ಶ್ರೀ ಮಧುಸೂದನ ಸಾಯಿ

ಶ್ರೀ ಮಧುಸೂದನ ಸಾಯಿ Contact information, map and directions, contact form, opening hours, services, ratings, photos, videos and announcements from ಶ್ರೀ ಮಧುಸೂದನ ಸಾಯಿ, Social service, ಸತ್ಯ ಸಾಯಿ ಗ್ರಾಮ, ಮುದ್ದೇನಹಳ್ಳಿ ಅಂಚೆ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ, ಕರ್ನಾಟಕ ರಾಜ್ಯ, Chik Ballapur.

ಸಂಸ್ಥಾಪಕರು l 'ಒಂದು ಜಗತ್ತು ಒಂದು ಕುಟುಂಬ' ಜಾಗತಿಕ ಮಾನವೀಯ ಸೇವಾ ಅಭಿಯಾನ l ಅಧಿಕೃತ ಕನ್ನಡ ಪುಟ
ಅಧ್ಯಾತ್ಮ ತಳಹದಿಯ ಸೇವಾ ಉಪಕ್ರಮಗಳು.
ಪೌಷ್ಟಿಕ ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮಾನವೀಯ ಸೇವಾ ಅಭಿಯಾನವು ಸಕ್ರಿಯವಾಗಿದೆ.

05/09/2026

‘ವಸುದೈವ ಕುಟುಂಬಕಂ’… ಇಡೀ ವಿಶ್ವವೇ ಒಂದು ಕುಟುಂಬ🌍❤️

ನಮ್ಮ ಉಪನಿಷತ್ತು ಸಾರಿದ ‘ವಸುದೈವ ಕುಟುಂಬಕಂ’ ಎಂಬ ಮಹಾನ್ ತತ್ವವೇ
One World, One Family ಎಂಬ ನಮ್ಮ ಅಭಿಯಾನದ ಮೂಲ ತತ್ವ.

ಜಗತ್ತಿನ ಪ್ರತಿಯೊಬ್ಬರನ್ನೂ ನಮ್ಮ ಕುಟುಂಬದವರಂತೆ ಕಂಡಾಗ ಮಾತ್ರ,
ಮಾನವಕುಲ ಎದುರಿಸುತ್ತಿರುವ ಜಾಗತಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ.

ಈ ವಿಶ್ವಕುಟುಂಬದ ಚಿಂತನೆ ಪ್ರತಿಯೊಬ್ಬರ ಹೃದಯದಲ್ಲಿ ಮೂಡಲಿ. 🙏✨

-ಸದ್ಗುರು ಶ್ರೀ ಮಧುಸೂದನ ಸಾಯಿ

05/09/2026

ಸಮಾಜದ ಪರಿವರ್ತನೆಗಾಗಿ ಕಳೆದ 12 ವರ್ಷಗಳಿಂದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಮುನ್ನಡೆಸುತ್ತಿರುವ ಸೇವಾ ಪಯಣಕ್ಕೆ ಎಲ್ಲರೂ ಕೈಜೋಡಿಸೋಣ.

“ರಾಮಸೇತುವೆ ನಿರ್ಮಾಣದಲ್ಲಿ ಅಳಿಲಾಗಿಯಾದರೂ ನಮ್ಮ ಕೊಡುಗೆ ನೀಡೋಣ” — ಅವಧೂತ ಶ್ರೀ ವಿನಯ್ ಗುರೂಜಿ.

ಶಿಕ್ಷಣ, ಆರೋಗ್ಯ, ಸಂಸ್ಕಾರ ಮತ್ತು ಪರಿಸರ ಕಾಳಜಿಯ ಮೂಲಕ ಸಮಾಜ ನಿರ್ಮಾಣದ ಈ ಸೇವಾಯಜ್ಞದಲ್ಲಿ ನಾವೂ ಭಾಗಿಯಾಗೋಣ.✨

📍 ಹಾಸನ | ದಿವ್ಯ ಸಂಜೆ

ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆಮಗುವಿನ ಹೃದಯಕ್ಕೆ ಅಗತ್ಯವಿರುವ ಚಿಕಿತ್ಸೆ ದೊರೆಯಲು ಎಂದಿಗೂ ಕಾಯುವಂತಾಗಬಾರದು.ಫಿಜಿಯಲ್ಲಿರುವ ಶ್ರೀ ಸತ್...
03/09/2026

ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ

ಮಗುವಿನ ಹೃದಯಕ್ಕೆ ಅಗತ್ಯವಿರುವ ಚಿಕಿತ್ಸೆ ದೊರೆಯಲು ಎಂದಿಗೂ ಕಾಯುವಂತಾಗಬಾರದು.

