15/08/2015
ಸ್ವಾತಂತ್ರ್ಯ ಬಂದು ಇಂದಿಗೆ ಸುಮಾರು ೬೫ ವರ್ಷಗಳು ಕಳೆದು ಹೋಗಿವೆ, ೧೮೫೭ ರ ಮೊದಲ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಆರಂಭವಾಗಿದ್ದು ನಮ್ಮ ದೇಶವನ್ನ ಬ್ರಿಟೀಷರ ದಾಸ್ಯದಿಂದ ಬಿಡಿಸುವ ಹೊರಾಟ. ನಿರಂತರ ೨೦೦ ವರ್ಷಗಳು ಅವರು ಆಳಿದರು,ದೋಚಿದರು,ಕಬ್ಬಿನ ಜಲ್ಲೆಯಂತೆ ಹಿಂಡಿದರು,ಎಷ್ಟೋ ನಮ್ಮ ಮುಗ್ಧ ಜನರು ತಮ್ಮ ಪ್ರಾಣ ತ್ಯಾಗ ಮಾಡಿದರು, ಸುಭಾಶ್ ಚಂದ್ರ ಬೋಸ್ , ಭಗತ್ ಸಿಂಗ್, ಸೂರ್ಜೋ ಸೇನ, ಮುಂತಾದ ಸಾವಿರಾರು ಕ್ರಾಂತಿಕಾರಿಗಳ ನರಬಲಿ ನೆಡೆದು ಹೊಯಿತು ಕೊನೆಗೆ ಗಾಂಧಿ ಅನ್ನುವ ತಾತ ಮಾಧ್ಯಮವಾಗಬೇಕಾಯಿತು ಭಾರತ ಮತ್ತು ಪಾಕಿಸ್ತಾನಗಳನ್ನ ಬೇರೆ ಬೇರೆ ಮಾಡಿ ಸಧಾ ಕಚ್ಚಾಡುವ ತೆರದಲ್ಲಿ ಮಾಡಿ, ಮುಂದೆ ಅದನ್ನೇ ಮುಖ್ಯ ವಿಚಾರವನ್ನಾಗಿರಿಸಿಕೊಂಡು ದೇಶದ ಒಳಗಡೆಯೂ ಎರಡು ಕೋಮುಗಳ ನಡುವೆ ಬಿರುಕು ಉಂಟುಮಾಡಿ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನ ಅಂತರಿಕ ವಾಗಿ ರಾಜಕಾರಣಿಗಳು ಮನಸೋ ಇಚ್ಛೆ ದೋಚುವ ಲೈಸೆನ್ಸ್ ಕೊಡಿಸಲು!! ಅಲ್ಲವೇ?
೧೯೬೫ ರಲ್ಲಿ ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಂದರ್ಭದಲ್ಲಿ ಕೊಡುವುದೆಲ್ಲವನ್ನು ಕೊಟ್ಟು ಕಳಿಸಿದ್ದರೂ ಕಾಲು ಕೆರೆದುಕೊಂಡು ಬಂದರು ಯುದ್ದ ಮಾಡಲು,ಆವಾಗ ನಮ್ಮ ದೇಶದ ಸೈನ್ಯವನ್ನು ಎಷ್ಟು ಭದ್ರವಾಗಿ ಕಟ್ಟಿದ್ದೆವೆಂದರೆ ನಮ್ಮ ಮುಂದೆ ತರಗೆಲೆಗಳಂತೆ ಉದುರಿ ಹೊಯಿತು ಪಾಕಿಸ್ತಾನ. ಸ್ವತಹ ಆಗಿನ ಪ್ರದನಿಗಳಾಗಿದ್ದ ಲಾಲ್ ಭಾಹದ್ದೂರ್ ಶಾಸ್ತ್ರಿಗಳು ಮುಂದಾಳತ್ವ ವಹಿಸಿ “೨ನೆ ಕಾಶ್ಮೀರ ಕಧನ”ವನ್ನ ಎದುರಿಸಿದರು, ಅವರೊಂದಿಗೆ ಲೆಫ್ಟಿನೆಂಟ್ ಜನರಲ್ ಚೌದರಿ, ಲೆಫ್ಟಿನೆಂಟ್ ಜನರಲ್ ಹರ್ಭಕ್ಶ್ ಸಿಂಗ್ , ಏರ್ ಚೀಫ್ ಮಾರ್ಷಲ್ ಅರ್ಜುನ್ ಹಾಗು ಮುಂತಾದವರು ಜೊತೆಯಾದರು. ಕೊನೆಗೆ ಆ ಯುದ್ಧವೂ “ತಾಷ್ಕೆಂಟ್ ಒಪ್ಪಂದ”ವನ್ನ ಸಂಯುಕ್ತ ರಾಷ್ಟ್ರ ಸಂಘಟನೆಯ ಮಧ್ಯಸ್ತಿಕೆಯಲ್ಲಿ ಪರಸ್ಪರ ಭಾರತ ಹಾಗು ಪಾಕಿಸ್ತಾನಗಳು ಸಹಿ ಹಾಕಿಸುವಲ್ಲಿ ಮುಕ್ತಾಯಗೊಂಡಿತು.
