SKSSF Valachil Unit

SKSSF Valachil Unit Contact information, map and directions, contact form, opening hours, services, ratings, photos, videos and announcements from SKSSF Valachil Unit, Social service, Mangalore.

07/01/2022

*ಕೈ ಬೀಸಿ ಕರೆಯುತ್ತಿದೆ ಜಾಮಿಅ ಯಮಾನಿಯ್ಯ....*

*ಹೌದು ಕಲ್ಲಿಕೋಟೆಯಿಂದ ಸುಮಾರು ಹತ್ತು* *ಕಿಲೋಮೀಟರ್ ದೂರದ ಕುಟ್ಟಿಕಾಟೂರು ಎಂಬ* *ಪ್ರದೇಶದಲ್ಲಿ ತಲೆಯೆತ್ತಿ ನಿಂತಿರುವ* *ವಿದ್ಯಾಗೋಪುರವಾಗಿದೆ ಶಂಸುಲ್ ಉಲಮಾ ಸ್ಮಾರಕ* *ಇಸ್ಲಾಮಿಕ್ ಸೆಂಟರ್,ಜಾಮಿಅ ಯಮಾನಿಯ್ಯ ಅರೆಬಿಕ್* *ಕಾಲೇಜು.*
*ಹಲವಾರು ವಿದ್ವಾಂಸರು ದರ್ಸ್ ನಡೆಸಿದ ಊರು, ದಿನೇ ದಿನೇ ಅಭಿವೃದ್ಧಿ ಪಡೆಯುತ್ತಿರುವ ಪ್ರದೇಶ.*
*ಶೈಕ್ಷಣಿಕ ಸಂಸ್ಥೆಗಳ ಸಂಗಮ ಭೂಮಿ ಎಂದರೆ ತಪ್ಪಾಗಲಾರದು...*
*ಯಮಾನಿಯ್ಯ ಕಾಲೇಜಿನ ಉಗಮದ ಹಿನ್ನೆಲೆಯಲ್ಲಿಯೇ ಅದ್ಭುತವಿದೆ.ಅದೇನೆಂದರೆ ಸುನ್ನೀ ಸಾಮ್ರಾಜ್ಯದ ಅಮರ ನಾಯಕ ಶೈಖುನಾ ಶಂಸುಲ್ ಉಲಮಾ (ಖ.ಸಿ) ಮಹಾನುಭಾವರ ಅಭಿಲಾಷೆಯನ್ನು ತನ್ನವರೊಂದಿಗೆ ಹೇಳಿಕೊಂಡಿದ್ದರಂತೆ.*
*ಕಲ್ಲಿಕೋಟೆ ನಗರದ ಸಮೀಪ ಬಿರುದು ನೀಡುವ ಒಂದು ಕಾಲೇಜು ಬೇಕೆಂದು.* *ಶೈಖುನಾ ರವರ ವಫಾತಿನ ಬಳಿಕ ಶಿಷ್ಯಂದಿರು ಸಭೆ ಸೇರಿ ಆ ಅಭಿಲಾಷೆಯನ್ನು ಹೀಡೇರಿಸುವ ಸಲುವಾಗಿ ಸ್ಥಾಪನೆಯ ಕನಸನ್ನು ನನಸಾಗಿಸುವ ಬೃಹತ್ ಕಾಯಕಕ್ಕೆ ಕೈ ಹಾಕಿದರು. ಹಲವು ಸ್ಥಳಗಳು ತಮ್ಮ ಅರಿವಿಗೆ ಬಂದರೂ ಅವೆಲ್ಲವನ್ನು ನಯವಾಗಿ ತಿರಸ್ಕರಿಸಿ , ಶೈಖುನಾ ಶಂಸುಲ್ ಉಲಮಾ ತನ್ನ ವಫಾತಿನ ಎರಡು ವರ್ಷಗಳ ಮುಂಚೆ ವಾಸ್ತವ್ಯವಿದ್ದ ಮಗಳ ಮನೆಯ ಸಮೀಪದ ಸ್ಥಳವನ್ನು ಆಯ್ಕೆ ಮಾಡಿ ಮರ್ಹೂಂ ಪಾಣಕ್ಕಾಡ್ ಸಯ್ಯಿದ್ ಮುಹಮ್ಮದ್ ಅಲೀ ಶಿಹಾಬ್ ತಂಙಳ್ ರವರ ದಿವ್ಯ ಹಸ್ತದಿಂದ ಶಿಲಾನ್ಯಾಸ ನೆರವೇರಿಸಿ ಆ ಮಹಾನರು ನಾಮ ನಿರ್ದೇಶನ ಮಾಡಿದರು.* *ಶೈಖುನಾ ಶಂಸುಲ್ ಉಲಮಾ ರವರ ಕುಟುಂಬ ಯಮನೀ ಪರಂಪರೆಯಾಗಿ ದ್ದರಿಂದ ಅದೇ ನಾಮದಿಂದ ಕಾಲೇಜು ಜನ್ಮತಾಳಿತು.*