ಫಿಜಿಯಲ್ಲಿರುವ ಶ್ರೀ ಸತ್ಯಸಾಯಿ ಸಂಜೀವನಿ ಚಿಲ್ಡ್ರನ್ಸ್ ಹಾರ್ಟ್ ಆಸ್ಪತ್ರೆಯಲ್ಲಿ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ಸೇವಾ ಶಿಬಿರ ಆರಂಭಗೊಂಡಿದೆ. ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿ ಆಸ್ಪತ್ರೆಯ ಸಹಯೋಗದಲ್ಲಿ‌ ಇದನ್ನು ನಡೆಸಲಾಗುತ್ತಿದೆ. ಸಿಂಗಾಪುರ, ಆಸ್ಟ್ರೇಲಿಯಾ, ಭಾರತ ಮತ್ತು ಫಿಜಿಯ ಪರಿಣತ ವೈದ್ಯರ ತಂಡಗಳು ಒಂದಾಗಿ, ಫಿಜಿ ಹಾಗೂ ಪೆಸಿಫಿಕ್ ದ್ವೀಪ ರಾಷ್ಟ್ರಗಳ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಜೀವ ರಕ್ಷಕ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿವೆ.

ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿ ಆಸ್ಪತ್ರೆ (NUH)ಯ ಖ್ಯಾತ ಮಕ್ಕಳ ಹೃದಯ ಶಸ್ತ್ರಚಿಕಿತ್ಸಕ ಪ್ರೊ. ಲಾಸ್ಲೊ ಕಿರಾಲಿ ಅವರು ಅಂತಾರಾಷ್ಟ್ರೀಯ ವೈದ್ಯಕೀಯ ತಂಡದ ನೇತೃತ್ವ ವಹಿಸಿದ್ದಾರೆ. ಆಸ್ಟ್ರೇಲಿಯಾದ ಮಕ್ಕಳ ತೀವ್ರ ನಿಗಾ ಘಟಕದ ಪರಿಣತ ನರ್ಸ್‌ಗಳು ಹಾಗೂ ಭಾರತದ ಶ್ರೀ ಸತ್ಯಸಾಯಿ ಸಂಜೀವನಿ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಪರಮ್ವೀರ್ ಸಿಂಗ್ ತಂಡದಲ್ಲಿದ್ದಾರೆ.

ಸಂಜೀವನಿ ವೈದ್ಯಕೀಯ ತಂಡದೊಂದಿಗೆ ಫಿಜಿ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳ ಸಚಿವಾಲಯದ ವೈದ್ಯರು ಹಾಗೂ ನರ್ಸ್‌ಗಳು ಸಹ ಕೈಜೋಡಿಸಿದ್ದು, ಮಕ್ಕಳಿಗೆ ಅಗತ್ಯವಿರುವ ಹೃದಯ ಚಿಕಿತ್ಸೆಯನ್ನು ಒದಗಿಸುವುದರ ಜೊತೆಗೆ, ಪ್ರಾದೇಶಿಕ ಆರೋಗ್ಯ ಸೇವೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಕಾರ್ಯ ನಡೆಯುತ್ತಿದೆ.

ಇಲ್ಲಿಯವರೆಗೆ ಸಂಜೀವನಿ ಫಿಜಿಯಲ್ಲಿ 470 ಯಶಸ್ವಿ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು, 56,782 ಉಚಿತ ಮಕ್ಕಳ ಹೃದಯ ತಪಾಸಣೆಗಳು ಹಾಗೂ 85,534 ವೈದ್ಯಕೀಯ ಸಮಾಲೋಚನೆಗಳನ್ನು ಒದಗಿಸಿದೆ.

ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಮೂಲಕ ದೇಶಗಳ ಗಡಿಗಳನ್ನು ಮೀರಿ ವೈದ್ಯಕೀಯ ಪರಿಣತಿ ಮತ್ತು ಮಾನವೀಯತೆ ಒಂದಾಗುತ್ತಿವೆ.

ಆರ್ಥಿಕ ಪರಿಸ್ಥಿತಿ ಹೇಗೇ ಇರಲಿ, ಪ್ರತಿಯೊಂದು ಮಗುವಿಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು.

03/09/2026

“ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನಿಸ್ವಾರ್ಥ ಸೇವೆಯನ್ನು ಕಣ್ಣಾರೆ ಕಂಡು ನಾನು ನಿಬ್ಬೆರಗಾಗಿದ್ದೇನೆ!” 🙏

ಸತ್ಯಸಾಯಿ ಬಾಬಾ ಅವರಂತೆ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರೂ ಸಮಾಜದ ಒಳಿತಿಗಾಗಿ ಅನೇಕ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಪ್ರಮೋದ್ ಮಧ್ವರಾಜ್.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹತ್ವದ ಸೇವಾ ಕಾರ್ಯಗಳ ಕುರಿತು ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ❤️

ಬದಲಾಗಬೇಕಿರುವುದು ಮಕ್ಕಳಲ್ಲ, ಪೋಷಕರು, ಶಿಕ್ಷಕರು: ಸದ್ಗುರು ಶ್ರೀ ಮಧುಸೂದನ ಸಾಯಿಹಾಸನ: "ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಬೇಗ ಅರ್ಥವಾಗುತ್ತದೆ....
01/09/2026

ಬದಲಾಗಬೇಕಿರುವುದು ಮಕ್ಕಳಲ್ಲ, ಪೋಷಕರು, ಶಿಕ್ಷಕರು: ಸದ್ಗುರು ಶ್ರೀ ಮಧುಸೂದನ ಸಾಯಿ

ಹಾಸನ: "ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಬೇಗ ಅರ್ಥವಾಗುತ್ತದೆ. ಅವರ ವರ್ತನೆಯು ನಿರಂತರ ಮಾನವ ವಿಕಸನದ ಒಂದು ಭಾಗ. ಅವರ ವರ್ತನೆ ಸಹಜವಾಗಿದೆ. ಅವರು ಬದಲಾಗಲು ಸಾಧ್ಯವಿಲ್ಲ. ಶಿಕ್ಷಕರು ಮತ್ತು ಪೋಷಕರು ಇದನ್ನು ಅರ್ಥಮಾಡಿಕೊಂಡು ಬದಲಾಗಬೇಕಿದೆ" ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ನಗರದಲ್ಲಿ ಮಂಗಳವಾರ (ಸೆ 1) ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ 'ವಿಜಯ ಕರ್ನಾಟಕ' ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 'ಈ ಮಕ್ಕಳಿಗೆ ಭಯ ಇಲ್ಲ. 15 ನಿಮಿಷಗಳಿಗಿಂತಲೂ ಹೆಚ್ಚಿನ ಏಕಾಗ್ರತೆ ಅವರಲ್ಲಿ ನಿಲ್ಲುವುದು ಕಷ್ಟ. ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಮನಸ್ಸು ಅರ್ಥ ಮಾಡಿಕೊಂಡು ನಾವು ಸಮಾಧಾನದಿಂದ ಉತ್ತರಿಸಿದರೆ ಬದಲಾವಣೆ ಖಂಡಿತ ಸಾಧ್ಯವಿದೆ' ಎಂದು ಸದ್ಗುರುಗಳು ವಿಶ್ಲೇಷಿಸಿದರು.