೧೯೭೧ ರಲ್ಲಿ ಮತ್ತೊಮ್ಮೆ ಪ್ರಹಾರ, ಆಗಿನ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ದೇಶದ ಪ್ರದಾನಿಯಗಿದ್ದರು. ಡಿಸೆಂಬರ್ ೩ ೧೯೭೧ ರಂದು ಪ್ರಾರಂಭಗೊಂಡ ಯುದ್ದವು ಕೇವಲ ೧೩ ದಿನಗಳಲ್ಲಿ ಮುಗಿದು ಹೊಯಿತು,ಹಾಗು ವಿಶ್ವ ಕಂಡ ಅತ್ಯಂತ ಕಡಿಮೆ ಸಮಯದ ಯುದ್ದ ಇದಾಗಿತ್ತು, ಆದರೆ ಆಗಿನ ಲೆಫ್ಟಿನೆಂಟ್ ಜನರಲ್ ಗಳಾದ ಜೆ. ಎಸ್ ಅರೋರ, ಜಿ. ಬೀವರ್, ಸಗಥ್ ಸಿಂಗ್, ಅಡ್ಮಿರಲ್ ನಂದ, ಹಾಗು ಏರ್ ಚೀಫ್ ಮಾರ್ಷಲ್ ಪ್ರತಾಪ್ ಲಾಲ್ ಅವರ ಹೋರಾಟ ಹೇಗಿತ್ತೆಂದರೆ ಹದಿಮೂರು ದಿನಗಳಲ್ಲಿ ಪಾಕಿಸ್ತಾನ ತನ್ನ ಶಸ್ತ್ರಾಸ್ತ್ರ ಗಳನ್ನ ತ್ಯಜಿಸಿ ಬೇಷರತ್ ಶರಣಾಯಿತು,ನಂತರ ಪೂರ್ವ ಪಾಕಿಸ್ತಾನ ಬಾಂಗ್ಲಾದೆಶವೆನ್ನುವ ಸ್ವಾತಂತ್ರ್ಯ ರಾಷ್ಟ್ರವಾಯಿತು.
೧೯೯೯ ರಲ್ಲಿ ನಡೆದ ಕಾರ್ಗಿಲ್ ಯುದ್ದವಂತೂ ನಿಮಗೆಲ್ಲ ಗೊತ್ತೇ ಇದೆ, ಆಗಿನ ಪ್ರಧಾನಿಗಳಗಿದ್ದವರು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರು. ಸುಮಾರು ೨ ತಿಂಗಳು ನಡೆದ ಕದನದಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡ ಕಾಶ್ಮೀರದ ಕಾರ್ಗಿಲ್ ಭಾಗವನ್ನ ಮತ್ತೆಂದು ಅವರಿಗೆ ಬಿಟ್ಟು ಕೊಡದಂತೆ ವಾಪಸ್ ಪಡೆದೆವು. ಆಗ ದೇಶಕ್ಕಾಗಿ ಪ್ರಾಣ ತೆತ್ತ ಸುಮಾರು ಸೈನಿಕರಿಗೆ ಪರಮವೀರ ಚಕ್ರ ಪ್ರಶಸ್ತಿಗಳನ್ನ ಕೊಡಮಾದಲಾಯಿತು, ಅವರಲ್ಲಿ ಯೋಗಿಂದ್ರ ಸಿಂಗ್ ಯಾದವ್, ಮನೋಜ್ ಕುಮಾರ್ ಪಾಂಡೆ, ವಿಕ್ರಂ ಭಾತ್ರ, ಅನುಜ್ ನಾಯರ್, ಸರವಣನ್, ಅಜಯ್ ಅಹುಜಾ, ಸಂಜಯ್ ಕುಮಾರ್, ಹಾಗು ರಾಜೇಶ್ ಸಿಂಗ್ ಅಧಿಕಾರಿ ಮುಂತಾದವರು ಮುಖ್ಯವಾದವರು.
