13/08/2026
ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ..!
ಅಬಕಾರಿ ಸಚಿವ ಶ್ರೀ ಕೆ.ಎಂ.ಶಿವಲಿಂಗೇಗೌಡರಿಗೆ ಬಹಿರಂಗ ಪತ್ರ..!
ಮಾನ್ಯರೇ, ಅಬಕಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ತಮಗೆ ಅಭಿನಂದನೆಗಳು. ನೇರವಾಗಿ ವಿಷಯಕ್ಕೆ ಬಂದು ಬಿಡ್ತೀನಿ..ಅಬಕಾರಿ ಇಲಾಖೆಯಲ್ಲಿನ ಅಧಿಕಾರಿಗಳು ಲಂಚ ತಿಂತಾರೆ ಅಂತ ಜನ ಮಾತನಾಡುವದನ್ನು ಈವರೆಗೆ ಯಾರಿಂದಲೂ ತಡೆಯಲು ಆಗಿಲ್ಲ. ಮತ್ತು ಲಂಚ ತಿನ್ನುವದನ್ನು ನಿಲ್ಲಿಸಲಿಕ್ಕೂ ಯಾರಿಂದಲೂ ಸಾಧ್ಯವಿಲ್ಲ ಎಂಬುದು ತಮ್ಮ ಗಮನಕ್ಕೆ ಇರಲಿಕ್ಕೆ ಸಾಕು.
ನಾನು ಈಗ ತಮಗೆ ತಿಳಿಸಬಯಸುವದೆನೇಂದರೇ, ಉತ್ತರ ಕರ್ನಾಟಕದ ಗಂಡುಮೆಟ್ಟಿನ ಸ್ಥಳ ಹುಬ್ಬಳ್ಳಿಯಲ್ಲಿ ಅಬಕಾರಿ ಇಲಾಖೆಯಲ್ಲಿ ಅದೇಂತಹ ಭಯಾನಕ ಕಳ್ಳರಿದ್ದಾರೆ ಎಂದರೇ ಲಂಚದ ಆಸೆಗೆ ಎಂತಹ ನೀಚ ಕೆಲಸಕ್ಕೂ ಹೇಸುವದಿಲ್ಲ ಎಂಬುದರ ಬಗ್ಗೆ ಅವರುಗಳು ಮಾಡಿರುವ ನೀಚ ಕೆಲಸವನ್ನು ತಾವು ಕೇಳಿದ ಕೂಡಲೇ ಒಂದು ಕ್ಷಣ ಶೇಕ್ ಆಗುವಂತಹ ಪ್ರಕರಣ ಇದು.
ನಾನು ಹೇಳಲು ಹೊರಟಿರುವ ಈ ಭ್ರಷ್ಟಾಚಾರದ ಸ್ಟೋರಿಗೆ ಬೇಕಾದ ಎಲ್ಲ ದಾಖಲೆಗಳು ನನ್ನ ಬಳಿ ಇದೆ. ಈ ಎಲ್ಲ ದಾಖಲೆಗಳನ್ನು ತಮಗೆ ಶೀಘ್ರವಾಗಿ ತಲುಪಿಸುತ್ತೇನೆ. ಒಮ್ಮೆ ಈ ದಾಖಲೆ ತಮ್ಮ ಬಳಿ ಬಂದ ನಂತರವೂ ಕಾನೂನು ಪ್ರಕಾರ ತಾವು ಕ್ರಮ ಕೈಗೊಳ್ಳದಿದ್ದರೇ ತಾವು ಸಹ ಇದರಲ್ಲಿ ಶಾಮೀಲಾಗಿದ್ದೀರಿ ಎಂಬ ಅನುಮಾನ ಬರಲಿದೆ. ಆದರೆ ತಾವು ಅಂತಹ ಕೆಲಸ ಮಾಡುವದಿಲ್ಲ ಎಂಬ ವಿಶ್ವಾಸದೊಂದಿಗೆ ತಮಗೆ ಈ ಹಗರಣದ ಇಂಚಿಂಚು ಮಾಹಿತಿ ತಮಗೆ ನೀಡಲಿದ್ದೇನೆ.