'ಮಕ್ಕಳನ್ನು ಬೆಳೆಸಲು ಪೋಷಕರು ಹೆಚ್ಚು ಗಮನಕೊಡುತ್ತಿಲ್ಲ ಎನ್ನುವುದು ವಿಷಾದಕರ ಸತ್ಯ. ಶಿಕ್ಷಕರೂ ಅಷ್ಟೇ, ಕೇವಲ ತರಗತಿಯ ಪಾಠದಿಂದ ಕಲಿಕೆ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ನನ್ನ ಪ್ರಕಾರ ಬದಲಾಗಬೇಕಿರುವುದು ಮಕ್ಕಳಲ್ಲ; ಪೋಷಕರು ಮತ್ತು ಶಿಕ್ಷಕರು' ಎಂದು ಅವರು ಅಭಿಪ್ರಾಯಪಟ್ಟರು.

'ಸಮಾಜದಲ್ಲಿ ಬದಲಾವಣೆ ಬರಲು ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು. ಇದು ಸಾಧ್ಯವಾಗಲು ನೀತಿ ಪಾಠಗಳು ಮತ್ತೆ ಶಿಕ್ಷಣ ವ್ಯವಸ್ಥೆಯ ಭಾಗವಾಗಬೇಕು. ಶಾಲಾ ಚಟುವಟಿಕೆಗಳಲ್ಲಿ ಪೋಷಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಿಶ್ವವಿದ್ಯಾಲಯಗಳಲ್ಲಿ ಕೌಶಲ ಆಧರಿತ ಶಿಕ್ಷಣಕ್ಕೆ ಒತ್ತು ಸಿಗಬೇಕು. ಇಂದಿನ ಉದ್ಯೋಗಿಗಳ ಪೈಕಿ ಶೇ 92 ರಷ್ಟು ಮಂದಿಯ ಓದಿಗೂ-ಕೆಲಸಕ್ಕೂ ಸಂಬಂಧವೇ ಇಲ್ಲ' ಎಂದು ಸದ್ಗುರುಗಳು ವಿವರಿಸಿದರು.

ವೈವಿಧ್ಯತೆ ನಮ್ಮ ದೇಶದ ನಿಜವಾದ ಶಕ್ತಿ. ಇಂಥ ದೇಶ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಹಲವು ಆಕ್ರಮಣಗಳ ನಂತರವೂ ನಮ್ಮ ದೇಶದಲ್ಲಿ ಅಧ್ಯಾತ್ಮ ಮರೆಯಾಗಲಿಲ್ಲ. ಪ್ರಗತಿಯ ಅರ್ಥವನ್ನು ಸರಿಯಾಗಿ ವ್ಯಾಖ್ಯಾನಿಸಬೇಕು. ರಾವಣನಂಥ ರಾಕ್ಷಸ ಸ್ವರ್ಣಲಂಕೆ ನಿರ್ಮಿಸಿಕೊಂಡಿದ್ದ. ಅದನ್ನು ಪ್ರಗತಿ ಎನ್ನಲು ಸಾಧ್ಯವೇ? ಇಂದಿಗೂ ಜನರು ರಾಮರಾಜ್ಯವನ್ನಷ್ಟೇ ನೆನಪಿಸಿಕೊಳ್ಳುತ್ತಾರೆ. ಸರ್ವಾಂಗೀಣ ಪ್ರಗತಿಗೆ ನಾವು ಒತ್ತು ಕೊಡಬೇಕು ಎಂದು ನುಡಿದರು.

(ಹಾಸನ | ಸೆಪ್ಟೆಂಬರ್ 1, 2026)

ಬದಲಾಗಬೇಕಿರುವುದು ಮಕ್ಕಳಲ್ಲ, ಪೋಷಕರು ಮತ್ತು ಶಿಕ್ಷಕರು: ಸದ್ಗುರು ಶ್ರೀ ಮಧುಸೂದನ ಸಾಯಿಹಾಸನದಲ್ಲಿ ನಡೆದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್...
01/09/2026

ಬದಲಾಗಬೇಕಿರುವುದು ಮಕ್ಕಳಲ್ಲ, ಪೋಷಕರು ಮತ್ತು ಶಿಕ್ಷಕರು: ಸದ್ಗುರು ಶ್ರೀ ಮಧುಸೂದನ ಸಾಯಿ

ಹಾಸನದಲ್ಲಿ ನಡೆದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ ಇಂದಿನ ಮಕ್ಕಳ ವರ್ತನೆ ಮತ್ತು ಶಿಕ್ಷಣದ ಕುರಿತು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.