ಓದಿದಿರಲ್ಲ ಇದನ್ನೆಲ್ಲಾ? ಇದನ್ನೆಲ್ಲ ನಮಗೆ ಗೊತ್ತಿಲ್ಲ ಅನ್ನುವ ಕಾರಣಕ್ಕೆ ಹೇಳುತ್ತಿಲ್ಲ, ನಾವು ಮರೆತಿದ್ದೇವೆ ಅನ್ನುವುದನ್ನ ನೆನಪಿಸುತ್ತಿದ್ದೇನೆ ಅಷ್ಟೇ. ನಮಗೆ ಬಂದಿರುವ ಸ್ವಾತಂತ್ರ್ಯ ಎಂತಹದು ? ಸದಾ ಒಂದು ಭಾಗದಿಂದ ಒಳನುಸುಳಿ ಕಂಡ ಕಂಡಲ್ಲಿ ಬಾಂಬುಗಳನ್ನ ಇಟ್ಟು ಅಮಾಯಕರನ್ನ ಸಾಯಿಸುವ ಪಕ್ಕದ ದೇಶ ಒಂದು ಸೃಷ್ಟಿಯಾಯಿತು, ಪದೇ ಪದೇ ಕಾಶ್ಮೀರದಲ್ಲಿ ದಲ್ಲಿ ಗಲಾಟೆ ಮಾಡುವುದು, ಮತ್ತೊಂದು ಕಡೆ ಇಂದ ಬಾಂಗ್ಲಾದೇಶ ಅನ್ನುವ ಚಿಕ್ಕ ರಾಷ್ಟ್ರದವರು ನಮ್ಮ ದೇಶಕ್ಕೆ ಅಕ್ರಮ ವಾಗಿ ಒಳನುಸುಳುವುದು, ಭಯೋತ್ಪಾದನೆಯನ್ನ ಪ್ರತ್ಯಕ್ಷವಾಗಿ ಬೆಂಬಲಿಸುವ ಪಾಕಿಸ್ತಾನವೆಂಬ ನರಕ ನಮಗೆ ಸಿಕ್ಕಿತು ಅಲ್ಲವೇ? ಹಾಗೆಂದು ಸ್ವಾತಂತ್ರ್ಯ ಸಂದರ್ಭದಲ್ಲಿ ವಿಭಜನೆ ಮಾಡಬಾರದಿತ್ತು ಅನ್ನುವ ಅಭಿಪ್ರಾಯವಲ್ಲ ಆದರೆ ವಿಭಜನೆಯಾದಮೇಲೆ ಸುಮ್ಮನಿದ್ದುಕೊಂಡು ದೇಶದ ಆಂತರಿಕ ಅಭಿವೃದ್ದಿಯನ್ನ ಗಮನಿಸಬೇಕು ಹೊರತು,ಮತ್ತೆ ಮತ್ತೆ ಕಾಲು ಕೆರೆದುಕೊಂಡು ಬರುವುದು ಯಾವ ಮಾಹ ಘನ ಕಾರ್ಯ ಸಾದಿಸಲು? ಅನ್ನುವುದು.
