Team chikkamanahatti devendrappa jagaluru

Team chikkamanahatti devendrappa jagaluru ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು ಚಿಕ್ಕಮನಹಟ್ಟಿ ಬಿ. ದೇವೇಂದ್ರಪ್ಪರವರ..
ಅಭಿಮಾನಿಗಳ ಪುಟ...

25/04/2026

ಸಮಾನತೆಯ ಹಾದಿಯಲ್ಲಿ ಅಲೆಮಾರಿ ಜನಾಂಗ: ಶಾಸಕ ಬಿ. ದೇವೇಂದ್ರಪ್ಪನವರ ದಿಟ್ಟ ಹೆಜ್ಜೆ
ಅಲೆಮಾರಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಶಾಸಕರ ಚಿಂತನೆ ಶ್ಲಾಘನೀಯ. ಹಕ್ಕುಪತ್ರ ನೀಡುವ ಮೂಲಕ ಬಡ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸುಧಾರಿಸಿದ್ದಾರೆ. ಅವರ ಈ ಕಾರ್ಯದ ಮೂಲಕ ಒಂದು ಇತಿಹಾಸವೇ ಸೃಷ್ಟಿಯಾಗಿದೆ.

25/04/2026

ಸಮಾನತೆಯ ಹಾದಿಯಲ್ಲಿ ಅಲೆಮಾರಿ ಜನಾಂಗ: ಶಾಸಕ ಬಿ.ದೇವೇಂದ್ರಪ್ಪ ನವರ ದಿಟ್ಟ ಹೆಜ್ಜೆ
ಅಲೆಮಾರಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಶಾಸಕರ ಚಿಂತನೆ ಶ್ಲಾಘನೀಯ. ಹಕ್ಕುಪತ್ರ ನೀಡುವ ಮೂಲಕ ಬಡ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸುಧಾರಿಸಿದ್ದಾರೆ. ಅವರ ಈ ಕಾರ್ಯದ ಮೂಲಕ ಒಂದು ಇತಿಹಾಸವೇ ಸೃಷ್ಟಿಯಾಗಿದೆ.

25/04/2026

*ಅಲೆಮಾರಿಗಳ ಬಾಳಿಗೆ 'ನೆಲೆ' ನೀಡಿದ ಜನನಾಯಕ: ಬಿ.ದೇವೇಂದ್ರಪ್ಪ ನವರ ಮಾನವೀಯ ಸ್ಪರ್ಶ*

ದಶಕಗಳ ಕಾಲ ಆಕಾಶವೇ ಛಾವಣಿಯಾಗಿ, ಅನಿಶ್ಚಿತತೆಯೇ ಬದುಕಾಗಿ ಅಲೆದಿದ್ದ ಅಲೆಮಾರಿ ಕುಟುಂಬಗಳ ಕಣ್ಣೀರು ಇಂದು ಒರೆಸಲ್ಪಟ್ಟಿದೆ. ಅಲೆಮಾರಿ ಜನಾಂಗದ ನೋವನ್ನು ಕೇವಲ ಆಡಳಿತಾತ್ಮಕವಾಗಿ ನೋಡದೆ, ತಮ್ಮ ಸ್ವಂತ ಬಾಂಧವರ ನೋವು ಎಂದು ಭಾವಿಸಿದ _*ಜಗಳೂರು ಶಾಸಕ*_ *ಬಿ. ದೇವೇಂದ್ರಪ್ಪನವರು*, ಕೇವಲ ಭೂಮಿಯ ಹಕ್ಕುಪತ್ರಗಳನ್ನು ವಿತರಿಸಿಲ್ಲ; ಬದಲಾಗಿ ಆ ಕುಟುಂಬಗಳಿಗೆ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಭರವಸೆಯನ್ನು ನೀಡಿದ್ದಾರೆ. ಅಲೆಮಾರಿಗಳ ಪಾಲಿಗೆ ಇಂದು ಬರಿ ನೆಲೆ ಸಿಕ್ಕಿಲ್ಲ, ಬದುಕಿಗೆ ಒಂದು ವಿಳಾಸ ಸಿಕ್ಕಿದೆ. ಜನಪರ ಕಾಳಜಿಯ ಈ ಮಹತ್ತರ ಕಾರ್ಯವು ನಿಜಕ್ಕೂ ಮಾನವೀಯತೆಯ ಪ್ರತೀಕ ಮತ್ತು ಅಭಿನಂದನಾರ್ಹ.

