31/03/2024
ಭಾರತೀಯ ಜನತಾ ಪಾರ್ಟಿ, ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಮಾಜಿಕ ಸಮ್ಮೇಳನ ಕಾರ್ಯಕ್ರಮ ದಿನಾಂಕ 31-03-2024 ರಂದು ಬೆಳಿಗ್ಗೆ 10:30 ಕ್ಕೆ ಅಂಬಿಕಾ ಇಂಟರ್ನ್ಯಾಷನಲ್ ಬೈಂದೂರು ಇಲ್ಲಿ ಬೈಂದೂರು ಮಂಡಲದ ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷರಾದ ಶಿವರಾಜ ಪೂಜಾರಿ ಗೋಳಿಹೊಳೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗ ಮೋರ್ಚಾದ ಉಪಾಧ್ಯಕ್ಷರಾದ ವಿಠ್ಠಲ್ ಪೂಜಾರಿ, ಬೈಂದೂರು ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಹಿಂದುಳಿದವರು ಮೋರ್ಚಾದ ಅಧ್ಯಕ್ಷರಾದ ವಿಜಯ ಕೊಡವೂರು ಉಡುಪಿ, ಅಶೋಕ್ ಮೂರ್ತಿ ಬೈಂದೂರು ಪ್ರಭಾರಿಗಳು, ಅರುಣ್ ಕುಮಾರ್ ಬಾಣ ಉಡುಪಿ ಜಿಲ್ಲಾ ಸಹಪ್ರಭಾರಿ, ಶ್ರೀನಾಥ್ ರಾವ್ ರಾಜ್ಯ ಸಾಮಾಜಿಕ ಜಾಲ ತಾಣ ಸಂಚಾಲಕರು,ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ತಿoಗಳಾಯ, ಒಬಿಸಿ ಉಪಾಧ್ಯಕ್ಷರುಗಳಾದ, ವಿನೋದ್ ಕುಮಾರ್ ಗುಜ್ಜಾಡಿ, ಭಾರತೀಯ ಚಂದ್ರಶೇಖರ್ ಉಡುಪಿ, ರಾಜಶೇಖರ ದೇವಾಡಿಗ ಬೈಂದೂರು, ಜಿಲ್ಲಾ ಒಬಿಸಿ ಕಾರ್ಯದರ್ಶಿ ಗಳಾದ ಚಂದ್ರಜೋಗಿ, ಶಾಂತಿ ಕಾರ್ವಿ ಗಂಗೊಳ್ಳಿ, ಬೈಂದೂರು ಮಂಡಲದ ಓಬಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ದೇವಾಡಿಗ ಉಪ್ಪುಂದ, ರಾಘವೇಂದ್ರ ಕೊಠಾರಿ ಕೆರಾಡಿ ಉಪಸ್ಥಿತರಿದ್ದರು.
ಮಂಡಲದ ಓಬಿಸಿ ಎಲ್ಲಾ ಪದಾಧಿಕಾರಿಗಳು, ಎಲ್ಲಾ ಮಹಾ ಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಕ್ಷದ ಹಿರಿಯರು ಹಾಗೂ ಕಿರಿಯ ಕಾರ್ಯಕರ್ತರು ಉಪಸ್ಥಿತಿಯಲ್ಲಿ ಹಿಂದಿನ ಮೂರು ಅವಧಿಯ ಅಧ್ಯಕ್ಷರುಗಳಾದ ಆನಂದ್ ಕಾರ್ವಿ ಉಪ್ಪುಂದ, ಗಣೇಶ್ ಪೂಜಾರಿ ಕೆಂಚನೂರು, ಸಂತೋಷ್ ಪೂಜಾರಿ ಮುಕ್ಕೋಡು ಇವರನ್ನು ಸನ್ಮಾನಿಸಲಾಯಿತು.
ಬೈಂದೂರು ಮಂಡಲದ ಹಿಂದುಳಿದ ಮೋರ್ಚಾದ ಎಲ್ಲಾ ಪದಾಧಿಕಾರಿಗಳ ಪದಗ್ರಹಣ ಮತ್ತು ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಸದಸ್ಯರುಗಳ ಪದಗ್ರಹಣ ಈ ಸಂದರ್ಭದಲ್ಲಿ ನೆರವೇರಿತು.