Vijayendra Sene

Vijayendra Sene ವಿಜಯೇಂದ್ರ ಅಣ್ಣಾ ಅಭಿಮಾನಿ

ಬಳ್ಳಾರಿ ಚಲೋ ಪಾದಯಾತ್ರೆಯ ವೇಳೆ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಅನ್ನದಾತರೊಂದಿಗೆ ಆತ್ಮೀಯವಾಗಿ ಬೆರೆತು, ಅವರೊಂದಿಗೆ ಮನ...
03/09/2026

ಬಳ್ಳಾರಿ ಚಲೋ ಪಾದಯಾತ್ರೆಯ ವೇಳೆ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಅನ್ನದಾತರೊಂದಿಗೆ ಆತ್ಮೀಯವಾಗಿ ಬೆರೆತು, ಅವರೊಂದಿಗೆ ಮನಬಿಚ್ಚಿ ಮಾತುಕತೆ ನಡೆಸಿ, ಪ್ರೀತಿ-ವಾತ್ಸಲ್ಯದಿಂದ ಬಡಿಸಿದ ಭೋಜನವನ್ನು ಸವಿದರು.

ಅನ್ನದಾತರ ಜೊತೆಗಿನ ಈ ಆತ್ಮೀಯ ಕ್ಷಣಗಳು ಹೋರಾಟದ ಹೆಜ್ಜೆಗಳಿಗೆ ಮತ್ತಷ್ಟು ಹುಮ್ಮಸ್ಸು ತುಂಬಲಿವೆ.


02/09/2026

ಬರದಿಂದ ಕಂಗಾಲಾಗಿರುವ ರೈತರ ಹೊಲಕ್ಕೆ ಹೆಜ್ಜೆ ಇಟ್ಟಾಗ, ಅನ್ನದಾತನ ನೋವು, ಕಣ್ಣೀರು ಕಾಣುತ್ತದೆ. ಅನ್ನದಾತನ ಕಣ್ಣೀರಿಗೆ, ರೈತನ ಬೆವರಿಗೆ, ನ್ಯಾಯ ಸಿಗುವವರೆಗೂ, ನಮ್ಮ ಹೆಜ್ಜೆ ನಿಲ್ಲದು. ಅನ್ನದಾತನ ನ್ಯಾಯಕ್ಕಾಗಿ, ನಮ್ಮ ನಡಿಗೆ, ನಮ್ಮ ಹೋರಾಟ!

02/09/2026

ಕಾಂಗ್ರೆಸ್‌ ಸರ್ಕಾರದ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಬಿಜೆಪಿ ಆರಂಭಿಸಿರುವ "ಬಳ್ಳಾರಿ ಚಲೋ" ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ನಾಡಿನ ಮಾಧ್ಯಮಗಳ ವರದಿಗಳು ಹೇಳುತ್ತಿವೆ.

ಜನಾಂದೋಲನವಾಗಿ ರೂಪುಗೊಂಡಿರುವ ಬಿಜೆಪಿ ಹೋರಾಟ ಕಾಂಗ್ರೆಸ್‌ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿದೆ.


02/09/2026

Live : ಬಳ್ಳಾರಿ ಚಲೋ Day 2

01/09/2026

ರೈತರಿಗೆ ದ್ರೋಹ ಬಗೆದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತ ಗೀತೆಯ ಮೂಲಕ ರಣಕಹಳೆ ಮೊಳಗಿಸಿದೆ ಬಿಜೆಪಿ !

ರೈತರ ಸಂಕಷ್ಟ ಆಲಿಸದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ...



31/08/2026

ಭ್ರಷ್ಟ, ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶದ ರಣಕಹಳೆ ಮೊಳಗಿಸಲು ಸಜ್ಜಾಗಿದೆ ಬಿಜೆಪಿ !

ಬಳ್ಳಾರಿ ಚಲೋ ಪಾದಯಾತ್ರೆಯ ಮೂಲಕ ರಾಜ್ಯದ ದುಷ್ಟ, ದುರುಳ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪ ಮಾಡೋಣ.