ಸನ್ಮಾನ ದೊಡ್ಡದಲ್ಲ, ಸಂಸ್ಕಾರ ದೊಡ್ಡದು ಹಣ ದೊಡ್ಡದಲ್ಲ, ಗುಣ ದೊಡ್ಡದು- ಬಸವಣ್ಣನಮ್ಮ ಶಾಸಕರು ನಮ್ಮ ಹೆಮ್ಮೆ 🙏❤️
24/04/2026

ಸನ್ಮಾನ ದೊಡ್ಡದಲ್ಲ, ಸಂಸ್ಕಾರ ದೊಡ್ಡದು ಹಣ ದೊಡ್ಡದಲ್ಲ, ಗುಣ ದೊಡ್ಡದು
- ಬಸವಣ್ಣ
ನಮ್ಮ ಶಾಸಕರು ನಮ್ಮ ಹೆಮ್ಮೆ 🙏❤️

23/04/2026

"ಅಧಿಕಾರದ ಗದ್ದುಗೆಯಲ್ಲೂ ಮರೆಯಾಗದ ಮಾನವೀಯತೆ: ನೊಂದ ಜೀವಗಳಿಗೆ ಅಣ್ಣನಾಗಿ, ಆಸರೆಯಾಗಿ ನಿಂತ ಜಗಳೂರಿನ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು."

"ಕ್ಷಣಮಾತ್ರವನ್ನೂ ವ್ಯರ್ಥ ಮಾಡಲಿಲ್ಲ. ತಮ್ಮ ವಾಹನವನ್ನೇ ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದರು".🙏🏻

23/04/2026

"ಅಧಿಕಾರದ ಗದ್ದುಗೆಯಲ್ಲೂ ಮರೆಯಾಗದ ಮಾನವೀಯತೆ: ನೊಂದ ಜೀವಗಳಿಗೆ ಅಣ್ಣನಾಗಿ, ಆಸರೆಯಾಗಿ ನಿಂತ ಜಗಳೂರಿನ ಜನಪ್ರಿಯ ಶಾಸಕ ಬಿ.ದೇವೇಂದ್ರಪ್ಪ."

"ರಾಜಕೀಯದಲ್ಲಿ ಅಧಿಕಾರ ಸಿಗುವುದು ಸಾಮಾನ್ಯ. ಆದರೆ, ಸಿಕ್ಕ ಅಧಿಕಾರವನ್ನು ಜನಸಾಮಾನ್ಯರ ಕಣ್ಣೀರು ಒರೆಸಲು ಬಳಸಿಕೊಳ್ಳುವುದು ಅಸಾಮಾನ್ಯ. ಒಬ್ಬ ಜನನಾಯಕನ ನಿಜವಾದ ಶಕ್ತಿ ಇರುವುದು ಆತನ ಆಡಳಿತದಲ್ಲಿ ಮಾತ್ರವಲ್ಲ, ಸಂಕಷ್ಟದ ಸಮಯದಲ್ಲಿ ಆತ ತೋರಿಸುವ ಸಹೃದಯತೆಯಲ್ಲಿ. ಇಂದು ನಾವು ಅಂತಹದ್ದೇ ಒಬ್ಬ ಅಪರೂಪದ ನಾಯಕನ, ಒಂದು ಮಾನವೀಯ ಕ್ಷಣದ ಬಗ್ಗೆ ಮಾತನಾಡೋಣ. ಅವರು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು, ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ."

