Suresh Gokak Official

Suresh Gokak Official ಜೈ ಚನ್ನಮ್ಮ....ಜೈ ರಾಯಣ್ಣ.....

22/08/2026

ಹೊಸ ಯುಗ ಹೊಸ ಅಧ್ಯಾಯ
ನಮ್ಮ ಯುವಕರ ನಡೆ ಗ್ರಾಮದ ಕಡೆ

ಪುರಾತನ ಗುಡಿಗಳಿಗೆ
ಹೊಸದೊಂದು ಮೆರುಗು
ಸುಮಾರು 500 ವರ್ಷಗಳ ಇತಿಹಾಸವನ್ನು ತನ್ನೊಳಗೆ ಹೊತ್ತು ನಿಂತಿರುವ, ಅಮರಶಿಲ್ಪಿ ಜಕಣಾಚಾರಿಯ ಶಿಲ್ಪಕಲೆಯ ಪರಂಪರೆಯನ್ನು ನೆನಪಿಸುವ ಶ್ರೀ ಸಿದ್ದೇಶ್ವರ ದೇವಸ್ಥಾನದತ್ತ ನಮ್ಮ ನಡೆ ಸಾಗಿತು.

ಹುಬ್ಬಳ್ಳಿಯಿಂದ ಸುಮಾರು 18 ಕಿಲೋಮೀಟರ್ ದೂರದಲ್ಲಿರುವ ವರೂರು ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನ, ಒಂದು ಕಾಲದಲ್ಲಿ ತನ್ನ ವೈಭವದಿಂದ ಮೆರೆದಿದ್ದ ಪುರಾತನ ದೇವಾಲಯ. ಆದರೆ ಕಾಲಚಕ್ರದ ಹೊಡೆತಕ್ಕೆ ಸಿಲುಕಿ, ನಿರ್ಲಕ್ಷ್ಯದಿಂದ ಇಂದು ನಶಿಸುವ ಸ್ಥಿತಿಗೆ ತಲುಪಿರುವುದು ನೋವಿನ ಸಂಗತಿ.

ಈ ಪವಿತ್ರ ದೇವಾಲಯದ ರಕ್ಷಣೆಗೆ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ನವೆಂಬರ್ 2021ರಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಂಡು, ದೇವಾಲಯವನ್ನು ಸಂರಕ್ಷಿಸುವ ಮಹತ್ವದ ಹೆಜ್ಜೆ ಇಟ್ಟಿದ್ದರು. ಆದರೆ ಕಾಲ ಕಳೆದಂತೆ ಮತ್ತೆ ದೇವಾಲಯಕ್ಕೆ ಸೂಕ್ತ ರಕ್ಷಣೆ ಮತ್ತು ನಿರ್ವಹಣೆಯ ಅಗತ್ಯತೆ ಎದುರಾಗಿದೆ.

ಆದ್ದರಿಂದ ಈಗ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗ (ರಿ), ಕರ್ನಾಟಕ ಈ ಪುರಾತನ ದೇವಾಲಯದ ರಕ್ಷಣೆಗೆ ಸಜ್ಜಾಗಿದೆ.

ನಮ್ಮ ಉದ್ದೇಶ �

ಇಂದು ಆತ್ಮೀಯ ಸಹೋದರರಾದ ರಾಧಿಕಾ ಸಂತೋಷ  ಬಳ್ಳಾರಿ ಅವರ ಮನೆಗೆ ತೆರಳಿ, ಮಹಾಲಕ್ಷ್ಮಿ ಪೂಜೆಯ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾಯಿ ಮಹಾಲಕ್...
21/08/2026

ಇಂದು ಆತ್ಮೀಯ ಸಹೋದರರಾದ ರಾಧಿಕಾ ಸಂತೋಷ ಬಳ್ಳಾರಿ ಅವರ ಮನೆಗೆ ತೆರಳಿ, ಮಹಾಲಕ್ಷ್ಮಿ ಪೂಜೆಯ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾಯಿ ಮಹಾಲಕ್ಷ್ಮಿಯ ಆಶೀರ್ವಾದವನ್ನು ಪಡೆದುಕೊಂಡ ಸಂತೋಷದ ಕ್ಷಣಗಳು.

ಈ ಸಂದರ್ಭದಲ್ಲಿ ರಾಧಿಕಾ ಸಂತೋಷ ಬಳ್ಳಾರಿ ಅವರ ಕುಟುಂಬದ ಎಲ್ಲ ಆತ್ಮೀಯರೊಂದಿಗೆ ಪ್ರೀತಿಯಿಂದ ಬೆರೆತು, ಸವಿನೆನಪಿಗಾಗಿ ಕನ್ನಡಿಗರ ಆರಾಧ್ಯ ದೈವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನು ತೆಗೆದುಕೊಂಡು, ಅವರು ಪ್ರೀತಿಯಿಂದ ಉಣಬಡಿಸಿದ ರುಚಿಕರ ಭೋಜನವನ್ನು ಸವಿದು ಆತ್ಮೀಯತೆಯನ್ನು ಹಂಚಿಕೊಂಡೆವು.

ತಾಯಿ ಮಹಾಲಕ್ಷ್ಮಿಯ ಅನುಗ್ರಹವು ಸಂತೋಷ ಅವರ ಕುಟುಂಬದ ಮೇಲೆ ಸದಾ ಇರಲಿ…
ಅವರ ಮನೆಯಲ್ಲಿ ಸಂತೋಷ, ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿ ಸದಾ ನೆಲೆಸಿರಲಿ.

