01/09/2026
ಗ್ರಾಮೀಣ ಭಾಗದಲ್ಲಿ
ಪ್ರಬಲವಾಗುತ್ತಿದೆ ಜೆಡಿಎಸ್
ಜೆಡಿಎಸ್ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ವೇಗ ದೊರೆತಿದೆ.
ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಗ್ರಾಮದಿಂದ ಗ್ರಾಮಕ್ಕೆ ತೆರಳಿ ಜನರನ್ನು ಪಕ್ಷದೊಂದಿಗೆ ಕೈಜೋಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕೊಪ್ಪಳ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ ಭೂಮರಡ್ಡಿ ಅವರ ಮಾರ್ಗದರ್ಶನದಂತೆ ಮಂಗಳವಾರ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೋಳೂರು, ಕಾಟ್ರಳ್ಳಿ, ಚಿಕ್ಕಸಿಂದೋಗಿ, ಗುನ್ನಳ್ಳಿ ಹಾಗೂ ಹೊರತಟ್ನಾಳ ಗ್ರಾಮಗಳಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನವನ್ನು ಉತ್ಸಾಹದಿಂದ ನಡೆಸಲಾಯಿತು.
ಜೆಡಿಎಸ್ ತಾಲೂಕು ಅಧ್ಯಕ್ಷರಾದ ಶ್ರೀ ವಿರೇಶಗೌಡ್ರು ದಳಪತಿ ಅವರ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಪಕ್ಷದ ಸಿದ್ಧಾಂತ, ಜನಪರ ಚಿಂತನೆ ಹಾಗೂ ಸಂಘಟನೆಯ ಉದ್ದೇಶಗಳನ್ನು ಜನರಿಗೆ ತಿಳಿಸಲಾಯಿತು.
ಯುವಕರು, ಹಿರಿಯರು ಹಾಗೂ ಪಕ್ಷದ ಅಭಿಮಾನಿಗಳು ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಪಕ್ಷದ ನಿಜವಾದ ಶಕ್ತಿ ಗ್ರಾಮೀಣ ಕಾರ್ಯಕರ್ತರು. ಕಾರ್ಯಕರ್ತರು. ಸಂಘಟನಾತ್ಮಕವಾಗಿ ಗಟ್ಟಿಯಾದಾಗ ಮಾತ್ರ ಪಕ್ಷ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ ಎಂಬ ಆಶಯದೊಂದಿಗೆ
ಪಕ್ಷದ ಸಂಘಟನೆಯನ್ನು ವಿಸ್ತರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅಭಿಯಾನದಲ್ಲಿ ಬಸವನಗೌಡ ಕೋಳೂರು, ಮಂಜುನಾಥ, ಪ್ರಭು, ಮಹಾಂತೇಶ, ಹನುಮಂತಪ್ಪ ಕರೆಕುರಿ, ದೇವೇಗೌಡ ಕಾಟ್ರಳ್ಳಿ, ಕನಕಪ್ಪ, ಮುದಕಪ್ಪ, ವಿರೇಶ, ಯಶವಂತರೆಡ್ಡಿ, ಗವಿಸಿದ್ದಯ್ಯ, ಹನುಮೇಶ, ಕನಕಪ್ಪ, ಭರತ್ ಕೊಪ್ಪಳ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದಲೇ ಬಲಪಡಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಸದಸ್ಯತ್ವ ನೋಂದಣಿ ಅಭಿಯಾನ, ಗ್ರಾಮಸಭೆಗಳು ಹಾಗೂ ಕಾರ್ಯಕರ್ತರ ಸಭೆಗಳನ್ನು ನಡೆಸಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ದೊರೆಯುತ್ತಿರುವ ಸ್ಪಂದನೆ ಸಂಘಟನೆಗೆ ಬಲ ನೀಡಿದೆ.
ನಿಮ್ಮ ಸಹಕಾರ, ಹಾರೈಕೆ, ಆಶೀರ್ವಾದ ಹಾಗೂ ಬೆಂಬಲ ಸದಾ ಹೀಗೆ ಇರಲಿ.
ನಿಮ್ಮ ಸಿವಿಸಿ