"ದಿನಾಂಕ 23 ಏಪ್ರಿಲ್ 2026 ದೇವೇಂದ್ರಪ್ಪನವರು ಜಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ಕಾರ್ಯನಿರತ ದಿನ. ರಾಜಕೀಯ ಬದುಕಿನ ಜವಾಬ್ದಾರಿಗಳ ಮಧ್ಯೆ, ಸಮಯಕ್ಕೆ ಬೆಲೆ ಕೊಡುವಂತಹ ಹಾದಿ ಅದು. ಆದರೆ, ಮೆದಗಿನಕೆರೆ ಕ್ರಾಸ್ ಬಳಿ ಎದುರಾದ ದೃಶ್ಯ ಎಲ್ಲವನ್ನೂ ಬದಲಿಸಿತು. ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿ. ರಸ್ತೆಯ ಬದಿಯಲ್ಲಿ ಬಿದ್ದಿದ್ದ ಗಾಯಾಳುಗಳಾದ ಹಿರೇಅರಕೆರೆಯ ಚನ್ನಪ್ಪ, ಖಾನಹೊಸಹಳ್ಳಿ ಸಮೀಪದ ಆಲೂರು ಗ್ರಾಮದ ಗೋವಿಂದಮ್ಮ ಮತ್ತು ಪ್ರದೀಪ್. ನೋವಿನಿಂದ ನರಳುತ್ತಿದ್ದ ಅವರನ್ನು ನೋಡಿದಾಗ, ಅಲ್ಲಿನ ಶಾಸಕರಿಗೆ ರಾಜಕೀಯದ ಕಾರ್ಯಕ್ರಮಗಳಿಗಿಂತ, ನರಳುತ್ತಿರುವ ಜೀವಗಳೇ ಮುಖ್ಯವಾದವು."

"ಕ್ಷಣಮಾತ್ರವನ್ನೂ ವ್ಯರ್ಥ ಮಾಡಲಿಲ್ಲ. ತಮ್ಮ ವಾಹನವನ್ನೇ ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದರು"

ಜಗಳೂರು ವಿಧಾನಸಭಾ ಕ್ಷೇತ್ರ.ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ...
03/04/2026

ಜಗಳೂರು ವಿಧಾನಸಭಾ ಕ್ಷೇತ್ರ.
ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ರವರೊಂದಿಗೆ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ರವರು ಹಾಗೂ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಎಂ.ಡಿ.ಕೀರ್ತಿ ಕುಮಾರ್ ರವರು ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷರಾದ ಬಿ.ವೀರಣ್ಣ ರವರ ನಿವಾಸಕ್ಕೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಮರ್ಥ್ ಶಾಮನೂರು ರವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ನಿಟ್ಟಿನಲ್ಲಿ ರಾಜಕೀಯ ವಿಚಾರವನ್ನು ಚರ್ಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು,ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.

ಜಗಳೂರು ವಿಧಾನಸಭಾ ಕ್ಷೇತ್ರ.ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ.ದೇವೇಂದ್ರಪ್ಪ ರವರು ಯು ಕಲ್ಲಹಳ್ಳಿ,ಜಂಗಮ ತುಂಬಿಗೆರೆ ಗ್ರಾ...
22/11/2025