ಸರ್ಕಾರಿ ಜಾಗೆಯಲ್ಲಿ ಸಿಎಲ್7 ಲೈಸನ್ಸ್ ಮಂಜೂರು!
ಮಾನ್ಯ ಸಚಿವರೇ, ಇದು ಬರೋಬ್ಬರಿ 9 ವರುಷಗಳ ಹಿಂದಿನ ಕಥೆ! ಹುಬ್ಬಳ್ಳಿಯಲ್ಲಿ ಆಗ ಅಬಕಾರಿ ನಿರೀಕ್ಷಕರಾಗಿದ್ದ ಈಗ ಪಕ್ಕದ ಬೆಳಗಾವಿ ಜಿಲ್ಲೆಯಲ್ಲಿ ಇರುವ ಮಹಾನುಭಾವರೊಬ್ಬರು ಕೇಂದ್ರ ಸರ್ಕಾರದ ಜಾಗೆಯಲ್ಲಿ ಅದು ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಸಿಎಲ್7 ಲೈಸನ್ಸ್ ನೀಡಿದ್ದಾರೆ. ಇದೇನು ದೊಡ್ಡ ವಿಷಯ ಬಿಡಿ. ದುಡ್ಡು ತಿಂದು ಕೊಟ್ಟಿರಬಹುದು ಎಂದು ಕೆಲವರು ಅಂದುಕೊಳ್ಳಬಹುದು. ಆದರೆ ಲಂಚದ ಎಂಜಲಿಗೆ ಆಗಿನ ನಿರೀಕ್ಷಕ ಮಾಡಿದ್ದ ನೀಚ ಕೆಲಸಕ್ಕೆ ಆತ ಯಾವೊತ್ತೋ ವಜಾ ಆಗಬೇಕಾಗಿತ್ತು.
ಫೋರ್ಜರಿ ಮಾಡಿದ ನಿರಾಕ್ಷೇಪಣಾ ಪತ್ರ|
ಆಗಿನ ಹುಬ್ಬಳ್ಳಿಯ ಅಬಕಾರಿ ನಿರೀಕ್ಷಕ ಅಂದು ಮಾಡಿದ ಘನಂದಾರಿ ಕೆಲಸ ಬಹುಶಃ ಕರ್ನಾಟಕದಲ್ಲಿ ಅಬಕಾರಿ ಇಲಾಖೆಯಲ್ಲಿ ಯಾರು ಮಾಡಿರಲಿಕ್ಕಿಲ್ಲ...ಅಲ್ಲ ಈವರೆಗೆ ಮಾಡಿಲ್ಲ. ಆದರೆ ಈ ಮಹಾವಂಚಕ ಅಬಕಾರಿ ನಿರೀಕ್ಷಕ ಹಣದಾಸೆಗೆ ಕೇಂದ್ರ ಸರ್ಕಾರಿ ಜಾಗೆಯಲ್ಲಿ ಸಿಎಲ್7 ಲೈಸನ್ಸ್ ನೀಡಲು ಬೇಕಾದ ಎಲ್ಲ ಅಗತ್ಯ ದಾಖಲೆಗಳನ್ನು ತಾನೇ ಮುಂದೆ ನಿಂತು ಫೋರ್ಜರಿ ಮಾಡಿದ್ದಾನೆ.
ಕಾನೂನು ಪ್ರಕಾರ ಸರ್ಕಾರಿ ಜಾಗೆಯಲ್ಲಿ ಅದೂ ಸಾರ್ವಜನಿಕ ಸ್ಥಳದಲ್ಲಿ ಸಿಎಲ್7 ನೀಡಲು ಅವಕಾಶವೇ ಇಲ್ಲ. ಈ ಹಲಾಲಖೋರ ಕೆಲಸದಲ್ಲಿ ಈ ಅಬಕಾರಿ ನಿರೀಕ್ಷಕನ ಜೊತೆ ಕೇಂದ್ರ ಸರ್ಕಾರದ ಕೆಲ ಸಿಬ್ಬಂದಿಯು ಸಹ ಕೈಜೋಡಿಸಿರುತ್ತಾರೆ. ಭ್ರಷ್ಟರೆಲ್ಲ ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿದ್ದಲ್ಲದೇ ಅಧಿಕಾರಿಗಳ ಸಹಿಯನ್ನು ಫೋರ್ಜರಿ ಮಾಡಿ, ಒಬ್ಬ ಕಂಟ್ರಾಕ್ಟರ್ನ ಹೋಟೇಲ್ಗೆ ಸಿಎಲ್7 ಲೈಸನ್ಸ್ ಮಂಜೂರು ಮಾಡಿಸುತ್ತಾರೆ.
