01/09/2026
“5 ಕೈಗಾರಿಕಾ ನಗರಗಳಲ್ಲಿ ಹುಬ್ಬಳ್ಳಿ–ಧಾರವಾಡಕ್ಕೆ ಮೊದಲ ಆದ್ಯತೆ ನೀಡಿ: ಜಿಲ್ಲಾಧಿಕಾರಿಗಳಿಗೆ AAP ಮನವಿ”
ಕರ್ನಾಟಕ ಸರ್ಕಾರವು ಬೆಂಗಳೂರಿನ ಹೊರಗೆ ಐದು ನಗರಗಳನ್ನು ಕೈಗಾರಿಕಾ ಅಭಿವೃದ್ಧಿಗಾಗಿ ಗುರುತಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ, ಹುಬ್ಬಳ್ಳಿ–ಧಾರವಾಡವನ್ನು ಐದು ಕೈಗಾರಿಕಾ ನಗರಗಳ ಪಟ್ಟಿಯಲ್ಲಿ ಮೊದಲ ಆದ್ಯತೆಯೊಂದಿಗೆ ಸೇರಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ಧಾರವಾಡ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ತಡಸದ್, ಪ್ರಧಾನ ಕಾರ್ಯದರ್ಶಿ ಅವಿನಾಶ ಸದಾನಂದ, ಯುವ ಮುಖಂಡ ಜಾಕಿರ್ ರಾಮದುರ್ಗ್ ಉಪಾಧ್ಯಕ್ಷ ಶಿವರೆಡ್ಡಿ ರೆಡ್ಡಿ, ಹು ಧಾ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ನಾಮದೇವ್ ಬಿಳಗಿ, ಅವರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
“ಬೆಂಗಳೂರು ಮಾತ್ರ ಬೆಳೆಯಬೇಕು, ಉತ್ತರ ಕರ್ನಾಟಕ ಕಾಯಬೇಕು ಎಂಬ ಹಳೆಯ ಅಭಿವೃದ್ಧಿ ಮಾದರಿ ಇನ್ನು ಮುಂದೆ ನಡೆಯುವುದಿಲ್ಲ. ಕರ್ನಾಟಕದ ಸಮಗ್ರ ಅಭಿವೃದ್ಧಿ ಎಂದರೆ ಉತ್ತರ ಕರ್ನಾಟಕದ ಅಭಿವೃದ್ಧಿಯೂ ಆಗಬೇಕು. ಐದು ಕೈಗಾರಿಕಾ ನಗರಗಳಲ್ಲಿ ಹುಬ್ಬಳ್ಳಿ–ಧಾರವಾಡಕ್ಕೆ ಮೊದಲ ಆದ್ಯತೆ ನೀಡುವುದು ಉಪಕಾರವಲ್ಲ; ಇದು ಉತ್ತರ ಕರ್ನಾಟಕದ ನ್ಯಾಯಸಮ್ಮತ ಹಕ್ಕು” ಎಂದು ಅವಿನಾಶ ಸದಾನಂದ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.