11/08/2026
ಮಹಾರಾಷ್ಟ್ರ ದಲ್ಲಿ ಕೂಡ
ನಮ್ಮ ಸ್ವಾಮಿ ಜೀ
ಪವರ್ ಫುಲ್
🚩👆*ಲಿಂಗಾಯತ ಸಮಾಜದ ಸೇರ್ಪಡೆಗೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಆಡಳಿತಾತ್ಮಕ ಪ್ರಕ್ರಿಯೆಗೆ ಚಾಲನೆ* ,
*ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರುಗಳ ನೇತೃತ್ವದ ಸಮಸ್ತ ಲಿಂಗಾಯತ ಸಮಾಜದ ನಿಯೋಗದೊಂದಿಗೆ* 💐*CM ಫಡ್ನವೀಸ್ DcM ಶಿಂಧೆ ಗೆ ಅಭಿನಂದನೆ*💐
ಸಹ್ಯಾದ್ರಿ ಅತಿಥಿಗೃಹ, ಮುಂಬೈ | ದಿನಾಂಕ: 11 ಆಗಸ್ಟ್ 2026
ಕೆಲವು ಒಳಪಂಗಡಗಳಿಗೆ ಮಾತ್ರ ಸೀಮಿತವಾಗಿದ್ದ ಲಿಂಗಾಯತ ಸಮಾಜದ ಬೇಡಿಕೆಗಳ ಕುರಿತು ಇಂದು ಸಹ್ಯಾದ್ರಿ ಅತಿಥಿಗೃಹದಲ್ಲಿ ಸರ್ಕಾರದ ಮಟ್ಟದಲ್ಲಿ ಸಕಾರಾತ್ಮಕ ಚರ್ಚೆ ನಡೆಯಿತು. ವಿಶೇಷವಾಗಿ ಜಗಜ್ಯೋತಿ ಮಹಾತ್ಮ ಬಸವೇಶ್ವರ ಆರ್ಥಿಕ ಅಭಿವೃದ್ಧಿ ಮಹಾಮಂಡಳದ ಯೋಜನೆಗಳ ಪ್ರಯೋಜನವು ಸಮಸ್ತ ಲಿಂಗಾಯತ ಸಮಾಜದ ಬಾಂಧವರಿಗೆ ದೊರೆಯಬೇಕು ಹಾಗೂ ಕೆಲವು ಷರತ್ತುಗಳನ್ನು ತೆಗೆದುಹಾಕಬೇಕು ಎಂಬ ಪ್ರಮುಖ ಬೇಡಿಕೆಯ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿದ್ದು, ಈ ಬೇಡಿಕೆಗಳ ಈಡೇರಿಕೆಗೆ ಆಡಳಿತಾತ್ಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಲಿಂಗಾಯತ ಸಮಾಜದ ಪ್ರಮುಖ ಬೇಡಿಕೆಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಕಾರಾತ್ಮಕ ಚರ್ಚೆ ನಡೆಸಲಾಯಿತು. ಅಲ್ಲದೆ ಮಾನ್ಯ ಉಪಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಸಾಹೇಬರು ಹಾಗೂ ಮಾನ್ಯ ಉಪಮುಖ್ಯಮಂತ್ರಿ ಶ್ರೀಮತಿ ಸುನೇತ್ರಾ ತಾಯಿ ಪವಾರ್ ಅವರೊಂದಿಗೆ ಸಹ ಲಿಂಗಾಯತ ಸಮಾಜದ ವಿವಿಧ ಬೇಡಿಕೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಲಿಂಗಾಯತ ಸಮಾಜದ ಬೇಡಿಕೆಗಳ ಕುರಿತು ಈ ಹಿಂದೆಯೂ ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಒತ್ತಾಯ ಮತ್ತು ಮನವಿ ಸಲ್ಲಿಸಲಾಗಿತ್ತು. ಈ ನಿರಂತರ ಪ್ರಯತ್ನಗಳಿಗೆ ಇಂದು ಸಕಾರಾತ್ಮಕ ದಿಕ್ಕು ದೊರೆತಿದ್ದು, ಲಿಂಗಾಯತ ಸಮಾಜ ಬಾಂಧವರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮಗಳು ಪ್ರಾರಂಭಗೊಂಡಿವೆ.
