ಮುಸ್ಲಿಮ್ ಬಾಂಧವ್ಯ ವೇದಿಕೆ

ಮುಸ್ಲಿಮ್ ಬಾಂಧವ್ಯ ವೇದಿಕೆ ಇದು ಎಲ್ಲಾ ಸಮುದಾಯಗಳನ್ನು ಬೆಸೆಯುವ ಕೊಂಡಿ

21/08/2026

*ಮುಸ್ಲಿಂ ಸಮುದಾಯ ಬಂಧುಗಳೇ, ಈ ಬಾರಿಯ ಈದ್ ಮಿಲಾದ್ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರಲಿ*

==========================

*1* ಮೆರವಣಿಗೆಗಳು ಸಾರ್ವಜನಿಕರಿಗೆ ತೊಂದರೆಯನ್ನು ಮಾಡದೆ ಶಾಂತಿಯುತವಾಗಿರುವಂತೆ ಮತ್ತು ಇತರರು ಮೆಚ್ಚುವ ರೀತಿಯ ಶಿಸ್ತುಬದ್ಧವಾಗಿ ವ್ಯವಸ್ಥೆಯಾಗಲಿ..

*2* ಆಡುವ ಮಾತುಗಳು, ಕೂಗುವ ಘೋಷಣೆಗಳು, ಹಿಡಿಯುವ ಫಲಕಗಳು ಮತ್ತು ನಡತೆಯು ಮಹಾನ್ ಪ್ರವಾದಿಯ ಘನತೆಯನ್ನು ಎತ್ತರಿಸುವಂತಿರಲಿ..

*3* ಯಾವುದೇ ಧರ್ಮ, ಜಾತಿ ಅಥವಾ ರಾಜಕೀಯ ವ್ಯಕ್ತಿಗಳ ಪರ-ವಿರುದ್ಧ ಘೋಷಣೆಯನ್ನು ಕೂಗದಿರಿ..

*4* ಉದ್ರೇಕಕಾರಿ ಫಲಕ, ಭಾಷಣ, ಬೊಬ್ಬೆಗಳು ಹೆಚ್ಚಾಗಿದ್ದಲ್ಲಿ ಅಂತಹ ಮೆರವಣಿಗೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಿ,,

*5* ಕೈಗಳಲ್ಲಿ ಪ್ರವಾದಿಯವರು ಮಹಿಳೆಯರಿಗೆ, ಕರಿಯರಿಗೆ, ಅನಾಥರಿಗೆ, ಶೋಷಿತರಿಗೆ ನೀಡಿದ ಸವಲತ್ತುಗಳ ಮಾಹಿತಿ ಇರುವ ಹದೀಸುಗಳ ಫಲಕಗಳಿರಲಿ,,

*6* ಕೋಮು ಸೌಹಾರ್ಧಕ್ಕೆ ಪೂರಕವಾಗುವ ಪ್ರವಾದಿ ವಚನಗಳ ಪರಿಚಯವಾಗಲಿ

*7* ಪ್ರವಾದಿ ಜನ್ಮ ದಿನಾಚರಣೆಯ ಅಂಗವಾಗಿ ಮಸೀದಿ ಅಥವಾ ಮೈದಾನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅನ್ಯ ಧರ್ಮದ ಅತಿಥಿಗಳನ್ನು ಆಹ್ವಾನಿಸಿರಿ,,

*8* ಊಟೋಪಚಾರ ಮತ್ತು ಇತರ ಸತ್ಕಾರಗಳಲ್ಲಿ ಸಹಧರ್ಮಿಯರನ್ನು ಕೂಡ ಸೇರಿಸಿಕೊಳ್ಳಿ,,

*9* ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮಗಳಲ್ಲಿ, ಪ್ರವಾದಿಯ ಜೀವನ, ತತ್ತ್ವ, ಆದರ್ಶಗಳ ಪರಿಚಯವಾಗಲಿ,,

*10* ಪವಿತ್ರ ಕುರ್ ಆನ್ ಸೂಕ್ತಗಳು, ಹದೀತ್ ವಾಣಿಗಳು ಮತ್ತು ಪ್ರವಾದಿಯವರ ಜೀವನದ ಕುರಿತಾಗಿ ಈ ವರ್ಷ ಧರ್ಮವಿರೋಧಿ ಶಕ್ತಿಗಳಿಂದ ಪ್ರಶ್ನಿಸಲ್ಪಟ್ಟ ಮತ್ತು ತಿರುಚಲ್ಪಟ್ಟ ವಿಷಯಗಳನ್ನು ಆದ್ಯತೆಯಾಗಿ ಪರಿಗಣಿಸಿ ಸಹಧರ್ಮಿಯರಿಗೆ ಈ ಕುರಿತಾಗಿ ಸೂಕ್ತ ತಿಳುವಳಿಕೆಯನ್ನು ನೀಡಿರಿ,,