“ಇಂದಿನ ಮಕ್ಕಳು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಏಕಾಗ್ರತೆ ಹೆಚ್ಚು ಸಮಯ ಒಂದೇ ಕಡೆ ಇರದೇ ಇರಬಹುದು. ಆದರೆ ಅವರ ಮನಸ್ಸನ್ನು ಅರ್ಥಮಾಡಿಕೊಂಡು, ಸಮಾಧಾನದಿಂದ ಉತ್ತರಿಸಿದರೆ ಬದಲಾವಣೆ ಸಾಧ್ಯ” ಎಂದು ಹೇಳಿದರು.

ಮಕ್ಕಳನ್ನು ಬದಲಾಯಿಸುವುದಕ್ಕಿಂತ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮನೋಭಾವವನ್ನು ಅರ್ಥಮಾಡಿಕೊಂಡು ಬದಲಾಗಬೇಕು ಎಂದು ಸದ್ಗುರು ಒತ್ತಿ ಹೇಳಿದರು.

ಸಮಾಜದಲ್ಲಿ ಬದಲಾವಣೆ ತರಲು ಶಿಕ್ಷಣ ವ್ಯವಸ್ಥೆಯಲ್ಲೂ ಸುಧಾರಣೆ ಅಗತ್ಯ. ನೀತಿ-ಮೌಲ್ಯಗಳ ಶಿಕ್ಷಣ, ಶಾಲಾ ಚಟುವಟಿಕೆಗಳಲ್ಲಿ ಪೋಷಕರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕೌಶಲಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

“ವೈವಿಧ್ಯತೆಯೇ ಭಾರತದ ಶಕ್ತಿ. ಪ್ರಗತಿ ಎಂದರೆ ಕೇವಲ ಸಂಪತ್ತು ನಿರ್ಮಿಸುವುದಲ್ಲ; ಸರ್ವಾಂಗೀಣ ಪ್ರಗತಿಯೇ ನಿಜವಾದ ಅಭಿವೃದ್ಧಿ” ಎಂದು ಸದ್ಗುರು ಹೇಳಿದರು.

📍 ಹಾಸನ | ಸೆಪ್ಟೆಂಬರ್ 1, 2026

‘ಕರ್ನಾಟಕ ಪರಿವರ್ತಕ’ ಪ್ರಶಸ್ತಿಗೆ ಡಾ. ಎಂ.ಸಿ. ರಂಗಸ್ವಾಮಿಹಾಸನದಲ್ಲಿ ನಡೆದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ, ಅರಕಲಗೂಡು ತಾಲ್ಲೂಕಿನ ದ...
01/09/2026

‘ಕರ್ನಾಟಕ ಪರಿವರ್ತಕ’ ಪ್ರಶಸ್ತಿಗೆ ಡಾ. ಎಂ.ಸಿ. ರಂಗಸ್ವಾಮಿ

ಹಾಸನದಲ್ಲಿ ನಡೆದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ, ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದ ಕೃಷಿಕ ಡಾ. ಎಂ.ಸಿ. ರಂಗಸ್ವಾಮಿ ಅವರಿಗೆ ‘ಕರ್ನಾಟಕ ಪರಿವರ್ತಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಸಮಾಜಮುಖಿ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಸಂಸ್ಥೆಯ ವಿವಿಧ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ, ತಮ್ಮಿಂದಾಗುವ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

“30 ವರ್ಷಗಳ ಹಿಂದೆ ‘ಬಂಗಾರದ ಮನುಷ್ಯ’ ಸಿನಿಮಾ ನೋಡಿ ಮಾದರಿ ರೈತನಾಗಬೇಕು ಎಂದು ನಿರ್ಧರಿಸಿದೆ. ಇಂದು ಸಾವಿರಾರು ಹಸುಗಳನ್ನು ಸಾಕುತ್ತಿದ್ದು, ಪರಿಸರ ಸ್ನೇಹಿ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ನಮ್ಮ ಕುಟುಂಬದಲ್ಲಿ ಮೂವರು ಐಎಎಸ್ ಅಧಿಕಾರಿಗಳಿದ್ದಾರೆ. ನಾವು ನಾಲ್ವರು ಸಹೋದರರು ಕೂಡು ಕುಟುಂಬವಾಗಿ ಮುನ್ನಡೆಯುತ್ತಿದ್ದೇವೆ” ಎಂದು ತಮ್ಮ ಬದುಕಿನ ಪಯಣವನ್ನು ಹಂಚಿಕೊಂಡರು.