ಜಗಳೂರು ವಿಧಾನಸಭಾ ಕ್ಷೇತ್ರ.
ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ.ದೇವೇಂದ್ರಪ್ಪ ರವರು ಯು ಕಲ್ಲಹಳ್ಳಿ,ಜಂಗಮ ತುಂಬಿಗೆರೆ ಗ್ರಾಮಗಳಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅಮೃತ ಹಸ್ತದಿಂದ ಭೂಮಿ ಪೂಜೆ ನೆರವೇರಿಸಿದರು ಹಾಗೂ ಹೊಸಕೋಟೆ ಗ್ರಾಮದಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತೆ ಅಭಿಯಾನ ಯೋಜನೆಯಡಿ ಕೃಷಿ ಪರಿಕರಗಳನ್ನು ವಿತರಿಸಿ ರೈತರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಆಯಾ ಇಲಾಖೆಯ ಅಧಿಕಾರಿಗಳು, ಅರಸೀಕೆರೆ-ಬೆಳಿಚೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಗುತ್ತಿಗೆದಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಜಗಳೂರು ವಿಧಾನಸಭಾ ಕ್ಷೇತ್ರ.ಇಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪ ರವರು ಜಿಲ್ಲಾ ನಗರಾಬಿವೃದ್ದಿ ಕೋಶ ದಾವಣಗೆರೆ ಮತ್ತು...
09/08/2025

ಜಗಳೂರು ವಿಧಾನಸಭಾ ಕ್ಷೇತ್ರ.
ಇಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪ ರವರು ಜಿಲ್ಲಾ ನಗರಾಬಿವೃದ್ದಿ ಕೋಶ ದಾವಣಗೆರೆ ಮತ್ತು ಪಟ್ಟಣ ಪಂಚಾಯಿತಿ ಜಗಳೂರು, ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜಗಳೂರು ಪಟ್ಟಣದಲ್ಲಿ 2024-25ನೇ ಸಾಲಿನ ಎಸ್.ಎಫ್.ಸಿ.ವಿಶೇಷ ಯೋಜನೆಯಡಿಯಲ್ಲಿ ಅಂದಾಜು ಮೊತ್ತ 8.00ಕೋಟಿಗಳ ವಿವಿಧ ವಾರ್ಡ್ ಗಳಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮ ಹಾಗೂ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಕಾರ್ಯಕ್ರಮ ಉದ್ದೇಶೀಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು,ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಜಗಳೂರು ವಿಧಾನಸಭಾ ಕ್ಷೇತ್ರ.ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ  ಸಚಿವರಾದ ಶ್ರೀ ಎಂ.ಬಿ. ಪಾಟೀಲ್ ರವರು ಉಜ್ಜಿನಿ ಶ್...
02/05/2025

ಜಗಳೂರು ವಿಧಾನಸಭಾ ಕ್ಷೇತ್ರ.

ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ.ಬಿ. ಪಾಟೀಲ್ ರವರು ಉಜ್ಜಿನಿ ಶ್ರೀ ಮರುಳಸಿದ್ದೇಶ್ವರ ರಥೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಮಾನ್ಯ ಸಚಿವರನ್ನು ಕೂಡ್ಲಿಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಬಿ. ದೇವೇಂದ್ರಪ್ಪ ರವರು ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಎನ್.ಟಿ.ಶ್ರೀನಿವಾಸ್ ರವರು ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರದ ಮುಖಂಡರುಗಳು ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮುಖಂಡರುಗಳು ಆತ್ಮೀಯ ವಾಗಿ ಸ್ವಾಗತಿಸಿ ರಥೋತ್ಸವದಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಆಶೀರ್ವಾದ ಪಡೆದರು.
ನಂತರ ಜಗಳೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರ ಆಹ್ವಾನದ ಮೇರೆಗೆ ಶಾಸಕರ ಕಚೇರಿಗೆ ಹಾಗೂ ನಿವಾಸಕ್ಕೆ ಭೇಟಿನೀಡಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಕ್ಷೇತ್ರದ ಅಭಿವೃದ್ಧಿಯ ವಿಚಾರವಾಗಿ ಚರ್ಚಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಘಟಕದ ಮುಖಂಡರುಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ಪಟ್ಟಣ ಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ನಿಷ್ಠಾವಂತ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

Address

Jagaluru
Jagalur
577513

Alerts

Be the first to know and let us send you an email when Team chikkamanahatti devendrappa jagaluru posts news and promotions. Your email address will not be used for any other purpose, and you can unsubscribe at any time.

Share