*ಶೈಖುನಾ ಪಾರನ್ನೂರು ಉಸ್ತಾದ್,ಅರಿಪ್ರ ಕುಞಿಮುಹಮ್ಮದ್ ಮುಸ್ಲಿಯಾರ್ , ಶೈಖುನಾ ಎಂ.ಟಿ ಉಸ್ತಾದ್ ಸಹಿತ ಹಲವು ಉನ್ನತ ವಿದ್ವಾಂಸರು ಈ ಸ್ಥಾಪನೆಯಲ್ಲಿ ಸೇವೆಗೈದಿದ್ದಾರೆ.* *ಶೈಖುನಾ ಶಂಸುಲ್ ಉಲಮಾ ರವರ ಸೇವಕನಾಗಿ (ಖಾದಿಂ)ದ್ದ ಆರ್.ವಿ.ಕುಟ್ಟಿ ಹಸನ್ ದಾರಿಮಿಯವರ ಅವಿಶ್ರಾಂತ ಪ್ರಯತ್ನದ ಫಲವಾಗಿ ಇಂದು ಯಮಾನಿಯ್ಯ ಬೃಹತ್ ಹೆಮ್ಮರವಾಗಿ ಬೆಳೆದು ನಿಂತಿದೆ.ಪ್ರಸ್ತುತ ಕಾಲೇಜಿಗೆ ಸ್ಥಾಯಿ ವರಮಾನಗಳಿಲ್ಲದಿದ್ದರೂ ಶೈಖುನಾ ರವರ ಮುಹಿಬ್ಬ್ ಗಳ ಸಹಕಾರದಿಂದ ಮುಂದುವರಿಯುತ್ತಿದೆ.*
*ಯಮಾನಿಯ್ಯ ಕಾಲೇಜಿನಿಂದ ಪದವಿ ಪಡೆದ ಯಮಾನಿ ಪಂಡಿತರುಗಳು ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ.ಮುದರ್ರಿಸ್, ಖತೀಬ್, ಖಾಝಿ, ಪ್ರೊಫೆಸರ್, ವಾಗ್ಮಿ, ಬರಹಗಾರರಲ್ಲದೆ ಸಂಘಟನಾ ಚತುರರಾಗಿ ಮಿಂಚುತ್ತಿದ್ದಾರೆ.* *ಶರೀಅತ್ ಕಾಲೇಜು, ದಹ್ ವಾ ಇಸ್ಲಾಮಿಕ್ ಅಕಾಡೆಮಿ,ಯತೀಂ ಖಾನ, ಹಿಪ್ಲುಲ್ ಖುರಾನ್,ಯಮಾನಿಯ ಜೂನಿಯರ್ ಕಾಲೇಜು ಇತ್ಯಾದಿ ಧಾರ್ಮಿಕ ವಿದ್ಯಾಭ್ಯಾಸ ಸ್ಥಾಪನೆಗಳು ಇಂದು ಯಮಾನಿಯ್ಯ ಅರೇಬಿಕ್ ಕಾಲೇಜಿನ ಅಧೀನದಲ್ಲಿ ನಡೆಯುತ್ತಿದೆ.*
*ಶೂನ್ಯದಿಂದ ಆರಂಭಗೊಂಡ ಈ ವಿದ್ಯಾಸಂಸ್ಥೆಯು ಆರಂಭ ಕಾಲದಲ್ಲಿ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಅಲ್ಹಮ್ದುಲಿಲ್ಲಾಹ್ ಇದೀಗ ಪದವಿ ಪಡೆದು ಸೇವಾ ಕಾರ್ಯದಲ್ಲಿ ನಿರತರಾಗಿರುವ ಯಮಾನಿಗಳ ಸಹಕಾರ ಸ್ಥಾಪನೆಗೆ ಆನೆಬಲ ಇದ್ದಂತಾಗಿದೆ.*
*ತನ್ನ ಇಪ್ಪತ್ತೆರಡನೇ‌ ಜೈತ್ರಯಾತ್ರೆಯನ್ನು ಪೂರೈಸುವಾಗ ಸಂಸ್ಥೆಗೆ ಸಹಾಯ ಸಹಕಾರ ನೀಡಿದ ವ್ಯಕ್ತಿಗಳನ್ನು ಮರೆಯಲು ಸಾಧ್ಯವಿಲ್ಲ.ಅಲ್ಲಾಹನು ಎಲ್ಲರಿಗೂ ಅರ್ಹವಾದ ಪ್ರತಿಫಲ ನೀಡಲಿ....*
*22ನೇ ವಾರ್ಷಿಕ ಹಾಗೂ 7ನೇ ಸನದು ದಾನ ಸಮ್ಮೇಳನವು ಜನವರಿ 7,8,9 ಎಂಬೀ ದಿನಾಂಕಗಳಲ್ಲಿ ನಡೆಯುವಾಗ 225 ಯಮಾನಿ ಯುವ ವಿದ್ವಾಂಸರನ್ನು ಸಮುದಾಯಕ್ಕೆ ಸಮರ್ಪಿಸುತ್ತಿದೆ.*
*ಸಮಸ್ತದ ಅಧ್ಯಕ್ಷರೂ, ಮುಸ್ಲಿಂ ಉಮ್ಮತಿನ ಅಂತಿಮ ಶಬ್ದ ಸಯ್ಯಿದುಲ್ ಉಲಮಾ ಶೈಖುನಾ ಅಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್ ಪ್ರಾಂಶುಪಾಲರಾಗಿಯೂ, ಶೈಖುನಾ ವಳವಣ್ಣ ಉಸ್ತಾದ್ ಉಪ ಪ್ರಾಂಶುಪಾಲರಾಗಿಯೂ ಜಾಮಿಅ ಯಮಾನಿಯ್ಯ ಮುನ್ನುಗ್ಗುತ್ತಿದೆ.*