ಜೈ ಚೆನ್ನಮ್ಮ.....‌.ಜೈ ರಾಯಣ್ಣ......


baḷḷāri

21/08/2026
ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ ಇಂದು ಹಳೇ ಹುಬ್ಬಳ್ಳಿಯ ಹಿರೇಪೇಟೆಯ ಪಂಚಗ್ರಹ ಹಿರೇಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ಪವಿತ್ರ ...
19/08/2026

ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ

ಇಂದು ಹಳೇ ಹುಬ್ಬಳ್ಳಿಯ ಹಿರೇಪೇಟೆಯ ಪಂಚಗ್ರಹ ಹಿರೇಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ಪವಿತ್ರ ಲಿಂಗ ಪೂಜಾ ಕಾರ್ಯಕ್ರಮದಲ್ಲಿ ಭಕ್ತಿಭಾವದಿಂದ ಪಾಲ್ಗೊಂಡು, ಪೂಜ್ಯ ಗುರುಗಳ ಆಶೀರ್ವಾದ ಪಡೆದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.

ಆಧ್ಯಾತ್ಮಿಕತೆ, ಭಕ್ತಿ ಮತ್ತು ಶರಣ ಸಂಸ್ಕೃತಿಯ ಸಾನ್ನಿಧ್ಯದಲ್ಲಿ ನಡೆದ ಈ ಪವಿತ್ರ ಕಾರ್ಯಕ್ರಮ ಮನಸ್ಸಿಗೆ ಅಪಾರ ಶಾಂತಿ ಹಾಗೂ ನೆಮ್ಮದಿಯನ್ನು ನೀಡಿತು.

ಪೂಜ್ಯ ಶ್ರೀ ಪ್ರಸಾದ ಗುರುಗಳು
ಪಂಚಗ್ರಹ ಹಿರೇಮಠ, ಹಿರೇಪೇಟೆ, ಹಳೇ ಹುಬ್ಬಳ್ಳಿ

ಗುರುಗಳ ಪಾದಕಮಲಗಳಿಗೆ ಭಕ್ತಿಪೂರ್ವಕ ನಮನಗಳು.
ಗುರುಗಳ ಕೃಪಾಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ.

ಓಂ ನಮಃ ಶಿವಾಯ
ಜೈ ಗುರುದೇವ

ಜೈ ಚೆನ್ನಮ್ಮ.....‌.ಜೈ ರಾಯಣ್ಣ......



15/08/2026

ಇಂದು ಧಾರವಾಡ ಶಹರದ ಸತ್ತೂರಿನಲ್ಲಿ ಇರುವ 'ತಕ್ಷ ಮಂದಿರ' ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಒಂದು ಕಾರ್ಯಕ್ರಮದಿಂದ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ವನ್ನು ಮಾಡಿ ನೇರದ ಪಾಲಕರನ್ನು, ಶಾಲೆಯ ಮುದ್ದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದೆನ್ನು, ಈ ಸಂದರ್ಭದಲ್ಲಿ ಶಾಲೆ ಅದ್ಯಕ್ಷರಾದ ನಾಗರಾಜ ಹೆಬ್ಬಾರ ಹಾಗೂ ಯುವ ಮುಖಂಡರಾದ ಶ್ರೀ ವರುಣ ಮೆಣಸಿನಕಾಯಿ ಅವರು ಶಾಲೆಯ ಶಿಕ್ಷಕ ವೃಂದದವರು ಇನ್ನೂ ಅನೇಕರು ಉಪಸ್ಥಿತರಿದ್ದರು.

ಜೈ ಚೆನ್ನಮ್ಮ.....‌.ಜೈ ರಾಯಣ್ಣ......


official

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂವಾರಿ, ಅಪ್ರತಿಮ ಸ್ವಾತಂತ್ರ್ಯ ಸೇನಾನಿ, ಯುವಕರ ಆದರ್ಶ‌ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತಿಯ ಹಾರ್ದಿಕ...
15/08/2026

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂವಾರಿ, ಅಪ್ರತಿಮ ಸ್ವಾತಂತ್ರ್ಯ ಸೇನಾನಿ, ಯುವಕರ ಆದರ್ಶ‌ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು!

ರಾಯಣ್ಣನ ಎದೆಯಲ್ಲಿ ಹೊತ್ತಿದ್ದ ಸ್ವಾತಂತ್ರ್ಯದ ಕಿಚ್ಚು, ಸ್ವಾಭಿಮಾನದ ಜ್ವಾಲೆ ಮತ್ತು ಕ್ರಾಂತಿಯ ಘರ್ಜನೆ ನಮ್ಮ ನರನಾಡಿಗಳಲ್ಲಿ ಸದಾ ಜೀವಂತವಾಗಿರಲಿ!

ಜೈ ಚೆನ್ನಮ್ಮ..... ಜೈ ರಾಯಣ್ಣ......




Address

#78 2nd Floor Satellite Complex Koppikar Road
Hubli
#782NDFLOORSATELLITECOMPLEX

Alerts

Be the first to know and let us send you an email when Suresh Gokak Official posts news and promotions. Your email address will not be used for any other purpose, and you can unsubscribe at any time.

Contact The Organization

Send a message to Suresh Gokak Official:

Shortcuts

Share

Category