ಈ ಹೋರಾಟ ಹಾಗೂ ನಿರಂತರ ಮನವಿಯ ನಿಯೋಗದ ನೇತೃತ್ವವಹಿಸಿದ್ದ *ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಮೃತ್ಯುಂಜಯ ಮಹಾಸ್ವಾಮೀಜಿಗಳು*, ಶಾಸಕ ಶಿವಾಜಿ ಪಾಟೀಲ್, ಶಾಸಕ ಗೋಪಿಚಂದ್ ಪಡಳ್ಕರ್, ಶಾಸಕ ರಾಜೇಂದ್ರಜಿ ಪಾಟೀಲ್, ಮಂಗೇಶ್ ದಾದಾ ಚಿವಟೆ, ಪೈಲ್ವಾನ್ ನಿತೀನ್ ಪಾಟೀಲ್, ಮಾನ್ಯ ಸಂಜಯ್ ತೆಲನಾಡೆ , ಕೊಲ್ಲಾಪುರ ವಿದ್ಯಾಧರ ಕೊಬ್ರೆ , ಬೆಳಗಾವಿ ಯುವ ನಾಯಕ ಗುಂಡು ಪಾಟೀಲ್ ಹಾಗೂ ಲಿಂಗಾಯತ ಸಮಾಜದ ನಿಯೋಗವು ಮಹತ್ವದ ಪಾತ್ರ ವಹಿಸಿದೆ.
ಲಿಂಗಾಯತ ಸಮಾಜದ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ನಡೆಯುತ್ತಿರುವ ಈ ಪ್ರಯತ್ನಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಸಮಸ್ತ ಲಿಂಗಾಯತ ಸಮಾಜದ ಪರವಾಗಿ ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಸಂಬಂಧಿತ ಗಣ್ಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.
«“ನಮ್ಮ ಹೋರಾಟಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಇದೀಗ ಬೇಡಿಕೆಗಳ ಅಂತಿಮ ನಿರ್ಧಾರಕ್ಕಾಗಿ ನಿರೀಕ್ಷೆಯಿದೆ.”»
ಒಂದು ಸಮಾಜ – ಒಂದು ಧ್ವನಿ – ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಸಂವಿಧಾನಾತ್ಮಕ ಹೋರಾಟ!
*लिंगायत समाजाच्या मागण्यांना शासनाचा सकारात्मक प्रतिसाद; प्रशासकीय प्रक्रियेला सुरुवात*
सह्याद्री अतिथीगृह | मुंबई | दि. ११ ऑगस्ट २०२६
लिंगायत समाजाच्या विविध प्रलंबित मागण्यांसंदर्भात आज सह्याद्री अतिथीगृह येथे सकारात्मक चर्चा झाली. विशेषतः जगतज्योती महात्मा बसवेश्वर आर्थिक महाविकास मंडळाच्या योजनांचा सरसकट लिंगायत समाजबांधवांना लाभ मिळावा तसेच जाचक अटी दूर करण्यात याव्यात, या प्रमुख मागणीवर शासन सकारात्मक असून या मागण्यांच्या पूर्ततेसाठी प्रशासकीय प्रक्रियेला सुरुवात झाली आहे.
आजच्या कॅबिनेट बैठकीच्या पार्श्वभूमीवर लिंगायत समाजाच्या प्रमुख मागण्यांबाबत मा. मुख्यमंत्री महोदयांसोबत सकारात्मक चर्चा करण्यात आली. तसेच मा. उपमुख्यमंत्री एकनाथ शिंदे साहेब, मा. उपमुख्यमंत्री सुनित्रा ताई पवार आणि यांच्या समवेतही लिंगायत समाजाच्या मागण्यांवर सविस्तर चर्चा करण्यात आली.
लिंगायत समाजाच्या मागण्यांबाबत यापूर्वीही शासनस्तरावर सातत्याने पाठपुरावा करण्यात आला होता. या सातत्यपूर्ण प्रयत्नांना आज सकारात्मक दिशा मिळाली असून, लिंगायत समाजबांधवांच्या मागण्या पूर्ण करण्याच्या दृष्टीने शासनस्तरावर कार्यवाही सुरू झाली आहे.
या पाठपुराव्यात बसव मृत्युंजय महास्वामीजी, आमदार शिवाजी पाटील आमदार गोपीचंद पडळकर,आमदार राजेंद्रजी पाटील मंगेश दादा चिवटे, पैलवान नितीन पाटील मा संजय तेलनाडे तसेच लिंगायत समाजाच्या शिष्टमंडळाने महत्त्वाची भूमिका बजावली आहे.
लिंगायत समाजाच्या न्याय्य मागण्यांसाठी सुरू असलेल्या या प्रयत्नांना शासनाने सकारात्मक प्रतिसाद दिल्याबद्दल समस्त लिंगायत समाजाच्या वतीने मा. मुख्यमंत्री महोदयांसह सर्व संबंधित मान्यवरांचे मनःपूर्वक आभार व्यक्त करण्यात आले.
“संघर्षाला सकारात्मक प्रतिसाद मिळाला असून, आता मागण्यांच्या अंतिम निर्णयाची अपेक्षा आहे.”
एक समाज – एक आवाज – न्याय्य मागण्यांसाठी संविधानिक मार्ग!