11/03/2021
"ಮರೆಯೋದು ಹ್ಯಾಂಗ ಮೆಹಬೂಬ ಮುಜಾವರನನ್ನ"
ಭಾವೈಕ್ಯ ಶ್ರದ್ಧಾ ಕೇಂದ್ರವಾದ ಬೀಳಗಿಯಿಂದ ಸುಮಾರು 4 ಕಿಲೋ ಮೀಟರ ದೂರದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದ ಹಿನ್ನೆಲೆ ಬಲು ವಿಶೇಷವಾದದ್ದು,2012ರಲ್ಲಿ 221 ಜನ ವೃಧ್ಧರು ಕಾಶಿಯಾತ್ರೆ ಕೈಗೊಂಡ ಸವಿನೆನಪಿಗಾಗಿ ಕಾಶಿಯಲ್ಲಿನ ಒಂದು ಶಿವಲಿಂಗ ತಂದು ಇಲ್ಲಿ ಪ್ರತಿಷ್ಠಾಪಿಸಿ ಕಾಶಿ ವಿಶ್ವನಾಥ ಮಂದಿರವನ್ನ ನಿರ್ಮಿಸಿದ್ದಾರೆ,ವಿಶೇಷವೆಂದರೆ ನಾಗರಾಳ ಗ್ರಾಮದ ಭಾವೈಕ್ಯ ಸಂತ ಮೆಹಬೂಬ ಮುಜಾವರ ಈ ದೇವಾಲಯದ ನಿರ್ಮಾತೃ ಎಂಬುದು, ಭಾವೈಕ್ಯೆತೆ ಸಾರುವ ರಥೋತ್ಸವ ಪ್ರತಿ ಮಹಾಶಿವರಾತ್ರಿಯಂದು ಇಲ್ಲಿ ಜರಗುತ್ತದೆ ಅದರೊಟ್ಟಿಗೆ ಉತ್ತರಕರ್ನಾಟಕದ ಸಜ್ಜಕ ಹುಗ್ಗಿ ಇವೆಲ್ಲವುಗಳು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ, ಪ್ರತಿ ವರ್ಷ ಲಕ್ಷಾಂತರ ಜನರು ಇಲ್ಲಿ ಬಂದು ಸಕ್ಷಾತ್ ಕಾಶಿ ವಿಶ್ವನಾಥನ ದರ್ಶನ ಪಡೆಯುತ್ತಾರೆ.
ಭಾವೈಕ್ಯ ಸಂತ ಮೆಹಬೂಬ ಮುಜಾವರ ಇಂದು ನಮ್ಮೊಟ್ಟಿಗಿಲ್ಲವಾದರು ಅವರು ನಿರ್ಮಿಸಿದ ಈ ದೇವಾಲಯ ಚರಿತ್ರೆಯ ಪುಟ ಸೇರಿರುವುದು ಅಕ್ಷರಶಃ ಸತ್ಯ......
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು