30/06/2022
ಅಗ್ನಿಪಥ್ ಸತ್ಯ-ಮಿತ್ಯ
ಕೊಡಗು BJYM
ಕೇಂದ್ರ ಸರ್ಕಾರದ ಯೋಜನೆಯಾದ ಅಗ್ನಿಪಥ್ ಸತ್ಯ- ಮಿತ್ಯ ಎಂಬ ಕಾರ್ಯಕ್ರಮವನ್ನು ಬಿಜೆಪಿ ಯುವ ಮೋರ್ಚಾ ರಾಜ್ಯದ ಮೊದಲ ಕಾರ್ಯಕ್ರಮವನ್ನು ಸೈನಿಕರ ನಾಡು ಕೊಡಗಿನ ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು,ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಮಲ್ಲಿಕಾರ್ಜುನ ಬಾಳೆಕಾಯಿ ಇವರು ಆಗಮಿಸಿದ್ದರು ವಿದ್ಯಾರ್ಥಿಗಳಿಗೆ ಅಗ್ನಿಪಥ್ ಯೋಜನೆ ಎಂದರೇನು ಅದರ ಸತ್ಯ ಮಿತ್ಯತೆ ತಿಳಿಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ರಾದ ಶ್ರೀಯುತ ಪ್ರವೀಣ್ ರವರು ವಹಿಸಿದ್ದರು,ಕಾರ್ಯಕ್ರಮದಲ್ಲಿ ಯುವ ಮೋರ್ಚದ ಜಿಲ್ಲಾ ಅಧ್ಯಕ್ಷರಾದ ದರ್ಶನ್ ಜೋಯಪ್ಪ,ರಾಜ್ಯ ಸಮಿತಿ ಸದಸ್ಯರಾದ ಮಹೇಶ್ ತಿಮ್ಮಯ್ಯ, ಯುವಮೋರ್ಚಾ ಪ್ರಭಾರಿಗಳಾದ ರೂಪಾ ಸತೀಶ್,ಪ್ರಧಾನ ಕಾರ್ಯದರ್ಶಿಗಳಾದ ಯಶ್ವಿನ್, ಪ್ರಸಾದ್ ಚಂಗಪ್ಪ .ಪ್ರಮುಖರಾದ ನವನೀತ್ ಪೊನ್ನೇಟಿ,ರಮಾನಾಥನ್ ,ಗುಮ್ಮಟ್ಟಿರ ಚಂಗಪ್ಪ,ಹಿತೇಶ್ ,ಸುನಿಲ್, ಪ್ರೀತಮ್,ಚಂದ್ರಶೇಖರ ಹೇರೂರು,ಕವನ್ ಕಾರ್ಯಪ್ಪ,ಮೋಹಿತ್, ಪದ್ಮನಾಭ,
ಭರತ್, ನಾಚಪ್ಪ, ಹೇಮಂತ್ ತೊರೆರಾ, ಚೇತನ್ ,ಸುಮನ್ , ತ್ರಿನೇಶ್,ಸಜನ್ , ಕಿಶನ್ ,ತೇಜಸ್ ಹಾಗೂ ಕಾಲೇಜಿನ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.