ನೀರಿಕ್ಷಕನಿಂದ ಡಿಸಿವರೆಗೂ ಶಾಮೀಲು!
ನಕಲಿ ದಾಖಲೆ, ಫೋರ್ಜರಿ ಮಾಡಿ ಸಿಎಲ್7 ಲೈಸನ್ಸ್ ಮಂಜೂರು ಮಾಡುವಲ್ಲಿ ಹುಬ್ಬಳ್ಳಿಯ ಆಗಿನ ಅಬಕಾರಿ ಇಲಾಖೆಯ ಭ್ರಷ್ಟ ನಿರೀಕ್ಷಕನಿಂದ ಹಿಡಿದು ಆಗಿನ ಧಾರವಾಡ ಜಿಲ್ಲೆಯ ಅಬಕಾರಿ ಡೆಪ್ಯುಟಿ ಕಮೀಶನರ್ ಹಾಗೂ ಕಣ್ಣು ಮುಚ್ಚಿ ಲೈಸನ್ಸ್ ಮಂಜೂರು ಮಾಡಿದ ಧಾರವಾಡದ ಅಂದಿನ ಜಿಲ್ಲಾಧಿಕಾರಿ ಸೇರಿ ಇನ್ನು ಹಲವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ.
ಮಾನ್ಯ ಸಚಿವರೇ, ತಮಗೆ ಅಬಕಾರಿ ಇಲಾಖೆಯ ಖಾತೆಯನ್ನು ನೀಡಿದ ಕೂಡಲೇ ಕೆಲವರು ತಮ್ಮ ಬಗ್ಗೆಯೂ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನಾನು ತಿಳಿಸುತ್ತಿರುವ ಈ ಹಗರಣದ ಬಗ್ಗೆ ತಾವು ಸ್ವತಃ ಮುತುರ್ವಜಿ ವಹಿಸಿ ತನಿಖೆಗೆ ಆದೇಶ ನೀಡನೇಕು. ಆ ಮೂಲಕ ಶಿವಲಿಂಗೇಗೌಡರ ಖದರು ಏನು ಅಂತ ತೋರಿಸಬೇಕು.
ಈಗ ನಾನು ತಿಳಿಸಿರುವ ಹಗರಣ ಸೂಕ್ಷವಾಗಿರುವದರಿಂದ ಈ ಹಗರಣದ ಎಲ್ಲ ದಾಖಲೆಗಳನ್ನು (ಒಂದೇ ಫೋರ್ಜರಿ ಪತ್ರವನ್ನು ಹಲವು ಬಾರಿ ತಿದ್ದಿ ಸಹಿ ಮಾಡಿದ ದಾಖಲೆಗಳು ಸಮೇತ) ತಮಗೆ ನಾನು ಶೀಘ್ರದಲ್ಲೇ ಖುದ್ದಾಗಿ ಬಂದು ನೀಡಲಿದ್ದೇನೆ. ತಾವು ಎಲ್ಲವನ್ನು ಪರಿಶೀಲಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಹಾಗೂ ನೀಡಲಾಗಿರುವ ಸಿಎಲ್7 ಲೈಸನ್ಸ್ ಅನ್ನು ರದ್ದು ಮಾಡುತ್ತೀರಿ ಎಂದು ನಂಬಿದ್ದೇನೆ.
ತಮ್ಮ
ವಿಜಯೀಂದ್ರ ಪಿ.ಹುನಗುಂದ್
ಅಧ್ಯಕ್ಷರು,
ಕರ್ನಾಟಕ ಜನಪರ ಹೋರಾಟ ವೇದಿಕೆ
ಹುಬ್ಬಳ್ಳಿ.
7337732409 (whatsup only)
[email protected]