05/04/2026
ಸಾಮಾಜಿಕ ನ್ಯಾಯ, ಸಮಾನತೆ ಮತ್ತು ದಲಿತರ ಹಕ್ಕುಗಳಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನ್ ನಾಯಕ ಬಾಬು ಜಗಜೀನ್ ರಾಮ್ ಅವರು ದೇಶದ ಉಪ ಪ್ರಧಾನಿ ಹಾಗೂ ದೀರ್ಘ ಕಾಲ ಸಚಿವರಾಗಿಯೂ ಸೇವೆ ಸಲ್ಲಿಸಿದವರು.
ಭಾರತದ ಸ್ವಾತಂತ್ರ್ಯ ಹೋರಾಟದಿಂದ ಸ್ವಾತಂತ್ರ್ಯೋತ್ತರ ಭಾರತದ ನಿರ್ಮಾಣದವರೆಗೆ ಮಹತ್ತರ ಪಾತ್ರ ವಹಿಸಿದ ಅವರು, ಶೋಷಿತರ ಧ್ವನಿಯಾಗಿ ಸದಾ ನಿಂತವರು. ಅವರ ಆದರ್ಶಗಳು ಮತ್ತು ಸೇವಾಭಾವ ನಮ್ಮೆಲ್ಲರಿಗೂ ಪ್ರೇರಣೆ. ಅವರ ಸ್ಮರಣೆ ನಮ್ಮಲ್ಲಿ ಸಮಾನತೆ, ನ್ಯಾಯ ಮತ್ತು ಸೇವಾ ಮನೋಭಾವ ಬೆಳೆಸಲಿ.