ನಮ್ಮನ್ನು ಪ್ರತಿಕ್ಷಣವೂ ಹಿಂಸಿಸುತ್ತಿರುವ ಪಾಕಿಸ್ತಾನ,ಬಾಂಗ್ಲಾದೇಶ,ಚೀನಾಗಳು ಒಂದುಕಡೆಯಾದರೆ ಇನ್ನೊಂದು ಆಂತರಿಕವಾಗಿ ಸಾಮಾನ್ಯ ಜನರನ್ನು ಕಿತ್ತು ತಿನ್ನುತ್ತಿರುವ ಹೊಲಸು ರಾಜಕಾರಣಿಗಳು!! ಎಂತಹ ನಾಯಕರುಗಳು!!! ಪರಸ್ಪರ ಸ್ಪರ್ಧೆಗೆ ಬಿದ್ದವರಂತೆ ಹಗರಣಗಳನ್ನು ನಡೆಸುತ್ತಿದ್ದಾರೆ, ಜನ ಸೇವೆಯ ಹೆಸರಲ್ಲಿ ತಮ್ಮ ೧೦ ತಲೆಮಾರುಗಳು ಕೂತು ತಿನ್ನುವಷ್ಟು ದುಡ್ಡು ದೋಚುತ್ತಿದ್ದಾರೆ, ತಮ್ಮ ಸ್ವಂತ ಆಸ್ತಿಯಂತೆ ಮಣ್ಣು ಅಗೆದು ಅಕ್ರಮ ಗಣಿಗಾರಿಕೆಯನ್ನ ರಾಜಾರೋಷವಾಗಿ ನೆಸುತ್ತಿದ್ದಾರೆ ಇನ್ನು ಕೆಲವರಂತೂ ಮುಗ್ಧ ರೈತರ ಭೂಮಿಯನ್ನ ಕಸಿದುಕೊಳ್ಳುತ್ತಿದ್ದಾರೆ, ಕೇಳಲು ಹೋದರೆ ಅನ್ನದಾತನ ತಲೆಗೆ ಗುಂಡಿಟ್ಟು ಗೋಲಿಬಾರ್ ಮಾಡುತ್ತಿದ್ದಾರೆ!! ಆದರೆ ಮಾಧ್ಯಮದ ಮುಂದೆ ಸತ್ಯ ಹರಿಶ್ಚಂದ್ರ ರಂತೆ ಪೋಸು ಕೊಡುವುದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ.
ಧರ್ಮದ ಹೆಸರಲ್ಲಿ ಇನ್ನು ಕೆಲವರದ್ದು ಮೋಸ ಹಾಗು ಹಗಲು ದರೋಡೆ, ಕೋಟ್ಯಾಂತರ ರೂಪಾಯಿಗಳನ್ನ ನೆಲಮಾಳಿಗೆಯಲ್ಲಿ ಬಚ್ಚಿಡುತ್ತಿದ್ದಾರೆ, ಸಂತನೆಂದು ಹೇಳಿಕೊಂಡು ವ್ಯಭಿಚಾರವನ್ನ ನಡೆಸುವ ಕಳ್ಳ ಸ್ವಾಮಿಜಿಗಳು ನಮ್ಮ ದೇಶದಲ್ಲಿ ಮೆರೆಯುತ್ತಿದ್ದಾರೆ, ಧರ್ಮದ ಹೆಸರಿನಲ್ಲಿ ಜರನರನ್ನ ಮೋಸಗೊಳಿಸಿ ಮಂಕು ಬೂದಿ ಎರಚಿ ಹಗಲಿನಲ್ಲೇ ರಾಜಾರೋಷವಾಗಿ ಜನರ ಸಮಯ ಹಾಗು ಹಣವನ್ನ ದೋಚುತ್ತಿದ್ದಾರೆ, ಇನ್ನು ಕೆಲವು ಸ್ವಾಮಿಗಳು ಕೆಲವು ಹೊಲಸು ರಾಜಕಾರಣಿಗಳನ್ನ ನೇರವಾಗಿ ಹಳಿಯುವ, ಅಥವಾ ಬೆಂಬಲಿಸುವುದನ್ನ ನೋಡಿದರೆ ಅವರು ಧರ್ಮ ಪ್ರಚರಕರಲ್ಲ ಕೇವಲ ಅಪ ಪ್ರಚಾರಕರು ಅನ್ನುವುದು ಸ್ಪಷ್ಟವಾಗುತ್ತೆ ಅಲ್ಲವೇ?