📍 ಹಾಸನ | ಸೆಪ್ಟೆಂಬರ್ 1, 2026

ಸೇವಾಯಜ್ಞಕ್ಕೆ ಎಲ್ಲರೂ ಕೈಜೋಡಿಸಬೇಕು: ವಿನಯ್ ಗುರೂಜಿಹಾಸನ: ಸಮಾಜದ ಪರಿವರ್ತನೆಗಾಗಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕಳೆದ 12 ವರ್ಷಗಳಿಂದ ...
01/09/2026

ಸೇವಾಯಜ್ಞಕ್ಕೆ ಎಲ್ಲರೂ ಕೈಜೋಡಿಸಬೇಕು: ವಿನಯ್ ಗುರೂಜಿ

ಹಾಸನ: ಸಮಾಜದ ಪರಿವರ್ತನೆಗಾಗಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕಳೆದ 12 ವರ್ಷಗಳಿಂದ ನಿರಂತರವಾಗಿ ಸೇವಾ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದರು.

ಹಾಸನದಲ್ಲಿ ನಡೆದ ‘ದಿವ್ಯ ಸಂಜೆ’ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮುದ್ದೇನಹಳ್ಳಿಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ಆರೋಗ್ಯ, ಪರಿಸರ ಕಾಳಜಿ ಹಾಗೂ ರಾಷ್ಟ್ರಭಕ್ತಿಯನ್ನು ಬೆಳೆಸುವ ಕಾರ್ಯ ನಡೆಯುತ್ತಿದೆ. ವಿದ್ಯೆಯ ಮೂಲಕ ಸಮಾಜ ಪರಿವರ್ತನೆ ಮಾಡುವ ಈ ಪ್ರಯತ್ನದಲ್ಲಿ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲ ಎಂದರು.

ಸದ್ಗುರುಗಳಿಂದ ಸಂಸ್ಕಾರ ಪಡೆದ ಮಕ್ಕಳು ಭವಿಷ್ಯದಲ್ಲಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಲಿದ್ದಾರೆ. ಈ ಸೇವಾಯಜ್ಞದಲ್ಲಿ ಹಾಸನದ ಜನರೂ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

“ಸದ್ಗುರುಗಳು ಇಡೀ ಜಗತ್ತನ್ನು ಬೆಸೆಯುವ ರಾಮಸೇತುವೆಯನ್ನು ನಿರ್ಮಿಸುತ್ತಿದ್ದಾರೆ. ನಾವು ಲಕ್ಷ್ಮಣರಾಗಲಿ, ಆಂಜನೇಯರಾಗಲಿ ಆಗದಿದ್ದರೂ, ಅಳಿಲಾಗಿಯಾದರೂ ನಮ್ಮ ಕೊಡುಗೆ ನೀಡೋಣ” ಎಂದು ವಿನಯ್ ಗುರೂಜಿ ಹೇಳಿದರು.

(ಹಾಸನ | ಸೆಪ್ಟೆಂಬರ್ 1, 2026)

01/09/2026

“ಈ ಸಂಸ್ಥೆಯ ಬೆಳವಣಿಗೆಯನ್ನು ಅತ್ಯಂತ ಹತ್ತಿರದಿಂದ ನೋಡುವ ಸೌಭಾಗ್ಯ ನನಗೆ ದೊರೆತಿದೆ.”

ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ನಡೆಯುತ್ತಿರುವ ನಿಸ್ವಾರ್ಥ ಸೇವಾ ಕಾರ್ಯ ಶ್ಲಾಘನೀಯ ಎಂದು ಟಿ. ಬಿ. ಜಯಚಂದ್ರ, (ಶಾಸಕರು ಹಾಗೂ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ, ನವದೆಹಲಿ) ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸೇವೆ… ಮಾನವೀಯತೆ… ಸಮಾಜದ ಅಭಿವೃದ್ಧಿ. ❤️

ಧಾಶ್ ಗ್ರೂಪ್‌ ಅಧ್ಯಕ್ಷ ಮಂಜುನಾಥ್ ಎನ್. ರೆಡ್ಡಿಗೆ ‘ಕರ್ನಾಟಕ ಪರಿವರ್ತಕ’ ಪ್ರಶಸ್ತಿತುಮಕೂರು: ಉದ್ಯಮ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡುತ್ತ...
01/09/2026

ಧಾಶ್ ಗ್ರೂಪ್‌ ಅಧ್ಯಕ್ಷ ಮಂಜುನಾಥ್ ಎನ್. ರೆಡ್ಡಿಗೆ ‘ಕರ್ನಾಟಕ ಪರಿವರ್ತಕ’ ಪ್ರಶಸ್ತಿ

ತುಮಕೂರು: ಉದ್ಯಮ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿರುವ ಧಾಶ್ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಮಂಜುನಾಥ್ ಎನ್. ರೆಡ್ಡಿ ಅವರಿಗೆ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ವತಿಯಿಂದ ‘ಕರ್ನಾಟಕ ಪರಿವರ್ತಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶುಕ್ರವಾರ ಇಲ್ಲಿ ನಡೆದ ‘ದಿವ್ಯ ಸಂಜೆ’ ಕಾರ್ಯಕ್ರಮದಲ್ಲಿ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ಉಪಸ್ಥಿತರಿದ್ದರು.

ಕರ್ನಾಟಕದ ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಉದ್ಯಮ ಕ್ಷೇತ್ರದ ಮೂಲಕ ಕೊಡುಗೆ ನೀಡುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಮಂಜುನಾಥ್ ಎನ್. ರೆಡ್ಡಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

2017ರಲ್ಲಿ ಧಾಶ್ ಗ್ರೂಪ್ ಸ್ಥಾಪಿಸಿದ ಮಂಜುನಾಥ್ ರೆಡ್ಡಿ ಅವರು ನವೀಕರಿಸಬಹುದಾದ ಇಂಧನ, ರಕ್ಷಣಾ ತಂತ್ರಜ್ಞಾನ, ಕೈಗಾರಿಕಾ ಆಟೊಮೇಷನ್, ವೈರ್ ಮತ್ತು ಕೇಬಲ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ವದೇಶಿ ಕೈಗಾರಿಕಾ ಸಮೂಹವನ್ನು ನಿರ್ಮಿಸಿದ್ದಾರೆ. ಅವರ ನಾಯಕತ್ವದಲ್ಲಿ ಸಂಸ್ಥೆ 4,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

ಉದ್ಯಮವನ್ನು ಕೇವಲ ಲಾಭ ಗಳಿಕೆಯ ಸಾಧನವನ್ನಾಗಿ ನೋಡದೆ, ಸಮಾಜದ ಅಭಿವೃದ್ಧಿಗೆ ಬಳಸಬೇಕು ಎಂಬ ನಿಲುವಿನೊಂದಿಗೆ ಧಾಶ್ ಫೌಂಡೇಶನ್ ಮೂಲಕ ಶಿಕ್ಷಣ, ಆರೋಗ್ಯ, ಕ್ರೀಡೆ, ಶುದ್ಧ ಕುಡಿಯುವ ನೀರು ಹಾಗೂ ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಿಗೆ ₹100 ಕೋಟಿಗೂ ಅಧಿಕ ಮೊತ್ತದ ಸಿಎಸ್‌ಆರ್ ಬದ್ಧತೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Address

ಸತ್ಯ ಸಾಯಿ ಗ್ರಾಮ, ಮುದ್ದೇನಹಳ್ಳಿ ಅಂಚೆ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ, ಕರ್ನಾಟಕ ರಾಜ್ಯ
Chik Ballapur
562101

Alerts

Be the first to know and let us send you an email when ಶ್ರೀ ಮಧುಸೂದನ ಸಾಯಿ posts news and promotions. Your email address will not be used for any other purpose, and you can unsubscribe at any time.

Shortcuts

Share

Category