05/08/2026
ಎಲ್ಲರಿಗೂ ನಮಸ್ಕಾರ 🙏
ವಿರಕ್ತಮಠ ಯಡ್ರಾಮಿ ಮಠದಿಂದ ನಾಲ್ಕುಚಕ್ರ ತಂಡಕ್ಕೆ ಗೌರವ ಶ್ರೀ ರಕ್ಷೆ ಪ್ರಶಸ್ತಿ 🙌
ಯಡ್ರಾಮಿ ಪಟ್ಟಣದ ಶ್ರೀ ಮುರಘೇಂದ್ರ ಶಿವಯೋಗಿ ವಿರಕ್ತಮಠದ ಪರಮ ಪೂಜ್ಯ ಶ್ರೀ ಲಿಂ. ಸಿದ್ಧರಾಮ ಮಹಾಸ್ವಾಮಿಗಳ 5ನೇ ವರ್ಷದ ಪುಣ್ಯಾರಾಧನೆ ನಿಮಿತ್ಯವಾಗಿ ಪುರಾಣ ಮಹೋತ್ಸವ, ಶ್ರೀಗಳ ಪಂಚಲೋಹ ಮೂರ್ತಿ ಪ್ರತಿಷ್ಠಾಪನೆ, ನೂತನ ರಥ ಹಾಗೂ ನಿರಂಜನ ಪ್ರಭೆ ಗ್ರಂಥ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದ ಅಂಗವಾಗಿ ನಾಲ್ಕುಚಕ್ರ ತಂಡದ ಸೇವಾ ಕಾರ್ಯಗಳನ್ನು ಗುರುತಿಸಿ ತಂಡದ ಮುಖ್ಯಸ್ಥರಾದ ಮಾಲಾ ಕಣ್ಣಿ ಅವರಿಗೆ ಆಶಿರ್ವಾದ ರೂಪದಲ್ಲಿ ಶ್ರೀ ಮಠದಿಂದ ಗೌರವ ಸತ್ಕಾರ ನೀಡಿ ಸನ್ಮಾನಿಸಲಾಯಿತು.. 🙏💐
ನಾಲ್ಕುಚಕ್ರ ತಂಡದ ಮುಖ್ಯಸ್ಥರು, ಸರ್ವ ಸದಸ್ಯರು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಆಶಿರ್ವದಿಸುತ್ತಿರುವ ಪ್ರತಿಯೊಬ್ಬರಿಗೂ ಈ ಪ್ರಶಸ್ತಿಯನ್ನು ಸಲ್ಲಿಸಲು ಬಯಸುತ್ತೆನೆ.. ಎಲ್ಲರ ಸಹಕಾರ ಪ್ರೋತ್ಸಾಹ ಸದಾ ಹಿಗೆಯೇ ಇರಲಿ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈ ಜೋಡಿಸೊಣ..👏❤