*11* ಕಾರ್ಯಕ್ರಮಗಳಲ್ಲಿ ಯಾವುದೇ ಆಯುಧಗಳ ಅಣಕನ್ನು ಪ್ರದರ್ಶಿಸುವುದು ಅಥವ ವಿವಾದಿತ ರಾಜಕೀಯ ಧಾರ್ಮಿಕ-ವ್ಯಕ್ತಿತ್ವಗಳನ್ನು ವೈಭವೀಕರಿಸುವುದನ್ನು ಮಾಡಬೇಡಿ,,

*12* ಉದ್ರೇಕಕಾರಿ ಘೋಷಣೆಗಳು, ಭಾಷಣಗಳು, ಆಯುಧಗಳ ಅಣಕು ಪ್ರದರ್ಶನಗಳು, ವಿವಾದಿತ ವ್ಯಕ್ತಿಗಳ ವೈಭವಿಕರಣವು ಕೋಮು ಶಕ್ತಿಗಳಿಗೆ ಚುನಾವಣಾ ಲಾಭ ತರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರಲಿ,,

*13* ಕಾರ್ಯಕ್ರಮ ಮತ್ತು ಮೆರವಣಿಗೆಗಳಲ್ಲಿ ಸಂಭವಿಸುವ ಎಡವಟ್ಟುಗಳಿಂದ ಕೋಮಶಕ್ತಿಗಳು ಪ್ರಯೋಜನ ಪಡೆದು ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸುತ್ತವೆ ಎನ್ನುವುದನ್ನು ಮರೆಯದಿರಿ,,

*14* ಸಾರ್ವಜನಿಕವಾಗಿ ಮುಸ್ಲಿಮರು ತಪ್ಪು ಮಾಡುವುದನ್ನು ಕಾಯುತ್ತಿರುವ ಮತ್ತು ಅದರಿಂದ ರಾಜಕೀಯ ಲಾಭ ಪಡೆಯಲು ಹವಣಿಸುವ ದೊಡ್ಡ ಜಾಲವೇ ಇದೆ ಎಂಬ ಎಚ್ಚರಿಕೆ ನಿಮಗಿರಲಿ,,

*15* ಕೆಲವು ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಕೂಗುವ ಉದ್ರೇಕಕಾರಿ ಘೋಷಣೆಗಳು, ಫಲಕಗಳು, ಉನ್ಮಾದದಿಂದ ಕೂಡಿದ ವೈಭವಿಕರಣಗಳಿಂದಾಗಿ ಸಮಸ್ತ ಮುಸ್ಲಿಂ ಸಮುದಾಯ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತೊಂದರೆಗೀಡಾಗುತ್ತದೆ ಎನ್ನುವ ಪ್ರಜ್ಞೆ ಎಲ್ಲರಲ್ಲೂ ಇರಲಿ,,

*16* ವರ್ಷದ ಎಲ್ಲ ದಿನಗಳಲ್ಲಿಯೂ ಉರ್ದು, ಬ್ಯಾರಿ ಮತ್ತು ನವಾಯಿತಿಯಂತಹ ಮಾತೃಭಾಷೆಗಳಲ್ಲಿ ಪ್ರವಚನ ಕೇಳುತ್ತೇವೆ,, ಕನಿಷ್ಠ ಪ್ರವಾದಿ ದಿನಾಚರಣೆಯಲ್ಲಿ ನಾಡ ಭಾಷೆಯಾದ ಕನ್ನಡದಲ್ಲಿ ಧಾರ್ಮಿಕ ಪ್ರವಚನವಿರಲಿ..

*17* ಸಮಾಜದಲ್ಲಿ ಬಡವರು, ರೋಗಿಗಳು, ಶಿಕ್ಷಣ ವಂಚಿತರು, ಸಾಲಗಾರರು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ, ಕಾರ್ಯಕ್ರಮಗಳಲ್ಲಿ ಆಹಾರ, ಬಟ್ಟೆ ಮತ್ತು ಅಲಂಕಾರಗಳಲ್ಲಿ ಯಾವುದೇ ದುಂದು ವೆಚ್ಚಗಳನ್ನು ಮಾಡದೆ ಅದಕ್ಕೆ ವ್ಯಯಿಸುವ ಹಣವನ್ನು ಮೇಲಿನ ವರ್ಗಗಳಿಗೆ ನೀಡಿರಿ..

ಈ ಬಾರಿಯ ಈದ್ ಮಿಲಾದ್ ಮನುಕುಲದ ಮಹಾನ್ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ) ರವರ ತತ್ವ- ಸಂದೇಶಗಳ ಅರಿವು ಮತ್ತು ಪ್ರಸರಣಕ್ಕೆ ಪೂರಕವಾಗಿ ಸೌಹಾರ್ದಯುತ ಮತ್ತು ಶಾಂತಿಯುತವಾಗಿರಲಿ..

