವಮಾನಕ್ಕೊಳಪಡಿಸಿದ ಪ್ರಕರಣದ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು.

ಎಂ.ಕೆ.ಹುಬ್ಬಳ್ಳಿ ಸಾರ್ವಜನಿಕ ಗ್ರಂಥಾಲಯದ ದುಸ್ಥಿತಿ: ತಕ್ಷಣ ನೂತನ ಕಟ್ಟಡ ನಿರ್ಮಿಸಲು SDPI ಆಗ್ರಹ*ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ ಗ್ರಾ...
26/05/2026

ಎಂ.ಕೆ.ಹುಬ್ಬಳ್ಳಿ ಸಾರ್ವಜನಿಕ ಗ್ರಂಥಾಲಯದ ದುಸ್ಥಿತಿ: ತಕ್ಷಣ ನೂತನ ಕಟ್ಟಡ ನಿರ್ಮಿಸಲು SDPI ಆಗ್ರಹ*
ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ ಗ್ರಾಮದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಶಿಥಿಲಾವಸ್ಥೆಗೆ ತಲುಪಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬುಬಕರ್ ಖಾದ್ರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೊಸ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು ಎಂದು ಎಸಡಿಪಿಐ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬುಬಕರ್ ಖಾದ್ರಿ ಒತ್ತಾಯಿಸಿದರು

Riyast me fasad barpa karne wale sangh pariwar ke muqaddamat waps liye jaane ki mukhalifat AurGaaye(cow) ke tahaffuz ke ...
25/05/2026

Riyast me fasad barpa karne wale sangh pariwar ke muqaddamat waps liye jaane ki mukhalifat
Aur
Gaaye(cow) ke tahaffuz ke bahane gunda gardi ki mazammat karte huye SDPI ka riyasat bhar me Ehtejaaj

ರೈತ ಸಂಘಟನೆಗಳ ಪ್ರಮುಖರು, ಕನ್ನಡಪರ ಹೋರಾಟಗಾರರು, ಇವರ ಮೇಲಿರುವ ಹೋರಾಟದ ಕೇಸುಗಳನ್ನು ವಾಪಸ್ ಪಡೆದಿರುವುದು ಸ್ವಾಗತಾರ್ಹ.ಆದರೆ ನಿರಂತರ ದ್ವೇಷ ...
24/05/2026

ರೈತ ಸಂಘಟನೆಗಳ ಪ್ರಮುಖರು, ಕನ್ನಡಪರ ಹೋರಾಟಗಾರರು, ಇವರ ಮೇಲಿರುವ ಹೋರಾಟದ ಕೇಸುಗಳನ್ನು ವಾಪಸ್ ಪಡೆದಿರುವುದು ಸ್ವಾಗತಾರ್ಹ.ಆದರೆ ನಿರಂತರ ದ್ವೇಷ ಭಾಷಣವೇ ತಮ್ಮ ವೃತ್ತಿ ಮಾಡಿಕೊಂಡಿರುವ,ತಮ್ಮ ದ್ವೇಷ ಭರಿತ ಮಾತುಗಳಿಂದ ಸಮಾಜದ ಸ್ವಾಸ್ತ್ಯವನ್ನು ಕೆಡಿಸುತ್ತಿರುವ ಕೋಮು ಕ್ರಿಮಿಗಳ ಕೇಸ್ ವಾಪಸ್ ಪಡೆಯುವುದು ಯಾತಕ್ಕಾಗಿ? ಹಾಗಾದರೆ ಸಂಘ ಪರಿವಾರದ ವಿರುದ್ಧ ಮಾತನಾಡುವುದು ಯಾತಕ್ಕೆ? ಬಾಯಿಚಪಲಕ್ಕೆಯಾ? ನಿಮ್ಮ ಈ ಕ್ರಮ ಪರೋಕ್ಷವಾಗಿ ನೀವು ಅವರೊಂದಿಗೆ ಇದ್ದೀರಾ?
💚❤️

Address

Belgaum

Alerts

Be the first to know and let us send you an email when SDPI Belagavi posts news and promotions. Your email address will not be used for any other purpose, and you can unsubscribe at any time.

Contact The Organization

Send a message to SDPI Belagavi:

Share