31/08/2026

ಆತ್ಮೀಯ ಬಂಧುಗಳೇ,
ರಾಜ್ಯದ ದಲಿತರ ಹಣ ಲೂಟಿ ಮಾಡಿದ, ಬರ ಪರಿಹಾರ ನೀಡದೇ ಅನ್ನದಾತರನ್ನು ಬೀದಿಗೆ ತಳ್ಳಿದ ಈ ರೈತವಿರೋಧಿ,ಜನವಿರೋಧಿ, ಯುವ ವಿರೋಧಿ ಹಾಗೂ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೆಪ್ಟೆಂಬರ್ 1 ರಿಂದ 10 ರವರೆಗೆ ರಾಯಚೂರಿನಿಂದ ಬಳ್ಳಾರಿಯವರೆಗೆ ಬೃಹತ್ 'ಬಳ್ಳಾರಿ ಚಲೋ' ಪಾದಯಾತ್ರೆ ಹಮ್ಮಿಕೊಂಡಿದ್ದೇವೆ.

ರಾಜ್ಯದ ಭವಿಷ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸೋಣ. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸೋಣ, ಜನವಿರೋಧಿ ಆಡಳಿತವನ್ನು ಅಂತ್ಯಗೊಳಿಸೋಣ.

ಜೈ ಹಿಂದ್, ಜೈ ಕರ್ನಾಟಕ!

ಮಹಿಳೆಯರ, ಯುವಕರ, ರೈತರ ಧ್ವನಿಯಾಗಿ, ವಾಲ್ಮೀಕಿ ಸಮುದಾಯದ ನ್ಯಾಯಕ್ಕಾಗಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಸರಣಿ ಹಗರಣಗಳ ವಿರುದ್ಧ ಸೆಪ್ಟೆಂಬರ್ 1 ...
31/08/2026

ಮಹಿಳೆಯರ, ಯುವಕರ, ರೈತರ ಧ್ವನಿಯಾಗಿ, ವಾಲ್ಮೀಕಿ ಸಮುದಾಯದ ನ್ಯಾಯಕ್ಕಾಗಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಸರಣಿ ಹಗರಣಗಳ ವಿರುದ್ಧ ಸೆಪ್ಟೆಂಬರ್ 1 ರಿಂದ 10 ರ ವರೆಗೆ ಬೃಹತ್ ಬಳ್ಳಾರಿ ಚಲೋ ಪಾದಯಾತ್ರೆ.

ಬನ್ನಿ ಹೆಜ್ಜೆ ಹಾಕೋಣ, ಕಾಂಗ್ರೆಸ್ ತೊಲಗಿಸೋ‌‌ಣ‌‌‌‌...


30/08/2026

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ವಾಲ್ಮೀಕಿ ನಿಗಮ ಹಗರಣದ ಕುರಿತು ಬಿಜೆಪಿ ಹೋರಾಟದ ಪರಿಣಾಮವಾಗಿ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡುವಂತಾಗಿತ್ತು.

ಡಿಕೆಶಿ ಸರ್ಕಾರದಲ್ಲೂ ನಾಗೇಂದ್ರ ಅವರು ಸಚಿವಗಿರಿ ಪಡೆದಾಗ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಸಂಘಟಿತವಾಗಿ ಹೋರಾಟ ನಡೆಸಿದ್ದರ ಪರಿಣಾಮವಾಗಿ ಎರಡನೇ ಬಾರಿಗೆ ನಾಗೇಂದ್ರ ಅವರು ರಾಜೀನಾಮೆ ನೀಡುವಂತಾಯಿತು.

ರಾಜ್ಯದ ಎಲ್ಲಾ ಜಿಲ್ಲಾ, ಮಂಡಲ ಕೇಂದ್ರಗಳಲ್ಲೂ ಬಿಜೆಪಿ ಸಂಘಟಿತವಾಗಿ ಹೋರಾಟ ನಡೆಸಿತ್ತು. ಹೋರಾಟ ಕೈಗೊಂಡ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ಅಭಿನಂದನೆಗಳು.

- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು

Address

Jamkhandi
587001

Website

Alerts

Be the first to know and let us send you an email when Vijayendra Sene posts news and promotions. Your email address will not be used for any other purpose, and you can unsubscribe at any time.

Shortcuts

Share