============================

*ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ*

ಯಾರಿಗಾದರೂ SIR ವಿಚಾರದಲ್ಲಿ ಗೊಂದಲ ಇದ್ದಲ್ಲಿ, ಈ ನಂಬರ್ ಗಳಿಗೆ ಕಾಲ್ ಮಾಡಿ ಮಾಹಿತಿ ಪಡೆಯಬಹುದು.
23/06/2026

ಯಾರಿಗಾದರೂ SIR ವಿಚಾರದಲ್ಲಿ ಗೊಂದಲ ಇದ್ದಲ್ಲಿ, ಈ ನಂಬರ್ ಗಳಿಗೆ ಕಾಲ್ ಮಾಡಿ ಮಾಹಿತಿ ಪಡೆಯಬಹುದು.

ದಿನಾಂಕ 9/6/2026ಉಡುಪಿಯಲ್ಲಿ ಗೋ ಹತ್ಯೆ ನಿಷೇಧದ ಕುರಿತು ನಮ್ಮ ವೇದಿಕೆಯ ವತಿಯಿಂದ ಮಾಡಿದ ಪತ್ರಿಕಾಗೋಷ್ಠಿಯ ವರದಿಗಳನ್ನು ರಾಜ್ಯದ ಪ್ರಮುಖ ಮಾಧ್...
20/06/2026

ದಿನಾಂಕ 9/6/2026

ಉಡುಪಿಯಲ್ಲಿ ಗೋ ಹತ್ಯೆ ನಿಷೇಧದ ಕುರಿತು ನಮ್ಮ ವೇದಿಕೆಯ ವತಿಯಿಂದ ಮಾಡಿದ ಪತ್ರಿಕಾಗೋಷ್ಠಿಯ ವರದಿಗಳನ್ನು ರಾಜ್ಯದ ಪ್ರಮುಖ ಮಾಧ್ಯಮಗಳು ಪ್ರಕಟಿಸಿವೆ. ರಾಜ್ಯದ ಟಿವಿ ಮಾಧ್ಯಮಗಳು, ಪ್ರಮುಖ ಯುಟ್ಯೂಬ್ ಚಾನೆಲುಗಳು ಹಾಗೂ ಕೇರಳದ ಕೆಲ ಚಾನೆಲ್ ಗಳೂ ಕೂಡ ಪ್ರಸಾರ ಮಾಡಿವೆ. ಎರಡೂ ರಾಜ್ಯದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು..

ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗವು ದಿನಾಂಕ 7/5/26 ಗುರುವಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿನೀಡಿ, ರಾಜ್ಯದಲ್ಲಿನ ಮದರಸಗಳಲ್ಲಿ ಕನ...
14/05/2026

ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗವು ದಿನಾಂಕ 7/5/26 ಗುರುವಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿನೀಡಿ, ರಾಜ್ಯದಲ್ಲಿನ ಮದರಸಗಳಲ್ಲಿ ಕನ್ನಡ ಕಲಿಕೆಯ ವಿಚಾರದ ಕುರಿತು 12 ಅಂಶಗಳ ಸಲಹಾ ಪಟ್ಟಿಯನ್ನು ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಸರ್ ಅವರಿಗೆ ಹಸ್ತಾಂತರಿಸಲಾಯಿತು.. ಇದರ ಮಾಧ್ಯಮ ವರದಿ..

#ಕರ್ನಾಟಕ
#ಬಾಂದವ್ಯ

ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗವು ದಿನಾಂಕ 7/5/26 ಗುರುವಾರ, ರಾಜ್ಯದ ಮುಸ್ಲಿಂ ಮದರಸಗಳಲ್ಲಿ ಕನ್ನಡ ಕಲಿಕೆಯ ಕುರಿತು ಚರ್ಚಿಸಲು ಕನ್ನಡ ಅಭಿವ...
08/05/2026

ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗವು ದಿನಾಂಕ 7/5/26 ಗುರುವಾರ, ರಾಜ್ಯದ ಮುಸ್ಲಿಂ ಮದರಸಗಳಲ್ಲಿ ಕನ್ನಡ ಕಲಿಕೆಯ ಕುರಿತು ಚರ್ಚಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಿತು. ಈ ವೇಳೆ ವಿಧಾನಸೌಧದಲ್ಲಿ ಸಚಿವರಾದ ಸನ್ಮಾನ್ಯ ಸತೀಶ್ ಜಾರಕಿಹೊಳಿ ರವರಿಗೆ ವೇದಿಕೆಯ ಸದಸ್ಯರು ಭೇಟಿಯಾಗಿ ಕೆಲ ವಿಚಾರಗಳನ್ನು ಹಂಚಿಕೊಂಡರು..

