25/04/2026
‘ಹೀನ ಸುಳಿ ಬೋಳಿಸಿದರೂ ಹೋಗಲ್ಲ’ ಅಂತ ಗಾದೆ. ಕಾಂಗ್ರೆಸ್ಸಿಗರು ಅವಕಾಶ ಸಿಕ್ಕಾಗಲೆಲ್ಲಾ ಹಿಂದೂಗಳ ಆಚಾರ ವಿಚಾರಗಳನ್ನು ಅವಮಾನಿಸುತ್ತಲೇ ಬರುತ್ತಿದ್ದಾರೆ.
ಕಳೆದ ಬಾರಿಯ ಪರೀಕ್ಷೆಯಲ್ಲೂ ಕೂಡ ಕಲಬುರಗಿ, ಬೀದರ್ನಲ್ಲಿ ಸಿಇಟಿ ಪರೀಕ್ಷೆಗೆ ಜನಿವಾರ ಧರಿಸಿ ಬಂದಿದ್ದ ಎಂಬ ಏಕೈಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆಗೆ ಹಾಜರಾಗಲು ಕೂಡ ಅನುಮತಿ ನೀಡಿರಲಿಲ್ಲ. ಕೆ.ಪಿ.ಎಸ್.ಸಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ, ಮಹಿಳೆಯೊಬ್ಬರ ಮಾಂಗಲ್ಯಸರವನ್ನು ತೆಗೆಸಿದ್ದರು. ಈ ಬಾರಿ ಕೂಡ ಬೆಂಗಳೂರಿನಲ್ಲಿ ಸಿಇಟಿ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದು ಅಕ್ಷಮ್ಯ.
ನ್ಯಾಯಾಲಯ ಶಾಲಾ ಕಾಲೇಜಿನಲ್ಲಿ ಸಮಾನ ವಸ್ತ್ರಸಂಹಿತೆಗೆ ಆದೇಶ ನೀಡಿದರೂ ಸಹ ಸಿದ್ದರಾಮಯ್ಯ & ಪಟಾಲಂ ಹಿಜಾಬ್ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಎಂದು ಪುಂಖಾನುಪುಂಖವಾಗಿ ಭಾಷಣ ಬಿಗಿದಿದ್ದರು. ಆದರೆ ಈಗ ಹಿಂದೂಗಳ ವಿಷಯದಲ್ಲಿ ಎಂದಿನಂತೆ ತನ್ನ ಮತಾಂಧ ರೂಪ ಹೊರಬಿಟ್ಟಿದ್ದಾರೆ.