28/08/2026
*ಕರ್ನಾಟಕ ರೈತ ಸಂಘ - ಚಿಕ್ಕಮಗಳೂರು ಜಿಲ್ಲಾ ಸಮಿತಿ- AIKKS ಚಿಕ್ಕಮಗಳೂರು*
*ಡಾ. ಕಸ್ತೂರಿರಂಗನ್ ವರದಿ ಅವೈಜ್ಞಾನಿಕ - ಮಲೆನಾಡಿನ 147 ಹಳ್ಳಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ: ಕರ್ನಾಟಕ ರೈತ ಸಂಘ AIKKS ತೀವ್ರವಾಗಿ ವಿರೋಧಿಸುತ್ತದೆ*
ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಡಾ. ಕಸ್ತೂರಿರಂಗನ್ ವರದಿ ಆಧಾರದ ಮೇಲೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ಕರ್ನಾಟಕ ರೈತ ಸಂಘ AIKKS ಚಿಕ್ಕಮಗಳೂರು ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ.
ಈ ವರದಿಯು ಉಪಗ್ರಹ ಸರ್ವೆ ಆಧಾರದಲ್ಲಿ, ಮಲೆನಾಡಿನ ನೆಲದ ವಾಸ್ತವ ಅರಿಯದೆ ತಯಾರಿಸಲಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲೂಕಿನ 147 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯ (ESZ) ಎಂದು ಗುರುತಿಸಲಾಗಿದೆ. ಇದು ರೈತರ ಜಮೀನುಗಳನ್ನೂ ಅರಣ್ಯ ವಲಯಕ್ಕೆ ಸೇರಿಸಿದಂತಾಗಿದೆ.
ಮಲೆನಾಡನ್ನು ಕಾಪಾಡುತ್ತಿರುವುದು ನಾವೇ, ರೈತರೇ ಹೊರತು ಡೆಲ್ಲಿಯಲ್ಲಿ ಕುಳಿತು ವರದಿ ಬರೆದವರಲ್ಲ. ಭೌತಿಕ ಸರ್ವೆ (Physical Survey) ಮಾಡದೆ, ಕೃತಕ ಅರಣ್ಯ ಮತ್ತು ನೈಸರ್ಗಿಕ ಅರಣ್ಯವನ್ನು ಬೇರ್ಪಡಿಸದೆ ಏಕಾಏಕಿ ನಮ್ಮ ಹಳ್ಳಿಗಳನ್ನು ಸೂಕ್ಷ್ಮ ವಲಯಕ್ಕೆ ಸೇರಿಸುವುದು ವೈಜ್ಞಾನಿಕವಲ್ಲ.
ಈಗಾಗಲೇ ಕರ್ನಾಟಕ ಸರ್ಕಾರವೂ ಈ ವರದಿಯನ್ನು ತಿರಸ್ಕರಿಸಿದೆ. ಆದರೂ ಕೇಂದ್ರ ಸರ್ಕಾರ ಮತ್ತೆ ಮತ್ತೆ ಕರಡು ಅಧಿಸೂಚನೆ ಹೊರಡಿಸುತ್ತಿರುವುದು ಖಂಡನೀಯ.
ನಮ್ಮ ಬೇಡಿಕೆಗಳು:
1. ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು.
2. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕ ಭೌತಿಕ ಸರ್ವೆ ನಡೆಸಬೇಕು.
3. ರೈತರ ಕೃಷಿ ಭೂಮಿ ಮತ್ತು ವಾಸದ ಮನೆಗಳನ್ನು ESZ ವ್ಯಾಪ್ತಿಯಿಂದ ಕೈಬಿಡಬೇಕು
4. ಡಾ. ಮಾದವ ಗಾಡ್ಗೀಳ್ ವರದಿ ಜಾರಿಗೊಳಿಸಬೇಕು
5. ಆಕ್ರ ಗಣಿ ಮಾಪಿಯ, ಕಲ್ಲು ಕೊರೆ ಮಾಫಿಯಾ, ರೆಸಾರ್ಟ್ ಮಾಫಿಯಾ, ಟಿಂಬರ್ ಮಾಫಿಯಾ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ಕೂಡಲೇ ನಿಲ್ಲಿಸಬೇಕು
6. ಪರಿಸರ ವಿರೋಧಿ ನೀತಿಗಳನ್ನು ಕೈ ಬಿಡಬೇಕು
ಈ ವರದಿಯನ್ನು ವಾಪಸ್ ಪಡೆಯದಿದ್ದರೆ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಲ್ಲಾ ರೈತ ಸಂಘಟನೆಗಳನ್ನು ಒಗ್ಗೂಡಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು
*ನಾಗೇಶ್ ಬೊಗಸೆ*
ಕರ್ನಾಟಕ ರೈತ ಸಂಘ - AIKKS
ಜಿಲ್ಲಾ ಅಧ್ಯಕ್ಷ
ಚಿಕ್ಕಮಗಳೂರು
+91 99722 14991