*🖋️ಅಬ್ದುಸ್ಸಲಾಂ ಅಲ್ ಯಮಾನಿ ತುಂಬೆ*

07/05/2020

*ಖಾಝಿಗಳ ನಿರ್ದೇಶನದಂತೆ ಸರಳವಾಗಿ ಈದ್ ಆಚರಿಸಿ...*
*SKSSF ವಳಚ್ಚಿಲ್ ಯುನಿಟ್ ಅಡ್ಯಾರ್ ಕಣ್ಣೂರು ಕ್ಲಸ್ಟರ್ ಕರೆ*

*ವಿಶ್ವದಾದ್ಯಂತ ಮಾರಕ ರೋಗದಿಂದ ತತ್ತರಿಸುತ್ತಿರುವ ಈ ಸಂಧರ್ಭದಲ್ಲಿ.ನಮ್ಮ* *ಸಮುದಾಯಕ್ಕೆ ಆಗಿರುವ ನಷ್ಟ ಸಣ್ಣದಲ್ಲ..* *ನಮ್ಮ ಮಸೀದಿಗಳು ಬೀಗ ಹಾಕಿವೆ*. *ಮಸೀದಿಗಳಲ್ಲ ನಡೆಯುವ* *ಪ್ರಾರ್ಥನೆಗಳು* *ನಿರಾಕರಿಸಲ್ಪಟ್ಟಿರುವ ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಪುಣ್ಯರಮಾಝಾನಿನಲ್ಲಿ ನಡೆಯುವ ಪ್ಯತ್ಯೇಕ* *ಇಬಾದತ್ ಗಳು ತಟಸ್ಥಗೊಂಡಿರುವ ಈ ಸಂದರ್ಭದಲ್ಲಿ ಈದ್ ಆಚರಣೆ ಎಂಬ ಹೆಸರಿನಲ್ಲಿ ಹೊಸ ಬಟ್ಟೆಗಳನ್ನು ಖರೀದಿಸಿ ಸಂಭ್ರಮಿಸುವುದು ಅಲ್ಲಾಹನು ತೃಪ್ತಿಪಡುವ ಕಾರ್ಯವಲ್ಲ...*

*ಆದುದರಿಂದ ಸಂಘಟನೆಯ ಕಾರ್ಯಕರ್ತರು ಅದರ ಬಗ್ಗೆ ನಿಗಾವಹಿಸಿ ನಮ್ಮ ಮನೆಯ ಮಹಿಳೆಯರು ರಸ್ತೆಗಿಳಿಯದಂತೆ , ಹೊಸ ಬಟ್ಟೆ ಖರೀದಿ ಮಾಡದಂತೆ*
*ಇದ್ದ ಬಟ್ಟೆಯಲ್ಲೇ ಹಾಗೂ ಸಂತೋಷದಿಂದ ಸರಳವಾಗಿ ಈದ್ ಆಚರಿಸಿ ಎಂದು ಕರೆ ನೀಡಿದ್ದಾರೆ*

06/05/2020

Join this Page

Address

Mangalore

Website

Alerts

Be the first to know and let us send you an email when SKSSF Valachil Unit posts news and promotions. Your email address will not be used for any other purpose, and you can unsubscribe at any time.

Share

Category