ಪೊಲೀಸರದು ಇನ್ನು ವಿಚಿತ್ರ ಹಿಂಸೆ, ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಸರಿಯಾಗಿ ನಿಮ್ಮ ವಾಹನಗಳನ್ನ ಸರಿಯಾಗಿ ಓಡಿಸಿದ್ದರೂ, ಸಂಚಾರಿ ನಿಯಮಗಳನ್ನ ಪಾಲಿಸಿದ್ದರೂ, ಸಾಮಾನ್ಯರನ್ನ ಹಿಡಿದು ಫೈನ್ ಹೆಸರಿನಲ್ಲಿ ದೋಚುತ್ತಿದ್ದಾರೆ, ಪೊಲೀಸ್ ಎನ್ನುವ ಟೋಪಿ ದರಿಸಿಕೊಂಡು ರೋಲ್ಕಾಲ್ ಮಾಡುವ ಅಧಿಕಾರಿಗಳು, ಅವರನ್ನು ಬೆಂಬಲಿಸುವ ರಾಜಕೀಯದ ಕಾಣದ ಕೈಗಳು.
ಬ್ರಷ್ಟಾಚಾರದ ವಿರುದ್ಧ ಯಾರಾದರು ಪ್ರತಿಭಟನೆ ಮಾಡಿದರೆ, ಅವರ ಮೇಲೆ ಲಾಟಿ ಚಾರ್ಜ್ ಮಾಡುವುದು,ಅರೆಸ್ಟ್ ಮಾಡುವುದು, “ಜನರಿಗೆ ಉಪಯೋಗಕ್ಕೆ ಬರುವ ಬ್ರಷ್ಟಾಚಾರ ವಿರೋಧಿ ಕಾನೂನನ್ನ ಜಾರಿಗೆ ತನ್ನಿ” ಎಂದರೆ , ರಾಜಕೀಯದವರಿಗೆ ಬೇಕಾಗುವ, ಅವರಿಗೆ ಮತ್ತಷ್ಟು ದೋಚಲು ಅನುಕೂಲವಾಗುವ೦ತೆ ಅದನ್ನ ತಿರುಚಿ ಅದನ್ನೇ ಸಂಸತ್ತಿನಲ್ಲಿ ಮಂಡಿಸುವುದನ್ನ ನೋಡಿದರೆ ರಕ್ತ ಕುದಿಯುವುದಿಲ್ಲವೇ?
ಅದಕ್ಕೆ ಕೇಳಿದ್ದು ಸ್ನೇಹಿತರೆ ಎಲ್ಲಿಯ ಸ್ವಾತಂತ್ರ್ಯ? ಯಾವ ಸ್ವಾತಂತ್ರ್ಯ ನಮಗೆ ಬಂದಿರುವುದು? ಹೋಗಲಿ ಒಂದು ತಮಾಷೆ ಗೊತ್ತಾ? ನಮ್ಮ ಸ್ವಾತಂತ್ರ್ಯ ದಿನಾಚರಣೆ ಯನ್ನೇ ನಾವು ನೆಮ್ಮದಿಯಾಗಿ ಆಚರಿಸಲು ಆಗುತ್ತಿಲ್ಲ!! ಪಕ್ಕದ ಪಾಕಿಗಳು ಯಾವಾಗ ಬಾಂಬ್ ಹಾಕುತ್ತಾರೋ ? ಯಾವಾಗ ನಾವು ಸಾಯಬೇಕೋ ಅನ್ನುವ ಭಯದಲ್ಲೇ ಇಡೀ ದೇಶ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ, ಎಷ್ಟು ನಾಚಿಕೆಗೇಡಿನ ಸಂಗತಿಯಲ್ಲವೇ? ಇನ್ನೆ೦ದೂ ನಮಗೆ ತೊಂದರೆ ಕೊಡದ ರೀತಿಯಲ್ಲಿ ಪಾಕಿಗಳನ್ನ ಸಧೆಬಡಿಯುವ ಸರ್ಕಾರ ಯಾಕೆ ಬರುತ್ತಿಲ್ಲ? ಅಥವಾ ನಮ್ಮ ರಾಜಕಾರಣಿಗಳಿಗೆ ಅದನ್ನ ಮಾಡುವ ಮನಸಿಲ್ಲ ಏಕೆ?