#ಸತೀಶ್ #ಜಾರಕಿಹೊಳಿ
#ಕರ್ನಾಟಕ
#ಬಾಂದವ್ಯ

ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗವು ದಿನಾಂಕ 7/5/26 ಗುರುವಾರ, ಮುಖ್ಯಮಂತ್ರಿ ಸನ್ಮಾನ್ಯ  ಸಿದ್ದರಾಮಯ್ಯ ರವರ ವಿಧಾನಸೌಧ ಕಛೇರಿಗೆ ಭೇಟಿ ನೀಡಿತ...
08/05/2026

ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗವು ದಿನಾಂಕ 7/5/26 ಗುರುವಾರ, ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ರವರ ವಿಧಾನಸೌಧ ಕಛೇರಿಗೆ ಭೇಟಿ ನೀಡಿತು, ಈ ವೇಳೆ ರಾಜ್ಯದ ಮುಸ್ಲಿಮ್ ಮದರಸಗಳಲ್ಲಿ ಕನ್ನಡ ಕಲಿಕೆಯ ಕುರಿತು ರಾಜ್ಯ ಸರ್ಕಾರದ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಮಾಣಿಕ ಪ್ರಯತ್ನಕ್ಕೆ ಅಭಿನಂದನಾ ಪತ್ರವನ್ನು ಮುಖ್ಯಮಂತ್ರಿ ರವರ ಆಪ್ತ ಕಾರ್ಯದರ್ಶಿ ಶ್ರೀ ಚಿರಂಜೀವಿ ಅವರಿಗೆ ಹಸ್ತಾಂತರಿಸಲಾಯಿತು.

#ಕರ್ನಾಟಕ
#ಬಾಂದವ್ಯ

ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗವು ದಿನಾಂಕ 7/5/26 ಗುರುವಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಿತು, ಈ ವೇಳೆ ರಾಜ್ಯದಲ್ಲಿನ ಮದರ...
08/05/2026

ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗವು ದಿನಾಂಕ 7/5/26 ಗುರುವಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಿತು, ಈ ವೇಳೆ ರಾಜ್ಯದಲ್ಲಿನ ಮದರಸಗಳಲ್ಲಿ ಕನ್ನಡ ಕಲಿಕೆಯ ವಿಚಾರದ ಕುರಿತು 12 ಅಂಶಗಳ ಸಲಹೆಗಳನ್ನು, ವೇದಿಕೆಯ ಸಂಸ್ಥಾಪಕರಾದ ಜನಾಬ್ ಸಯ್ಯದ್ ಮುಷ್ತಾಕ್ ಹೆನ್ನಾಬೈಲ್ ರವರು ವಿಸ್ತಾರವಾಗಿ ಮಂಡಿಸಿದರು.

#ಕರ್ನಾಟಕ
#ಬಾಂದವ್ಯ

ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗವು ದಿನಾಂಕ 7/5/26 ಗುರುವಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿನೀಡಿ, ರಾಜ್ಯದಲ್ಲಿನ ಮದರಸಗಳಲ್ಲಿ ಕನ...
08/05/2026

ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗವು ದಿನಾಂಕ 7/5/26 ಗುರುವಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿನೀಡಿ, ರಾಜ್ಯದಲ್ಲಿನ ಮದರಸಗಳಲ್ಲಿ ಕನ್ನಡ ಕಲಿಕೆಯ ವಿಚಾರದ ಕುರಿತು 12 ಅಂಶಗಳ ಸಲಹಾ ಪಟ್ಟಿಯನ್ನು ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಸರ್ ಅವರಿಗೆ ಹಸ್ತಾಂತರಿಸಲಾಯಿತು.. ಈ ಸಂದರ್ಭದಲ್ಲಿ ಮುಸ್ಲಿಮರಿಗೆ ಕನ್ನಡ ಕಲಿಕೆಯ ಕುರಿತು ವಿಸ್ತಾರವಾಗಿ ಚರ್ಚಿಸಲಾಯಿತು. ಪ್ರಾಧಿಕಾರವು ವೇದಿಕೆಯ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಅನುಷ್ಠಾನಗೊಳಿಸಲು ಭರವಸೆಯನ್ನು ನೀಡಿದೆ..

#ಕರ್ನಾಟಕ
#ಬಾಂದವ್ಯ

Address

Dr. BR Ambedkar Circle
Davangere
577004

Website

Alerts

Be the first to know and let us send you an email when ಮುಸ್ಲಿಮ್ ಬಾಂಧವ್ಯ ವೇದಿಕೆ posts news and promotions. Your email address will not be used for any other purpose, and you can unsubscribe at any time.

Shortcuts

Share

Category