ಒ೦ದೇ ಪರಿಹಾರ ಅದು ಮೊದಲು ನಮ್ಮ ನಮ್ಮಲ್ಲೇ ಇದ್ದು ನಮ್ಮಲ್ಲೇ ಒಡಕನ್ನ ಉಂಟುಮಾಡಿ ರಾಜಕೀಯದ ಬೆಳೆಬೇಯಿಸಿಕೊಳ್ಳುತ್ತಿರುವ ರಾಜಕೀಯದ ಹೊಲಸು ನಾಯಕರುಗಳಿಗೆ ಬುದ್ದಿ ಕಲಿಸುವುದು, ಬ್ರಷ್ಟಾಚಾರವನ್ನ ಸಾಯಿಸಲು ಸೋಮರಿತನವನ್ನ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ದುಡಿಯುವುದು.. ಅಲ್ಲವೇ? ಇಲ್ಲದಿದ್ದಲ್ಲಿ ಇನ್ನೊಂದು ದಿನ ನಮ್ಮ ದೇಶದಲ್ಲಿ ನಾವೇ ಅಲ್ಪ ಸಂಖ್ಯಾತರಾಗಿ, ಪಾಕಿಸ್ತಾನದ ದಾಸರಾಗಿ ಹೋಗಬೇಕಾಗುತ್ತದೆ ಅಷ್ಟೇ ಅಲ್ಲ ನಮ್ಮ ಸೋಮಾರಿತನಕ್ಕೆ ನಮ್ಮ ಮೊಮ್ಮಕ್ಕಳು ನರಕಯಾತನೆಯನ್ನ ಅನುಭವಿಸಬೇಕಾಗುತ್ತದೆ ಅಲ್ಲವೇ?
ಎಲ್ಲಾ ಅಂತರಿಕ ಕೆಸರೆರಚಾಟಗಳ ನಡುವೆಯೂ ದೇಶಕ್ಕಾಗಿ,ನಮ್ಮ ಉಜ್ವಲ ನಾಳೆಗಳಿಗಾಗಿ ಪ್ರಾಣ ತೆತ್ತು ವೀರ ಸ್ವರ್ಗವನ್ನ ಏರಿರುವ ಎಲ್ಲ ನಮ್ಮ ಸೈನಿಕ ಭಾಂದವರಿಗೆ ಭಾವ ಪೂರ್ಣ ಅಶ್ರುತರ್ಪಣವನ್ನ ಸಲ್ಲಿಸೋಣ.. ಹಾಗೆ ಬನ್ನಿ…. ಸ್ವಾತಂತ್ರ್ಯ ದಿನಾಚರಣೆಯ ಈ ಸಂಧರ್ಬದಲ್ಲಿ ಅಣ್ಣ ಹಜಾರೆಯವರ ಬ್ರಷ್ಟಾಚಾರಿ ವಿರೋಧಿ ಕಾಯ್ದೆ “ಲೋಕ ಪಾಲ್ ಬಿಲ್” ಅನ್ನು ಸಂಪೂರ್ಣವಾಗಿ ಬೆಂಬಲಿಸೋಣ, ಸಾಧ್ಯವಾದಷ್ಟು ಬ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡೋಣ, ದೇಶವನ್ನ ಅಭಿವೃದ್ಧಿಯ ದಿಸೆಯಲ್ಲಿ ಮುನ್ನೆಡೆಸುವ ನಾಯಕರನ್ನ ಆರಿಸುವ ಜವಾಬ್ದಾರಿಯನ್ನ ಅರಿಯೋಣ ಹಾಗು ಅರಿವನ್ನ ಮೂಡಿಸುವ ಪ್ರಯತ್ನ ಮಾಡೋಣ ಅಲ್ಲವೇ? ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯಗಳು …ಮತ್ತೊಮ್ಮೆ ಬರ್ತೀನಿ……….